Mysore Elephants ಆನೆ ಮತ್ತು ಮಾವುತ ಭಾವನಾತ್ಮಕ ಸಂಬಂಧ

ಇವರಿಬ್ಬರ ಸಂಬಂಧ ಯಾರ ಕಲ್ಪನೆಗೂ ನಿಲುಕದ್ದು !

Team Udayavani, Oct 12, 2024, 10:30 AM IST

8-mysore-elephant

ವಿಶ್ವವಿಖ್ಯಾತ ಮೈಸೂರು ದಸರಾ ಎಂದಾಕ್ಷಣೆ ನೆನಪಾಗುವುದೇ ಚಿನ್ನದ ಅಂಬಾರಿ ಹೊತ್ತು ರಾಜ ಬೀದಿ ಯಲ್ಲಿ ಗಾಂಭೀರ್ಯದಿಂದ ಹೆಜ್ಜೆಯಿಡುವ ಅಂಬಾರಿ ಆನೆ ಮತ್ತು ಅದರೊಟ್ಟಿಗೆ ಸಾಹುವ ಗಜ ಪಡೆ. ಇಡೀ ದಸರಾದ ಸಾಂಸ್ಕೃತಿಕ ಮೆರುಗು ಎಂದೇ ಹೇಳುವ ಜಂಬೂ ಸವಾರಿ ಶಾಂತವಾಗಿ ಸಾಗಬೇಕಾದರೆ ಮಾವುತ ಇರಲೇಬೇಕು.

ದಸರಾ ಎಂದರೆ ಅಂಬಾರಿ, ಅಂಬಾರಿ ಎಂದರೆ ಆನೆ, ಆನೆ ಎಂದರೆ ಮಾವುತ ಎನ್ನುವುದು ಮುಖ್ಯ. ಮಾವುತನೇ ಇಡೀ ಜಂಬೂಸವಾರಿಯ ನಿಯಂತ್ರಕ ಶಕ್ತಿ ಹಾಗೂ ರೂವಾರಿಯೂ ಹೌದು. ಭೂಮಿಯ ಮೇಲೆನ ದೈತ್ಯ ಪ್ರಾಣಿಯಾದ ಆನೆಯನ್ನು ಪಳಗಿಸಿ ಅದರ ಮೇಲೆ ಸವಾರನಾಗಿ ಮೆರೆಯುವ ಈತನ ದಿಟ್ಟ ಧೈರ್ಯಗಳು ಮತ್ತು ಅದರೊಟ್ಟಿಗಿನ ಈತನ ಸಂವಹನದ ಭಾಷಾ ಕೈಂಕರ್ಯ ನಿಜಕ್ಕೂ ಶ್ಲಾಘನೀಯವಾದುದು.

ಜಂಬೂ ಸವಾರಿಗೆ ಎರಡು ತಿಂಗಳು ಮೊದಲೇ ಕಾಡಿ ನಿಂದ ನಾಡಿಗೆ ಆಗಮಿಸುವ ಗಜಪಡೆಯನ್ನು ಯಶಸ್ವಿಯಾಗಿ ನಿಯಂತ್ರಿಸುವ ಮತ್ತು ನಿರ್ವಹಿಸುವ ಮಾವುತ ಮತ್ತು ಕಾವಾಡಿ ಮಾತ್ರ ಎಲೆಮರೆಯ ಕಾಯಿ ಎಂದರೆ ತಪ್ಪಾಗಲಾರದು. ಆನೆ ಮೇಲಿನ ಅಂಬಾರಿಯಲ್ಲಿ ಚಿನ್ನಾಮೃತಳಾದ ತಾಯಿ ಚಾಮುಂಡಿಯನ್ನು ಕಣ್ತುಂಬಿಕೊಳ್ಳಲು ಜನಸಾಗರವೇ ನೆರೆದಿರುತ್ತದೆ. ಆದರೆ, ಕೆಲವರಿಗಷ್ಟೇ ಆನೆಯ ಮೂಕ ವೇದನೆ ಗೊತ್ತಾಗುವುದು. ಇಷ್ಟೆಲ್ಲಾ ಕಣ್ಣೆದುರಿಗೆ ಕಂಡವುಗಳಾದರೂ ಅದರೊಟ್ಟಿಗಿನ ಇಡೀ ಅಂಬಾರಿಯ ಮತ್ತು ಆನೆಯ ನಿಯಂತ್ರಣವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮಾವುತನು ಇಲ್ಲಿ ಮುಖ್ಯ ಎನ್ನುವುದನ್ನು ಮರೆಯುವಂತಿಲ್ಲ. ಒಟ್ಟು ದಸರಾ ಆಚರಣೆಯ ಕೇಂದ್ರಬಿಂದು ಜಂಬೂ ಸವಾರಿಯೇ ಆಗಿದ್ದರೂ, ಅದರ ನಿಯಂತ್ರಕ ಶಕ್ತಿ ಮಾವುತನ ಅಂಕುಶದಲ್ಲೇ ಅಡಗಿದೆ ಎಂಬುದುನ್ನು ನಾವು ಸ್ಮರಿಸಬೇಕಿದೆ.

ಗಿರಿಜನರು ಅಥವಾ ಬುಡಕಟ್ಟು ಜನರು ಕಾಡಿನ ವಾಸಿಗಳಾಗಿದ್ದರಿಂದಲೇ ವನ್ಯ ಪ್ರಾಣಿಗಳೊಂದಿಗೆ ಮಾತನಾಡುವ ಕಲೆ ರೂಢಿಸಿಕೊಂಡಿದ್ದಾರೆ. ಈ ಸಂವಹನ ಸಾಧನದಿಂದಲೇ ಅವುಗಳನ್ನು ಪಳಗಿಸಿ, ವುಗಳನ್ನು ಮಾತನಾಡಿಸುವ, ಅವುಗಳ ನೋವು, ಸಂಕಟ, ಸಂತೋಷಗಳೊಂದಿಗೆ ಪಾಲುದಾರನಾದ ಮಾವುತ ನಿಜಕ್ಕೂ ಅದೂºತ ಎನಿಸುವುದರಲ್ಲಿ ಸಂದೇಹವಿಲ್ಲ.

ಆನೆಯೊಂದಿಗೆ ಮಾತೃ ಪ್ರೇಮದ ನಂಟು

ಪ್ರತಿ ದಸರಾಕ್ಕೂ ನಾಗರಹೊಳೆ, ಬಂಡೀಪುರದ ಸಾಕಾನೆ ಶಿಬಿರಗಳಿಂದ ಆನೆಗಳು ಬರುತ್ತವೆ. ಇವುಗಳ ಜೊತೆಗೆ 14 ಮಾವುತರು ಮತ್ತು 14 ಮಂದಿ ಕಾವಾಡಿಗಳು ಹಾಗೂ ಇವರ ಜೊತೆ ಸಂಸಾರ, ಮಕ್ಕಳು ಸೇರಿ ಸುಮಾರು 150 ಜನರು ಬರುತ್ತಾರೆ. ಮಾವುತರು ಮತ್ತು ಕಾವಾಡಿಗಳು ಆನೆಯನ್ನು ಸಲಹುವ ಭಾವನಾ ಜೀವಿಗಳು. ಮಾವುತ ಆನೆಯನ್ನೇರುವ ಸವಾರನಾದರೆ, ಕಾವಾಡಿ ಸಹಚರನಾಗಿ ಜೊತೆಯಲ್ಲಿಯೇ ಕ್ಷೇಮಪಾಲನಾಗಿಯೇ ಇರುತ್ತಾನೆ. ಆನೆಯು ಸೌಮ್ಯವಾಗಿ ಹೆಜ್ಜೆ ಇಡಬೇಕಾದರೆ ಮಾವುತ ಮತ್ತು ಕಾವಾಡಿ ಚಾಲಕ ಮತ್ತು ನಿರ್ವಾಹಕರಾಗಿರುತ್ತಾರೆ. ಇಲ್ಲಿ ಇಬ್ಬರ ಹೊಂದಾಣಿಕೆಯೂ ಮುಖ್ಯವಾಗಿದ್ದು, ಇವರಿಬ್ಬರಿಗೂ ಆನೆಯೊಂದಿಗೆ ಮಾತೃಪ್ರೇಮದ ನಂಟಿರುವುದು ಗಮನಾರ್ಹ.

ಮಕ್ಕಳ ರೀತಿ ಪೋಷಿಸುವ ಮಾವುತರು

ಆನೆಗಳನ್ನು ಪಳಗಿಸುವ ಮಾವುತ ಮತ್ತು ಕಾವಾಡಿಗಳು ಅವುಗಳನ್ನು ತಮ್ಮ ಮಕ್ಕಳೆಂದೇ ಭಾವಿಸಿರುತ್ತಾರೆ. ಯಾರಾದರೂ ಆನೆಗಳಿಗೆ ಬೈದರೆ ಅವರು ನೊಂದುಕೊಳ್ಳುತ್ತಾರೆ, ದುಃಖೀತರಾಗುತ್ತಾರೆ ಎಂದರೆ ಆನೆ ಮತ್ತು ಅವರ ನಡುವಿನ ಸಂಬಂಧ ಎಂತಹದ್ದು ಎಂಬುದನ್ನು ಮನಗಾಣಬೇಕಿದೆ. ಪ್ರತಿದಿನ ಎರಡು ಬಾರಿ ಸ್ನಾನ, ವಿಶೇಷ ಫೋಜ ನ ಕೊಡುತ್ತಾರೆ. ಜತೆಯಲ್ಲಿಯೇ ಸ್ನೇಹಿತರಂತೆ ಮಾತನಾಡಿಕೊಳ್ಳುತ್ತಾರೆ. ಪ್ರಾಣಿಯ ಮೂಕವೇದನೆಗೆ ಬೆಲೆಕೊಡುತ್ತಾರೆ, ಸ್ಪಂದಿಸುತ್ತಾರೆ. ಇವರು ಕೂಗಿದರೆ ಆನೆಗಳು ಓಡಿ ಬರುತ್ತವೆ. ತಮಗೆ ಬೇಕು ಬೇಡಗಳನ್ನು ಆನೆಗಳು ಹೇಳಿಕೊಳ್ಳುತ್ತವೆ. ಮಾವುತರು ಮತ್ತು ಕವಾಡಿಗಳು ಆನೆಗಳು ಯಾಕೆ ಅಳುತ್ತವೆ ಎಂಬುದನ್ನು ಸುಲಭದಲ್ಲಿ ಅರ್ಥಮಾಡಿಕೊಳ್ಳುತ್ತಾರೆ. ಹೀಗೆ ಆನೆ ಮತ್ತು ಮಾವು ತರ ಸಂಬಂಧ ಎಂಥಹುದೆಂದರೆ ಯಾರ ಜಪ್ತಿಗೂ ಸಿಗದ ಮೌಲ್ಯವಾಗಿದೆ.

ಟಾಪ್ ನ್ಯೂಸ್

Life: ಅನುಭವಗಳು ಬದುಕನ್ನು ಬದಲಾಯಿಸಬಲ್ಲದು…ಒಂದು ಅಭ್ಯಂಜನದ ಕಥನ!

Life: ಅನುಭವಗಳು ಬದುಕನ್ನು ಬದಲಾಯಿಸಬಲ್ಲದು…ಒಂದು ಅಭ್ಯಂಜನದ ಕಥನ!

10-

Sirwar: ಸಂಗೊಳ್ಳಿ ರಾಯಣ್ಣಗೆ ಅಪಮಾನ: ಮೂವರ ಬಂಧನ

Culture: ನಮ್ಮ ಸಂಸ್ಕೃತಿ, ಭಾಷೆಯನ್ನು ಮರೆಯದಿರೋಣ

Culture: ನಮ್ಮ ಸಂಸ್ಕೃತಿ, ಭಾಷೆಯನ್ನು ಮರೆಯದಿರೋಣ

Hubli: State govt working to breed terrorists: Aravind Bellad

Hubli: ರಾಜ್ಯ ಸರ್ಕಾರವು ಭಯೋತ್ಪಾದಕರನ್ನು ಹುಟ್ಟು ಹಾಕುವ ಕೆಲಸ ಮಾಡುತ್ತಿದೆ: ಬೆಲ್ಲದ್

Hong Kong Cricket Sixes: Team India announced; Captained by Robin Uthappa

Hong Kong Cricket Sixes: ಟೀಂ ಇಂಡಿಯಾ ಪ್ರಕಟ; ರಾಬಿನ್‌ ಉತ್ತಪ್ಪ ನಾಯಕತ್ವ

9-karkala

KBC: ಕೆಬಿಸಿಯಲ್ಲಿ 12.5 ಲ.ರೂ.ಗೆದ್ದ ಕಾರ್ಕಳ ಮೂಲದ ಡಾ| ಶ್ರೀಶ್‌ ಶೆಟ್ಟಿ

Forest: ಕಾಡುದಾರಿ ಸೃಷ್ಟಿಸುವವರಾಗೋಣ ಕಾಲುದಾರಿಯಲ್ಲಿ ಸಾಗುವವರಲ್ಲ…

Forest: ಕಾಡುದಾರಿ ಸೃಷ್ಟಿಸುವವರಾಗೋಣ; ಕಾಲುದಾರಿಯಲ್ಲಿ ಸಾಗುವವರಲ್ಲ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Forest: ಕಾಡುದಾರಿ ಸೃಷ್ಟಿಸುವವರಾಗೋಣ ಕಾಲುದಾರಿಯಲ್ಲಿ ಸಾಗುವವರಲ್ಲ…

Forest: ಕಾಡುದಾರಿ ಸೃಷ್ಟಿಸುವವರಾಗೋಣ; ಕಾಲುದಾರಿಯಲ್ಲಿ ಸಾಗುವವರಲ್ಲ…

6-mysore-story

Mysore Dasara: ನಮ್ಮ ಒಡೆಯರ್‌ ಊರು…

9-mysore-film-city-2

Mysore- Film City: ಮೈಸೂರಿಗೆ ಚಿತ್ರನಗರಿ ಕಿರೀಟ

7-mysore

Mysore: ರಾಜ ಪ್ರಭುತ್ವದ ನಾಡ ಕುಸ್ತಿ: ರಾಜಾಶ್ರಯ ಪಡೆದು ಉತ್ತುಂಗಕ್ಕೇರಿದ್ದ ನಾಡಿನ ಗಂಡುಕಲೆ

2(5)

Tata ಎಂದರೆ ಹೊಸತನ; ಭಾರತ ಖ್ಯಾತ ಉದ್ಯಮಿ ರತನ್‌ ಟಾಟಾಗೆ ವಿದಾಯ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Life: ಅನುಭವಗಳು ಬದುಕನ್ನು ಬದಲಾಯಿಸಬಲ್ಲದು…ಒಂದು ಅಭ್ಯಂಜನದ ಕಥನ!

Life: ಅನುಭವಗಳು ಬದುಕನ್ನು ಬದಲಾಯಿಸಬಲ್ಲದು…ಒಂದು ಅಭ್ಯಂಜನದ ಕಥನ!

Kannada cinema maryade prashne

Kannada cinema: ನವೆಂಬರ್‌ 22ಕ್ಕೆ ʼಮರ್ಯಾದೆ ಪ್ರಶ್ನೆʼ ತೆರೆಗೆ

10-

Sirwar: ಸಂಗೊಳ್ಳಿ ರಾಯಣ್ಣಗೆ ಅಪಮಾನ: ಮೂವರ ಬಂಧನ

Davanagere: Dussehra festival grand procession

Davanagere: ದಸರಾ ಹಬ್ಬದ ಬೃಹತ್ ಶೋಭಾಯಾತ್ರೆ

Culture: ನಮ್ಮ ಸಂಸ್ಕೃತಿ, ಭಾಷೆಯನ್ನು ಮರೆಯದಿರೋಣ

Culture: ನಮ್ಮ ಸಂಸ್ಕೃತಿ, ಭಾಷೆಯನ್ನು ಮರೆಯದಿರೋಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.