Threat: ನಿನ್ನ ಪತ್ನಿ ಸರಿಯಾಗಿ ಬಟ್ಟೆ ಹಾಕದಿದ್ದರೆ ಆ್ಯಸಿಡ್ ಎರಚುವೆ: ಕಿಡಿಗೇಡಿ ಬೆದರಿಕೆ
Team Udayavani, Oct 13, 2024, 12:46 PM IST
ಬೆಂಗಳೂರು: “ನಿನ್ನ ಪತ್ನಿಗೆ ಕರ್ನಾಟಕದಲ್ಲಿ ಸರಿಯಾಗಿ ಬಟ್ಟೆ ಧರಿಸುವಂತೆ ಹೇಳು. ಇಲ್ಲದಿದ್ದರೆ ಆಕೆಯ ಮುಖಕ್ಕೆ ಆ್ಯಸಿಡ್ ಎರಚುತ್ತೇನೆ’ ಎಂದು ಮಹಿಳೆ ಯೊಬ್ಬರ ಪತಿಗೆ ಬೆದರಿಸಿ ಸಂದೇಶ ಕಳಿಸಿದ್ದ ವ್ಯಕ್ತಿಯೊಬ್ಬ ಕೆಲಸ ಕಳೆದುಕೊಂಡಿದ್ದಾನೆ.
ಖಾಸಗಿ ಸಂಸ್ಥೆಯ ನೌಕರ ನಿಖಿತ್ ಶೆಟ್ಟಿ ಕೆಲಸ ಕಳೆದುಕೊಂಡ ಯುವಕ.
ಇಟಿಯೋಸ್ ಡಿಜಿಟಲ್ ಸರ್ವಿಸ್ ಎಂಬ ಸಂಸ್ಥೆಯ ನೌಕರನಾಗಿದ್ದ ನಿಖೀತ್ ಜಾಲತಾಣದಲ್ಲಿ ಸಕ್ರಿಯವಾಗಿದ್ದ ಮಹಿಳೆಯೊಬ್ಬರ ಪತಿ ಶಹಬಾಜ್ ಅನ್ಸರ್ಗೆ “ಕರ್ನಾಟಕದಲ್ಲಿ ನಿನ್ನ ಪತ್ನಿಗೆ ಸರಿಯಾಗಿ ಬಟ್ಟೆ ಹಾಕುವುದಕ್ಕೆ ಹೇಳು. ಇಲ್ಲದಿದ್ದರೆ ಆ್ಯಸಿಡ್ ಹಾಕುವುದಾಗಿ’ ಬೆದರಿಸಿ ಸಂದೇಶದಲ್ಲಿ ಉಲ್ಲೇಖೀಸಿದ್ದ. ಇದರಿಂದ ಕೆರಳಿದ ಮಹಿಳೆಯ ಪತಿ ಶಹಬಾಜ್ ಅನ್ಸರ್ ತನ್ನ ಪತ್ನಿಯ ಕುರಿತು ಮೆಸೇಜ್ ಕಳುಹಿಸಿದ ಸ್ಕ್ರೀನ್ಶಾಟ್ ಅನ್ನು ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ತನ್ನ ಪತ್ನಿ ಬಟ್ಟೆ ಧರಿಸುವ ಬಗ್ಗೆ ನಿರ್ಧರಿಸುವ ಈ ವ್ಯಕ್ತಿ ಯಾರು, ಬೆದರಿಕೆ ಸಂದೇಶ ಕಳುಹಿಸಿದವನ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಡಿಜಿಪಿ ಅಲೋಕ್ ಮೋಹನ್ ಅವರಿಗೆ ಟ್ಯಾಗ್ ಮಾಡಿ ಒತ್ತಾಯಿಸಿದ್ದರು.
ಭಯಹುಟ್ಟಿಸುವಂತಿದೆ ಸಂದೇಶ ಎಂದ ಪತಿ: ಪತ್ನಿಗೆ ಸಾಮಾಜಿಕ ಜಾಲತಾಣದಲ್ಲಿ ಕೆಲವು ನಿಂದನೆ ಸಂದೇಶಗಳು ಬರುತ್ತಿರುತ್ತವೆ. ಈ ಬಗ್ಗೆ ಹೆಚ್ಚು ಚಿಂತಿ ಸಿರಲಿಲ್ಲ. ಆದರೆ, ಲಿಖೀತ್ ಶೆಟ್ಟಿ ಎಂಬಾತ ಕಳುಹಿಸಿ ಸಂದೇಶ ಭಯಹುಟ್ಟಿಸುವಂತಿದೆ ಎಂದು ಪತ್ರಕರ್ತ ರಾಗಿರುವ ಶಹಬಾಜ್ ಆತಂಕ ವ್ಯಕ್ತಪಡಿಸಿದ್ದಾರೆ.
ಪತಿಯ ಟ್ವೀಟ್ನಿಂದ ಘಟನೆ ಬೆಳಕಿಗೆ:
ಪ್ರಕರಣದಲ್ಲಿ ಆರೋಪಿ ನಿಕಿತ್ ಶೆಟ್ಟಿ ಹಿನ್ನೆಲೆ ತಿಳಿದು ಬಂದಿಲ್ಲ. ಶಹಬಾಸ್ ಅನ್ಸರ್ಗೂ ನಿಕಿತ್ ಶೆಟ್ಟಿಗೂ ಹಿಂದೆ ಪರಿಚಯವಿರಲಿಲ್ಲ. ಆದರೆ, ಶಹಬಾಸ್ ಪತ್ನಿಯನ್ನು ಉದ್ದೇಶಿಸಿ ನಿಕಿತ್ ಶೆಟ್ಟಿಯು ಏಕೆ ಈ ರೀತಿಯಾಗಿ ಕಮೆಂಟ್ ಮಾಡಿದ್ದಾನೆ ಎಂಬುದು ಇನ್ನಷ್ಟೆ ತಿಳಿಯಬೇಕಿದೆ. ನಿಖಿತ್ ಶೆಟ್ಟಿ ಸಂದೇಶದ ಕುರಿತು ಶಹಬಾಸ್ ಟ್ವೀಟ್ ಮಾಡಿದ ಹಿನ್ನೆಲೆಯಲ್ಲಿ ಘಟನೆ ಬೆಳಕಿಗೆ ಬಂದಿದೆ. ಇನ್ನು ನನ್ನ ಪತ್ನಿಗೆ ಆ್ಯಸಿಡ್ ದಾಳಿಯ ಬೆದರಿಕೆ ಹಾಕುತ್ತಿದ್ದ ವ್ಯಕ್ತಿ ಎಟಿಯೋಸ್ ಡಿಜಿಟಲ್ ಸೇವೆಯಲ್ಲಿ ಕೆಲಸ ಮಾಡುತ್ತಾನೆ. ಈ ಸಂಸ್ಥೆಯಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಶಹಬಾಸ್ ಟ್ವೀಟ್ ಮಾಡಿದ ಹಿನ್ನೆಲೆಯಲ್ಲಿ ನಿಖಿತ್ ಶೆಟ್ಟಿ ಕೆಲಸ ಮಾಡುತ್ತಿದ್ದ ಕಂಪನಿಗೂ ಈ ಸಂಗತಿ ಗೊತ್ತಾಗಿತ್ತು ಎನ್ನಲಾಗಿದೆ. ತಕ್ಷಣ ಎಚ್ಚೆತ್ತುಕೊಂಡ ಕಂಪನಿಯು ನಿಖಿತ್ ಶೆಟ್ಟಿಯನ್ನು ಕೆಲಸದಿಂದ ವಜಾಗೊಳಿಸಿ, ಈ ಬಗ್ಗೆ ವಿಷಾದ ವ್ಯಕ್ತಪಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JC Nagar Dussehra: ಜೆ.ಸಿ.ನಗರ ದಸರಾದಲ್ಲಿ ನೂರಾರು ಪಲ್ಲಕ್ಕಿಗಳ ಉತ್ಸವ
Arrested: ಈವೆಂಟ್ ಮ್ಯಾನೇಜ್ಮೆಂಟ್ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ
Missing Case: 20 ಲಕ್ಷ ರೂ. ಸಾಲ ಮಾಡಿ ಮನೆ ತೊರೆದ ಬ್ಯಾಂಕ್ ಉದ್ಯೋಗಿ
Bengaluru: ಫೋಟೋ ಕ್ಲಿಕ್ಕಿಸುವಾಗ ಅಡ್ಡ ಬಂದ ಎಚ್ಎಎಲ್ ನೌಕರನ ಮೇಲೆ ಹಲ್ಲೆ
Fake Facebook Account: ಬಿಬಿಎಂಪಿ ಆಯುಕ್ತರ ಹೆಸರಲ್ಲಿ ಫೇಸ್ಬುಕ್ ಖಾತೆ ನಕಲಿ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Congress: ವಿಧಾನ ಪರಿಷತ್ ಉಪ ಚುನಾವಣೆ: ಕಾಂಗ್ರೆಸ್ ಉಸ್ತುವಾರಿಗಳ ನೇಮಕ
Virat Kohli ಅವರನ್ನು ಭಾರತ ಹೊರಗಿಟ್ಟಿತ್ತೇ?:ಬಾಬರ್ ಕೈಬಿಟ್ಟಿದ್ದಕ್ಕೆ ಫಖರ್ ಜಮಾನ್ ಆಕ್ರೋಶ
Kaup: ಮಳೆ ಸಿಂಚನದ ನಡುವೆ ಉಚ್ಚಿಲ ದಸರಾಕ್ಕೆ ವಿಜೃಂಭಣೆಯ ತೆರೆ
Actress: ಖ್ಯಾತ ನಟಿಯ ಖಾಸಗಿ ವಿಡಿಯೋ ಲೀಕ್..ಕಮೆಂಟ್ ಮಾಡಿದವರಿಗೆ ಎಂಜಾಯ್ ಮಾಡಿ ಎಂದ ನಟಿ
Sirsi: ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್ ಪಡೆದು ಕಾಂಗ್ರೆಸ್ ಸರಕಾರದಿಂದ ಅಪರಾಧ: ಕಾಗೇರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.