T20 series; ಕ್ಲೀನ್‌ಸ್ವೀಪ್‌ ಸಾಧನೆ: ಬಾಂಗ್ಲಾ ಎದುರು ಭಾರತಕ್ಕೆ ಬೃಹತ್‌ ಗೆಲುವು


Team Udayavani, Oct 12, 2024, 11:48 PM IST

1-ewss

ಹೈದರಾಬಾದ್‌: ಸಂಜು ಸ್ಯಾಮ್ಸನ್‌ ಅವರ ಸ್ಫೋಟಕ ಶತಕ ಮತ್ತು ಟಿ20ಯಲ್ಲಿ ಭಾರತದ ಗರಿಷ್ಠ ಮೊತ್ತದ ಸಾಧನೆಯಿಂದ ಭಾರತ ತಂಡವು ಶನಿವಾರ ನಡೆದ ಮೂರನೇ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶವನ್ನು 133 ರನ್ನುಗಳಿಂದ ಭರ್ಜರಿಯಾಗಿ ಸೋಲಿಸಿದೆ. ಈ ಗೆಲುವಿನಿಂದ ಭಾರತ ಮೂರು ಪಂದ್ಯಗಳ ಟಿ20 ಸರಣಿಯನ್ನು ಕ್ಲೀನ್‌ಸ್ವೀಪ್‌ಗೈದಿದೆ. ಟಿ20ಯಲ್ಲಿ ಇದು ಭಾರತಕ್ಕೆ ಒಲಿದ ಸತತ 16ನೇ ಸರಣಿ ಗೆಲುವು ಆಗಿದೆ.

ಸಂಜು ಸ್ಯಾಮ್ಸನ್‌ ಅವರ ಸ್ಫೋಟಕ ಶತಕ ಹಾಗೂ ಸೂರ್ಯಕುಮಾರ್‌ ಯಾದವ್‌ ಮತ್ತು ಹಾರ್ದಿಕ್‌ ಪಾಂಡ್ಯ ಅವರ ಭರ್ಜರಿ ಆಟದಿಂದಾಗಿ ಭಾರತ ಆರು ವಿಕೆಟಿಗೆ 297 ರನ್ನುಗಳ ಬೃಹತ್‌ ಮೊತ್ತ ಪೇರಿಸಿತು. ಇದು ಭಾರತದ ಗರಿಷ್ಠ ಮತ್ತು ಸಾರ್ವಕಾಲಿಕವಾಗಿ ಎರಡನೇ ಗರಿಷ್ಠ ಮೊತ್ತವಾಗಿದೆ. 2023ರಲ್ಲಿ ಮಂಗೋಲಿಯ ವಿರುದ್ಧ ನೇಪಾಲ 3 ವಿಕೆಟಿಗೆ 314 ರನ್‌ ಸಿಡಿಸಿರುವುದು ಟಿ20 ಕೂಟದ ಗರಿಷ್ಠ ಮೊತ್ತವಾಗಿದೆ.

ಗೆಲ್ಲಲು 298 ರನ್‌ ಗಳಿಸುವ ಕಠಿನ ಗುರಿ ಪಡೆದ ಬಾಂಗ್ಲಾದೇಶವು ಭಾರತದ ಬೌಲರ್‌ಗಳ ದಾಳಿಗೆ ತತ್ತರಿಸಿ 7 ವಿಕೆಟಿಗೆ 164 ರನ್‌ ಗಳಿಸಷ್ಟೇ ಶಕ್ತವಾಗಿ ಶರಣಾಯಿತು. ಕೇವಲ ಲಿಟನ್‌ ದಾಸ್‌ ಮತ್ತು ತೌಹಿದ್‌ ಹೃದಯ್‌ ಭಾರತದ ದಾಳಿಯನ್ನು ಸ್ವಲ್ಪ ಮಟ್ಟಿಗೆ ಎದುರಿಸಲು ಶಕ್ತರಾದರು. ದಾಸ್‌ 42 ಮತ್ತು ಹೃದಯ್‌ 63 ರನ್‌ ಗಳಿಸಿ ಅಜೇಯರಾಗಿ ಉಳಿದರು. ಈ ಮೂಲಕ ಬಾಂಗ್ಲಾ ಟಿ20 ಸರಣಿಯಲ್ಲೂ ಕ್ಲೀನ್‌ಸಿÌàಪ್‌ ಸೋಲು ಕಂಡಿತು. ಬಿಗು ದಾಳಿ ಸಂಘಟಿಸಿದ ರವಿ ಬಿಷ್ಣೋಯಿ 30 ರನ್ನಿಗೆ 3 ವಿಕೆಟ್‌ ಕಿತ್ತರು.

ಸ್ಯಾಮ್ಸನ್‌ ಚೊಚ್ಚಲ ಶತಕ
ಸ್ಯಾಮ್ಸನ್‌ ಅವರ ಸ್ಫೋಟಕ ಆಟ ಈ ಪಂದ್ಯದ ಆಕರ್ಷಣೆಯಾಗಿತ್ತು. ಬಾಂಗ್ಲಾ ದಾಳಿಯನ್ನು ದಂಡಿಸಿದ ಅವರು ಟಿ20ಯಲ್ಲಿ ಚೊಚ್ಚಲ ಹಾಗೂ ಎರಡನೇ ಅತೀವೇಗದ ಶತಕ ಸಿಡಿಸಿದರು. ಅತೀ ವೇಗದ ಶತಕವನ್ನು ರೋಹಿತ್‌ ಶಮರ 35 ಎಸೆತಗಳಲ್ಲಿ ಸಿಡಿಸಿದ್ದರು. ಕೇವಲ 40 ಎರಸೆತಗಳಲ್ಲಿ ಶತಕ ಪೂರ್ತಿಗೊಳಿಸಿದ ಸ್ಯಾಮ್ಸನ್‌ ಒಟ್ಟಾರೆ 47 ಎಸೆತಗಳಿಂದ 11 ಬೌಂಡರಿ ಮತ್ತು 8 ಸಿಕ್ಸರ್‌ ನೆರವಿನಿಂದ 111 ರನ್‌ ಸಿಡಿಸಿದ್ದರು.

ಸ್ಯಾಮ್ಸನ್‌ ಅವರಿಗೆ ಉಪಯುಕ್ತ ಬೆಂಬಲ ನೀಡಿದ ಸೂರ್ಯಕುಮಾರ್‌ ಯಾದವ್‌ 35 ಎಸೆತಗಳಿಂದ 75 ರನ್‌ ಹೊಡೆದರು. ಅವರಿಬ್ಬರು ದ್ವಿತೀಯ ವಿಕೆಟಿಗೆ 173 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ತಂಡದ ಬೃಹತ್‌ ಮೊತ್ತಕ್ಕೆ ಕಾರಣರಾಗಿದ್ದರು. ಕೊನೆ ಹಂತದಲ್ಲಿ ರಿಯಾನ್‌ ಪರಾಗ್‌ ಮತ್ತು ಹಾರ್ದಿಕ್‌ ಪಾಂಡ್ಯ ಬಿರುಸಿನ ಆಟ ಆಡಿದ್ದರಿಂದ ಮೊತ್ತ 300ರ ಸನಿಹಕ್ಕೆ ತಲುಪಿತು. ಪಾಂಡ್ಯ 18 ಎಸೆತಗಳಿಂದ 47 ಮತ್ತು ಪರಾಗ್‌ ಕೇವಲ 13 ಎಸೆತಗಳಿಂದ 34 ರನ್‌ ಹೊಡೆದರು. ಅವರಿಬ್ಬರು ನಾಲ್ಕನೇ ವಿಕೆಟಿಗೆ 70 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡರು.

ಸಂಕ್ಷಿಪ್ತ ಸ್ಕೋರು: ಭಾರತ ಆರು ವಿಕೆಟಿಗೆ 297 (ಸ್ಯಾಮ್ಸನ್‌ 111, ಸೂರ್ಯ ಕುಮಾರ್‌ ಯಾದವ್‌ 75, ರಿಯಾನ್‌ ಪರಾಗ್‌ 34, ಹಾರ್ದಿಕ್‌ ಪಾಂಡ್ಯ 47, ತಂಜಿಮ್‌ ಹಸನ್‌ ಶಕಿಬ್‌ 66ಕ್ಕೆ 3); ಬಾಂಗ್ಲಾದೇಶ 7 ವಿಕೆಟಿಗೆ 164 (ಲಿಟನ್‌ ದಾಸ್‌ 42, ತೌಹಿದ್‌ ಹೃದಯ್‌ 63 ಔಟಾಗದೆ, ಮಯಾಂಕ್‌ ಯಾದವ್‌ 32ಕ್ಕೆ 2, ರವಿ ಬಿಷ್ಣೋಯಿ 30ಕ್ಕೆ 3).

ಟಾಪ್ ನ್ಯೂಸ್

Kolluru

Kolluru: ನವರಾತ್ರಿ ರಥೋತ್ಸವ, ನವಾನ್ನಪ್ರಾಶನ, ವಿಜಯೋತ್ಸವ

Kapu-Uccila

Udupi: ಉಚ್ಚಿಲ: ಮಹಾಚಂಡಿಕಾಯಾಗ, ಮಹಾ ಅನ್ನಸಂತರ್ಪಣೆ

Dinesh-gundurao

Sulya: ನಾಯಕತ್ವ ಸಮಸ್ಯೆ ಇರುವುದು ಬಿಜೆಪಿಯಲ್ಲಿ: ದಿನೇಶ್‌ ಗುಂಡೂರಾವ್‌

PM Modi

RSS; ಶತಮಾನದ ಸಂಭ್ರಮ: ಸದಸ್ಯರಿಗೆ ಮೋದಿ ಶುಭಾಶಯ

DKS

Dasara: ರಾಜ್ಯಕ್ಕೆ ಕೆಟ್ಟ ಹೆಸರು ತರಲು ಯತ್ನಿಸುತ್ತಿರುವವರೇ ದುಷ್ಟಶಕ್ತಿಗಳು: ಡಿಕೆಶಿ

yashapal

Udupi: ಭದ್ರತೆ ದೃಷ್ಟಿಯಿಂದ ಪ್ರಕರಣ ಉನ್ನತ ಮಟ್ಟದ ತನಿಖೆ ವಹಿಸಿ: ಶಾಸಕ ಯಶ್‌ಪಾಲ್‌ ಸುವರ್ಣ

ucchila

Udupi: ಉಚ್ಚಿಲ ದಸರಾ 2024; ಶಾರದೆ, ನವದುರ್ಗೆಯರ ಅದ್ದೂರಿ ಶೋಭಾಯಾತ್ರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1–wwewqewq

Bodybuilding competition; ದಿನೇಶ್‌ ಆಚಾರ್ಯ ಮಿಸ್ಟರ್‌ ಉಚ್ಚಿಲ ದಸರಾ

Mohammed Siraj: ತೆಲಂಗಾಣ ಡಿಎಸ್‌ಪಿಯಾಗಿ ವೇಗಿ ಮೊಹಮ್ಮದ್‌ ಸಿರಾಜ್‌ ಆಯ್ಕೆ

Mohammed Siraj: ತೆಲಂಗಾಣ ಡಿಎಸ್‌ಪಿಯಾಗಿ ವೇಗಿ ಮೊಹಮ್ಮದ್‌ ಸಿರಾಜ್‌ ಆಯ್ಕೆ

17

Women’s T20 World Cup: ಶ್ರೀಲಂಕಾ ವಿರುದ್ಧ ಕಿವೀಸ್‌ಗೆ 8 ವಿಕೆಟ್‌ ಜಯಭೇರಿ

Women’s T20 World Cup: ಪಾಕಿಸ್ತಾನ ವಿರುದ್ಧ ಆಸ್ಟ್ರೇಲಿಯಾಕ್ಕೆ 9 ವಿಕೆಟ್‌ ಸುಲಭ ಜಯ

Women’s T20 World Cup: ಪಾಕಿಸ್ತಾನ ವಿರುದ್ಧ ಆಸ್ಟ್ರೇಲಿಯಾಕ್ಕೆ 9 ವಿಕೆಟ್‌ ಸುಲಭ ಜಯ

Asia TT: ಭಾರತ ಮಹಿಳಾ ಡಬಲ್ಸ್‌ ಜೋಡಿ ಸೆಮೀಸ್‌ಗೆ, ಪದಕ ಖಚಿತ

Asia TT: ಭಾರತ ಮಹಿಳಾ ಡಬಲ್ಸ್‌ ಜೋಡಿ ಸೆಮೀಸ್‌ಗೆ, ಪದಕ ಖಚಿತ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Kolluru

Kolluru: ನವರಾತ್ರಿ ರಥೋತ್ಸವ, ನವಾನ್ನಪ್ರಾಶನ, ವಿಜಯೋತ್ಸವ

Kapu-Uccila

Udupi: ಉಚ್ಚಿಲ: ಮಹಾಚಂಡಿಕಾಯಾಗ, ಮಹಾ ಅನ್ನಸಂತರ್ಪಣೆ

Dinesh-gundurao

Sulya: ನಾಯಕತ್ವ ಸಮಸ್ಯೆ ಇರುವುದು ಬಿಜೆಪಿಯಲ್ಲಿ: ದಿನೇಶ್‌ ಗುಂಡೂರಾವ್‌

PM Modi

RSS; ಶತಮಾನದ ಸಂಭ್ರಮ: ಸದಸ್ಯರಿಗೆ ಮೋದಿ ಶುಭಾಶಯ

DKS

Dasara: ರಾಜ್ಯಕ್ಕೆ ಕೆಟ್ಟ ಹೆಸರು ತರಲು ಯತ್ನಿಸುತ್ತಿರುವವರೇ ದುಷ್ಟಶಕ್ತಿಗಳು: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.