Mysore Elephants ಆನೆ ಮತ್ತು ಮಾವುತ ಭಾವನಾತ್ಮಕ ಸಂಬಂಧ

ಇವರಿಬ್ಬರ ಸಂಬಂಧ ಯಾರ ಕಲ್ಪನೆಗೂ ನಿಲುಕದ್ದು !

Team Udayavani, Oct 12, 2024, 10:30 AM IST

8-mysore-elephant

ವಿಶ್ವವಿಖ್ಯಾತ ಮೈಸೂರು ದಸರಾ ಎಂದಾಕ್ಷಣೆ ನೆನಪಾಗುವುದೇ ಚಿನ್ನದ ಅಂಬಾರಿ ಹೊತ್ತು ರಾಜ ಬೀದಿ ಯಲ್ಲಿ ಗಾಂಭೀರ್ಯದಿಂದ ಹೆಜ್ಜೆಯಿಡುವ ಅಂಬಾರಿ ಆನೆ ಮತ್ತು ಅದರೊಟ್ಟಿಗೆ ಸಾಹುವ ಗಜ ಪಡೆ. ಇಡೀ ದಸರಾದ ಸಾಂಸ್ಕೃತಿಕ ಮೆರುಗು ಎಂದೇ ಹೇಳುವ ಜಂಬೂ ಸವಾರಿ ಶಾಂತವಾಗಿ ಸಾಗಬೇಕಾದರೆ ಮಾವುತ ಇರಲೇಬೇಕು.

ದಸರಾ ಎಂದರೆ ಅಂಬಾರಿ, ಅಂಬಾರಿ ಎಂದರೆ ಆನೆ, ಆನೆ ಎಂದರೆ ಮಾವುತ ಎನ್ನುವುದು ಮುಖ್ಯ. ಮಾವುತನೇ ಇಡೀ ಜಂಬೂಸವಾರಿಯ ನಿಯಂತ್ರಕ ಶಕ್ತಿ ಹಾಗೂ ರೂವಾರಿಯೂ ಹೌದು. ಭೂಮಿಯ ಮೇಲೆನ ದೈತ್ಯ ಪ್ರಾಣಿಯಾದ ಆನೆಯನ್ನು ಪಳಗಿಸಿ ಅದರ ಮೇಲೆ ಸವಾರನಾಗಿ ಮೆರೆಯುವ ಈತನ ದಿಟ್ಟ ಧೈರ್ಯಗಳು ಮತ್ತು ಅದರೊಟ್ಟಿಗಿನ ಈತನ ಸಂವಹನದ ಭಾಷಾ ಕೈಂಕರ್ಯ ನಿಜಕ್ಕೂ ಶ್ಲಾಘನೀಯವಾದುದು.

ಜಂಬೂ ಸವಾರಿಗೆ ಎರಡು ತಿಂಗಳು ಮೊದಲೇ ಕಾಡಿ ನಿಂದ ನಾಡಿಗೆ ಆಗಮಿಸುವ ಗಜಪಡೆಯನ್ನು ಯಶಸ್ವಿಯಾಗಿ ನಿಯಂತ್ರಿಸುವ ಮತ್ತು ನಿರ್ವಹಿಸುವ ಮಾವುತ ಮತ್ತು ಕಾವಾಡಿ ಮಾತ್ರ ಎಲೆಮರೆಯ ಕಾಯಿ ಎಂದರೆ ತಪ್ಪಾಗಲಾರದು. ಆನೆ ಮೇಲಿನ ಅಂಬಾರಿಯಲ್ಲಿ ಚಿನ್ನಾಮೃತಳಾದ ತಾಯಿ ಚಾಮುಂಡಿಯನ್ನು ಕಣ್ತುಂಬಿಕೊಳ್ಳಲು ಜನಸಾಗರವೇ ನೆರೆದಿರುತ್ತದೆ. ಆದರೆ, ಕೆಲವರಿಗಷ್ಟೇ ಆನೆಯ ಮೂಕ ವೇದನೆ ಗೊತ್ತಾಗುವುದು. ಇಷ್ಟೆಲ್ಲಾ ಕಣ್ಣೆದುರಿಗೆ ಕಂಡವುಗಳಾದರೂ ಅದರೊಟ್ಟಿಗಿನ ಇಡೀ ಅಂಬಾರಿಯ ಮತ್ತು ಆನೆಯ ನಿಯಂತ್ರಣವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮಾವುತನು ಇಲ್ಲಿ ಮುಖ್ಯ ಎನ್ನುವುದನ್ನು ಮರೆಯುವಂತಿಲ್ಲ. ಒಟ್ಟು ದಸರಾ ಆಚರಣೆಯ ಕೇಂದ್ರಬಿಂದು ಜಂಬೂ ಸವಾರಿಯೇ ಆಗಿದ್ದರೂ, ಅದರ ನಿಯಂತ್ರಕ ಶಕ್ತಿ ಮಾವುತನ ಅಂಕುಶದಲ್ಲೇ ಅಡಗಿದೆ ಎಂಬುದುನ್ನು ನಾವು ಸ್ಮರಿಸಬೇಕಿದೆ.

ಗಿರಿಜನರು ಅಥವಾ ಬುಡಕಟ್ಟು ಜನರು ಕಾಡಿನ ವಾಸಿಗಳಾಗಿದ್ದರಿಂದಲೇ ವನ್ಯ ಪ್ರಾಣಿಗಳೊಂದಿಗೆ ಮಾತನಾಡುವ ಕಲೆ ರೂಢಿಸಿಕೊಂಡಿದ್ದಾರೆ. ಈ ಸಂವಹನ ಸಾಧನದಿಂದಲೇ ಅವುಗಳನ್ನು ಪಳಗಿಸಿ, ವುಗಳನ್ನು ಮಾತನಾಡಿಸುವ, ಅವುಗಳ ನೋವು, ಸಂಕಟ, ಸಂತೋಷಗಳೊಂದಿಗೆ ಪಾಲುದಾರನಾದ ಮಾವುತ ನಿಜಕ್ಕೂ ಅದೂºತ ಎನಿಸುವುದರಲ್ಲಿ ಸಂದೇಹವಿಲ್ಲ.

ಆನೆಯೊಂದಿಗೆ ಮಾತೃ ಪ್ರೇಮದ ನಂಟು

ಪ್ರತಿ ದಸರಾಕ್ಕೂ ನಾಗರಹೊಳೆ, ಬಂಡೀಪುರದ ಸಾಕಾನೆ ಶಿಬಿರಗಳಿಂದ ಆನೆಗಳು ಬರುತ್ತವೆ. ಇವುಗಳ ಜೊತೆಗೆ 14 ಮಾವುತರು ಮತ್ತು 14 ಮಂದಿ ಕಾವಾಡಿಗಳು ಹಾಗೂ ಇವರ ಜೊತೆ ಸಂಸಾರ, ಮಕ್ಕಳು ಸೇರಿ ಸುಮಾರು 150 ಜನರು ಬರುತ್ತಾರೆ. ಮಾವುತರು ಮತ್ತು ಕಾವಾಡಿಗಳು ಆನೆಯನ್ನು ಸಲಹುವ ಭಾವನಾ ಜೀವಿಗಳು. ಮಾವುತ ಆನೆಯನ್ನೇರುವ ಸವಾರನಾದರೆ, ಕಾವಾಡಿ ಸಹಚರನಾಗಿ ಜೊತೆಯಲ್ಲಿಯೇ ಕ್ಷೇಮಪಾಲನಾಗಿಯೇ ಇರುತ್ತಾನೆ. ಆನೆಯು ಸೌಮ್ಯವಾಗಿ ಹೆಜ್ಜೆ ಇಡಬೇಕಾದರೆ ಮಾವುತ ಮತ್ತು ಕಾವಾಡಿ ಚಾಲಕ ಮತ್ತು ನಿರ್ವಾಹಕರಾಗಿರುತ್ತಾರೆ. ಇಲ್ಲಿ ಇಬ್ಬರ ಹೊಂದಾಣಿಕೆಯೂ ಮುಖ್ಯವಾಗಿದ್ದು, ಇವರಿಬ್ಬರಿಗೂ ಆನೆಯೊಂದಿಗೆ ಮಾತೃಪ್ರೇಮದ ನಂಟಿರುವುದು ಗಮನಾರ್ಹ.

ಮಕ್ಕಳ ರೀತಿ ಪೋಷಿಸುವ ಮಾವುತರು

ಆನೆಗಳನ್ನು ಪಳಗಿಸುವ ಮಾವುತ ಮತ್ತು ಕಾವಾಡಿಗಳು ಅವುಗಳನ್ನು ತಮ್ಮ ಮಕ್ಕಳೆಂದೇ ಭಾವಿಸಿರುತ್ತಾರೆ. ಯಾರಾದರೂ ಆನೆಗಳಿಗೆ ಬೈದರೆ ಅವರು ನೊಂದುಕೊಳ್ಳುತ್ತಾರೆ, ದುಃಖೀತರಾಗುತ್ತಾರೆ ಎಂದರೆ ಆನೆ ಮತ್ತು ಅವರ ನಡುವಿನ ಸಂಬಂಧ ಎಂತಹದ್ದು ಎಂಬುದನ್ನು ಮನಗಾಣಬೇಕಿದೆ. ಪ್ರತಿದಿನ ಎರಡು ಬಾರಿ ಸ್ನಾನ, ವಿಶೇಷ ಫೋಜ ನ ಕೊಡುತ್ತಾರೆ. ಜತೆಯಲ್ಲಿಯೇ ಸ್ನೇಹಿತರಂತೆ ಮಾತನಾಡಿಕೊಳ್ಳುತ್ತಾರೆ. ಪ್ರಾಣಿಯ ಮೂಕವೇದನೆಗೆ ಬೆಲೆಕೊಡುತ್ತಾರೆ, ಸ್ಪಂದಿಸುತ್ತಾರೆ. ಇವರು ಕೂಗಿದರೆ ಆನೆಗಳು ಓಡಿ ಬರುತ್ತವೆ. ತಮಗೆ ಬೇಕು ಬೇಡಗಳನ್ನು ಆನೆಗಳು ಹೇಳಿಕೊಳ್ಳುತ್ತವೆ. ಮಾವುತರು ಮತ್ತು ಕವಾಡಿಗಳು ಆನೆಗಳು ಯಾಕೆ ಅಳುತ್ತವೆ ಎಂಬುದನ್ನು ಸುಲಭದಲ್ಲಿ ಅರ್ಥಮಾಡಿಕೊಳ್ಳುತ್ತಾರೆ. ಹೀಗೆ ಆನೆ ಮತ್ತು ಮಾವು ತರ ಸಂಬಂಧ ಎಂಥಹುದೆಂದರೆ ಯಾರ ಜಪ್ತಿಗೂ ಸಿಗದ ಮೌಲ್ಯವಾಗಿದೆ.

ಟಾಪ್ ನ್ಯೂಸ್

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

9-yoga

Sattvic Diet: ಪರೀಕ್ಷಾ ಒತ್ತಡ ನಿವಾರಣೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು

8-bagappa

Bagappa Harijan: ಭೀಮಾ ತೀರದಲ್ಲಿ ಮತ್ತೆ ರಕ್ತದ ಹನಿ

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

16

Uv Fusion: ಪೆನ್ನಿಗೊಂದು ಕಥೆ

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.