Dasara ಹಬ್ಬಕ್ಕೆ ಊರಿಗೆ ಹೊರಟ ಲಕ್ಷಾಂತರ ಜನ: ಹಲವೆಡೆ ಭಾರೀ ಸಂಚಾರ ದಟ್ಟಣೆ

ದಸರಾ ಹಬ್ಬಕ್ಕೆ ಊರಿಗೆ ಹೊರಟ ಲಕ್ಷಂತರ ಜನ: ಹಲವೆಡೆ ಭಾರೀ ಸಂಚಾರ ದಟ್ಟಣೆ

Team Udayavani, Oct 11, 2024, 1:00 PM IST

6-dasara

ಬೆಂಗಳೂರು: ದಸರಾ ಹಬ್ಬ ಸೇರಿದಂತೆ ಸರಣಿ ರಜೆ ಹಿನ್ನೆಲೆಯಲ್ಲಿ ಬೆಂಗಳೂರಿಗರು ತಮ್ಮ ಊರುಗಳ ಕಡೆ ತೆರಳಿದ್ದರಿಂದ ಮೆಜೆಸ್ಟಿಕ್‌ ಸೇರಿ ನಗರದ ಪ್ರಮುಖ ರಸ್ತೆಗಳು ಹಾಗೂ ಜಂಕ್ಷನ್‌ಗಳಲ್ಲಿ ಭಾರೀ ಜನದಟ್ಟಣೆ ಜತೆಗೆ ಸಂಚಾರ ದಟ್ಟಣೆಯು ಉಂಟಾಗಿತ್ತು.

ಶುಕ್ರವಾರ ಆಯುಧ ಪೂಜೆ, ಶನಿವಾರ ವಿಜಯ ದಶಮಿ ಮತ್ತು ಭಾನುವಾರ ವಾರದ ರಜೆ ಸೇರಿ 3 ದಿನಗಳು ಸರಣಿ ರಜೆ ಇದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿ ನಿಂದ ಲಕ್ಷಾಂತರ ಮಂದಿ ಗುರುವಾರ ಬೆಳಗ್ಗೆಯಿಂದಲೇ ತಮ್ಮ ಊರಿನತ್ತ ಪ್ರಯಾಣ ಬೆಳೆಸಿದರು. ಮತ್ತೂಂದೆಡೆ ಕೆಎಸ್‌ಎಸ್‌ಆರ್‌ಟಿಸಿ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿಯಾಗಿ 1200 ಬಸ್‌ಗಳನ್ನು ರಾಜ್ಯದ ವಿವಿಧ ಜಿಲ್ಲೆಗಳಿಗೆ ವ್ಯವಸ್ಥೆ ಮಾಡಿದೆ. ಕೆಲ ಪ್ರಯಾಣಿಕರು ಮುಂಗಡ ಸೀಟು ಕಾಯ್ದಿರಿಸಿದರೆ, ಕೆಲವರು ನೇರವಾಗಿ ಬಸ್‌ ನಿಲ್ದಾಣಕ್ಕೆ ಬಂದು ಬಸ್‌ ಏರಿದರು.

ಬೆಳಗ್ಗೆಯಿಂದಲೇ ಸಂಚಾರ ದಟ್ಟಣೆ: ಗುರುವಾರ ಬೆಳಗ್ಗೆ 7 ಗಂಟೆಯಿಂದಲೇ ಮೆಜೆಸ್ಟಿಕ್‌, ಆನಂದ್‌ ರಾವ್‌ ವೃತ್ತ, ಮೈಸೂರು ರಸ್ತೆ, ಹೊಸೂರು ರಸ್ತೆ, ಬಳ್ಳಾರಿ ರಸ್ತೆಯಲ್ಲಿ ಭಾರೀ ವಾಹನಗಳ ಓಡಾಟ ಇತ್ತು. ಕೆಲವರು ಸ್ವಂತ ವಾಹನಗಳ ಮೂಲಕ ಊರುಗಳತ್ತ ಪ್ರಯಾಣಿಸಿದರೆ, ಬಹುತೇಕ ಮಂದಿ ಸಮೂಹ ಸಾರಿಗೆ ಬಳಸಿದರು. ಅದರಿಂದ ಮೆಜೆಸ್ಟಿಕ್‌, ಸ್ಯಾಟಲೈಟ್‌, ಯಶವಂತಪುರ, ಹೆಬ್ಟಾಳ, ಎಲೆಕ್ಟ್ರಾನಿಕ್‌ ಸಿಟಿ ಬಸ್‌ ನಿಲ್ದಾಣಗಳಲ್ಲಿ ಜನದಟ್ಟಣೆ ಹೆಚ್ಚಾಗಿದ್ದರಿಂದ ಮಂದಗತಿಯ ವಾಹನ ಸಂಚಾರ ಇತ್ತು.

ಇನ್ನು ಮೆಜೆಸ್ಟಿಕ್‌, ಯಶವಂತರದ ಗೋವರ್ಧನ ಟಾಕೀಸ್‌, ಸ್ಯಾಟಲೈಟ್‌ ಬಸ್‌ ನಿಲ್ದಾಣ ಸಮೀಪ ತಡರಾತ್ರಿ 1 ಗಂಟೆವರೆಗೂ ನಿರೀಕ್ಷೆಗೂ ಮೀರಿದ ಭಾರೀ ಸಂಚಾರ ದಟ್ಟಣೆ ಉಂಟಾಗಿದ್ದು, ವಾಹನಗಳು ಸಿಗ್ನಲ್‌ ದಾಟಲು ತಾಸುಗಟ್ಟಲೇ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಂಜೆ ನಾಲ್ಕು ಗಂಟೆ ಬಳಿಕ ಸಂಚಾರ ದಟ್ಟಣೆ ದುಪ್ಟಟ್ಟಾಗಿತ್ತು.

ಮುಂಜಾನೆಯಿಂದಲೇ ರಸ್ತೆಗಳಿದ ಸಂಚಾರ ಪೊಲೀಸರು, ನಗರದಲ್ಲಿ ಉಂಟಾದ ಸಂಚಾರ ದಟ್ಟಣೆ ನಿಯಂತ್ರಿಸಲು ಹೈರಾಣಾದರು. ಮೆಜೆಸ್ಟಿಕ್‌ ಸುತ್ತ-ಮುತ್ತ ಸುಮಾರು 50ಕ್ಕೂ ಅಧಿಕ ಮಂದಿ ಹಾಗೂ ಯಶವಂತಪುರ ಗೋವರ್ಧನ ಟಾಕೀಸ್‌ ಬಳಿ ಸುಮಾರು 30ಕ್ಕೂ ಅಧಿಕ ಮಂದಿ ಸಂಚಾರ ಪೊಲೀಸರ ನಿಯೋಜಿಸಲಾಗಿದೆ.

ಮೆಜೆಸ್ಟಿಕ್‌ನಲ್ಲಿ 10 ನಿಮಿಷಕ್ಕೆ ಬಸ್‌ ಫ‌ುಲ್‌ ಮೆಜೆಸ್ಟಿಕ್‌ ಬಸ್‌ ನಿಲ್ದಾಣ ಮತ್ತು ಸ್ಯಾಟಲೈಟ್‌ ಬಸ್‌ ನಿಲ್ದಾಣಗಳಲ್ಲಿ ಬೇರೆ ಸಂದರ್ಭದಲ್ಲಿ ಒಂದು ಬಸ್‌ ಭರ್ತಿಯಾಗಲು ಕನಿಷ್ಠ 30 ನಿಮಿಷ ಬೇಕಾಗಿತ್ತು. ಆದರೆ, ಗುರುವಾರ ಕೇವಲ 10 ನಿಮಿಷಕ್ಕೆ ಒಂದು ಬಸ್‌ ಭರ್ತಿಯಾಗಿ ನಿಲ್ದಾಣದಿಂದ ಹೊರಡುತ್ತಿವೆ. ಪ್ರಯಾಣಿಕರನ್ನು ನಿಯಂತ್ರಿಸಲು ದೊಡ್ಡ ಸವಾಲಾಗಿತ್ತು. ಬಹುತೇಕ ಇನ್ನು 500 ಬಸ್‌ಗಳು ಹೆಚ್ಚುವರಿಯಾಗಿ ನೀಡಿದರೆ, ಆ ಬಸ್‌ಗಳು ಭರ್ತಿಯಾಗುವ ಸಾಧ್ಯತೆ ಇತ್ತು. ಇನ್ನು ಸಂಚಾರ ಪೊಲೀಸರು ನಿಲ್ದಾಣದ ಪ್ರವೇಶ ದ್ವಾರದಲ್ಲಿ ನಿಂತು ಬಸ್‌ಗಳು ನಿಲ್ದಾಣದಿಂದ ಸುಗ ಮವಾಗಿ ಹೊರಡಲು ಸಹಾಯ ಮಾಡಿದರು ಮೆಜೆಸ್ಟಿಕ್‌ ಬಸ್‌ ನಿಲ್ದಾಣದ ಸಿಬ್ಬಂದಿ ಮಾಹಿತಿ ನೀಡಿದರು.

ಟಾಪ್ ನ್ಯೂಸ್

1-dsdsadasd

Kamala Harris ಪರವಾಗಿ ಲೈವ್ ಮ್ಯೂಸಿಕ್ ಕನ್ಸರ್ಟ್ ನಡೆಸಲಿರುವ ಎ.ಆರ್.ರೆಹಮಾನ್

Tragedy: ತಮ್ಮನ ಸಾವಿನ ಸುದ್ದಿ ಕೇಳಿ ಅಕ್ಕನಿಗೂ ಹೃದಯಾಘಾತ… ಸಾವಿನಲ್ಲೂ ಒಂದಾದ ಅಕ್ಕ-ತಮ್ಮ

Tragedy: ತಮ್ಮನ ಸಾವಿನ ಸುದ್ದಿ ಕೇಳಿ ಅಕ್ಕನಿಗೂ ಹೃದಯಾಘಾತ… ಸಾವಿನಲ್ಲೂ ಒಂದಾದ ಅಕ್ಕ-ತಮ್ಮ

1-reee

Israel ವಾಯುದಾಳಿಗೆ ಬೈರುತ್ ನಲ್ಲಿ 22 ಮಂದಿ ಬಲಿ: ಹೆಜ್ಬುಲ್ಲಾ ಪ್ರಮುಖ ನಾಯಕ ಎಸ್ಕೇಪ್

Chikkamagaluru: ಮುಳ್ಳಯ್ಯನಗಿರಿಯಲ್ಲಿ 250 ಅಡಿ ಪ್ರಪಾತಕ್ಕೆ ಬಿದ್ದ ಕಾರು… ಐವರು ಗಂಭೀರ

Chikkamagaluru: ಮುಳ್ಳಯ್ಯನಗಿರಿಯಲ್ಲಿ 250 ಅಡಿ ಪ್ರಪಾತಕ್ಕೆ ಬಿದ್ದ ಕಾರು… ಐವರು ಗಂಭೀರ

1-reess

NDA ಮೈತ್ರಿಕೂಟಕ್ಕೆ ನೀಡಿದ ಬೆಂಬಲ ಹಿಂಪಡೆಯಿರಿ: ನಿತೀಶ್ ಗೆ ಅಖಿಲೇಶ್ ಒತ್ತಾಯ

16-mysore

Mysore: ನಾಳೆ ಅರಮನೆ ನಗರಿಯಲ್ಲಿ ಐತಿಹಾಸಿಕ ಜಂಬೂಸವಾರಿ

15-pg

Bengaluru: ಮಾರ್ಗಸೂಚಿ ಪಾಲಿಸದ ಪಿಜಿಗಳಿಗೆ ಪಾಲಿಕೆ ಬೀಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-pg

Bengaluru: ಮಾರ್ಗಸೂಚಿ ಪಾಲಿಸದ ಪಿಜಿಗಳಿಗೆ ಪಾಲಿಕೆ ಬೀಗ

14-bng

ಮಾರುಕಟ್ಟೆಯಲ್ಲಿ ದಸರಾ ಹಬ್ಬದ ರಂಗು; ಕಳೆದ ವಾರಕ್ಕೆ ಹೋಲಿಸಿದರೆ ತರಕಾರಿ, ಹೂ ಬೆಲೆ ಹೆಚ್ಚಳ

8-bng

Bengaluru: ಬೇಕರಿ ಮಾಲಿಕರ ಬೆದರಿಸಿ ಸುಲಿಗೆ ಮಾಡುತ್ತಿದ್ದ ಯುಟ್ಯೂಬರ್‌ ಬಂಧನ

5-bng

Bengaluru: ಜಾಗತಿಕ ವಿವಿ ರ್‍ಯಾಂಕಿಂಗ್‌: ದೇಶದಲ್ಲಿ ಐಐಎಸ್‌ಸಿಗೆ ಅಗ್ರಪಟ್ಟ

4-bng

Bengaluru: ಆರ್‌ಬಿಐಗೇ ನಕಲಿ ನೋಟು ನೀಡಿ ವಂಚನೆ ಯತ್ನ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

17(1)

Uchila ದಸರಾ: ಪಾರ್ಕಿಂಗ್‌, ಟ್ರಾಫಿಕ್‌ ವ್ಯವಸ್ಥೆ ಸಿದ್ಧತೆ ಪೂರ್ಣ

1-dsdsadasd

Kamala Harris ಪರವಾಗಿ ಲೈವ್ ಮ್ಯೂಸಿಕ್ ಕನ್ಸರ್ಟ್ ನಡೆಸಲಿರುವ ಎ.ಆರ್.ರೆಹಮಾನ್

Tragedy: ತಮ್ಮನ ಸಾವಿನ ಸುದ್ದಿ ಕೇಳಿ ಅಕ್ಕನಿಗೂ ಹೃದಯಾಘಾತ… ಸಾವಿನಲ್ಲೂ ಒಂದಾದ ಅಕ್ಕ-ತಮ್ಮ

Tragedy: ತಮ್ಮನ ಸಾವಿನ ಸುದ್ದಿ ಕೇಳಿ ಅಕ್ಕನಿಗೂ ಹೃದಯಾಘಾತ… ಸಾವಿನಲ್ಲೂ ಒಂದಾದ ಅಕ್ಕ-ತಮ್ಮ

1-reee

Israel ವಾಯುದಾಳಿಗೆ ಬೈರುತ್ ನಲ್ಲಿ 22 ಮಂದಿ ಬಲಿ: ಹೆಜ್ಬುಲ್ಲಾ ಪ್ರಮುಖ ನಾಯಕ ಎಸ್ಕೇಪ್

Chikkamagaluru: ಮುಳ್ಳಯ್ಯನಗಿರಿಯಲ್ಲಿ 250 ಅಡಿ ಪ್ರಪಾತಕ್ಕೆ ಬಿದ್ದ ಕಾರು… ಐವರು ಗಂಭೀರ

Chikkamagaluru: ಮುಳ್ಳಯ್ಯನಗಿರಿಯಲ್ಲಿ 250 ಅಡಿ ಪ್ರಪಾತಕ್ಕೆ ಬಿದ್ದ ಕಾರು… ಐವರು ಗಂಭೀರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.