Women’s T20 World Cup: ಸ್ಮತಿ, ಹರ್ಮನ್‌ ಭರ್ಜರಿ ಆಟ, ಲಂಕಾ ವಿರುದ್ಧ ಭಾರತಕ್ಕೆ ಗೆಲುವು


Team Udayavani, Oct 10, 2024, 8:27 AM IST

Women’s T20 World Cup: ಸ್ಮತಿ, ಹರ್ಮನ್‌ ಭರ್ಜರಿ ಆಟ, ಲಂಕಾ ವಿರುದ್ಧ ಭಾರತಕ್ಕೆ ಗೆಲುವು

ದುಬಾೖ: ಆಲ್‌ರೌಂಡ್‌ ಆಟದ ಪ್ರದರ್ಶನ ನೀಡಿದ ಭಾರತೀಯ ವನಿತೆಯರು ಬುಧವಾರ ನಡೆದ ವನಿತಾ ಟಿ20 ವಿಶ್ವಕಪ್‌ ಕ್ರಿಕೆಟ್‌ ಕೂಟದ ಮಹತ್ವದ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 82 ರನ್ನುಗಳಿಂದ ಸೋಲಿಸಿ ಸಂಭ್ರಮಿಸಿದೆ.

ಅಗ್ರ ಕ್ರಮಾಂಕದ ಆಟಗಾರ್ತಿಯರ ಅಮೋಘ ಆಟದಿಂದಾಗಿ ಭಾರತೀಯ ವನಿತೆಯರು ಮೂರು ವಿಕೆಟಿಗೆ 172 ರನ್ನುಗಳ ಉತ್ತಮ ಮೊತ್ತ ಪೇರಿಸಿದರೆ ಶ್ರೀಲಂಕಾ ಆಟಗಾರ್ತಿಯರು ಭಾರತೀಯ ಬೌಲರ್‌ಗಳ ದಾಳಿಗೆ ತತ್ತರಿಸಿ 19.5 ಓವರ್‌ಗಳಲ್ಲಿ ಕೇವಲ 90 ರನ್ನಿಗೆ ಆಲೌಟಾಗಿ ಸೋಲನ್ನು ಕಂಡಿತು.

ಈ ಗೆಲುವಿನಿಂದ ಭಾರತ ಆಡಿದ ಮೂರು ಪಂದ್ಯಗಳಿಂದ ನಾಲ್ಕು ಅಂಕ ಗಳಿಸಿ ಮುಂದಿನ ಸುತ್ತಿಗೇರುವ ಅವಕಾಶವನ್ನು ಹೆಚ್ಚಿಸಿಕೊಂಡಿತು. ಭಾರತ ಮುಂದಿನ ಪಂದ್ಯದಲ್ಲಿ ಅ. 13ರಂದು ಬಲಿಷ್ಠ ಆಸ್ಟ್ರೇಲಿಯವನ್ನು ಎದುರಿಸಲಿದೆ.

ಶ್ರೀಲಂಕಾದ ಆರಂಭ ಶೋಚನೀಯವಾಗಿತ್ತು. ಆರು ರನ್‌ ಗಳಿಸುವಷ್ಟರಲ್ಲಿ ಮೊದಲ 3 ವಿಕೆಟ್‌ ಉರುಳಿದ್ದವು. ಈ ಆಘಾತದಿಂದ ತಂಡ ಚೇತರಿಸಿಕೊಳ್ಳಲು ಸಾಕಷ್ಟು ಪ್ರಯತ್ನಪಟ್ಟರೂ ಭಾರತೀಯ ಬೌಲರ್‌ಗಳು ಇದಕ್ಕೆ ಅವಕಾಶವನ್ನೇ ನೀಡಲಿಲ್ಲ. ಅಂತಿಮವಾಗಿ ತಂಡ 90 ರನ್ನಿಗೆ ತಂಡ ಆಲೌಟಾಗಿ ಶರಣಾಯಿತು. ಆರುಂಧತಿ ರೆಡ್ಡಿ ಮತ್ತು ಆಶಾ ಶೋಭಾನಾ ತಲಾ ಮೂರು ವಿಕೆಟ್‌ ಕಿತ್ತು ತಂಡದ ಗೆಲುವಿಗೆ ಉತ್ತಮ ಕೊಡುಗೆ ಸಲ್ಲಿಸಿದರು.

ಈ ಮೊದಲು ಇನ್ನಿಂಗ್ಸ್‌ ಆರಂಭಿಸಿದ ಶಫಾಲಿ ಶರ್ಮ ಮತ್ತು ಸ್ಮತಿ ಮಂಧನಾ ಬಿರುಸಿನ ಆಟವಾಡಿ ರನ್‌ ಪೇರಿಸತೊಡಗಿದರು. ಶ್ರೀಲಂಕಾ ದಾಳಿಯನ್ನು ಪುಡಿಗಟ್ಟಿದ ಅವರಿಬ್ಬರು ವೇಗವಾಗಿ ರನ್‌ ಗಳಿಸಿ ತಮ್ಮ ಉದ್ದೇಶ ಖಚಿತಪಡಿಸಿದರು. ಮೊದಲ ವಿಕೆಟಿಗೆ ಅವರಿಬ್ಬರು 98 ರನ್ನುಗಳ ಜತೆಯಾಟ ನಡೆಸಿದರು. ಈ ಹಂತದಲ್ಲಿ ಸ್ಮತಿ ಮಂಧನಾ ಔಟಾದರು. ಅವರು 38 ಎಸೆತ ಎದುರಿಸಿ ಸರಿಯಾಗಿ 50 ರನ್‌ ಹೊಡೆದರು. ಆದೇ ಮೊತ್ತಕ್ಕೆ ತಂಡ ಶಫಾಲಿ ಅವರನ್ನು ಕಳೆದುಕೊಂಡಾಗ ತಂಡ ಆಘಾತ ಅನುಭವಿಸಿತು. ಶಫಾಲಿ 40 ಎಸೆತಗಳಿಂದ 43 ರನ್‌ ಹೊಡೆದರು.

ಈ ಆಘಾತದ ನಡುವೆಯೂ ಹರ್ಮನ್‌ಪ್ರೀತ್‌ ಸ್ಫೋಟಕವಾಗಿ ಆಡಿದ್ದರಿಂದ ಭಾರತದ ಮೊತ್ತ 170ರ ತನಕ ಏರಿತು. ಕೌರ್‌ ಕೇವಲ 27 ಎಸೆತಗಳಿಂದ 52 ರನ್‌ ಗಳಿಸಿ ಅಜೇಯರಾಗಿ ಉಳಿದರು. ಎಂಟು ಬೌಂಡರಿ ಮತ್ತು 1 ಸಿಕ್ಸರ್‌ ಸಿಡಿಸಿದ್ದರು.

ಸಂಕ್ಷಿಪ್ತ ಸ್ಕೋರು: ಭಾರತ 3 ವಿಕೆಟಿಗೆ 172 (ಶಫಾಲಿ ಶರ್ಮ 43, ಸ್ಮತಿ ಮಂಧನಾ 50, ಹರ್ಮನ್‌ಪ್ರೀತ್‌ ಕೌರ್‌ 52 ಔಟಾಗದೆ); ಶ್ರೀಲಂಕಾ 19.5 ಓವರ್‌ಗಳಲ್ಲಿ 90 (ಕವಿಶಾ ದಿಲ್ಹರಿ 21, ಆರುಂಧತಿ ರೆಡ್ಡಿ 19ಕ್ಕೆ 3, ಆಶಾ ಶೋಭಾನಾ 19ಕ್ಕೆ 3).

ಟಾಪ್ ನ್ಯೂಸ್

Actor Darshan Bail: ನಟ ದರ್ಶನ್‌ಗೆ ಬಳ್ಳಾರಿ ಜೈಲಲ್ಲೇ ದಸರಾ ಹಬ್ಬ?

Actor Darshan Bail: ನಟ ದರ್ಶನ್‌ಗೆ ಬಳ್ಳಾರಿ ಜೈಲಲ್ಲೇ ದಸರಾ ಹಬ್ಬ?

A couple ends their life at Ramanagara

Ramanagara: ದನದ ಕೊಟ್ಟಿಗೆಯಲ್ಲಿ ನೇಣಿಗೆ ಶರಣಾದ ದಂಪತಿ

Hubli: ಎಡೆಬಿಡದೆ ಸುರಿದ ಮಳೆ; ಕೆರೆಯಂತಾದ ರಸ್ತೆಗಳು

Hubli: ಎಡೆಬಿಡದೆ ಸುರಿದ ಮಳೆ; ಕೆರೆಯಂತಾದ ರಸ್ತೆಗಳು

2-bng-crime

Crime: ಪತ್ನಿಯ ಶೀಲ ಶಂಕಿಸಿ ಕಾಲು ಕತ್ತರಿಸಿದ ಪತಿ

Navratri Special: ಪ್ರೀತಿ ಒಂದೇ ಸಾಕು ಒಳಗಿನ ಭೋರ್ಗರೆವ ಯೋಚನೆಗಳ ತಣಿಸಲು

Navratri Special: ಪ್ರೀತಿ ಒಂದೇ ಸಾಕು ಒಳಗಿನ ಭೋರ್ಗರೆವ ಯೋಚನೆಗಳ ತಣಿಸಲು

Ratan Tata: ಸಕಲ ಸರಕಾರಿ ಗೌರವಗಳೊಂದಿಗೆ ರತನ್ ಟಾಟಾ ಅಂತ್ಯಕ್ರಿಯೆ… :ಮಹಾ ಸಿಎಂ

Ratan Tata: ಸಕಲ ಸರಕಾರಿ ಗೌರವಗಳೊಂದಿಗೆ ರತನ್ ಟಾಟಾ ಅಂತ್ಯಕ್ರಿಯೆ… :ಮಹಾ ಸಿಎಂ

Bagalakote: ಖ್ಯಾತ ಉದ್ಯಮಿ ರತನ್ ಟಾಟಾ ಅಗಲಿಕೆ ಬಹಳ ಆಘಾತ ತಂದಿದೆ : ಡಾ.ನಿರಾಣಿ

Bagalakote: ಖ್ಯಾತ ಉದ್ಯಮಿ ರತನ್ ಟಾಟಾ ಅಗಲಿಕೆ ಬಹಳ ಆಘಾತ ತಂದಿದೆ : ಡಾ.ನಿರಾಣಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 Cricket: ಬಾಂಗ್ಲಾದೇಶಕ್ಕೆ 86 ರನ್‌ ಸೋಲು… 2-0 ಮುನ್ನಡೆ; ಭಾರತಕ್ಕೆ ಟಿ20 ಸರಣಿ

T20 Cricket: ಬಾಂಗ್ಲಾದೇಶಕ್ಕೆ 86 ರನ್‌ ಸೋಲು… 2-0 ಮುನ್ನಡೆ; ಭಾರತಕ್ಕೆ ಟಿ20 ಸರಣಿ

Multan Test : ಪಾಕಿಸ್ಥಾನಕ್ಕೆ ಇಂಗ್ಲೆಂಡ್‌ ತಿರುಗೇಟು… ರೂಟ್‌, ಬ್ರೂಕ್‌ ಅಜೇಯ

Multan Test : ಪಾಕಿಸ್ಥಾನಕ್ಕೆ ಇಂಗ್ಲೆಂಡ್‌ ತಿರುಗೇಟು… ರೂಟ್‌, ಬ್ರೂಕ್‌ ಅಜೇಯ

Women’s T20 World Cup: ಲಂಕಾ ಎದುರಾಳಿ: ಭಾರತಕ್ಕೆ ಬೇಕಿದೆ “ರನ್‌ ರೇಟ್‌ ಗೆಲುವು’

Women’s T20 World Cup: ಲಂಕಾ ಎದುರಾಳಿ: ಭಾರತಕ್ಕೆ ಬೇಕಿದೆ “ರನ್‌ ರೇಟ್‌ ಗೆಲುವು’

INDvsBAN; ಬಾಂಗ್ಲಾ ವಿರುದ್ಧ ದ್ವಿತೀಯ ಟಿ20 ಪಂದ್ಯ: ಕೋಟ್ಲಾ ವಶಕ್ಕೆ ಸೂರ್ಯ ಪಡೆ ಸಜ್ಜು

INDvsBAN; ಬಾಂಗ್ಲಾ ವಿರುದ್ಧ ದ್ವಿತೀಯ ಟಿ20 ಪಂದ್ಯ: ಕೋಟ್ಲಾ ವಶಕ್ಕೆ ಸೂರ್ಯ ಪಡೆ ಸಜ್ಜು

shami is not the part of Bengal Ranji Team

Ranji Trohpy: ಶಮಿ ಬಂಗಾಲ ತಂಡದಲ್ಲಿಲ್ಲ; ಮುಂಬೈಗೆ ಸರ್ಫರಾಜ್‌ ಅಲಭ್ಯ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Actor Darshan Bail: ನಟ ದರ್ಶನ್‌ಗೆ ಬಳ್ಳಾರಿ ಜೈಲಲ್ಲೇ ದಸರಾ ಹಬ್ಬ?

Actor Darshan Bail: ನಟ ದರ್ಶನ್‌ಗೆ ಬಳ್ಳಾರಿ ಜೈಲಲ್ಲೇ ದಸರಾ ಹಬ್ಬ?

A couple ends their life at Ramanagara

Ramanagara: ದನದ ಕೊಟ್ಟಿಗೆಯಲ್ಲಿ ನೇಣಿಗೆ ಶರಣಾದ ದಂಪತಿ

3-thirthahalli

Thirthahalli: ಸಾಲಬಾಧೆಯಿಂದ ಮನನೊಂದು ರೈತ ಆತ್ಮಹತ್ಯೆ

5

Fraud: ವಸಿಷ್ಠ ಬ್ಯಾಂಕ್ ಠೇವಣಿದಾರರ ಹಣದಲಿ ಆಸ್ತಿ ಖರೀದಿ!

Hubli: ಎಡೆಬಿಡದೆ ಸುರಿದ ಮಳೆ; ಕೆರೆಯಂತಾದ ರಸ್ತೆಗಳು

Hubli: ಎಡೆಬಿಡದೆ ಸುರಿದ ಮಳೆ; ಕೆರೆಯಂತಾದ ರಸ್ತೆಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.