Special Train: ಮಂಗಳೂರು ಜಂಕ್ಷನ್- ಕೊಚ್ಚುವೇಲಿ ವಿಶೇಷ ಎಕ್ಸ್ಪ್ರೆಸ್ ರೈಲು
ವಿಸ್ತರಿತ ಕಾಚೆಗುಡ ಮಂಗಳೂರು ರೈಲಿನ ವೇಳಾಪಟ್ಟಿ
Team Udayavani, Oct 14, 2024, 8:00 AM IST
ಮಂಗಳೂರು: ಹಬ್ಬದ ಕಾರಣ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸುವ ಹಿನ್ನೆಲೆಯಲ್ಲಿ ಮಂಗಳೂರು ಜಂಕ್ಷನ್- ಕೊಚ್ಚುವೇಲಿ ನಡುವೆ ವಿಶೇಷ ಎಕ್ಸ್ಪ್ರೆಸ್ ರೈಲು ಸಂಚರಿಸಲಿದೆ.
ನಂ.06157 ಕೊಚುವೇಲಿ – ಮಂಗಳೂರು ಜಂಕ್ಷನ್ ವಿಶೇಷ ಎಕ್ಸ್ಪ್ರೆಸ್ ರೈಲು ಅ.14ರಂದು ರಾತ್ರಿ 9.25ಕ್ಕೆ ಕೊಚ್ಚುವೇಲಿಯಿಂದ ಹೊರಡಲಿದ್ದು, ಮರುದಿನ ಬೆಳಗ್ಗೆ 9.15ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ನಂ.06158 ಮಂಗಳೂರು ಜಂಕ್ಷನ್ – ಕೊಚ್ಚುವೇಲಿ ವಿಶೇಷ ರೈಲು ಅ.15ರಂದು ರಾತ್ರಿ 8.10ಕ್ಕೆ ಮಂಗಳೂರು ಜಂಕ್ಷನ್ನಿಂದ ಹೊರಡಲಿದ್ದು, ಮರುದಿನ ಬೆಳಗ್ಗೆ 8 ಗಂಟೆಗೆ ಕೊಚ್ಚುವೇಲಿ ತಲುಪಲಿದೆ.
ರೈಲು ಕಾಸರಗೋಡು, ಕಣ್ಣೂರು, ಕೋಯಿಕ್ಕೋಡ್, ತಿರೂರ್, ಶೋರ್ನೂರು ಜಂಕ್ಷನ್, ಎರ್ನಾಕುಳಂ ಜಂಕ್ಷನ್, ಆಲಪ್ಪುಳ, ಕಾಯಂಕುಳಂ ಜಂಕ್ಷನ್, ಕೊಲ್ಲಂ ಜಂಕ್ಷನ್ಗಳಲ್ಲಿ ನಿಲುಗಡೆಯಾಗಲಿದೆ. 14 ದ್ವಿತೀಯ ದರ್ಜೆ ಬೋಗಿಗಳು, 1 – ಜನರೇಟರ್ ಕಾರ್, 1 ಸೆಕೆಂಡ್ ಕ್ಲಾಸ್ ಲಗೇಜ್/ಬ್ರೇಕ್ ವ್ಯಾನ್ ಹೊಂದಿದೆ.
ವಿಸ್ತರಿತ ಕಾಚೆಗುಡ ಮಂಗಳೂರು ರೈಲಿನ ವೇಳಾಪಟ್ಟಿ
ಮಂಗಳೂರು: ಕಾಚೆಗುಡ-ಮಂಗಳೂರು ಸೆಂಟ್ರಲ್-ಕಾಚೆಗುಡ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ರೈಲನ್ನು ಅ.12ರಿಂದ ಮುರುಡೇಶ್ವರ ವರೆಗೆ ವಿಸ್ತರಿಸಲಾಗಿದ್ದು, ಅದರ ವೇಳಾಪಟ್ಟಿ ಇಂತಿದೆ.
12789 ಕಾಚೆಗುಡ-ಮುರುಡೇಶ್ವರ ರೈಲು ಅ.11ರಿಂದ ಬೆಳಗ್ಗೆ 6.05ಕ್ಕೆ ಕಾಚೆಗುಡದಿಂದ ಹೊರಡಲಿದೆ(ಮಂಗಳ/ಶುಕ್ರವಾರ), ಬೆಳಗ್ಗೆ 9.30ಕ್ಕೆ ಮಂಗಳೂರು ಸೆಂಟ್ರಲ್ ಆಗಮಿಸಿ, 9.40ಕ್ಕೆ ಹೊರಡಲಿದೆ. ಸುರತ್ಕಲ್(10.32 ಆಗಮನ/10.34 ನಿರ್ಗಮನ), ಮೂಲ್ಕಿ (10.44/10.46), ಉಡುಪಿ (11.40/11/42), ಬಾಕೂìರು(11.54/11.56), ಕುಂದಾಪುರ (12.10/12.12), ಬೈಂದೂರು ಮೂಕಾಂಬಿಕಾ ರೋಡ್(12.56/12.58), ಭಟ್ಕಳ (ಮಧ್ಯಾಹ್ನ 1.40/1.42) ಮೂಲಕ ಮುರುಡೇಶ್ವರಕ್ಕೆ ಮಧ್ಯಾಹ್ನ 2.05ಕ್ಕೆ ತಲಪುವುದು.
ನಂ.12790 ಮುರುಡೇಶ್ವರ-ಕಾಚೆಗುಡ ರೈಲು ಅ.12ರಿಂದ ಅನ್ವಯವಾಗುವಂತೆ(ಗುರು/ರವಿವಾರ) ಮಧ್ಯಾಹ್ನ 3.30ಕ್ಕೆ ಮುರುಡೇಶ್ವರದಿಂದ ಹೊರಡಲಿದೆ.
ಭಟ್ಕಳ(3.42/3.44), ಬೈಂದೂರು (3.54/3.56), ಕುಂದಾಪುರ (4.30/4.32), ಬಾಕೂìರು(4.50/4.52), ಉಡುಪಿ (5.08/5.10), ಮೂಲ್ಕಿ (6.02/6.10), ಮೂಲ್ಕಿ(6.02/6.04), ಸುರತ್ಕಲ್ (6.30/6.32), ಮಂಗಳೂರು ಸೆಂಟ್ರಲ್ (ರಾತ್ರಿ 7.55/8.05) ಮೂಲಕ ರಾತ್ರಿ 11.40ಕ್ಕೆ ಕಾಚೆಗುಡ ತಲಪುವುದು.
ಈ ರೈಲು ಕಾಚೆಗುಡ-ಮಂಗಳೂರು ಸೆಂಟ್ರಲ್-ಕಾಚೆಗುಡ ಮಧ್ಯೆ ಸೂಪರ್ಫಾಸ್ಟ್ ಆಗಿಹಾಗೂ ಮಂಗಳೂರು ಸೆಂಟ್ರಲ್-ಮುರುಡೇಶ್ವರ- ಮಂಗಳೂರು ಸೆಂಟ್ರಲ್ ಮಧ್ಯೆ ನಾನ್ಸೂಪರ್ಫಾಸ್ಟ್ ಆಗಿ ಚಲಿಸಲಿದೆ ಎಂದು ದಕ್ಷಿಣ ರೈಲ್ವೆ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Murphy: ʼಮರ್ಫಿʼಗೆ ಸಾಥ್ ನೀಡಿದ ನಟಿಮಣಿಯರು
UP: ದುರ್ಗಾ ವಿಸರ್ಜನೆ ವೇಳೆ ಕೋಮು ಘರ್ಷಣೆ: ಗುಂಡಿನ ದಾಳಿ… ಯುವಕ ಬಲಿ, 30 ಮಂದಿ ಬಂಧನ
Actor Bala: ಮಾಜಿ ಪತ್ನಿ ಜತೆ ಅನುಚಿತ ವರ್ತನೆ ಆರೋಪ; ಖ್ಯಾತ ನಟ ಬಂಧನ
Women’s T20 World Cup: ಆಸೀಸ್ ವಿರುದ್ದ ಸೋತರೂ ಭಾರತಕ್ಕೆ ಇನ್ನೂ ಇದೆ ಸೆಮಿ ಅವಕಾಶ
Hunasuru: ಜ್ವರಕ್ಕೆ ಮದ್ದು ತರಲು ಹೋಗುತ್ತಿದ್ದ ತಂದೆ ಮಗಳಿಗೆ ಬೈಕ್ ಡಿಕ್ಕಿ, ಬಾಲಕಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.