Bhool Bhulaiyaa 3 trailer: ʼಮಂಜುಲಿಕಾʼಗಳ ರಹಸ್ಯ ಬಯಲಿಗೆ ʼರೂಹ್‌ ಬಾಬಾʼನಾದ ಕಾರ್ತಿಕ್‌


Team Udayavani, Oct 9, 2024, 6:38 PM IST

Bhool Bhulaiyaa 3 trailer: ʼಮಂಜುಲಿಕಾʼಗಳ ರಹಸ್ಯ ಬಯಲಿಗೆ ʼರೂಹ್‌ ಬಾಬಾʼನಾದ ಕಾರ್ತಿಕ್‌

ಮುಂಬಯಿ: ಬಾಲಿವುಡ್‌ನಲ್ಲಿ ಸೂಪರ್‌ ಹಿಟ್‌ ಆಗಿದ್ದ ʼಭೂಲ್ ಭುಲೈಯಾʼ ಸಿನಿಮಾದ ಮೂರನೇ ಭಾಗದ ಟ್ರೇಲರ್‌ ರಿಲೀಸ್‌ ಆಗಿದೆ.

ಕಾರ್ತಿಕ್ ಆರ್ಯನ್ (Kartik Aaryan) ಅಭಿನಯದ ʼಭೂಲ್ ಭುಲೈಯಾ 3ʼ(Bhool Bhulaiyaa 3) ಅನೌನ್ಸ್‌ ಆದ ದಿನದಿಂದಲೇ ದೊಡ್ಡಮಟ್ಟದಲ್ಲಿ ಸದ್ದು ಮಾಡಿತು. ಅದಕ್ಕೆ ಕಾರಣ ಸಿನಿಮಾದ ಎರಡನೇ ಭಾಗಕ್ಕೆ ಸಿಕ್ಕ ಅಭೂತಪೂರ್ವ ರೆಸ್ಪಾನ್ಸ್.‌

3 ನಿಮಿಷ 50 ಸೆಕೆಂಡ್‌ ವುಳ್ಳ ಟ್ರೇಲರ್‌ ನಲ್ಲಿ ರಕ್ತಘಾಟ್ ಎಂಬ ಸಾಮ್ರಾಜ್ಯದ ಕಥೆ ತೆರೆದುಕೊಳ್ಳುತ್ತದೆ. ಇಲ್ಲಿನ ಬಂಗಲೆಯೊಂದರಲ್ಲಿ ಒಬ್ಬರಲ್ಲ ಎರಡು ʼಮಂಜುಲಿಕಾʼ ಗಳಿರುತ್ತಾರೆ. (ವಿದ್ಯಾ ಬಾಲನ್‌, ಮಾಧುರಿ ದೀಕ್ಷಿತ್). ಕುಟುಂಬದ ನಾನಾ ಪೀಳಿಗೆ ಆ ಮನೆಯಲ್ಲಿ ಬಂದು ನೆಲೆಸಿದರೂ ಆ ಆತ್ಮಗಳು ಮನೆಯಲ್ಲಿ ಇನ್ನು ಇವೆ ಎನ್ನುವುದನ್ನು ಟ್ರೇಲರ್‌ನಲ್ಲಿ ಹೇಳಲಾಗಿದೆ.

ಭೂತಗಳನ್ನು ನಂಬುವ ಈ ಜಗತ್ತು ಮೂರ್ಖರ ಜಗತ್ತು. ಈ ಆತ್ಮಗಳ ಲಾಭವನ್ನು ನಾವು ಪಡೆದುಕೊಳ್ಳಬೇಕೆಂದು ʼರೂಹ್‌ ಬಾಬಾʼ ಎಂಟ್ರಿ ಆಗುತ್ತಾರೆ. ಆತ್ಮಗಳೊಂದಿಗಿನ ಒಡನಾಟ ಹಾಗೂ ಹಾಸ್ಯದ ದೃಶ್ಯವನ್ನು ತೋರಿಸಲಾಗಿದೆ. ಕಾಮಿಡಿ ರೀತಿಯಲ್ಲಿ ಟ್ರೇಲರ್‌ ತೋರಿಸಲಾಗಿದ್ದು, ಎರಡು ʼಮಂಜುಲಿಕಾʼಗಳ ಹಿಂದಿನ ಕಥೆಯ ಝಲಕ್‌ ತೋರಿಸಲಾಗಿದೆ.

ಬಂಗಲೆಯ ಬಾಗಿಲು ಒಡೆದು  ʼಮಂಜುಲಿಕಾʼಗಳ ರಹಸ್ಯವನ್ನು ʼರೂಹ್‌ ಬಾಬಾʼ ಬಯಲಿಗೆ ತರಲು ಹೊರಡುವ ದೃಶ್ಯ ಟ್ರೇಲರ್‌ ನಲ್ಲಿದೆ.

ಇದೊಂದು ಹಾರಾರ್‌ – ಕಾಮಿಡಿ ಸಿನಿಮಾವಾಗಿದ್ದು, ಹೆಚ್ಚು ಸಸ್ಪೆನ್ಸ್‌, ಹೆಚ್ಚಿನ ಹಾಸ್ಯವನ್ನು ಮೂರನೇ ಭಾಗದ ಟ್ರೇಲರ್‌ನಲ್ಲಿ ತೋರಿಸಲಾಗಿದೆ.

ʼರೂಹ್‌ ಬಾಬಾʼ ನಾಗಿ ಕಾರ್ತಿಕ್‌ ಆರ್ಯನ್‌ ಕಾಣಿಸಿಕೊಂಡಿದ್ದಾರೆ. ಅವರ ಪ್ರೇಯಸಿಯಾಗಿ ತೃಪ್ತಿ ದಿಮ್ರಿ (Triptii Dimri) ಅವರು ಕಾಣಿಸಿಕೊಂಡಿದ್ದಾರೆ. ವಿದ್ಯಾ ಬಾಲನ್‌ (Vidya Balan), ಮಾಧುರಿ ದೀಕ್ಷಿತ್‌ (Madhuri Dixit) ಇಲ್ಲಿ ʼಮಂಜುಲಿಕಾʼಗಳಾಗಿ ಕಾಣಿಸಿಕೊಂಡಿದ್ದಾರೆ.

ತೃಪ್ತಿ – ಕಾರ್ತಿಕ್‌ ನಡುವಿನ ರೊಮ್ಯಂಟಿಕ್‌ ದೃಶ್ಯಗಳು ಟ್ರೇಲರ್‌ನಲ್ಲಿ ಗಮನ ಸೆಳೆಯುತ್ತದೆ.

ಅನೀಸ್ ಬಾಜ್ಮಿ ನಿರ್ದೇಶನದ ʼಭೂಲ್ ಭುಲೈಯಾ 3ʼ ಸಿನಿಮಾದಲ್ಲಿ ಕಾರ್ತಿಕ್ ಆರ್ಯನ್, ವಿದ್ಯಾ ಬಾಲನ್, ಮಾಧುರಿ ದೀಕ್ಷಿತ್, ಮತ್ತು ತೃಪ್ರಿ ದಿಮ್ರಿ ಸೇರಿದಂತೆ ಸಿನಿಮಾದಲ್ಲಿ ಹಲವರು ನಟಿಸಿದ್ದಾರೆ. ಇದೇ ನವೆಂಬರ್‌ 1 ರಂದು ಸಿನಿಮಾ ರಿಲೀಸ್‌ ಆಗಲಿದೆ. ವಿಶೇಷವೆಂದರೆ ಅದೇ ದಿನ ರೋಹಿತ್‌ ಶೆಟ್ಟಿ – ಅಜಯ್‌ ದೇವಗನ್‌ ಅವರ ʼಸಿಂಗಂ ಎಗೇನ್‌ʼ ಸಿನಿಮಾ ಕೂಡ ರಿಲೀಸ್‌ ಆಗಲಿದೆ.

ಟಾಪ್ ನ್ಯೂಸ್

Rishab

National Award: ದೈವ, ದೈವ ನರ್ತಕರು, ಜನರಿಗೆ ರಾಷ್ಟ್ರಪ್ರಶಸ್ತಿ ಅರ್ಪಣೆ: ರಿಷಬ್‌ ಶೆಟ್ಟಿ

ಅಡಕೆ ವ್ಯಾಪಾರಿಯನ್ನ ಬೆದರಿಸಿ 17 ಲಕ್ಷ ದರೋಡೆ… ಘಟನೆ ನಡೆದ ಎರಡೇ ದಿನಕ್ಕೆ ಆರೋಪಿಗಳ ಬಂಧನ

ಅಡಕೆ ವ್ಯಾಪಾರಿಯನ್ನ ಬೆದರಿಸಿ 17 ಲಕ್ಷ ದರೋಡೆ… ಘಟನೆ ನಡೆದ ಎರಡೇ ದಿನಕ್ಕೆ ಆರೋಪಿಗಳ ಬಂಧನ

ಬಿಡುಗಡೆಯಾಗದ ಗೌರವ ಧನ… ಆ್ಯಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಅಂಗನವಾಡಿ ಸಹಾಯಕಿ

ಬಿಡುಗಡೆಯಾಗದ ಗೌರವ ಧನ… ಆ್ಯಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಅಂಗನವಾಡಿ ಸಹಾಯಕಿ

Heavy Rain: ಧಾರವಾಡ ಜಿಲ್ಲೆಯಲ್ಲಿ ಭಾರಿ ಮಳೆ… ಬಡಾವಣೆಗಳಿಗೆ ನುಗ್ಗಿದ ನೀರು

Heavy Rain: ಧಾರವಾಡ ಜಿಲ್ಲೆಯಲ್ಲಿ ಭಾರಿ ಮಳೆ… ಬಡಾವಣೆಗಳಿಗೆ ನುಗ್ಗಿದ ನೀರು

CM–LG

BJP vs AAP: ಸಿಎಂ ಅಧಿಕೃತ ನಿವಾಸ ಅಕ್ರಮ ಬಳಕೆ ಆರೋಪ; ಮನೆ ಖಾಲಿ ಮಾಡಿದ ಅತಿಶಿ?

Ratan Tata: ರತನ್ ಟಾಟಾ ಆರೋಗ್ಯ ಸ್ಥಿತಿ ಗಂಭೀರ… ಐಸಿಯು ನಲ್ಲಿ ಚಿಕಿತ್ಸೆ: ವರದಿ

Ratan Tata: ರತನ್ ಟಾಟಾ ಆರೋಗ್ಯ ಸ್ಥಿತಿ ಗಂಭೀರ… ಐಸಿಯು ನಲ್ಲಿ ಚಿಕಿತ್ಸೆ: ವರದಿ

ಸತೀಶ್ ಜಾರಕಿಹೊಳಿಯಂತಹ ಸರಳ ಸಜ್ಜನ ಮತ್ತೊಬ್ಬರಿಲ್ಲ: ಶಾಸಕ ಹೆಚ್.ಡಿ.ತಮ್ಮಯ್ಯ

ಸತೀಶ್ ಜಾರಕಿಹೊಳಿಯಂತಹ ಸರಳ ಸಜ್ಜನ ಮತ್ತೊಬ್ಬರಿಲ್ಲ: ಶಾಸಕ ಹೆಚ್.ಡಿ.ತಮ್ಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Singham Again trailer: ಭರಪೂರ ಆ್ಯಕ್ಷನ್ ಟ್ರೇಲರ್‌ನಲ್ಲಿ ʼರಾಮಾಯಣʼವೇ ಹೈಲೈಟ್

Singham Again trailer: ಭರಪೂರ ಆ್ಯಕ್ಷನ್ ಟ್ರೇಲರ್‌ನಲ್ಲಿ ʼರಾಮಾಯಣʼವೇ ಹೈಲೈಟ್

Alia Bhatt: ಆಕ್ಷನ್‌ ಅವತಾರದಲ್ಲಿ ಆಲಿಯಾ

Alia Bhatt: ಆಕ್ಷನ್‌ ಅವತಾರದಲ್ಲಿ ಆಲಿಯಾ

Shaitan 2

Shaitan 2: ಬರಲಿದೆ ಶೈತಾನ್‌ -2

vidya balan in bhool bhulaiya 3

Vidya Balan; ಮತ್ತೆ ಬಂದಳು ಮಂಜುಳಿಕಾ!

8

Mallika Sherawat: ಮೀಟೂ ವಿವಾದಕ್ಕೆ ನಟಿ ಮಲ್ಲಿಕಾ ಶೆರಾವತ್‌ ಧ್ವನಿ; ಹೀರೋ ಮೇಲೆ ಆರೋಪ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1

Brahmavar: ಬಾರ್‌ನಲ್ಲಿ ಗಲಾಟೆ; ಪ್ರಕರಣ ದಾಖಲು

11

Alakemajalu: ಹಗಲಲ್ಲೇ 2 ಮನೆಗಳಿಂದ ಕಳವು

Rishab

National Award: ದೈವ, ದೈವ ನರ್ತಕರು, ಜನರಿಗೆ ರಾಷ್ಟ್ರಪ್ರಶಸ್ತಿ ಅರ್ಪಣೆ: ರಿಷಬ್‌ ಶೆಟ್ಟಿ

ಅಡಕೆ ವ್ಯಾಪಾರಿಯನ್ನ ಬೆದರಿಸಿ 17 ಲಕ್ಷ ದರೋಡೆ… ಘಟನೆ ನಡೆದ ಎರಡೇ ದಿನಕ್ಕೆ ಆರೋಪಿಗಳ ಬಂಧನ

ಅಡಕೆ ವ್ಯಾಪಾರಿಯನ್ನ ಬೆದರಿಸಿ 17 ಲಕ್ಷ ದರೋಡೆ… ಘಟನೆ ನಡೆದ ಎರಡೇ ದಿನಕ್ಕೆ ಆರೋಪಿಗಳ ಬಂಧನ

ssa

Brahmavar; ಹಾವಂಜೆ ಕೋಳಿ ಅಂಕಕ್ಕೆ ಪೊಲೀಸರ ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.