Devara 2: ʼದೇವರ-2ʼ ನಲ್ಲೂ ಬಾಲಿವುಡ್ ಸ್ಟಾರ್ಸ್? ನಿರ್ದೇಶಕರು ಹೇಳಿದ್ದೇನು?
Team Udayavani, Oct 10, 2024, 5:22 PM IST
ಹೈದರಾಬಾದ್: ಜೂನಿಯರ್ ಎನ್ ಟಿಆರ್(Jr. NTR) ಅವರ ‘ದೇವರ’ (Devara) ಶುಕ್ರವಾರ ವಿಶ್ವದಾದ್ಯಂತ ತೆರೆಕಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕೆಲವೇ ದಿನಗಳಲ್ಲಿ ಭಾರತದ ಬಾಕ್ಸ್ ಆಫೀಸ್ ನಲ್ಲಿ 200 ಕೋಟಿ ಗಳಿಕೆಯನ್ನು ದಾಟಿದೆ.
ಕೊರಟಾಲ ಶಿವ (Koratala Siva) ನಿರ್ದೇಶನದ ಪ್ಯಾನ್ ಇಂಡಿಯಾ ಹಾಗೂ ಬಹು ತಾರಾಗಣವನ್ನಿಟ್ಟುಕೊಂಡು ಬಿಗ್ ಬಜೆಟ್ ನಲ್ಲಿ ಬಂದ ‘ದೇವರ’ ರಿಲೀಸ್ ಗೂ ಮುನ್ನವೇ ಹತ್ತಾರು ವಿಚಾರಗಳಿಂದ ಸದ್ದು ಮಾಡಿತ್ತು.
ಇದನ್ನೂ ಓದಿ: Renukaswamy Case: ವಿಚಾರಣೆ ಅಂತ್ಯ; ಈ ದಿನ ಹೊರಬೀಳಲಿದೆ ದರ್ಶನ್ ಜಾಮೀನು ತೀರ್ಪು
ಸಿನಿಮಾ ಯಶಸ್ಸಿಯಾದ ಬೆನ್ನಲ್ಲೇ ಪ್ರೇಕ್ಷಕರಿಗೆ ಸೀಕ್ವೆಲ್ ಬಗ್ಗೆ ಕುತೂಹಲ ಹೆಚ್ಚಾಗಿದ್ದು, ನಿರ್ದೇಶಕ ಕೊರಟಾಲ ಶಿವ ಅವರು ಈ ಬಗ್ಗೆ ಮಾತನಾಡಿದ್ದಾರೆ.
ʼಝೂಮ್ʼ ಜತೆ ಮಾತನಾಡಿರುವ ಅವರು, ʼದೇವರ ಸೀಕ್ವೆಲ್ʼ ನಲ್ಲಿ ಅತಿಥಿ ಪಾತ್ರಗಳ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.
“ಹೌದು ʼದೇವರ-2ʼ ನಲ್ಲಿ ವಿಶೇಷ ಪಾತ್ರಗಳಿದೆ. ಅದನ್ನು ನಾವು ಶೀಘ್ರದಲ್ಲಿ ಅನೌನ್ಸ್ ಮಾಡಲಿದ್ದೇವೆ. ಇದನ್ನು ನಾನು ಅತಿಥಿ ಪಾತ್ರಗಳೆಂದು ಹೇಳಲ್ಲ. ಇದು ಚಿತ್ರದಲ್ಲಿ ಬಹಳ ಮುಖ್ಯವಾದ ಪಾತ್ರಗಳಾಗಿರುತ್ತವೆ” ಎಂದಿದ್ದಾರೆ.
ʼದೇವರ-2ʼ ನಲ್ಲಿ ಯಾರನ್ನು ಹಾಕಿಕೊಳ್ಳುತ್ತೀರಿ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, “ದೇವರ ಜಗತ್ತಿನಲ್ಲಿ ರಣವೀರ್ ಅಥವಾ ರಣಬೀರ್ ಅವರನ್ನು ನೋಡಲು ನಾನು ಇಷ್ಟಪಡುತ್ತೇನೆ. ನಾನು ತೆಲುಗು ಅಥವಾ ತಮಿಳು ಇಂಡಸ್ಟ್ರಿಯಿಂದ ಹೆಚ್ಚು ಹೆಸರುಗಳನ್ನು ತೆಗೆದುಕೊಳ್ಳುವುದಿಲ್ಲ. ನಾನು ಕೆಲವು ಹೆಸರುಗಳನ್ನು ಬಹಿರಂಗಪಡಿಸಿದರೆ, ಹಲವಾರು ಊಹೆಗಳು ಮತ್ತು ಊಹಾಪೋಹಗಳು ಏಳುತ್ತದೆ” ಎಂದು ಅವರು ಹೇಳಿದ್ದಾರೆ.
ಸದ್ಯ ಥಿಯೇಟರ್ನಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ʼದೇವರʼ ಸಿನಿಮಾದಲ್ಲಿ ಜೂ.ಎನ್ ಟಿಆರ್ ಜತೆ ಸೈಫ್ ಅಲಿ ಖಾನ್, ಜಾನ್ವಿ ಕಪೂರ್, ಪ್ರಕಾಶ್ ರಾಜ್ ಮುಂತಾದವರು ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vettaiyan: ಹೇಗಿದೆ ರಜಿನಿಕಾಂತ್ ʼವೆಟ್ಟಯ್ಯನ್ʼ? ಫಸ್ಟ್ ಹಾಫ್ ಓಕೆ ಸೆಕೆಂಡ್ ಹಾಫ್..
Nayanthara: ನಯನತಾರ ಮಕ್ಕಳ ದಾದಿಯರಿಗೂ ನಾವೇ ಸಂಬಳ ಕೊಡಬೇಕಾ..? ಖ್ಯಾತ ನಿರ್ಮಾಪಕ ಗರಂ
Kerala Cinema: ಮಲಯಾಳಂ ಖ್ಯಾತ ನಟ ಟಿಪಿ ಮಾಧವನ್ ವಿಧಿವಶ; ಗಣ್ಯರ ಸಂತಾಪ
Vettaiyan: ರಿಲೀಸ್ಗೂ ಮುನ್ನ ʼಗೋಟ್ʼ ದಾಖಲೆ ಮೀರಿಸಿದ ರಜಿನಿಕಾಂತ್ ʼವೆಟ್ಟೈಯನ್ʼ
Bigg Boss Tamil 8: ಬಿಗ್ ಬಾಸ್ ಮನೆಗೆ ಬಂದು 24 ಗಂಟೆಯೊಳಗೆ ಎಲಿಮಿನೇಟ್ ಆದ ನಟಿ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.