![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Oct 10, 2024, 4:39 AM IST
ಬೆಂಗಳೂರು: ಬಸ್ ಮತ್ತು ಯಂತ್ರೋಪಕರಣಗಳ ಆಯುಧ ಪೂಜೆ ಆಚರಣೆಗೆ ನೀಡಲಾಗುವ ಹಣವನ್ನು ಒಂದೂವರೆಪಟ್ಟು ಹೆಚ್ಚಳ ಮಾಡಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್ಆರ್ಟಿಸಿ) ಪ್ರತಿ ಬಸ್ನ ಪೂಜಾ ಕಾರ್ಯಕ್ಕೆ 250 ರೂ. ನೀಡಲು ನಿರ್ಧರಿಸಿದೆ.
ಪ್ರತಿ ಬಸ್ನ ಪೂಜಾ ಕಾರ್ಯಕ್ಕೆ ಈ ಮೊದಲು 100 ರೂ. ನೀಡಲಾಗುತ್ತಿತ್ತು. ಈಗ ಅದನ್ನು 250 ರೂ.ಗಳಿಗೆ ಹೆಚ್ಚಿಸಲಾಗಿದೆ. ಅದರಂತೆ ಮುಂಗಡ ಹಣ ಪಡೆದು ಸ್ವತ್ಛತೆಯೊಂದಿಗೆ ಪೂಜಾ ಕಾರ್ಯಗಳನ್ನು ನೆರವೇರಿಸುವಂತೆ ಸೂಚಿಸಲಾಗಿದೆ. ಪ್ರತಿ ಘಟಕದಲ್ಲಿ ತಲಾ 100ರಿಂದ 500 ಬಸ್ಗಳಿರುತ್ತವೆ. 2008ರ ವರೆಗೆ 10 ರೂ. ನೀಡಲಾಗುತ್ತಿತ್ತು. 2009ರಲ್ಲಿ 30 ರೂ.ಗಳಿಗೆ ಹೆಚ್ಚಿಸಲಾಯಿತು.
2016ರಲ್ಲಿ 50 ರೂ. ಹಾಗೂ 2017ರಿಂದ ಈಚೆಗೆ 100 ರೂ. ನೀಡಲಾಗುತ್ತಿತ್ತು. ಡಿಪೋದಲ್ಲಿ ಆಯುಧ ಪೂಜೆ ನಡೆಸುವ ಸಂಪ್ರದಾಯ ಹಿಂದಿನಿಂದಲೂ ಇದೆ.
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
Water Resource: ನನ್ನ ಜೀವಿತಾವಧಿಯಲ್ಲೇ ನೀರಿನ ಸಮಸ್ಯೆ ಬಗೆಹರಿಯಬೇಕು: ಎಚ್.ಡಿ.ದೇವೇಗೌಡ
Congress Siddu Team: ಸಿದ್ದರಾಮಯ್ಯ ಆಪ್ತರಿಂದ ಈಗ ʼಮಾಸ್ ಲೀಡರ್ʼ ಅಸ್ತ್ರ
You seem to have an Ad Blocker on.
To continue reading, please turn it off or whitelist Udayavani.