Udupi; ಗೀತಾರ್ಥ ಚಿಂತನೆ 62 : ಆಯುಕ್ತ ಶಬ್ದದ ಉಗಮ ಗೀತೆಯಲ್ಲಿ
Team Udayavani, Oct 13, 2024, 12:49 AM IST
bhagavad gita, meaning,ಭಗವಂತ,
ಶರೀರವೆಂಬ ರಥದಲ್ಲಿ ಭಗವಂತನನ್ನು ಕುಳ್ಳಿರಿಸಿ ರಥವನ್ನು ಓಡಿಸಿದರೆ ಜಯ ನಿಶ್ಚಿತ ಎನ್ನುವ ಸಂದೇಶವನ್ನು ಗೀತೆಯ 18ನೆಯ ಅಧ್ಯಾಯದ ಕೊನೆಯ ಶ್ಲೋಕ (ಯತ್ರ ಯೋಗೇಶ್ವರಃ ಕೃಷ್ಣೋ ಯತ್ರ ಪಾರ್ಥೋ ಧನುರ್ಧರಃ|)ನೀಡುತ್ತದೆ. ಈ ಮಾತನ್ನು ಹೋಲಿಸುವಂತೆ ಕಾಠಕೋಪನಿಷತ್ತಿನಲ್ಲಿ “ಶರೀರಂ ರಥಮೇವ ಚ’ ಎಂದು ಬಣ್ಣಿಸಲಾಗಿದೆ. “ಶ್ವೇತೈರ್ಹಯೈರ್ಯುಕ್ತೇ’ ಎಂಬಲ್ಲಿರುವ “ಯುಕ್ತ’ ಎಂಬ ಶಬ್ದದ ಅರ್ಥ ಯೋಗದಿಂದ ಸಹಿತನಾದವ. ಕೃಷ್ಣ ಹಲವು ಬಾರಿ “ಯುಕ್ತ’ ಶಬ್ದವನ್ನು ಬಳಸಿದ್ದಾನೆ (ಯುಕ್ತಾಹಾರ ವಿಹಾರಸ್ಯ ಇತ್ಯಾದಿ) ಈ ಶಬ್ದಕ್ಕೆ ಬಹಳ ಮಹತ್ವವಿದೆ. ಕುದುರೆಗಳನ್ನು (ಹಯ) ಇಂದ್ರಿಯಗಳಿಗೆ ಹೋಲಿಸಲಾಗಿದೆ. ಕಟ್ಟಲ್ಪಟ್ಟ ಕುದುರೆಗಳಲ್ಲ, ಸಹಜವಾಗಿ ಇದ್ದ ಕುದುರೆಗಳು. ಹಯಗಳಿಂದ ಅರ್ಹವಾದವು. ಯುಕ್ತವಾದುದು = ಸೂಕ್ತವಾದುದು ಎಂಬರ್ಥದಲ್ಲಿ ಯುಕ್ತವಾದ ಕುದುರೆಗಳೇ ಯುದ್ಧದಲ್ಲಿ ಜಯಶಾಲಿಗಳಾಗಲು ಬೇಕು. ಅವುಗಳಿಗೆ ಯುದ್ಧದಲ್ಲಿ ತರಬೇತಿ ಇರಬೇಕು. ಇಂದ್ರಿಯಗಳಂತೆ ಯದ್ವಾತದ್ವಾ ಓಡುತ್ತಿದ್ದರೆ ಅಂತಹ ಕುದುರೆಗಳಿಂದ ಜಯ ಗಳಿಸುವುದು ಅಸಾಧ್ಯ. ಶ್ವೇತವರ್ಣದ (ಬೆಣ್ಣೆ ಬಣ್ಣದ) ತಾಜಾ ಕುದುರೆಗಳು ಆ ಕಾಲದ ಯುದ್ಧದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದವು. ಈಗಲೂ “ಆಯುಕ್ತರು’ (ಕಮಿಷನರ್ ಎಂದು ಕರೆಯುತ್ತಾರೆ) ಎಂಬ ದೊಡ್ಡ ಅಧಿಕಾರವಿರುವ ಹುದ್ದೆ ಇದೆ. ಇದು ಕೃಷ್ಣ ಕೊಟ್ಟ ಬಿರುದು.
-ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.