Box office: ಮಾರ್ಟಿನ್‌ To ಜಿಗ್ರಾ.. ದಸರಾಕ್ಕೆ ರಿಲೀಸ್‌ ಆದ ಸಿನಿಮಾಗಳು ಗಳಿಸಿದ್ದೆಷ್ಟು?


Team Udayavani, Oct 13, 2024, 3:46 PM IST

Box office: ಮಾರ್ಟಿನ್‌ To ಜಿಗ್ರಾ.. ದಸರಾಕ್ಕೆ ರಿಲೀಸ್‌ ಆದ ಸಿನಿಮಾಗಳು ಗಳಿಸಿದ್ದೆಷ್ಟು?

ಬೆಂಗಳೂರು/ ಮುಂಬಯಿ/  ಚೆನ್ನೈ: ನವರಾತ್ರಿ ಸಂಭ್ರಮಕ್ಕೆ ಚಿತ್ರರಂಗ ಬ್ಯುಸಿಯಾಗಿದೆ. ನವರಾತ್ರಿ ಹಬ್ಬಕ್ಕೆ ಸ್ಯಾಂಡಲ್‌ ವುಡ್‌, ಕಾಲಿವುಡ್‌, ಬಾಲಿವುಡ್‌ನಲ್ಲಿ ಸಾಲು ಸಾಲು ಸಿನಿಮಾಗಳು ರಿಲೀಸ್‌ ಆಗಿವೆ.

ಆ್ಯಕ್ಷನ್ ಪ್ರಿನ್ಸ್‌  ಧ್ರುವ ಸರ್ಜಾ (Dhruva Sarja) ನಟನೆಯ ‘ಮಾರ್ಟಿನ್’ (Martin) ಕನ್ನಡ ಸೇರಿದಂತೆ ಪ್ಯಾನ್‌ ಇಂಡಿಯಾ ಭಾಷೆಯಲ್ಲಿ ರಿಲೀಸ್‌ ಆಗಿದ್ದು, ಇತ್ತ ಸೂಪರ್‌ ಸ್ಟಾರ್ ರಜಿನಿಕಾಂತ್‌ (Rajinikanth) ಅಭಿನಯದ ʼವೆಟ್ಟೈಯನ್‌ʼ (Vettaiyan)‌ ಕಾಲಿವುಡ್‌ ನಿಂದ ರಿಲೀಸ್‌ ಆಗಿದೆ. ಬಾಲಿವುಡ್‌ನಿಂದ ಆಲಿಯಾ ಭಟ್‌ (Alia Bhatt) ಅಭಿನಯದ ʼಜಿಗ್ರಾʼ (Jigra) ಸಿನಿಮಾದೊಂದಿಗೆ ರಾಜ್‌ ಕುಮಾರ್‌ ರಾವ್‌, ತೃಪ್ತಿ ದಿಮ್ರಿ ಅಭಿನಯದ ʼವಿಕಿ ವಿದ್ಯಾ ಕಾ ವೋʼ ವಾಲ ವಿಡಿಯೋʼ (Vicky Vidya Ka Woh Wala Video) ಸಿನಿಮಾ ನವರಾತ್ರಿ ವೇಳೆ ರಿಲೀಸ್‌ ಆಗಿದೆ.

ಇದನ್ನೂ ಓದಿ: BBK11: ಬಿಗ್‌ಬಾಸ್‌ ಕಾರ್ಯಕ್ರಮಕ್ಕೆ ಶಾಕ್‌ ನೀಡಿದ ಪೊಲೀಸರು; ಆಗಿದ್ದೇನು?

ಬಾಕ್ಸ್‌ ಆಫೀಸ್‌ ನಲ್ಲಿ ಇದುವರೆಗೆ ಯಾವ ಸಿನಿಮಾ ಎಷ್ಟು ಗಳಿಸಿದೆ ಹಾಗೂ ಸಿನಿಮಾಕ್ಕೆ ಯಾವ ರೀತಿಯ ಪ್ರತಿಕ್ರಿಯೆ ಕೇಳಿಬಂದಿದೆ ಎನ್ನುವುದನ್ನು ನೋಡಿಕೊಂಡು ಬರೋಣ ಬನ್ನಿ..

ಮಾರ್ಟಿನ್‌ Vs ಜಿಗ್ರಾ.. : ಕನ್ನಡ ʼಮಾರ್ಟಿನ್‌ʼ ಹಾಗೂ ಹಿಂದಿಯ ʼಜಿಗ್ರಾʼ ಸಿನಿಮಾ ಒಂದೇ ದಿನ(ಶುಕ್ರವಾರ – ಅ.11ರಂದು) ರಿಲೀಸ್‌ ಆಗಿದೆ. ʼಮಾರ್ಟಿನ್‌ʼ ಪ್ಯಾನ್‌ ಇಂಡಿಯಾದಲ್ಲಿ ರಿಲೀಸ್‌ ಆಗಿದ್ದು, ಮೊದಲ ಎರಡು ದಿನ ಬಾಕ್ಸಾಫೀಸ್‌ ನಲ್ಲಿ ಸದ್ದು ಮಾಡಿದೆ.  ಇತ್ತ ಆಲಿಯಾ ಭಟ್‌ ಅಭಿನಯದ ʼಜಿಗ್ರಾʼ ಕೂಡ ಸಖತ್‌ ಪೈಪೋಟಿ ನೀಡಿದೆ.

Sacnilk ವೆಬ್‌ಸೈಟ್ ವರದಿ ಪ್ರಕಾರ ʼಮಾರ್ಟಿನ್‌ʼ ಮೊದಲ ದಿನ 6.70 ಕೋಟಿ ರೂ. ಗಳಿಕೆ ಕಂಡಿದೆ. ಎರಡನೇ ದಿನ ಅಂದಾಜು 5.50 ಕೋಟಿ ರೂ. ಗಳಿಸಿದೆ. ಎರಡು ದಿನದಲ್ಲಿ 12.2 ಕೋಟಿ ರೂ. ʼಮಾರ್ಟಿನ್‌ʼ ಗಳಿಸಿದೆ ಎನ್ನಲಾಗಿದೆ. ಆದರೆ ಚಿತ್ರತಂಡದಿಂದ ಅಧಿಕೃತವಾಗಿ ಬಾಕ್ಸ್‌ ಆಫೀಸ್‌ ಲೆಕ್ಕಚಾರದ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.

ಇತ್ತ ಆಲಿಯಾ ಭಟ್‌ ಪ್ರಧಾನ ಪಾತ್ರದಲ್ಲಿರುವ ʼಜಿಗ್ರಾʼ ಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಎರಡು ದಿನದಲ್ಲಿ 11.1 ಕೋಟಿ ರೂ.ವನ್ನು ಮಾತ್ರ ಭಾರತದಲ್ಲಿ ಗಳಿಸಿದೆ ಎಂದು Sacnilk ವೆಬ್‌ಸೈಟ್ ಹೇಳಿದೆ.

ವಸನ್ ಬಾಲ ನಿರ್ದೇಶನದ ʼಜಿಗ್ರಾʼದಲ್ಲಿ ವೇದಾಂಗ್ ರೈನಾ, ಮನೋಜ್ ಪಾವಾ, ರಾಹುಲ್ ರವಿಂದ್ರನ್ ಮುಂತಾದವರು ನಟಿಸಿದ್ದಾರೆ. ಧರ್ಮ ಪ್ರೊಡಕ್ಷನ್ಸ್ ಹಾಗೂ ಎಟರ್ನಲ್ ಸನ್ಶೈನ್ ಪ್ರೊಡಕ್ಷನ್ಸ್ ಸಂಸ್ಥೆಗಳು ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡಿವೆ.

ಬಾಕ್ಸ್‌ ಆಫೀಸ್‌ ನಲ್ಲಿ ಸಿಂಗಲ್‌ ಶೇರ್‌ ಆದ ʼವೆಟ್ಟೈಯನ್‌ʼ:

ಇನ್ನು ಅಕ್ಟೋಬರ್‌ 10 ರಂದು ರಿಲೀಸ್‌ ಆದ ಸೂಪರ್‌ ಸ್ಟಾರ್‌ ರಜಿನಿಕಾಂತ್‌ ಅವರ ʼವೆಟ್ಟೈಯನ್‌ʼ ಸಿನಿಮಾ ಬಾಕ್ಸಾಫೀಸ್‌ ನಲ್ಲಿ ದೊಡ್ಡದಾಗಿಯೇ ಓಪನಿಂಗ್‌ ಪಡೆದುಕೊಂಡಿದೆ. ಮೂರನೇ ದಿನದಲ್ಲಿ ಚಿತ್ರ 95.8 ಕೋಟಿ ಗ್ರಾಸ್‌ ಕಲೆಕ್ಷನ್‌ ಮಾಡಿದೆ ಎನ್ನಲಾಗುತ್ತಿದೆ. ವರ್ಲ್ಡ್‌ ವೈಡ್‌ 145.80 ಕೋಟಿ ರೂ. ಗಳಿಸಿದೆ ಎನ್ನಲಾಗಿದೆ.

ಟಿಜೆ ಜ್ಞಾನವೇಲ್‌ ನಿರ್ದೇಶನದ ಈ ಸಿನಿಮಾದಲ್ಲಿ ರಜಿನಿಕಾಂತ್‌ ಜತೆ ಅಮಿತಾಭ್‌ ಬಚ್ಚನ್‌, ಫಾಹದ್‌ ಫಾಸಿಲ್‌, ರಾಣಾದಗ್ಗುಬಾಟಿ ಮುಂತಾದವರು ನಟಿಸಿದ್ದಾರೆ.

ʼವಿಕಿ ವಿದ್ಯಾ ಕಾ ವೋʼ ವಾಲ ವಿಡಿಯೋʼ ಸಿನಿಮಾ ಗಳಿಸಿದ್ದೆಷ್ಟು?: ʼವಿಕಿ ವಿದ್ಯಾ ಕಾ ವೋʼ ವಾಲ ವಿಡಿಯೋʼ ಚಿತ್ರಕ್ಕೆ ಪ್ರೇಕ್ಷಕರಿಂದ ನಿರಾಶದಾಯಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮೊದಲ ದಿನ 5.25 ಕೋಟಿ ರೂ. ಗಳಿಸಿದ್ದು, ಎರಡನೇ ದಿನ 6.75 ಕೋಟಿ ರೂ. ರೂ ಗಳಿಸಿದೆ ಒಟ್ಟು ಸಿನಿಮಾ ಇದುವರೆಗೆ 12.4 ಕೋಟಿ ರೂ. ಗಳಿಸಿದೆ.

ವೀಕೆಂಡ್‌ನಲ್ಲಿ ಈ ಸಿನಿಮಾಗಳು ಹೆಚ್ಚಿನ ಕಲೆಕ್ಷನ್‌ ಮಾಡುವ ನಿರೀಕ್ಷೆಯಿದ್ದು,ಚಿತ್ರತಂಡವೇ ಅಧಿಕೃತವಾಗಿ ಬಾಕ್ಸ್‌ ಆಫೀಸ್‌ ಗಳಿಕೆಯನ್ನು ರಿವೀಲ್‌ ಮಾಡುವ ಸಾಧ್ಯತೆಯಿದೆ.

ಟಾಪ್ ನ್ಯೂಸ್

8

BBK11: ಬಿಗ್‌ ಬಾಸ್‌ ಮನೆಯಲ್ಲಿ ಹೊಡೆದಾಟ; ಶೋನಿಂದ ಹೊರಬಿದ್ದ ಜಗದೀಶ್‌ – ರಂಜಿತ್‌?

Explainer: ರಾಜ್ಯದ ಜಾತಿ ಜನ ಗಣತಿಗೆ ಯಾಕೆ ಇಷ್ಟೊಂದು ಚರ್ಚೆ ?

Explainer: ರಾಜ್ಯದ ಜಾತಿ ಜನ ಗಣತಿ ಕುರಿತು ಯಾಕೆ ಇಷ್ಟೊಂದು ಚರ್ಚೆ ?

4-ptr

Puttur: ಅಕ್ರಮ ಗೋ ಸಾಗಾಟ ಪತ್ತೆ ಹಚ್ಚಿದ ಬಜರಂಗದಳ ಕಾರ್ಯಕರ್ತರು

1-amudaa

MUDA; Chairman ಕೆ.ಮರಿಗೌಡ ರಾಜೀನಾಮೆ: ಆಡಳಿತಾಧಿಕಾರಿ ನೇಮಕ ಸಾಧ್ಯತೆ

1-jj-bg-aa

J&K; ಸಿಎಂ ಆಗಿ ಒಮರ್ ಅಬ್ದುಲ್ಲಾ, ಡಿಸಿಎಂ ಆಗಿ ಸುರೀಂದರ್ ಚೌಧರಿ ಪ್ರಮಾಣ ವಚನ

Bigg Boss: ವಾರದ ಮಧ್ಯದಲ್ಲೇ ಬಿಗ್‌ ಬಾಸ್‌ನಿಂದ ಎಲಿಮಿನೇಟ್‌ ಆದ ವೀಕ್ಷಕರ ಮೆಚ್ಚಿನ ಸ್ಪರ್ಧಿ

Bigg Boss: ವಾರದ ಮಧ್ಯದಲ್ಲೇ ಬಿಗ್‌ ಬಾಸ್‌ನಿಂದ ಎಲಿಮಿನೇಟ್‌ ಆದ ವೀಕ್ಷಕರ ಮೆಚ್ಚಿನ ಸ್ಪರ್ಧಿ

Dubai-N1

Dubai Miracle Garden: ಮರು ಭೂಮಿಯಲ್ಲಿ ಮೂಡಿ ಬಂದ ಪುಷ್ಪ ಸಿರಿ ವೈಭವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6

Actress Oviya: ಬಿಗ್‌ಬಾಸ್‌ ಮಾಜಿ ಸ್ಪರ್ಧಿಯ ಖಾಸಗಿ ವಿಡಿಯೋ ವೈರಲ್; ದೂರು ದಾಖಲಿಸಿದ ನಟಿ

Kamal Haasan: ನಿರೂಪಣೆ ಬಿಟ್ಟ ಬಳಿಕ ಮತ್ತೆ ಬಿಗ್‌ಬಾಸ್‌ ವೇದಿಕೆಗೆ ಬರಲಿದ್ದಾರೆ ಕಮಲ್

Kamal Haasan: ನಿರೂಪಣೆ ಬಿಟ್ಟ ಬಳಿಕ ಮತ್ತೆ ಬಿಗ್‌ಬಾಸ್‌ ವೇದಿಕೆಗೆ ಬರಲಿದ್ದಾರೆ ಕಮಲ್

Prasanth Varma: ಮಹಾಕಾಳಿಯಲ್ಲಿ ದೈವಾರಾಧನೆ

Prasanth Varma: ಮಹಾಕಾಳಿಯಲ್ಲಿ ದೈವಾರಾಧನೆ

5

Actor Bala: ಮಾಜಿ ಪತ್ನಿ ಜತೆ ಅನುಚಿತ ವರ್ತನೆ ಆರೋಪ; ಖ್ಯಾತ ನಟ ಬಂಧನ

Actress: ಖ್ಯಾತ ನಟಿಯ ಖಾಸಗಿ ವಿಡಿಯೋ ಲೀಕ್..‌ಕಮೆಂಟ್‌ ಮಾಡಿದವರಿಗೆ ಎಂಜಾಯ್‌ ಮಾಡಿ ಎಂದ ನಟಿ

Actress: ಖ್ಯಾತ ನಟಿಯ ಖಾಸಗಿ ವಿಡಿಯೋ ಲೀಕ್..‌ಕಮೆಂಟ್‌ ಮಾಡಿದವರಿಗೆ ಎಂಜಾಯ್‌ ಮಾಡಿ ಎಂದ ನಟಿ

MUST WATCH

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

ಹೊಸ ಸೇರ್ಪಡೆ

1-rss

Hubli; ಗಲಭೆ ಪ್ರಕರಣ ವಾಪಸ್ ಖಂಡಿಸಿ ಠಾಣೆ ಮುಂಭಾಗ ಶ್ರೀರಾಮ ಸೇನೆ ಪ್ರತಿಭಟನೆ

3

Punjalkatte:ಕೊಳಕ್ಕೆಬೈಲ್‌-ನಯನಾಡು ರಸ್ತೆ ದುರವಸ್ಥೆ;ಯುವಕರಿಂದ ಶ್ರಮದಾನದ ಮೂಲಕ ದುರಸ್ತಿ

8

BBK11: ಬಿಗ್‌ ಬಾಸ್‌ ಮನೆಯಲ್ಲಿ ಹೊಡೆದಾಟ; ಶೋನಿಂದ ಹೊರಬಿದ್ದ ಜಗದೀಶ್‌ – ರಂಜಿತ್‌?

2

Didupe ದರ್ಕಾಸು ಕೆಮ್ಮಟೆಯಲ್ಲಿ ಪಾಲದಲ್ಲೇ ಓಡಾಟ; ರೋಟರಿ ತಂಡದಿಂದ ಕಾಲುಸಂಕ ಭರವಸೆ

Explainer: ರಾಜ್ಯದ ಜಾತಿ ಜನ ಗಣತಿಗೆ ಯಾಕೆ ಇಷ್ಟೊಂದು ಚರ್ಚೆ ?

Explainer: ರಾಜ್ಯದ ಜಾತಿ ಜನ ಗಣತಿ ಕುರಿತು ಯಾಕೆ ಇಷ್ಟೊಂದು ಚರ್ಚೆ ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.