Bangladesh; ಮತ್ತೆ ಹಿಂದೂಗಳು ಗುರಿ: 35ಕ್ಕೂ ಹೆಚ್ಚು ಕಡೆ ದುರ್ಗಾ ಪೆಂಡಾಲ್‌ ಮೇಲೆ ದಾಳಿ

ಪಾಕ್‌ ಜತೆಗೆ ಕೈಜೋಡಿಸುವ ಅಪಾಯವಿದೆ: ಮೋಹನ್‌ ಭಾಗವತ್‌

Team Udayavani, Oct 13, 2024, 6:55 AM IST

1-hindu-sss

ಹೊಸದಿಲ್ಲಿ: ಬಾಂಗ್ಲಾದೇಶದಲ್ಲಿ ಮಾಜಿ ಪ್ರಧಾನಿ ಶೇಖ್‌ ಹಸೀನಾ ಅವರ ಸರಕಾರ ಪತನವಾದ ಬಳಿಕ ಅಲ್ಪಸಂಖ್ಯಾಕ ಹಿಂದೂ ಗಳ ಮೇಲೆ ನಿರಂತರ ದಾಳಿಗಳು ನಡೆಯುತ್ತಿವೆ. ಇದಕ್ಕೆ ಹೊಸ ಸೇರ್ಪಡೆಯೆಂಬಂತೆ ನವರಾತ್ರಿಯ ಶುಭ ಸಂದರ್ಭದಲ್ಲಿ ಹಿಂದೂಗಳನ್ನು ಗುರಿಯಾಗಿಸಿ 35ಕ್ಕೂ ಅಧಿಕ ದಾಳಿಗಳು ನಡೆದಿವೆ.

ಢಾಕಾದ ತಂತಿಬಜಾರ್‌ನ ನವರಾತ್ರಿ ಪೂಜಾ ಮಂಟಪದ ಮೇಲೆ ಶುಕ್ರವಾರ ತಡರಾತ್ರಿ ದುಷ್ಕರ್ಮಿಗಳು ಪೆಟ್ರೋಲ್‌ ಬಾಂಬ್‌ ಎಸೆದಿದ್ದು, ಹಲವರು ಗಾಯಗೊಂಡಿದ್ದಾರೆ. ಇನ್ನೊಂದು ಪೂಜಾ ಪೆಂಡಾಲ್‌ಗೆ ನುಗ್ಗಿದ ಕಿಡಿಗೇಡಿಗಳು ಇಸ್ಲಾಮಿಕ್‌ ಕ್ರಾಂತಿಯ ಹಾಡುಗಳನ್ನು ಹಾಡಿ ದ್ದಾರೆ. ಅ. 1ರಿಂದ ದುರ್ಗಾ ಪೆಂಡಾಲ್‌ಗಳ ಮೇಲೆ ದಾಳಿ ಹಾಗೂ ಕಳ್ಳತನದಂತಹ ಸುಮಾರು 35 ಘಟನೆಗಳು ನಡೆ ದಿವೆ. ಈ ಸಂಬಂಧ 11 ಪ್ರಕರಣಗಳು ದಾಖಲಾಗಿದ್ದು, 17 ಮಂದಿಯನ್ನು ಬಂಧಿಸಲಾಗಿದೆ.

ಮೋದಿ ನೀಡಿದ್ದ ಕಿರೀಟ ಕಳವು
ಸತ್‌ಖೀರಾ ಜಿಲ್ಲೆಯ ದೇವಾಲಯಕ್ಕೆ ಪ್ರಧಾನಿ ಮೋದಿಯವರು ನೀಡಿದ್ದ ಚಿನ್ನದ ಕಿರೀಟ ಶುಕ್ರವಾರ ಕಳವಾಗಿದೆ. ಈ ಬಗ್ಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಶನಿವಾರ ಈ ಎಲ್ಲ ಘಟನೆಗಳನ್ನು ಖಂಡಿಸಿ ಪ್ರಕ ಟನೆ ಹೊರಡಿಸಿರುವ ಭಾರತ ವಿದೇಶಾಂಗ ಇಲಾಖೆಯು ರಾಜಧಾನಿ ಢಾಕಾದ ತಂತಿಬಜಾರ್‌ನಲ್ಲಿನ ಪೂಜಾ ಮಂಟಪದ ಮೇಲೆ ಪೆಟ್ರೋಲ್‌ ಬಾಂಬ್‌ ದಾಳಿ ನಡೆಸಿದ್ದು ಮತ್ತು ಸತ್‌ಖೀರಾದಲ್ಲಿರುವ ಜೆಶೋರೇಶ್ವರಿ ಕಾಳಿ ದೇವಸ್ಥಾನದಲ್ಲಿ ಮೋದಿ ನೀಡಿದ್ದ ಕಿರೀಟ ಕಳವಾಗಿರುವುದನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಆ ದೇಶದಲ್ಲಿ ಹಿಂದೂ ದೇಗುಲಗಳನ್ನು ವ್ಯವಸ್ಥಿತವಾಗಿ ವಿರೂಪಗೊಳಿಸಲಾಗುತ್ತಿದೆ. ಇಂತಹ ಘಟನೆಗಳು ಮರುಕಳಿಸದಂತೆ ತಡೆಯುವುದಕ್ಕಾಗಿ ಹಬ್ಬಗಳ ಸಂದರ್ಭದಲ್ಲಿ ಪೂಜಾ ಸ್ಥಳಗಳಿಗೆ ಸುರಕ್ಷೆ ಹಾಗೂ ಭದ್ರತೆ ಒದಗಿಸಲು ಬಾಂಗ್ಲಾ ಸರಕಾರಕ್ಕೆ ಮನವಿ ಮಾಡುತ್ತೇವೆ ಎಂದು ತಿಳಿಸಿದೆ. ಜತೆಗೆ ಕಿರೀಟ ಕಳವು ಮಾಡಿದವರನ್ನು ಆದಷ್ಟು ಬೇಗ ಬಂಧಿಸಿ, ಕಿರೀಟವನ್ನು ವಶಪಡಿಸಿಕೊಂಡು ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡಿ ಎಂದು ಆಗ್ರಹಿಸಿದೆ.

ಢಾಕೇಶ್ವರಿ ದೇಗುಲಕ್ಕೆ ಯೂನುಸ್‌ ಭೇಟಿ
ಈ ದಾಳಿಗಳ ನಡುವೆಯೇ ಮಧ್ಯಾಂತರ ಸರಕಾರದ ಮುಖ್ಯಸ್ಥ ಮೊಹಮ್ಮದ್‌ ಯೂನುಸ್‌ ಢಾಕೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ದುರ್ಗಾಪೂಜೆಯಲ್ಲಿ ಪಾಲ್ಗೊಂಡ ಬಳಿಕ ಅವರು ಮಾತನಾಡಿ, ಪ್ರತಿಯೊಬ್ಬ ನಾಗರಿಕನ ಹಕ್ಕು ಖಾತರಿಯಾಗುವ ರೀತಿಯಲ್ಲಿ ಬಾಂಗ್ಲಾದೇಶವನ್ನು ನಿರ್ಮಿಸಬೇಕೆಂದು ಸರಕಾರ ಆಶಿಸುತ್ತದೆ. ದುರ್ಗಾಪೂಜೆ ವೇಳೆ ಸುರಕ್ಷೆಗಾಗಿ ಸಂಬಂಧಪಟ್ಟ ಸಂಸ್ಥೆಗಳು ಕಠಿನ ಶ್ರಮ ವಹಿಸಿವೆ. ಅದಾಗ್ಯೂ ದಾಳಿಗಳು ನಿರಂತರವಾಗಿದ್ದು, ಇದು ಸಾಮೂಹಿಕ ವೈಫ‌ಲ್ಯವನ್ನು ತೋರುತ್ತದೆ ಎಂದಿದ್ದಾರೆ.

ಪಾಕ್‌ ಜತೆಗೆ ಕೈಜೋಡಿಸುವ ಅಪಾಯವಿದೆ: ಮೋಹನ್‌ ಭಾಗವತ್‌
ಬಾಂಗ್ಲಾದೇಶದಲ್ಲಿ ಭಾರತವನ್ನು ಅಪಾಯಕಾರಿ ಎಂದು ಬಿಂಬಿಸಲಾಗುತ್ತಿದೆ. ಭಾರತವು ತನ್ನ ಶತ್ರು ಎಂಬ ಭಾವನೆ ಮೂಡಿಸುವುದರಿಂದ ಮುಂದೆ ಆ ದೇಶವು ಅಣ್ವಸ್ತ್ರಸಜ್ಜಿತ ಪಾಕ್‌ ಜತೆಗೆ ಕೈಜೋಡಿಸುವ ಅಪಾಯವಿದೆ. ವಿಶ್ವಾದ್ಯಂತದ ಹಿಂದೂಗಳು ಬಾಂಗ್ಲಾದ ಹಿಂದೂಗಳ ಬೆಂಬಲಕ್ಕೆ ನಿಲ್ಲಬೇಕು. ಸಮಸ್ಯೆಗೆ ಶೀಘ್ರ ಪರಿಹಾರ ಸಿಗಬೇಕು ಎಂದು ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಒತ್ತಾಯಿಸಿದ್ದಾರೆ.

ಟಾಪ್ ನ್ಯೂಸ್

1

Ratan Naval Tata: ರತನ್‌ ಟಾಟಾ ಮರೆಯಾದ ಮಾಣಿಕ್ಯ; ಅಳಿದ ಮೇಲೂ ಉಳಿವ ನೆನಪು

ಟೆಸ್ಟ್‌ ತಂಡದಿಂದ ಬಾಬರ್‌ಗೆ ಗೇಟ್‌ ಪಾಸ್;‌ ಪಾಕ್‌ ಕ್ರಿಕೆಟ್‌ ನಲ್ಲಿ ಏನಾಗುತ್ತಿದೆ?

Pakistan Cricket: ಟೆಸ್ಟ್‌ನಿಂದ ಬಾಬರ್‌ಗೆ ಗೇಟ್‌ ಪಾಸ್;‌ ಪಾಕ್‌ ತಂಡದಲ್ಲಿ ಏನಾಗುತ್ತಿದೆ?

Vijayalakshmi Darshan

Darshan; ವಿಜಯಲಕ್ಷ್ಮೀ ಪೋಸ್ಟ್‌ ವೈರಲ್: ದರ್ಶನ್‌ ಬಿಡುಗಡೆಯ ಸೂಚನೆ?

salman-khan

Mumbai: ಬಿಗ್‌ ಬಾಸ್‌ ಶೂಟಿಂಗ್‌ ಅರ್ಧದಲ್ಲೇ ಬಿಟ್ಟು ಆಸ್ಪತ್ರೆಗೆ ಧಾವಿಸಿದ ಸಲ್ಮಾನ್‌ ಖಾನ್

INDvsBAN: India’s young speedster Mayank Yadav joins the special record club

INDvsBAN: ವಿಶೇಷ ದಾಖಲೆ ಕ್ಲಬ್‌ ಸೇರಿದ ಭಾರತದ ಯುವ ವೇಗಿ ಮಯಾಂಕ್‌ ಯಾದವ್

Martin movie review

Martin Movie Review: ಆ್ಯಕ್ಷನ್‌ ಅಬ್ಬರದಲ್ಲಿ ಮಾರ್ಟಿನ್‌ ಮಿಂಚು

Baba Siddique Case:‌ ಲಾರೆನ್ಸ್‌ ಬಿಷ್ಣೋಯ್ ಕೈವಾಡ ಶಂಕೆ; ಇಬ್ಬರು ಶೂಟರ್‌ ಗಳ ಬಂಧನ

Baba Siddique Case:‌ ಲಾರೆನ್ಸ್‌ ಬಿಷ್ಣೋಯ್ ಕೈವಾಡ ಶಂಕೆ; ಇಬ್ಬರು ಶೂಟರ್‌ ಗಳ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Akki

Report; ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತಕ್ಕೆ 105ನೇ ಸ್ಥಾನ

ISREL-3

Israel;ಸ್ಫೋಟಗೊಂಡ ಪೇಜರ್‌ ಖರೀದಿಸಿದ್ದು ಇರಾನ್‌?: ಅಚ್ಚರಿ ವಿಚಾರ ಬಹಿರಂಗ

23

ವಿಮಾನ ಚಾಲನೆ ವೇಳೆ ಪೈಲಟ್‌ಗೆ ಅನಾರೋಗ್ಯ: ಪತ್ನಿಯಿಂದ ತುರ್ತು ಭೂಸ್ಪರ್ಶ

Nobel Peace Prize: ಜಪಾನ್‌ನ ಹಿಂಡಾಕ್ಯೋ ಸಂಸ್ಥೆಗೆ ಶಾಂತಿ ನೊಬೆಲ್‌

Nobel Peace Prize: ಜಪಾನ್‌ನ ಹಿಂಡಾಕ್ಯೋ ಸಂಸ್ಥೆಗೆ ಶಾಂತಿ ನೊಬೆಲ್‌

Sahara Desert: 50 ವರ್ಷಗಳಲ್ಲಿ ಕಂಡು ಕೇಳರಿಯದ ಧಾರಾಕಾರ ಮಳೆ-ಸಹರಾ ಮರುಭೂಮಿಯಲ್ಲಿ ಪ್ರವಾಹ!

Sahara Desert: 50 ವರ್ಷಗಳಲ್ಲಿ ಕಂಡು ಕೇಳರಿಯದ ಧಾರಾಕಾರ ಮಳೆ-ಸಹರಾ ಮರುಭೂಮಿಯಲ್ಲಿ ಪ್ರವಾಹ!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1

Ratan Naval Tata: ರತನ್‌ ಟಾಟಾ ಮರೆಯಾದ ಮಾಣಿಕ್ಯ; ಅಳಿದ ಮೇಲೂ ಉಳಿವ ನೆನಪು

3-kottigehara

Kottigehara: ಕೌ ಗಾರ್ಡ್ ಗೆ ಬಿದ್ದು ಬೆಂಗಳೂರು ಪ್ರವಾಸಿಗನಿಗೆ ಗಾಯ

ಟೆಸ್ಟ್‌ ತಂಡದಿಂದ ಬಾಬರ್‌ಗೆ ಗೇಟ್‌ ಪಾಸ್;‌ ಪಾಕ್‌ ಕ್ರಿಕೆಟ್‌ ನಲ್ಲಿ ಏನಾಗುತ್ತಿದೆ?

Pakistan Cricket: ಟೆಸ್ಟ್‌ನಿಂದ ಬಾಬರ್‌ಗೆ ಗೇಟ್‌ ಪಾಸ್;‌ ಪಾಕ್‌ ತಂಡದಲ್ಲಿ ಏನಾಗುತ್ತಿದೆ?

Vijayalakshmi Darshan

Darshan; ವಿಜಯಲಕ್ಷ್ಮೀ ಪೋಸ್ಟ್‌ ವೈರಲ್: ದರ್ಶನ್‌ ಬಿಡುಗಡೆಯ ಸೂಚನೆ?

1-kampli-1

Kampli- ತುಂಗಭದ್ರಾ ಜಲಾಶಯಕ್ಕೆ ಭಾರಿ ಪ್ರಮಾಣದ ನೀರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.