ಅ.10: ನೇರ ನಡೆ-ನುಡಿಯ ಶಿಸ್ತಿನ ಸಿಪಾಯಿ ಡಾ.ಕಾರಂತರು ಒಂದು ನೆನಪು


Team Udayavani, Oct 10, 2024, 5:47 PM IST

ಅ.10: ನೇರ ನಡೆ-ನುಡಿಯ ಶಿಸ್ತಿನ ಸಿಪಾಯಿ ಡಾ.ಕಾರಂತರು ಒಂದು ನೆನಪು

ನಮ್ಮ ಕಾರಂತರು ಅಂದ ತಕ್ಷಣವೇ ನೆನಪಾಗುವುದು ಅವರ ನೇರ ನಡೆ ನುಡಿ… ಮುಖಸ್ತುತಿ ಇಲ್ಲದ ಮಾತು..ನಾನು ಎಂಜಿಎಂ. ಕಾಲೇಜಿನಲ್ಲಿ ಇರ ಬೇಕಾದರೆ ಒಂದು ದಿನ ಮಧ್ಯಾಹ್ನ ಡಾ.ಶಿವರಾಮ ಕಾರಂತರು ನಮ್ಮ ಕಾಲೇಜಿನ ಅರ್ಥ ಶಾಸ್ತ್ರ ವಿಭಾಗದಲ್ಲಿ ಕೂತಿದ್ದರು..ನಮಸ್ತೇ ಸರ್ ಅಂದೆ ತಕ್ಷಣವೇ ಅವರು “ನೀವು ಎಲ್ಲಿಯವರು ಅಂತ ಕೇಳಿದರು..ನಾನು ಕೊಕ್ಕರ್ಣೆಯವನು ಅಂದೆ..ತಕ್ಷಣವೇ ಕಾರಂತರು..”ಸೂರಾಲಿನ ಜಾತ್ರೆ ಬಗ್ಗೆ ಮಾತನಾಡುತ್ತಾ..ನೀವೆಲ್ಲ ಸಂಜೆಯ ಹೊತ್ತಿಗೆ ಜಾತ್ರೆಗೆ ಬಂದು ಮುಖ ತೇೂರಿಸುತ್ತೀರಿ ಅಲ್ವಾ. ಕೇಳಿದರು..ನಮಗೆ ಅದು ಹೌದು ಅನ್ನಿಸಿತು..

ಎರಡನೇ ಬಾರಿ ನನಗೆ ಕಾರಂತರ ದರ್ಶ ನವಾಗಿದ್ದು ಅವರ ಸಾಲಿಗ್ರಾಮದ “ಸುಹಾಸ” ದಲ್ಲಿ ಮಂಗಳೂರು ವಿ.ವಿ.ಯಲ್ಲಿ ನಾನು ಸ್ನಾತಕೋತ್ತರ ಓದುತ್ತಿದ್ದ ಸಂದರ್ಭದಲ್ಲಿ ನಮ್ಮ ರಾಜಕೀಯ ಶಾಸ್ತ್ರ ವಿಭಾಗದ ಕಾರ್ಯಕ್ರಮದ ಉದ್ಘಾಟನೆಗೆ ಆಮಂತ್ರಿಸಲು ಹೇೂಗಿದ್ದೆ ..ಆಗ ಅವರು ಕೇಳಿದ್ದು ಇಷ್ಟೇ “ನೀವು ರಾಜಕೀಯದವರು ..ನಾನು ನಿಮಗ್ಯಾಕೆ ಅಂತ ಕೇಳಿದರು”..ಸರ್ ನಿಮ್ಮ ಮಾತು ರಾಜಕೀಯ ಕ್ಷೇತ್ರಕ್ಕೂ ಇಂದು ಬೇಕಾಗಿದೆ ಅಂದೆ, ತಕ್ಷಣವೇ ಅದಕ್ಕೆ ಒಪ್ಪಿ ಬಂದರು. ಅಂದು ನಮ್ಮ ವಿಭಾಗದ ಮುಖ್ಯಸ್ಥರಾಗಿದ್ದ ಪ್ರೊ.ಮಲ್ಲಯ್ಯ ನವರು ಕಾರಂತರನ್ನು ಸಂಬೋಧಿಸುವ ಸಂದರ್ಭದಲ್ಲಿ ಕಾರಂತರು ಅನ್ನುವುದನ್ನು ತಪ್ಪಿ..ನಮ್ಮ ಕಾಮತ್ ರು ಅಂದರು..ತಕ್ಷಣವೇ ಕಾರಂತರ ಮುಖ ನೇೂಡ ಬೇಕಿತ್ತು?

ಕಾರಂತರು ನಮ್ಮ ಸಮಾಜವನ್ನು ಯಥಾವತ್ತಾಗಿ ನೇೂಡಿ ಗ್ರಹಿಸಿದವರು..ಅವರ ಕೃತಿಯಲ್ಲಿ ಯಾವುದೇ ಕ್ರಾಂತಿಕಾರಿ ಪದಗಳು ಬರುವುದೇ ಇಲ್ಲ..ಅದನ್ನು ನಾವು ಚೇೂಮನ ದುಡಿಯ ನುಡಿಯಲ್ಲೂ ನೇೂಡಿದ್ದೇವೆ. ವೇದಿಕೆಯ ಕೆಳಗೆ ಸರಾಗವಾಗಿ ಕುಂದಾಪುರ ಕನ್ನಡದಲ್ಲಿ ಮಾತನಾಡುವ ಕಾರಂತರು ತಮ್ಮ ನೈಜ ಬದುಕಿನಲ್ಲಿ ಕ್ರಾಂತಿಕಾರಿ ಹೆಜ್ಜೆ ಇಟ್ಟವರು..ಅನ್ನುವುದರಲ್ಲಿ ಎರಡು ಮಾತಿಲ್ಲ..

ನಮ್ಮ ಕಾರಂತರು ನಾಸ್ತಿಕರು ಅನ್ನುವವರು ಇದ್ದಾರೆ..ಆದರೆ ಇದು ತಪ್ಪು ನಿಜಕ್ಕೂ ನೇೂಡಿದರೆ ದೇವರನ್ನು ಹತ್ತಿರದಲ್ಲೇ ಕಂಡವರಿದ್ದರೆ ಅದು ಕಾರಂತರು..ಇಡಿ ಜೀವ ಜಗತ್ತನ್ನು ಪ್ರೀತಿಸಿದವರು. ಅವರ ದೇವರು ಅನ್ನುವ ಲೇಖನದ ಪಾಠವನ್ನು ನಾನು ಸಣ್ಣ ತರಗತಿಯಲ್ಲಿ ಓದಿದ ನೆನಪು ಸದಾ ನನ್ನಲ್ಲಿದೆ.

“ಮನುಷ್ಯ ತಾನು ದೊಡ್ಡವನಾಗದೆ ತನ್ನ ದೇವರನ್ನು ದೊಡ್ಢದಾಗಿ ಮಾಡಲಾರ” ಅನ್ನುವ ಡಾ. ಕಾರಂತರ ಮಾತು ಇಂದಿಗೂ ಜೀವಂತ.. ಇಂದು ದಿವಂಗತ ಕೇೂಟ.ಡಾ.ಶಿವರಾಮ ಕಾರಂತರ ಜನುಮ ದಿನ.ಈ ಮಹಾನ್ ಚೇತನಕ್ಕೆ ನಮ್ಮೆಲ್ಲರ ನುಡಿ ನಮನ.

*ಪ್ರೊ.ಕೊಕ್ಕರ್ಣೆ ಸುರೇಂದ್ರ ನಾಥ ಶೆಟ್ಟಿ ಉಡುಪಿ.

ಟಾಪ್ ನ್ಯೂಸ್

police crime

Delhi; 2000 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ!!: ಪೊಲೀಸರ ಭಾರೀ ಬೇಟೆ

1-vij

BJP; ಹುಡುಕಿದರೂ ರಮೇಶ್ ಜಾರಕಿಹೊಳಿ ಸಿಗುತ್ತಿಲ್ಲ: ವಿಜಯೇಂದ್ರ ಮಾರ್ಮಿಕ ಹೇಳಿಕೆ

GOA: ಪ್ರವಾಸಿ ಬೋಟ್ ಮುಗುಚಿ ಇಬ್ಬರಿಗೆ ಗಾಯ; 13 ಪ್ರವಾಸಿಗರ ರಕ್ಷಣೆ

GOA: ಪ್ರವಾಸಿ ಬೋಟ್ ಮುಗುಚಿ ಇಬ್ಬರಿಗೆ ಗಾಯ; 13 ಪ್ರವಾಸಿಗರ ರಕ್ಷಣೆ

1-aa-2-bg

Ratan Tata; ಪಾರ್ಸಿ ಸಂಪ್ರದಾಯದಂತೆ ರತನ್ ಟಾಟಾ ಅಂತ್ಯಕ್ರಿಯೆ: ಸರ್ವ ಧರ್ಮ ಪ್ರಾರ್ಥನೆ

Terror 2

Hizb-Ut-Tahrir ಉಗ್ರ ಸಂಘಟನೆ ಎಂದು ಘೋಷಿಸಿದ ಕೇಂದ್ರ ಗೃಹ ಸಚಿವಾಲಯ

Western Ghats: ಕಸ್ತೂರಿ ರಂಗನ್ ವರದಿ ಸ್ವೀಕಾರಾರ್ಹವಲ್ಲ: ಡಾ ಉಲ್ಲಾಾಸ್ ಕಾರಂತ್

Western Ghats: ಕಸ್ತೂರಿ ರಂಗನ್ ವರದಿ ಸ್ವೀಕಾರಾರ್ಹವಲ್ಲ: ಡಾ ಉಲ್ಲಾಸ್ ಕಾರಂತ್

Vijayendra (2)

Congress ಸರಕಾರದಲ್ಲಿ ಗುದ್ದಲಿ ಪೂಜೆ ಅಲ್ಲ,ಗುದ್ದಲಿ ಕೂಡ ಕಾಣದ ಸ್ಥಿತಿ: ವಿಜಯೇಂದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

001

Mysore Dasara: ಕಾಣ ಬನ್ನಿ … ಬೆಳಕಿನರಮನೆ

Navratri Special: ಪ್ರೀತಿ ಒಂದೇ ಸಾಕು ಒಳಗಿನ ಭೋರ್ಗರೆವ ಯೋಚನೆಗಳ ತಣಿಸಲು

Navratri Special: ಪ್ರೀತಿ ಒಂದೇ ಸಾಕು ಒಳಗಿನ ಭೋರ್ಗರೆವ ಯೋಚನೆಗಳ ತಣಿಸಲು

Tata-Era

Rathan Tata Era End: ಅಜ್ಜಿಯ ಆರೈಕೆಯಲ್ಲಿ ಬೆಳೆದ ರತನ್‌ ಟಾಟಾ

Shivarama-karantah

Jayanthi: ಅಪರೂಪದ ಬಹುಮುಖ ಪ್ರತಿಭೆ ಕೋಟ ಡಾ.ಶಿವರಾಮ ಕಾರಂತ

Ma-Jwala-Temple

Godesess Temple: ನೈಸರ್ಗಿಕ ಅನಿಲದಿಂದ ಹೊರಹೊಮ್ಮುವ ಜ್ವಾಲೆಯೇ ಇಲ್ಲಿ ಜ್ವಾಲಾಜೀ ಮಾ!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

police crime

Delhi; 2000 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ!!: ಪೊಲೀಸರ ಭಾರೀ ಬೇಟೆ

1-vij

BJP; ಹುಡುಕಿದರೂ ರಮೇಶ್ ಜಾರಕಿಹೊಳಿ ಸಿಗುತ್ತಿಲ್ಲ: ವಿಜಯೇಂದ್ರ ಮಾರ್ಮಿಕ ಹೇಳಿಕೆ

kr

Udupi: ಆಟೋರಿಕ್ಷಾಕ್ಕೆ ಟೆಂಪೋ ಢಿಕ್ಕಿ: ಐವರಿಗೆ ಗಾಯ

1-deee

Chikkamagaluru: ಬಂದೂಕಿನಿಂದ ಗುಂಡು ಹಾರಿಸಿ ಕೊ*ಲೆ: ಆರೋಪಿಗೆ ಜೀವಾವಧಿ

GOA: ಪ್ರವಾಸಿ ಬೋಟ್ ಮುಗುಚಿ ಇಬ್ಬರಿಗೆ ಗಾಯ; 13 ಪ್ರವಾಸಿಗರ ರಕ್ಷಣೆ

GOA: ಪ್ರವಾಸಿ ಬೋಟ್ ಮುಗುಚಿ ಇಬ್ಬರಿಗೆ ಗಾಯ; 13 ಪ್ರವಾಸಿಗರ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.