Daily Horoscope: ಜೀವನೋತ್ಸಾಹ ಉಳಿಸಿಕೊಳ್ಳಲು ಶ್ರಮ, ವ್ಯಾಪಾರಿಗಳಿಗೆ ಪೈಪೋಟಿಯಿಂದ ಲಾಭ
Team Udayavani, Oct 11, 2024, 7:55 AM IST
ಮೇಷ: ಉದ್ಯೋಗ ಸ್ಥಾನದಲ್ಲಿ ಹೊಸ ಕಾರ್ಯಗಳ ಜವಾಬ್ದಾರಿ. ಉದ್ಯಮ ಸ್ಥಾನದಲ್ಲಿ ಹಬ್ಬದ ಸಂಭ್ರಮ. ಮಹಿಳೆಯರ ಸ್ವೋದ್ಯೋಗ ಯೋಜನೆಯಲ್ಲಿ ಲಾಭ. ಪಾಲುದಾರಿಕೆ ವ್ಯವಹಾರ ದಲ್ಲಿ ಪಾರದರ್ಶಕತೆ ಇರಲಿ.
ವೃಷಭ: ಹೊಸ ಯೋಜನೆ ಕ್ಷಿಪ್ರಗತಿಯಲ್ಲಿ ಮುನ್ನಡೆ. ಎಳೆಯರ ನಡತೆಯನ್ನು ತಿದ್ದಲು ಪ್ರಯತ್ನ. ಕೃಷಿ ಕ್ಷೇತ್ರದಲ್ಲಿ ಕೈಗೊಂಡ ಪ್ರಯೋಗಗಳ ಮುಂದುವರಿಕೆ. ಸ್ವಾವಲಂಬಿಗಳಾಗುವ ಯತ್ನದಲ್ಲಿ ಯಶಸ್ಸು. ವ್ಯವಹಾರ ನಿಮಿತ್ತ ಅಂತಾರಾಜ್ಯ ಪ್ರವಾಸ.
ಮಿಥುನ: ಜೀವನೋತ್ಸಾಹ ಉಳಿಸಿಕೊಳ್ಳಲು ಶ್ರಮ. ಉದ್ಯಮ ಅಭಿವೃದ್ಧಿಗೆ ವಿತ್ತಸಂಸ್ಥೆ ನೆರವು ಪ್ರಾಪ್ತಿ. ವ್ಯಾಪಾರಿಗಳಿಗೆ ಪೈಪೋಟಿಯಿಂದ ಲಾಭ. ದೇವತಾರಾಧನೆಯಿಂದ ಮನೆಯಲ್ಲಿ ಸಂತೋಷದ ವಾತಾವರಣ.
ಕರ್ಕಾಟಕ: ಆದರ್ಶಗಳನ್ನು ತ್ಯಜಿಸದೆ ಜೀವನದಲ್ಲಿ ಉನ್ನತಿ ಹೊಂದುವ ಹಂಬಲ. ಉದ್ಯೋಗದಲ್ಲಿ ದಿನೇ ದಿನೇ ಉನ್ನತಿ. ಅಕಸ್ಮಾತ್ ಧನಾಗಮ ಯೋಗ. ಕೃಷ್ಯುತ್ಪನ್ನ ಮಾರಾಟದಿಂದ ಸಾಮಾನ್ಯ ಲಾಭ. ಎಲ್ಲರಿಗೂ ಉತ್ತಮ ಆರೋಗ್ಯ.
ಸಿಂಹ: ಉದ್ಯೋಗ ಕ್ಷೇತ್ರದಲ್ಲಿ ಅಗ್ರಪಂಕ್ತಿಯ ಸ್ಥಾನಮಾನ. ಉದ್ಯಮದಲ್ಲಿ ಎಲ್ಲೆಡೆಯಿಲ್ಲದ ಪ್ರಗತಿ. ಕೃಷಿ ಕಾರ್ಮಿಕರಿಗೆ ಅನುಕೂಲದ ವಾತಾವರಣ. ಹಿರಿಯರು, ಗೃಹಿಣಿಯರು ಮಕ್ಕಳಿಗೆ ಹಬ್ಬದ ಸಂಭ್ರಮ.
ಕನ್ಯಾ: ಸ್ಥಾನಗೌರವ ಕಾಪಾಡಿಕೊಳ್ಳುವ ಪ್ರಯತ್ನ. ಸಣ್ಣ ಉದ್ಯಮಿಗಳಿಗೆ ಅನುಕೂಲದ ದಿನ. ಕುಶಲಕರ್ಮಿಗಳಿಗೆ ಯೋಗ್ಯ ಸ್ಥಾನದಲ್ಲಿ ಉದ್ಯೋಗಾವಕಾಶ. ಉದ್ಯೋಗ ಸಂಬಂಧ ಸಣ್ಣ ಪ್ರಯಾಣ ಸಂಭವ. ಅವಿವಾಹಿತರಿಗೆ ವಿವಾಹ ಯೋಗ.
ತುಲಾ: ಯೋಗ್ಯತೆಗೆ ಸರಿಯಾದ ಗೌರವ ಪ್ರಾಪ್ತಿ. ಹಿತಶತ್ರುಗಳ ಸಂಚಿಗೆ ಸೋಲು. ಗುರುಸಮಾನ ಹಿರಿಯರ ಭೇಟಿಯಿಂದ ಸಮಾಧಾನ. ದೇವತಾ ಸಾನ್ನಿಧ್ಯ ದರ್ಶನ. ಹಿರಿಯ ಬಂಧುಗಳ ಭೇಟಿಗಾಗಿ ಪ್ರಯಾಣ.
ವೃಶ್ಚಿಕ: ದೈಹಿಕ, ಮಾನಸಿಕ ಆರೋಗ್ಯಪಾಲನೆ. ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ. ಉದ್ಯಮಿ ಗಳಿಗೆ ಎದುರಾಳಿಗಳ ಪೈಪೋಟಿ ನಿವಾರಣೆ. ಸರಕಾರಿ ನೌಕರರಿಗೆ ವರ್ಗಾವಣೆಯ ಭೀತಿ. ಹಿರಿಯ ಸಾಧಕ ರಿಗೆ ಗೌರವ ಸಮರ್ಪಣೆ.
ಧನು: ಸಂಪಾದನೆಯ ಮಾರ್ಗದಲ್ಲಿ ಮುಂದುವರಿಕೆ. ಉದ್ಯೋಗ ಸ್ಥಾನದಲ್ಲಿ ಸಣ್ಣ ಬದಲಾವಣೆ. ಸಣ್ಣ ಉದ್ಯಮ ಘಟಕ ಲಾಭ ಗಳಿಕೆ. ಗೃಹೋದ್ಯಮದ ಖಾದ್ಯ ಪದಾರ್ಥಗಳಿಗೆ ಹಬ್ಬದ ನಿಮಿತ್ತ ಅಧಿಕ ಬೇಡಿಕೆ.
ಮಕರ: ಒಡಹುಟ್ಟಿದವರ ಪ್ರೀತಿ ಉಳಿಸಿ ಕೊಂಡರೆ ಶ್ರೇಯಸ್ಸು. ಉದ್ಯೋಗ ಸ್ಥಾನ ದಲ್ಲಿ ನಿಗದಿತ ಸಮಯಕ್ಕೆ ಕಾರ್ಯ ಮುಕ್ತಾಯ. ಉತ್ಪನ್ನಗಳ ಗುಣಮಟ್ಟ ಸುಧಾರಣೆ. ಹಳೆಯ ಒಡನಾಡಿಗಳ ಭೇಟಿಯ ಸಾಧ್ಯತೆ.
ಕುಂಭ: ಉದ್ಯೋಗ ಸ್ಥಾನದಲ್ಲಿ ಕಾರ್ಯ ಸಾಧನೆಯ ಗುರಿ ಬಹುಪಾಲು ಮುಕ್ತಾಯ. ಗ್ರಾಹಕರಿಂದ ನಿರೀಕ್ಷೆಗಿಂತ ಅಧಿಕ ಬೇಡಿಕೆ. ಮುದ್ರಣಸಾಮಗ್ರಿ, ಸ್ಟೇಶನರಿ ವಿತರಕರ ಮಾರುಕಟ್ಟೆ ಜಾಲ ವಿಸ್ತರಣೆ. ಟೈಲರಿಂಗ್ ವೃತ್ತಿ ಬಲ್ಲವರಿಗೆ ಉದ್ಯೋಗಾವಕಾಶ.
ಮೀನ: ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ. ಹಲವು ಸೇವಾ ಕ್ಷೇತ್ರಗಳಿಂದ ಕರೆ. ವ್ಯವಹಾರ ಸ್ಥಾನಗಳಲ್ಲಿ ಹಬ್ಬ ಆಚರಣೆಯ ಸಿದ್ಧತೆ. ಕೃಷಿ ಕ್ಷೇತ್ರದಲ್ಲಿ ಫಲ ನೀಡಿದ ಪ್ರಯತ್ನಗಳು. ಉದ್ಯೋಗ ಅರಸುತ್ತಿರುವವರಿಗೆ ಸಮರ್ಪಕ ಅವಕಾಶಗಳು ಗೋಚರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.