Udupi: ಅನುಮಾನ ಬಾರದಂತೆ 5 ವರ್ಷದಿಂದ ವಾಸ; ಗಾರೆ ಕಾರ್ಮಿಕರಾಗಿದ್ದ ಬಾಂಗ್ಲಾ ಅಕ್ರಮ ವಲಸಿಗರು


Team Udayavani, Oct 12, 2024, 7:10 AM IST

Udupi: ಅನುಮಾನ ಬಾರದಂತೆ 5 ವರ್ಷದಿಂದ ವಾಸ; ಗಾರೆ ಕಾರ್ಮಿಕರಾಗಿದ್ದ ಬಾಂಗ್ಲಾ ಅಕ್ರಮ ವಲಸಿಗರು

ಪಡುತೋನ್ಸೆ: ಗ್ರಾಮದಲ್ಲಿ ಸಿಕ್ಕಿಬಿದ್ದ ಬಾಂಗ್ಲಾ ಅಕ್ರಮ ವಲಸಿಗರು ಸುಮಾರು ಐದು ವರ್ಷಗಳಿಂದ ನೆಲೆಸಿದ್ದರೂ ಯಾರಿಗೂ ಲವಲೇಶದಷ್ಟೂ ಅನುಮಾನವೇ ಬಂದಿರಲಿಲ್ಲ !

ಬಾಂಗ್ಲಾ ಅಕ್ರಮ ವಲಸಿಗರ ಚಟುವಟಿಕೆ ಬಗ್ಗೆ ಸ್ಥಳೀಯರಲ್ಲಿ ಮಾಹಿತಿ ಕೇಳಿದಾಗ ಹಲವರು ಅಚ್ಚರಿ ವ್ಯಕ್ತಪಡಿಸಿದರು.

ಪಡುತೋನ್ಸೆ ಗ್ರಾಮದ ಕೆಮ್ಮಣ್ಣು, ನೇಜಾರು, ಹೂಡೆ ಪರಿಸರದಲ್ಲಿ ಒಡಿಶಾ, ಉತ್ತರ ಪ್ರದೇಶ ಮೊದಲಾದ ಹೊರ ರಾಜ್ಯಗಳ ಕಾರ್ಮಿಕರು ಹಲವೆಡೆ ವಾಸವಿದ್ದಾರೆ. ಹಲವು ವರ್ಷಗಳಿಂದ ಮೀನುಗಾರಿಕೆ, ಕಟ್ಟಡ ನಿರ್ಮಾಣ ಕೆಲಸಗಳಲ್ಲಿ ಕಾರ್ಯ ನಿರತರಾಗಿದ್ದು, ಅವರಂತೆಯೇ ಇವರೂ ಎಂದುಕೊಂಡಿದ್ದೆವು ಎನ್ನುತ್ತಾರೆ ಸ್ಥಳೀಯರೊಬ್ಬರು.

ಆರೋಪಿಗಳು ಮಲ್ಪೆ ಮತ್ತು ಉಡುಪಿ ನಗರದ ಕಟ್ಟಡ ನಿರ್ಮಾಣ ಸೈಟ್‌ಗಳಲ್ಲಿ ಗಾರೆ ಮತ್ತು ಲಪ್ಪ ಹೊಡೆಯುವ ಕೆಲಸ ಮಾಡಿಕೊಂಡಿದ್ದರು. ಬಾಡಿಗೆ ಮನೆಗಳಲ್ಲಿ ತಮ್ಮ ನಕಲಿ ಆಧಾರ್‌ ಕಾರ್ಡ್‌ಗಳನ್ನು ನೀಡಿ ನೆಲೆಸಿದ್ದರು. ತಾವು ವಾಸ್ತವ್ಯ ಇದ್ದ ಪರಿಸರದಲ್ಲಿ, ಕೆಲಸ ಮಾಡುವ ಸ್ಥಳದಲ್ಲಿ ಈ ಬಗ್ಗೆ ಅನುಮಾನ ಬಾರದಂತಿದ್ದರು. ಸಿಕ್ಕಿಂನ ಅಗರ್ತಲ ನಿವಾಸಿ ಕಾಜೋಲ…, ಬಾಂಗ್ಲಾದೇಶದ ಉಸ್ಮಾನ್‌ ಇವರಿಗೆ ನಕಲಿ ದಾಖಲಾತಿ ಹಾಗೂ ಉದ್ಯೋಗಕ್ಕೆ ಸೇರಲು ಸಹಾಯ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇವರನ್ನೂ ಪ್ರಮುಖ ಆರೋಪಿಗಳೆಂದು ಪರಿಗಣಿಸಿದ್ದು, ಎಫ್ಐಆರ್‌ನಲ್ಲಿ ಸೇರಿಸಲಾಗಿದೆ.

ಪೊಲೀಸರು ಆರೋಪಿಗಳನ್ನು ಬಂಧಿಸಿದ ಅನಂತರ ಅಚ್ಚರಿಯಾಗಿದೆ. ಆತಂಕದ ಜತೆಗೆ ನಾವೂ ಎಚ್ಚರ ವಹಿಸಬೇಕಿದೆ. ಪೊಲೀಸ್‌ ಮತ್ತು ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಹೊರ ರಾಜ್ಯಗಳ ಕಾರ್ಮಿಕರ ದಾಖಲಾತಿಗಳ ವಾಸ್ತವಾಂಶ ಅರಿಯಬೇಕಿದೆ ಎನ್ನುತ್ತಾರೆ ಕೆಲವು ಸ್ಥಳೀಯರು.

ಬಾಡಿಗೆ ಮನೆಯಲ್ಲಿ ತಂಗಿದ್ದರು :

ಮಲ್ಪೆಯಿಂದ ಸುಮಾರು ಐದು ಕಿ.ಮೀ. ದೂರವಿರುವ ಕೆಮ್ಮಣ್ಣು, ನೇಜಾರಿನಲ್ಲಿ ಪ್ರತ್ಯೇಕ ಬಾಡಿಗೆ ಮನೆಗಳಲ್ಲಿ ಆರೋಪಿಗಳೆಲ್ಲರೂ ವಾಸವಿದ್ದರು. ಒಬ್ಬ ಆರೋಪಿ 3 ವರ್ಷ, ಇನ್ನೊಬ್ಬ 2 ವರ್ಷಗಳಿಂದ ಇಲ್ಲಿ ನೆಲೆಸಿದ್ದಾಗಿ ಪೊಲೀಸರಲ್ಲಿ ತಿಳಿಸಿದ್ದಾರೆ. ಇವರಿಗೆ ಬಾಡಿಗೆ ನೀಡಿದ ಮನೆಯ ಮಾಲಕರನ್ನು ಕೂಡ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಸಹಕರಿಸಿದವರಿಗಾಗಿ ಪೊಲೀಸರ ಶೋಧ:

ಎಲ್ಲ ಏಳು ಮಂದಿ ಆರೋಪಿಗಳು ತಮಗೆ ನಕಲಿ ಆಧಾರ್‌ ಕಾರ್ಡ್‌ ಒದಗಿಸಲು ಮತ್ತು ಉದ್ಯೋಗ ಅರಸಿ ಇಲ್ಲಿಗೆ ಬರಲು ಇಬ್ಬರು ಸಹಕರಿಸಿದ್ದಾರೆ ಎಂದು ಪೊಲೀಸರಲ್ಲಿ ಬಾಯಿಬಿಟ್ಟಿದ್ದಾರೆ.  ಈ ಇಬ್ಬರ ಹೆಸರನ್ನು ಪ್ರಕರಣದಲ್ಲಿ ಆರೋಪಿಗಳನ್ನಾಗಿ ಸೇರಿಸಿದ್ದು, ಈ ಇಬ್ಬರ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.

 

ಟಾಪ್ ನ್ಯೂಸ್

Fake-docu

Udupi: ನಕಲಿ ದಾಖಲೆಗಳ ಪೂರೈಕೆಯ ಫ್ಯಾಕ್ಟರಿ ಕರಾವಳಿಯಲ್ಲಿ?

DK-police

Bangla Illegal immigrants: ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಪೊಲೀಸರ ಕಟ್ಟೆಚ್ಚರ

15

Women’s T20 World Cup: ಭಾರತಕ್ಕಿಂದು ಆಸೀಸ್‌ವಿರುದ್ಧ ನಿರ್ಣಾಯಕ ಪಂದ್ಯ

Rain-Agri

Udupi: ಉಭಯ ಜಿಲ್ಲೆಯಲ್ಲಿ ದಿಢೀರ್‌ ಮಳೆ: ರೈತರಲ್ಲಿ ಹೆಚ್ಚಿದ ಆತಂಕ

Kudroli-sanjay-dutt

Mangaluru: ದಸರಾ ಸಂಭ್ರಮ: ಇಂದು ವೈಭವದ ಬೃಹತ್‌ ಶೋಭಾಯಾತ್ರೆ

1-horoscope

Daily Horoscope: ಆಪತ್ತುಗಳಿಂದ ವಿಮೋಚನೆ, ಮನೋಬಲ ವರ್ಧನೆಗೆ ಆಪ್ತರ ಸಹಾಯ

Malpe

Navarathri Holiday: ಸರಣಿ ರಜೆ: ಮಲ್ಪೆ ಬೀಚ್‌, ಸೈಂಟ್‌ಮೇರೀಸ್‌ನಲ್ಲಿ ಜನಸಾಗರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

RSS

RSS;ಶತಮಾನ ಸಂಭ್ರಮಕ್ಕೆ ‘ಪಂಚಪರಿವರ್ತನ’: 3 ಹಂತದಲ್ಲಿ 5 ತತ್ತ್ವಗಳ ಪಾಲನೆ

Ramalinga reddy 2

Muzrai; ಅರ್ಚಕರಿಗೆ 5 ಲಕ್ಷ ರೂ. ಜೀವ ವಿಮೆಗೆ ಕ್ರಮ: ಸಚಿವ ರಾಮಲಿಂಗಾ ರೆಡ್ಡಿ ಭರವಸೆ

1-a-yy

Channapatna by-election; ಸ್ಪರ್ಧೆ ಖಚಿತ ಎಂದ ಸಿಪಿ ಯೋಗೇಶ್ವರ್‌

vidhana-soudha

PRR:ಭೂ ಪರಿಹಾರ ಬದಲಿಗೆ ಟಿಡಿಆರ್‌ ನೀಡಲು ಸಂಪುಟ ಸಭೆ ತೀರ್ಮಾನ

1-paramm

G.Parameshwara; ಬೊಂಬೆ ಹೇಳುತೈತೆ ಹಾಡಿಗೆ ಗೃಹ ಸಚಿವರ ಹೆಜ್ಜೆ!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Fake-docu

Udupi: ನಕಲಿ ದಾಖಲೆಗಳ ಪೂರೈಕೆಯ ಫ್ಯಾಕ್ಟರಿ ಕರಾವಳಿಯಲ್ಲಿ?

DK-police

Bangla Illegal immigrants: ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಪೊಲೀಸರ ಕಟ್ಟೆಚ್ಚರ

15

Women’s T20 World Cup: ಭಾರತಕ್ಕಿಂದು ಆಸೀಸ್‌ವಿರುದ್ಧ ನಿರ್ಣಾಯಕ ಪಂದ್ಯ

Rain-Agri

Udupi: ಉಭಯ ಜಿಲ್ಲೆಯಲ್ಲಿ ದಿಢೀರ್‌ ಮಳೆ: ರೈತರಲ್ಲಿ ಹೆಚ್ಚಿದ ಆತಂಕ

Kudroli-sanjay-dutt

Mangaluru: ದಸರಾ ಸಂಭ್ರಮ: ಇಂದು ವೈಭವದ ಬೃಹತ್‌ ಶೋಭಾಯಾತ್ರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.