Ayodhya; ರಾಮ ಮಂದಿರ ಗೋಪುರ ನಿರ್ಮಾಣ ಬಿರುಸು

120 ದಿನಗಳಲ್ಲೇ ನಿರ್ಮಾಣ ಪೂರ್ಣಗೊಳಿಸುವ ಗುರಿ

Team Udayavani, Oct 14, 2024, 7:15 AM IST

1-eweweq

ಅಯೋಧ್ಯೆ: ಜ.22ರ ಅಯೋಧ್ಯೆ ರಾಮಮಂದಿರ ಪ್ರಾಣಪ್ರತಿಷ್ಠೆ ಬಳಿಕ ಮಂದಿರದ ಉಳಿದ ಭಾಗಗಳ ನಿರ್ಮಾಣ ಕಾರ್ಯ ತ್ವರಿತವಾಗಿ ನಡೆಯುತ್ತಿದೆ. ನವರಾತ್ರಿಯ ಮೊದಲ ದಿನವೇ ಮಂದಿರದ ಗೋಪುರ ನಿರ್ಮಾಣ ಕಾಮಗಾರಿ ಆರಂಭವಾಗಿದ್ದು, 9 ದಿನಗಳಲ್ಲಿ ಮೊದಲ ಪದರ ಸಿದ್ಧವಾಗಿದೆ. ನೆಲದಿಂದ 161 ಅಡಿ ಎತ್ತರವಿರುವ ಈ ಶಿಖರವನ್ನು 120 ದಿನಗಳಲ್ಲಿ ನಗರ ಶೈಲಿಯಲ್ಲಿ ನಿರ್ಮಿಸಲಾಗುತ್ತದೆ. ವಿಶೇಷವೆಂ­ದರೆ, ಗೋಪುರ ಚೌಕಾಕಾರದ ಬದಲಾಗಿ ಅಷ್ಟಭುಜಾಕೃತಿಯಲ್ಲಿರುತ್ತದೆ. ಅಷ್ಟಭುಜದ ಗೋಪುರ ಹೊಂದಿರುವ ದೇಶದ ಮೊದಲ ರಾಮಮಂದಿರ ಎಂಬ ಹೆಗ್ಗಳಿಕೆಗೂ ಅಯೋಧ್ಯೆ ದೇಗುಲ ಪಾತ್ರವಾಗಲಿದೆ.

ಮಂದಿರದ ವೈಭವೋಪೇತ ಗೋಪುರವನ್ನು 29 ಪದರಗಳಲ್ಲಿ ನಿರ್ಮಿಸಲಾಗುತ್ತದೆ. ರಾಮಮಂದಿರದ ಅಡಿಪಾಯವನ್ನು ಹೇಗೆ ಪದರ ಪದರವಾಗಿ ನಿರ್ಮಿಸಲಾಯಿತೋ ಅದೇ ರೀತಿ ಗೋಪುರ ನಿರ್ಮಾಣವಾಗಲಿದೆ. ಕೆಳಭಾಗದಿಂದ ಮೇಲಕ್ಕೆ ಹೋದಂತೆಲ್ಲ ಗೋಪುರದ ಸುತ್ತಳತೆ ಕಡಿಮೆಯಾಗಲಿದೆ. ಮೇಲ್ಭಾಗದಲ್ಲಿ 45 ಅಡಿ ಎತ್ತರ ಮತ್ತು 5 ಟನ್‌ ತೂಕದ ಧ್ವಜ ಸ್ತಂಭವನ್ನು ಅಳವಡಿಸಲಾಗುತ್ತದೆ. ಈ ಶಿಖರ ಎಷ್ಟು ಬಲಿಷ್ಠವಾಗಿರಲಿದೆ ಎಂದರೆ, ರಿಕ್ಟರ್‌ ಮಾಪಕದಲ್ಲಿ 8-10 ತೀವ್ರತೆ ಭೂಕಂಪವಾದರೂ ಇದು ಸುರಕ್ಷಿತವಾಗಿರಲಿದೆ ಎಂದು ವಾಸ್ತುಶಿಲ್ಪಿ ಆಶಿಷ್‌ ಸೋಂಪುರ ಹೇಳಿದ್ದಾರೆ.

4 ತಿಂಗಳಲ್ಲಿ ಪೂರ್ಣ: ಇದರ ಜತೆಗೆ, ಮಂದಿರದ ಆವರಣದಲ್ಲಿ ಸಪ್ತಮಂದಿರ ನಿರ್ಮಾಣ ಕಾರ್ಯವೂ ತ್ವರಿತಗತಿಯಲ್ಲಿ ನಡೆಯುತ್ತಿದ್ದು, 4 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಒಟ್ಟಾರೆಯಾಗಿ ಇಡೀ ಮಂದಿರದ ಸಂಪೂರ್ಣ ನಿರ್ಮಾಣ ಕಾಮಗಾರಿ ಪ್ರಸಕ್ತ ವರ್ಷದ ಡಿಸೆಂಬರ್‌ ಒಳಗೆ ಮುಗಿಸುವುದು ನಮ್ಮ ಉದ್ದೇಶ ಎಂದು ರಾಮಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಹೇಳಿದ್ದಾರೆ.

ಬಾಲಕರಾಮನ ಗರ್ಭಗುಡಿ ನೆಲಮಹಡಿಯಲ್ಲೇ ಇರುತ್ತದೆ. ಮೊದಲ ಮಹಡಿಯಲ್ಲಿ ರಾಮದರ್ಬಾರ್‌ ಇರಲಿದೆ. ಮೊದಲಿಗೆ ಬಾಲಕರಾಮನ ದರ್ಶನ ಪಡೆದು, ಬಳಿಕ ಭಕ್ತರು ಮೆಟ್ಟಿಲು ಹತ್ತಿಕೊಂಡು ಮೊದಲ ಮಹಡಿಗೆ ಹೋಗಿ ರಾಮ್‌ದರ್ಬಾರ್‌ನ ದರ್ಶನ ಪಡೆಯುತ್ತಾರೆ. 2ನೇ ಮಹಡಿಯಲ್ಲಿ ಯಾವುದೇ ವಿಗ್ರಹ ಪ್ರತಿಷ್ಠಾಪನೆ ಬಗ್ಗೆ ಸದ್ಯಕ್ಕೆ ನಿರ್ಧಾರವಾಗಿಲ್ಲ ಎಂದು ಹೇಳಿದ್ದಾರೆ.

ಟಾಪ್ ನ್ಯೂಸ್

ಪಾತಕಿ ಲಾರೆನ್ಸ್‌ ಜೈಲಿನಲ್ಲಿ-ಮುಂಬೈ ಪೊಲೀಸರಿಗೆ ವಶಕ್ಕೆ ಪಡೆಯಲು ಸಾಧ್ಯವಾಗುತ್ತಿಲ್ಲ ಯಾಕೆ?

ಪಾತಕಿ ಲಾರೆನ್ಸ್‌ ಜೈಲಿನಲ್ಲಿ-ಮುಂಬೈ ಪೊಲೀಸರಿಗೆ ವಶಕ್ಕೆ ಪಡೆಯಲು ಸಾಧ್ಯವಾಗುತ್ತಿಲ್ಲ ಯಾಕೆ?

Bengaluru: Four members of the same family ends their life

Bengaluru: ಆತ್ಮಹತ್ಯೆಗೆ ಶರಣಾದ ಒಂದೇ ಕುಟುಂಬದ ನಾಲ್ವರು!

Bantwal: ಶಾಲಾ ಬಸ್ ಚಾಲನೆ ವೇಳೆ ಚಾಲಕನಿಗೆ ಮೂರ್ಛೆ ರೋಗ… ವಿದ್ಯುತ್ ಕಂಬಕ್ಕೆ ಡಿಕ್ಕಿ

Bantwal: ಶಾಲಾ ಬಸ್ ಚಾಲನೆ ವೇಳೆ ಚಾಲಕನಿಗೆ ಮೂರ್ಛೆ ರೋಗ… ವಿದ್ಯುತ್ ಕಂಬಕ್ಕೆ ಡಿಕ್ಕಿ

55

Bigg Boss Kannada: ಕಿಚ್ಚನ ಬಳಿಕ ಈ ಸ್ಟಾರ್‌ಗಳು ಆಗ್ತಾರಾ ಕಿರುತೆರೆಯ ʼಬಿಗ್‌ ಬಾಸ್‌ʼ..?

Tragedy: ಬಸ್ ಚಾಲನೆ ವೇಳೆ ಚಾಲಕನಿಗೆ ಎದೆ ನೋವು… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರು

Tragedy: ಬಸ್ ಚಾಲನೆ ವೇಳೆ ಚಾಲಕನಿಗೆ ಎದೆ ನೋವು… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರು

Raichur: ಹಳೇ ವೈಷಮ್ಯದಿಂದ ಯುವಕನ ಕೊಲೆ: ಆರೋಪಿಯ ಬಂಧನ

Raichur: ಹಳೇ ವೈಷಮ್ಯದಿಂದ ಯುವಕನ ಕೊಲೆ: ಆರೋಪಿಯ ಬಂಧನ

ಮಾತು ತಪ್ಪಿದ ಸರಕಾರ; ಚುನಾವಣಾ ಬಹಿಷ್ಕಾರಕ್ಕೆ ಮೀನುಗಾರರ ನಿರ್ಧಾರ

Surathkal: ಮಾತು ತಪ್ಪಿದ ಸರಕಾರ; ಚುನಾವಣಾ ಬಹಿಷ್ಕಾರಕ್ಕೆ ಮೀನುಗಾರರ ನಿರ್ಧಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

UP: ದುರ್ಗಾ ವಿಸರ್ಜನೆ ವೇಳೆ ಕೋಮು ಘರ್ಷಣೆ: ಗುಂಡಿನ ದಾಳಿ… ಯುವಕ ಬಲಿ, 30 ಮಂದಿ ಬಂಧನ

UP: ದುರ್ಗಾ ವಿಸರ್ಜನೆ ವೇಳೆ ಕೋಮು ಘರ್ಷಣೆ: ಗುಂಡಿನ ದಾಳಿ… ಯುವಕ ಬಲಿ, 30 ಮಂದಿ ಬಂಧನ

Flight: ಮುಂಬೈಯಿಂದ ನ್ಯೂಯಾರ್ಕ್ ಗೆ ಹೊರಟಿದ್ದ ವಿಮಾನಕ್ಕೆ ಬಾಂಬ್‌ ಬೆದರಿಕೆ…

Flight: ಮುಂಬೈಯಿಂದ ನ್ಯೂಯಾರ್ಕ್ ಗೆ ಹೊರಟಿದ್ದ ವಿಮಾನಕ್ಕೆ ಬಾಂಬ್‌ ಬೆದರಿಕೆ…

1-kkkk

Kumbhamela; ನಕಲಿ ಬಾಬಾಗಳ ಹಾವಳಿ: ಪ್ರಯಾಗ್‌ರಾಜ್‌ನಲ್ಲಿ ಸಾಧುಗಳಿಗೆ ಐಡಿ ಕಾರ್ಡ್‌?

1-himm

Muslims; ಹಿಮಾಚಲ ಸೇಬು ಬಹಿಷ್ಕರಿಸಿ: ಒವೈಸಿ ಪಕ್ಷದ ನಾಯಕನ ವಿವಾದ

arrest-lady

Love; ಒಟ್ಟಿಗಿರಲು ಭಿಕ್ಷುಕನನ್ನು ಸುಟ್ಟು ಪ್ರೇಮಿಗಳ ನಾಟಕ!!: 27 ವರ್ಷದ ಯುವತಿ ಬಂಧನ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

ಪಾತಕಿ ಲಾರೆನ್ಸ್‌ ಜೈಲಿನಲ್ಲಿ-ಮುಂಬೈ ಪೊಲೀಸರಿಗೆ ವಶಕ್ಕೆ ಪಡೆಯಲು ಸಾಧ್ಯವಾಗುತ್ತಿಲ್ಲ ಯಾಕೆ?

ಪಾತಕಿ ಲಾರೆನ್ಸ್‌ ಜೈಲಿನಲ್ಲಿ-ಮುಂಬೈ ಪೊಲೀಸರಿಗೆ ವಶಕ್ಕೆ ಪಡೆಯಲು ಸಾಧ್ಯವಾಗುತ್ತಿಲ್ಲ ಯಾಕೆ?

3

Kinnigoli: ಒಂದೇ ಮಳೆಗೆ ಎದ್ದು ಹೋಯಿತು ಕಾಟಾಚಾರದ ತೇಪೆ!

Bengaluru: Four members of the same family ends their life

Bengaluru: ಆತ್ಮಹತ್ಯೆಗೆ ಶರಣಾದ ಒಂದೇ ಕುಟುಂಬದ ನಾಲ್ವರು!

2(1)

Madantyaru; ಗೇರುಕಟ್ಟೆ ಪ್ರೌಢಶಾಲೆಯ 4 ಕಟ್ಟಡ ಶಿಥಿಲ!

ಲಿಂ. ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ 6ನೇ ಪುಣ್ಯಸ್ಮರಣೆ; ಮರಣವೇ ಮಹಾನವಮಿ ಆಚರಣೆ

Gadag; ಲಿಂ. ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ 6ನೇ ಪುಣ್ಯಸ್ಮರಣೆ; ಮರಣವೇ ಮಹಾನವಮಿ ಆಚರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.