Forest: ಕಾಡುದಾರಿ ಸೃಷ್ಟಿಸುವವರಾಗೋಣ; ಕಾಲುದಾರಿಯಲ್ಲಿ ಸಾಗುವವರಲ್ಲ…

ತನ್ನ ಶಕ್ತಿ ಮತ್ತು ಕೌಶಲ್ಯತೆಗೆ ತಿಲಾಂಜಲಿ ಇಡುತ್ತಿದ್ದಾನೆ.

Team Udayavani, Oct 12, 2024, 2:58 PM IST

Forest: ಕಾಡುದಾರಿ ಸೃಷ್ಟಿಸುವವರಾಗೋಣ ಕಾಲುದಾರಿಯಲ್ಲಿ ಸಾಗುವವರಲ್ಲ…

ಆಧುನಿಕ ಜಗತ್ತಿಗೆ ತೆರೆದುಕೊಳ್ಳುತ್ತಿದ್ದಂತೆಯೇ ಮನುಷ್ಯ ಸುಖದ ಬೆನ್ನೇರಿ ಹೋಗುತ್ತಿದ್ದಾನೆ. ಐಷಾರಾಮಿ ಲೋಕದ ಸೆಳೆತದಲ್ಲಿ ಈತನಿಗೆ ಸ್ವಯಂ ಸಾಧನೆಗಿಂತ ಪರರ ಸಾಧನೆಯ ನೆರಳಲ್ಲಿ ಬದುಕಿನ ಕ್ಷಣಿಕ ಸುಖ ಆನಂದ ಪಡೆಯುವ ಖಯಾಲಿ ಹೆಚ್ಚಿದೆ.
ನಮ್ಮ ಪೂರ್ವಜರೊನ್ನೊಮ್ಮೆ ನೆನಪು ಮಾಡಿಕೊಳ್ಳಿ, ಆಹಾರ, ಬಟ್ಟೆ, ಮನೆಯಿಂದ ಹಿಡಿದು ಬದುಕಿಗೆ ಅಗತ್ಯವಾದುದೆಲ್ಲವನ್ನೂ ಸಂತ್ವ ಶಕ್ತಿ, ಕ್ರಿಯಾತ್ಮಕತೆಯನ್ನು ಬಳಸಿ ಪಡೆಯುತ್ತಿದ್ದರು. ಹೀಗಾಗಿ ಇಂತಹ ಪಡೆಯುವಿಕೆಯಲ್ಲಿ ಇವರೆಲ್ಲ ಅಮಿತ ಆನಂದ, ಸಾರ್ಥಕತೆಯ ಭಾವ ಕಾಣುತ್ತಿದ್ದರು. ಸ್ವಯಂ ಸೃಷ್ಟಿಯಲ್ಲೇ ಅವರಿಗೆ ಜೀವನದ ಸಾರ್ಥಕತೆಯಿತ್ತು.

ಆದರೆ ಇಂದು ಹಾಗಲ್ಲ, ಇದು ಧಾವಂತದ ಯುಗ. ಯಾರಿಗೂ ಸಮಯವಿಲ್ಲ ಎನ್ನುವ ಗುಂಗಿನಲ್ಲೇ ತನ್ನತನ ಮರೆಯುವಂತಹ ಕಾಲವಿದು. ಹೀಗಾಗಿ ಈಗ ಎಲ್ಲವೂ ರೆಡಿಮೇಡ್‌ ಬೇಕು. ಅದು ಅನ್ನ ಇರಲಿ, ತಿಂಡಿ ಇರಲಿ, ಉಡುವ ಬಟ್ಟೆಯಿರಲಿ ಎಲ್ಲವೂ ಸಿದ್ಧಗೊಂಡ ಸ್ಥಿತಿಯಲ್ಲೇ ಸ್ವೀಕರಿಸಲು ಹೆಚ್ಚು ಆಸಕ್ತಿ.

ಜನರ ಮನೋಭಾವವನ್ನು ಚೆನ್ನಾಗಿ ಅರ್ಥಮಾಡಿಕೊಂಡಿರುವ ವ್ಯಾಪಾರಿಗಳು ಜನಕ್ಕೆ ಏನು ಬೇಕೋ ಅದನ್ನು ಮನೆ ಬಾಗಿಲಿಗೇ ತಲುಪಿಸುವ ಹೊಸದ ವ್ಯವಸ್ಥೆಯನ್ನು ಅವರ ಮುಂದಿರಿಸಿದ್ದಾರೆ. ಹೀಗಾಗಿ ಶ್ರಮ ಇಲ್ಲ, ಕ್ರಿಯಾತ್ಮಕತೆ ಇಲ್ಲ. ಸಿದ್ದಗೊಂಡಿರುವುದಕ್ಕೆ ತುಸು ಅಡ್ಜಸ್ಟ್‌ ಆದರೆ ಆಯ್ತು !  ಕಾಡುದಾರಿ ಮತ್ತು ಕಾಲು ದಾರಿಯ ಮಧ್ಯದ ಅಗಾಧ ಅಂತರ ಅರಿಯದ ಮನುಷ್ಯ ನಿಧಾನವಾಗಿ ತನ್ನ ಶಕ್ತಿ ಮತ್ತು ಕೌಶಲ್ಯತೆಗೆ ತಿಲಾಂಜಲಿ ಇಡುತ್ತಿದ್ದಾನೆ.

ಉದಾಹರಣೆಗೆ ಅದೊಂದು ದೊಡ್ಡ ಕಾಡು. ಈ ಕಾಡಿನ ಆಳದಲ್ಲಿ ಅಮೂಲ್ಯ ಗಿಡವೊಂದಿರುವ ಮಾಹಿತಿ ಪಡೆಯುವ ವ್ಯಕ್ತಿ ಅದನ್ನು ತರುವ ಹಠ ತೊಡುತ್ತಾನೆ. ಹೀಗಾಗಿ ಕಾಡು ಪ್ರವೇಶಕ್ಕೆ ಉಪಾಯ ಮಾಡುತ್ತಾನೆ. ಕಾಡಿನ ಅಂಚಿನಿಂದ ನಿಧಾನವಾಗಿ ಮುಳ್ಳುಗಂಟಿಗಳನ್ನು ಸವರುತ್ತಾ, ಕಲ್ಲುಬಂಡೆಗಳನ್ನು ಸರಿಸುತ್ತಾ ಗಮ್ಯದತ್ತ ದಾರಿ ಮಾಡಿಕೊಳ್ಳುತ್ತಲೇ ಸಾಗುತ್ತಾನೆ. ಇದಕ್ಕಾಗಿ ಈತ ಬೀಳುತ್ತಾನೆ, ಏಳುತ್ತಾನೆ. ಮುಳ್ಳುಪೊದೆಗಳಲ್ಲಿ ಗಾಯಗೊಳ್ಳುತ್ತಾನೆ. ಅಂತಿಮವಾಗಿ ಆತ ತಲುಪಬೇಕಾದ ಜಾಗ ತಲುಪಿದಾಗ ಆತನಲ್ಲಿ ಏನೋ ಸಾರ್ಥಕತೆ. ತನಗೆ ಬೇಕಾದದ್ದು ಪಡೆದು ಆತ ಮರಳುತ್ತಾನಾದರೂ ಈ ಕಾಡು ದಾರಿ ಸೃಷ್ಟಿಸಲು ಆತನ ನಡೆಸಿದ ಸಾಹಸ ಸಾರ್ಥಕವಾಗೇ ಉಳಿಯುತ್ತದೆ.

ಮುಂದೆ ಈ ದಾರಿಯ ಮೂಲಕ ಜನ ಕಾಡು ಪ್ರವೇಶ ಮಾಡುತ್ತಾರೆ, ಇದು ಕಾಲು ದಾರಿಯಾಗುತ್ತದೆ. ಯಾರೋ ಸೃಷ್ಟಿಸಿದ ದಾರಿಯಲ್ಲಿ ನಾವು ಸುಖ ಅನುಭವಿಸುವ ಪರಿಯಿದು. ಇದು ಕೇವಲ ಕಾಡಿನ ವಿಷಯಕಷ್ಟೇ ಅಲ್ಲ, ಜೀವನದ ಪ್ರತಿ ಹಂತದಲ್ಲೂ ನಮಗೆ ಹೊಸತನ ಸೃಷ್ಟಿಯ ಸವಾಲು ಎದುರಾಗುತ್ತದೆ. ಒಮ್ಮೆ ಸೃಷ್ಟಿಯಾಯಿತೆಂದರೆ ಅದರ ಬಳಕೆಗೆ ಜನ ತುದಿಗಾಲಲ್ಲಿ ನಿಲ್ಲುತ್ತಾರೆನ್ನುವುದು ನಿಜ. ಆದರೆ ಸೃಷ್ಟಿಸುವುದರಲ್ಲೇ ಮಜಾ ಇದೆ. ಇದು ನಮ್ಮ ಸೃಜನಶೀಲತೆಗೆ ಸಾಣೆ ಹಿಡಿಯುತ್ತದೆ. ಬದುಕಿನಲ್ಲಿ ಸವಾಲು ಎದುರಿಸುವ ಛಾತಿ ಬಲಗೊಳಿಸುತ್ತದೆ. ಹೀಗಾಗಿ ನಾವು ಕಾಡು ದಾರಿ ಸೃಷ್ಟಿಸುವವರಾಗೋಣ, ಕಾಲುದಾರಿಯಲ್ಲಿ ನಡೆಯುವವರಲ್ಲ..

*ಪೂಜಾ ಆರ್‌.ಹೆಗಡೆ, ಮೇಲಿನಮಣ್ಣಿಗೆ

ಟಾಪ್ ನ್ಯೂಸ್

Mysore-Press

Tax Injustice: ತೆರಿಗೆ ಹಂಚಿಕೆಯಲ್ಲಿ ಕಡೆಗಣಿಸಲು ಕರ್ನಾಟಕವೇನು ಅನ್ಯಾಯ ಮಾಡಿದೆ?: ಸಿಎಂ

Kharge (2)

Terrorist ಪಕ್ಷ ದೇಶವಾಳುತ್ತಿದೆ…: ಮಲ್ಲಿಕಾರ್ಜುನ ಖರ್ಗೆ ಕಿಡಿ

shettar

Hubli ಗಲಭೆ ಆರೋಪಿಗಳ ಮೇಲಿನ ಕೇಸ್ ಹಿಂಪಡೆದಿರುವುದು ದೊಡ್ಡ ದುರಂತ: ಶೆಟ್ಟರ್ ಕಿಡಿ

ಮಹಿಷಮರ್ದನ ರೀತಿಯಲ್ಲೇ ರಾಜ್ಯ ಸರ್ಕಾರದ ಮರ್ದನ: ರೇಣುಕಾಚಾರ್ಯ

Davanagere: ಮಹಿಷಮರ್ದನ ರೀತಿಯಲ್ಲೇ ರಾಜ್ಯ ಸರ್ಕಾರದ ಮರ್ದನ: ರೇಣುಕಾಚಾರ್ಯ

Mangaluru: ಓವರ್‌ ಟೇಕ್‌ ಗಲಾಟೆ; ಬಸ್‌ ಗೆ ನುಗ್ಗಿ ಕಂಡಕ್ಟರ್‌ ಗೆ ಹಲ್ಲೆ

Mangaluru: ಓವರ್‌ ಟೇಕ್‌ ಗಲಾಟೆ; ಬಸ್‌ ಗೆ ನುಗ್ಗಿ ಕಂಡಕ್ಟರ್‌ ಮೇಲೆ ಹಲ್ಲೆ

1-a-vishwa

Megastar Chiranjeevi;ವಿಶ್ವಂಭರ ಟೀಸರ್ ಬಿಡುಗಡೆ: ಸದ್ಯದ ಟ್ರೆಂಡ್ ಗೋಚರ

Nawanagar: ಶ್ರೀಮಂತ ರಾಜಮನೆತನದ ಉತ್ತರಾಧಿಕಾರಿಯಾದ ಟೀಂ ಇಂಡಿಯಾ ಮಾಜಿ ಆಟಗಾರ

Nawanagar: ಶ್ರೀಮಂತ ರಾಜಮನೆತನದ ಉತ್ತರಾಧಿಕಾರಿಯಾದ ಟೀಂ ಇಂಡಿಯಾ ಮಾಜಿ ಆಟಗಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-mysore-story

Mysore Dasara: ನಮ್ಮ ಒಡೆಯರ್‌ ಊರು…

8-mysore-elephant

Mysore Elephants ಆನೆ ಮತ್ತು ಮಾವುತ ಭಾವನಾತ್ಮಕ ಸಂಬಂಧ

9-mysore-film-city-2

Mysore- Film City: ಮೈಸೂರಿಗೆ ಚಿತ್ರನಗರಿ ಕಿರೀಟ

7-mysore

Mysore: ರಾಜ ಪ್ರಭುತ್ವದ ನಾಡ ಕುಸ್ತಿ: ರಾಜಾಶ್ರಯ ಪಡೆದು ಉತ್ತುಂಗಕ್ಕೇರಿದ್ದ ನಾಡಿನ ಗಂಡುಕಲೆ

2(5)

Tata ಎಂದರೆ ಹೊಸತನ; ಭಾರತ ಖ್ಯಾತ ಉದ್ಯಮಿ ರತನ್‌ ಟಾಟಾಗೆ ವಿದಾಯ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Bantwal: ಬಿ.ಸಿ.ರೋಡಿನ ವ್ಯಕ್ತಿ ಕುಸಿದು ಬಿದ್ದು ಮೃತ್ಯು

Bantwal: ಬಿ.ಸಿ.ರೋಡಿನ ವ್ಯಕ್ತಿ ಕುಸಿದು ಬಿದ್ದು ಮೃತ್ಯು

3

Hiriydaka: ಹಿರಿಯಡಕ ನಿವಾಸಿ, ಬೆಂಗಳೂರು ಉದ್ಯಮಿ ತೀರ್ಥಳ್ಳಿಯಲ್ಲಿ ಆತ್ಮಹತ್ಯೆ

Mysore-Press

Tax Injustice: ತೆರಿಗೆ ಹಂಚಿಕೆಯಲ್ಲಿ ಕಡೆಗಣಿಸಲು ಕರ್ನಾಟಕವೇನು ಅನ್ಯಾಯ ಮಾಡಿದೆ?: ಸಿಎಂ

Kharge (2)

Terrorist ಪಕ್ಷ ದೇಶವಾಳುತ್ತಿದೆ…: ಮಲ್ಲಿಕಾರ್ಜುನ ಖರ್ಗೆ ಕಿಡಿ

shettar

Hubli ಗಲಭೆ ಆರೋಪಿಗಳ ಮೇಲಿನ ಕೇಸ್ ಹಿಂಪಡೆದಿರುವುದು ದೊಡ್ಡ ದುರಂತ: ಶೆಟ್ಟರ್ ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.