Kaup: ದಿವ್ಯಾಂಗರ ಸಹಾಯಕ್ಕೆ ಟೀಮ್‌ ಮಾರುತಿ ಕುಣಿತ

60 ಮಂದಿಯ ಮೂಳೂರು ಹುಲಿ ತಂಡಕ್ಕೆ ದಿವ್ಯಾಂಗ ಯುವಕನೇ ಸಾರಥಿ; ಸಾಮಾಜಿಕ ಕಾರ್ಯವೇ ಗುರಿ

Team Udayavani, Oct 12, 2024, 3:00 PM IST

18

ಕಾಪು: ಉಚ್ಚಿಲ ದಸರಾ ಮತ್ತು ಶರನ್ನವರಾತ್ರಿ ವೇಳೆ ಹುಲಿ ವೇಷ ಧರಿಸಿ ಜನರನ್ನು ರಂಜಿಸುವುದರೊಂದಿಗೆ ಅದರಿಂದ ಸಂಗ್ರಹವಾಗುವ ಹಣವನ್ನು ಸಮಾಜಮುಖೀ ಕೆಲಸಗಳಿಗಾಗಿ ವಿನಿಯೋಗಿಸುತ್ತಿದೆ ಟೀಮ್‌ ಮಾರುತಿ ಮೂಳೂರು ಬಳಗ. ಮೂರನೇ ವರ್ಷದ ತಿರುಗಾಟದಲ್ಲಿರುವ ಟೀಮ್‌ ಪಿಲಿ ಪಜ್ಜೆ 3.0ದಲ್ಲಿ ಸಂಗ್ರಹವಾಗುವ ಮೊತ್ತವನ್ನು ಕಾಪು ಪುರಸಭೆ ಮತ್ತು ಬಡಾ ಗ್ರಾ.ಪಂ. ವ್ಯಾಪ್ತಿಯ ದಿವ್ಯಾಂಗ ವಿದ್ಯಾರ್ಥಿಗಳು ಮತ್ತು ತಂದೆ / ತಾಯಿ ಅಥವಾ ಪೋಷಕರ ಆಶ್ರಯದಲ್ಲಿ ಕಲಿಯುತ್ತಿರುವ ವಿದಾರ್ಥಿಗಳಿಗೆ ಸಾಂತ್ವನ ನೆರವು ನಿಧಿಗಾಗಿ ವಿನಿಯೋಗಿಸಲು ನಿರ್ಧರಿಸಿದೆ.

ದಿವ್ಯಾಂಗ ಯುವಕ ಸಾರಥಿ
ಟೀಮ್‌ ಮಾರುತಿ ತಂಡದ ಅಧ್ಯಕ್ಷ ಪ್ರಹಾರ್‌ ಅವರಿಗೆ ಬಲಗೈನ ಮುಂಗೈ ಇಲ್ಲ. ತಾಯಿ ಮತ್ತು ಚಿಕ್ಕಮ್ಮನ ಆಶ್ರಯದಲ್ಲಿ ಬೆಳೆದ ಅವರು ಶಿಕ್ಷಣಕ್ಕಾಗಿ ಸಾಕಷ್ಟು ಕಷ್ಟ ಎದುರಿಸಿದ್ದರು. ಕಷ್ಟಗಳ ನಡುವೆಯೂ ಡಿಗ್ರಿ ಮುಗಿಸಿ ಈಗ ಎಂಬಿಎ ವ್ಯಾಸಂಗ ಮಾಡುತ್ತಿದ್ದಾರೆ. ತನ್ನಂತೆ ಕಷ್ಟಪಡುವೆ ಬೇರೆ ಮಕ್ಕಳಿಗೆ ನೆರವಾಗಬೇಕು ಎಂಬ ಉದ್ದೇಶದಿಂದ ಟೀಮ್‌ ಮಾರುತಿ ತಂಡ ಸೇರಿ ಈಗ ಸಾರಥಿಯಾಗಿದ್ದಾರೆ.

26 ಹುಲಿ ವೇಷಧಾರಿಗಳು
ಪಿಲಿ ಪೆಜ್ಜೆ 3.0 ತಂಡದಲ್ಲಿ ಹತ್ತು ವರ್ಷದ ಒಳಗಿನ 7 ಮಂದಿ ಮಕ್ಕಳು ಸೇರಿದಂತೆ 26 ಮಂದಿ ಹುಲಿ ವೇಷಧಾರಿಗಳಿದ್ದರೆ. ಅದರಲ್ಲಿ 9 ಮಂದಿ ಪ್ರಥಮ ಬಾರಿಗೆ ಬಣ್ಣ ಹಚ್ಚಿದವರು. ಇವರ ಜತೆ 40 ಮಂದಿ ತಂಡದ ಜತೆಗಿದೆ. ತಂಡದಲ್ಲಿರುವ ಎಲ್ಲರೂ ವಿದ್ಯಾರ್ಥಿಗಳೇ ಆಗಿರುವುದರಿಂದ ಇವರ ಕಲಿಕೆಗೂ ಟೀಮ್‌ ನೆರವಾಗುತ್ತಿದೆ.

ಕಳೆದ 2 ವರ್ಷದಲ್ಲಿ 2.53 ಲಕ್ಷ ರೂ. ನೆರವು
ಪಿಲಿ ಪೆಜ್ಜೆ 1.0ದಲ್ಲಿ ಸಂಗ್ರಹವಾದ ಹಣದಲ್ಲಿ ಖರ್ಚು ಕಳೆದು 1.35 ಲಕ್ಷ ರೂ. ಮೊತ್ತವನ್ನು ವೇಷ ಧರಿಸಿದ ವಿದ್ಯಾರ್ಥಿಗಳು ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಹಾಗೂ ಬಡ ಕುಟುಂಬವೊಂದಕ್ಕೆ ಶೌಚಾಲಯ ನಿರ್ಮಾಣ, ಶಾಲೆಗೆ ಅಗತ್ಯ ಸೌಲಭ್ಯ ಜೋಡಣೆಗೆ ಬಳಸಲಾಗಿದೆ. ಪಿಲಿ ಪೆಜ್ಜೆ 2.0 ಸಂಗ್ರಹವಾದ 1.18 ಲಕ್ಷ ರೂ.ನಲ್ಲಿ ಹಣದಲ್ಲಿ ವೇಷ ಧರಿಸಿದ ವಿದ್ಯಾರ್ಥಿಗಳು ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ 52,400 ರೂ. ಹಾಗೂ ಕಾಪು ಪುರಸಭೆ ಮತ್ತು ಬಡಾ ಗ್ರಾ.ಪಂ. ವ್ಯಾಪ್ತಿಯ 1ರಿಂದ 10 ನೇ ತರಗತಿಯವರೆಗಿನ ದಿವ್ಯಾಂಗ‌ ವಿದ್ಯಾರ್ಥಿಗಳು ಮತ್ತು ಕಷ್ಟದಲ್ಲಿರುವ ಕುಟುಂಬಗಳ 44 ಮಕ್ಕಳಿಗೆ ವಿದ್ಯಾರ್ಥಿ ವೇತನವಾಗಿ 66,000 ರೂ. ನೀಡಿದ್ದಾರೆ.

ಕಾರ್ಯ ಶ್ಲಾಘನೀಯ
ಕಳೆದ 3 ವರ್ಷಗಳಿಂದ ಹುಲಿ ವೇಷ ಧರಿಸಿ ವಿಭಿನ್ನ ರೀತಿಯ ಸಮಾಜಮುಖೀ ಕಾರ್ಯಕ್ರಮಗಳನ್ನು ತೊಡಗಿಸಿ ಕೊಂಡಿರುವ ಸಂಘಟನೆಯ ಕಾರ್ಯ ಶ್ಲಾಘ ನೀಯ.
-ಡಾ| ಪ್ರತಿಭಾ ಆರ್‌., ತಹಶೀಲ್ದಾರ್‌, ಕಾಪು

ಸೇವೆಗೆ ಮೀಸಲು
ಸಂಗ್ರಹವಾದ ಹಣವನ್ನು ವಿದ್ಯಾರ್ಥಿ ವೇತನ ಹಾಗೂ ಸಾಮಾಜಿಕ ಸೇವೆಗೆ ಮೀಸಲಿರಿಸಿದ್ದೇವೆ. ಜನರು, ಉದ್ಯಮಿಗಳು, ಜನಪ್ರತಿನಿಧಿಗಳು ಸಹಕಾರ ನೀಡುತ್ತಿದ್ದಾರೆ.
-ಪ್ರಹರ್‌ ಮೂಳೂರು, ಅಧ್ಯಕ್ಷರು, ಟೀಮ್‌ ಮಾರುತಿ, ಮೂಳೂರು

ಹುಲಿ ಕುಣಿತ ತರಬೇತಿ, ಪೈಂಟಿಂಗ್‌
ಟೀಮ್‌ ಮಾರುತಿ ತಂಡದ ಸದಸ್ಯರು ಮೂಳೂರು ಪರಿಸರದಲ್ಲಿ ‘ವಾಟರ್‌ ಕಲರ್‌’ ಬಳಸಿ ವೇಷ ಹಾಕಿ ಮನೆ ಮನೆಗೆ ಹೋಗಿ ಕುಣಿದು ಅಷ್ಟಮಿ, ಚೌತಿ, ಮಾರ್ನೆಮಿಗೆ ಮನೋರಂಜನೆ ನೀಡುತ್ತಿದ್ದರು. ಇದೀಗ ಮೂರು ವರ್ಷಗಳಿಂದ ಈ ತಂಡಕ್ಕೆ ಆಸುಪಾಸಿನ ಮಕ್ಕಳನ್ನು ಸೇರಿಸಿ ಹುಲಿ ಕುಣಿತ ತರಬೇತಿ ನೀಡಿ ಪ್ರದರ್ಶನಕ್ಕೆ ಅಣಿ ಮಾಡಲಾಗುತ್ತಿದೆ. ಸಂಗ್ರಹವಾದ ಹಣವನ್ನು ಅಂಗವಿಕಲ ವಿದ್ಯಾರ್ಥಿಗಳು, ಅನಾಥ ಮಕ್ಕಳ ವಿದ್ಯಾಭ್ಯಾಸ ಮತ್ತು ಮೂಲಸೌಕರ್ಯಗಳ ಜೋಡಣೆಗಾಗಿ ಬಳಸಲಾಗುತ್ತಿದೆ.

-ರಾಕೇಶ್‌ ಕುಂಜೂರು

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

1-neyge-1

Udayavani-MIC ನಮ್ಮ ಸಂತೆ:ಗಮನ ಸೆಳೆದ ನೇಯ್ಗೆ ಯಂತ್ರ

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.