Bhool Bhulaiyaa 3 trailer: ʼಮಂಜುಲಿಕಾʼಗಳ ರಹಸ್ಯ ಬಯಲಿಗೆ ʼರೂಹ್ ಬಾಬಾʼನಾದ ಕಾರ್ತಿಕ್
Team Udayavani, Oct 9, 2024, 6:38 PM IST
ಮುಂಬಯಿ: ಬಾಲಿವುಡ್ನಲ್ಲಿ ಸೂಪರ್ ಹಿಟ್ ಆಗಿದ್ದ ʼಭೂಲ್ ಭುಲೈಯಾʼ ಸಿನಿಮಾದ ಮೂರನೇ ಭಾಗದ ಟ್ರೇಲರ್ ರಿಲೀಸ್ ಆಗಿದೆ.
ಕಾರ್ತಿಕ್ ಆರ್ಯನ್ (Kartik Aaryan) ಅಭಿನಯದ ʼಭೂಲ್ ಭುಲೈಯಾ 3ʼ(Bhool Bhulaiyaa 3) ಅನೌನ್ಸ್ ಆದ ದಿನದಿಂದಲೇ ದೊಡ್ಡಮಟ್ಟದಲ್ಲಿ ಸದ್ದು ಮಾಡಿತು. ಅದಕ್ಕೆ ಕಾರಣ ಸಿನಿಮಾದ ಎರಡನೇ ಭಾಗಕ್ಕೆ ಸಿಕ್ಕ ಅಭೂತಪೂರ್ವ ರೆಸ್ಪಾನ್ಸ್.
3 ನಿಮಿಷ 50 ಸೆಕೆಂಡ್ ವುಳ್ಳ ಟ್ರೇಲರ್ ನಲ್ಲಿ ರಕ್ತಘಾಟ್ ಎಂಬ ಸಾಮ್ರಾಜ್ಯದ ಕಥೆ ತೆರೆದುಕೊಳ್ಳುತ್ತದೆ. ಇಲ್ಲಿನ ಬಂಗಲೆಯೊಂದರಲ್ಲಿ ಒಬ್ಬರಲ್ಲ ಎರಡು ʼಮಂಜುಲಿಕಾʼ ಗಳಿರುತ್ತಾರೆ. (ವಿದ್ಯಾ ಬಾಲನ್, ಮಾಧುರಿ ದೀಕ್ಷಿತ್). ಕುಟುಂಬದ ನಾನಾ ಪೀಳಿಗೆ ಆ ಮನೆಯಲ್ಲಿ ಬಂದು ನೆಲೆಸಿದರೂ ಆ ಆತ್ಮಗಳು ಮನೆಯಲ್ಲಿ ಇನ್ನು ಇವೆ ಎನ್ನುವುದನ್ನು ಟ್ರೇಲರ್ನಲ್ಲಿ ಹೇಳಲಾಗಿದೆ.
ಭೂತಗಳನ್ನು ನಂಬುವ ಈ ಜಗತ್ತು ಮೂರ್ಖರ ಜಗತ್ತು. ಈ ಆತ್ಮಗಳ ಲಾಭವನ್ನು ನಾವು ಪಡೆದುಕೊಳ್ಳಬೇಕೆಂದು ʼರೂಹ್ ಬಾಬಾʼ ಎಂಟ್ರಿ ಆಗುತ್ತಾರೆ. ಆತ್ಮಗಳೊಂದಿಗಿನ ಒಡನಾಟ ಹಾಗೂ ಹಾಸ್ಯದ ದೃಶ್ಯವನ್ನು ತೋರಿಸಲಾಗಿದೆ. ಕಾಮಿಡಿ ರೀತಿಯಲ್ಲಿ ಟ್ರೇಲರ್ ತೋರಿಸಲಾಗಿದ್ದು, ಎರಡು ʼಮಂಜುಲಿಕಾʼಗಳ ಹಿಂದಿನ ಕಥೆಯ ಝಲಕ್ ತೋರಿಸಲಾಗಿದೆ.
ಬಂಗಲೆಯ ಬಾಗಿಲು ಒಡೆದು ʼಮಂಜುಲಿಕಾʼಗಳ ರಹಸ್ಯವನ್ನು ʼರೂಹ್ ಬಾಬಾʼ ಬಯಲಿಗೆ ತರಲು ಹೊರಡುವ ದೃಶ್ಯ ಟ್ರೇಲರ್ ನಲ್ಲಿದೆ.
ಇದೊಂದು ಹಾರಾರ್ – ಕಾಮಿಡಿ ಸಿನಿಮಾವಾಗಿದ್ದು, ಹೆಚ್ಚು ಸಸ್ಪೆನ್ಸ್, ಹೆಚ್ಚಿನ ಹಾಸ್ಯವನ್ನು ಮೂರನೇ ಭಾಗದ ಟ್ರೇಲರ್ನಲ್ಲಿ ತೋರಿಸಲಾಗಿದೆ.
ʼರೂಹ್ ಬಾಬಾʼ ನಾಗಿ ಕಾರ್ತಿಕ್ ಆರ್ಯನ್ ಕಾಣಿಸಿಕೊಂಡಿದ್ದಾರೆ. ಅವರ ಪ್ರೇಯಸಿಯಾಗಿ ತೃಪ್ತಿ ದಿಮ್ರಿ (Triptii Dimri) ಅವರು ಕಾಣಿಸಿಕೊಂಡಿದ್ದಾರೆ. ವಿದ್ಯಾ ಬಾಲನ್ (Vidya Balan), ಮಾಧುರಿ ದೀಕ್ಷಿತ್ (Madhuri Dixit) ಇಲ್ಲಿ ʼಮಂಜುಲಿಕಾʼಗಳಾಗಿ ಕಾಣಿಸಿಕೊಂಡಿದ್ದಾರೆ.
ತೃಪ್ತಿ – ಕಾರ್ತಿಕ್ ನಡುವಿನ ರೊಮ್ಯಂಟಿಕ್ ದೃಶ್ಯಗಳು ಟ್ರೇಲರ್ನಲ್ಲಿ ಗಮನ ಸೆಳೆಯುತ್ತದೆ.
ಅನೀಸ್ ಬಾಜ್ಮಿ ನಿರ್ದೇಶನದ ʼಭೂಲ್ ಭುಲೈಯಾ 3ʼ ಸಿನಿಮಾದಲ್ಲಿ ಕಾರ್ತಿಕ್ ಆರ್ಯನ್, ವಿದ್ಯಾ ಬಾಲನ್, ಮಾಧುರಿ ದೀಕ್ಷಿತ್, ಮತ್ತು ತೃಪ್ರಿ ದಿಮ್ರಿ ಸೇರಿದಂತೆ ಸಿನಿಮಾದಲ್ಲಿ ಹಲವರು ನಟಿಸಿದ್ದಾರೆ. ಇದೇ ನವೆಂಬರ್ 1 ರಂದು ಸಿನಿಮಾ ರಿಲೀಸ್ ಆಗಲಿದೆ. ವಿಶೇಷವೆಂದರೆ ಅದೇ ದಿನ ರೋಹಿತ್ ಶೆಟ್ಟಿ – ಅಜಯ್ ದೇವಗನ್ ಅವರ ʼಸಿಂಗಂ ಎಗೇನ್ʼ ಸಿನಿಮಾ ಕೂಡ ರಿಲೀಸ್ ಆಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.