Ramanagara: ಪ್ರಿಯಕರನ ಜತೆ ಸೇರಿ ಇಬ್ಬರು ಎಳೆಯ ಮಕ್ಕಳನ್ನೇ ಕೊಂದ ತಾಯಿ!
Team Udayavani, Oct 14, 2024, 7:24 AM IST
ರಾಮನಗರ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಾರೆಂದು ಪ್ರಿಯಕರನ ಜತೆ ಸೇರಿ ತಾಯಿಯೇ ತನ್ನ 2 ಗಂಡು ಮಕ್ಕಳನ್ನು ಕೊಂದು ಶ್ಮಶಾನದಲ್ಲಿ ಹೂತು ಹಾಕಿದ ಘಟನೆ ನಗರದ ಜಾಲಮಂಗಲ ರಸ್ತೆ ಗೀತಾಮಂದಿರ ಬಡಾವಣೆಯಲ್ಲಿ ನಡೆದಿದೆ.
ಕಬಿಲ (2), ಕಬಿಲನ್ (11 ತಿಂಗಳು) ಹತ್ಯೆಯಾದ ಮಕ್ಕಳು. ತಾಯಿ ಸ್ವೀಟಿ, ಪ್ರಿಯಕರ ಜಾರ್ಜ್ ಫ್ರಾನ್ಸಿಸ್ ಮಕ್ಕಳನ್ನು ಕೊಂದು ಹೂತುಹಾಕಿದ್ದು ಇವರ ವಿರುದ್ಧ ಕ್ರಮಕ್ಕೆ ತಂದೆ ಬೆಂಗಳೂರಿನ ಎ.ಕೆ. ಕಾಲನಿ ನಿವಾಸಿ ಶಿವ ಅವರು ಐಜೂರು ಠಾಣೆಗೆ ದೂರು ನೀಡಿದ್ದಾರೆ.
ಬೆಂಗಳೂರಿನ ಟ್ಯಾನರಿ ರಸ್ತೆ ಎ.ಕೆ. ಕಾಲನಿ ನಿವಾಸಿ ಶಿವ 4 ವರ್ಷಗಳ ಹಿಂದೆ ಅದೇ ಬಡಾವಣೆ ಸ್ವೀಟಿಯನ್ನು ವಿವಾಹವಾಗಿದ್ದ. ಈ ದಂಪತಿಗೆ 2 ಗಂಡು ಮಕ್ಕಳು. ಒಂದೂವರೆ ತಿಂಗಳ ಹಿಂದೆ ಮಕ್ಕಳ ಜತೆ ಸ್ವೀಟಿ ಮನೆ ಬಿಟ್ಟು ಹೋಗಿ ಮತ್ತೆ ಹಿಂದಿರುಗಿ ಬಂದಿದ್ದಳು. ಮಕ್ಕಳನ್ನು ಹಾಸ್ಟೆಲ್ನಲ್ಲಿ ಬಿಟ್ಟಿದ್ದೇನೆ ಎಂದಿದ್ದಳು. ಮತ್ತೆ ಆ. 19ಕ್ಕೆ ಸ್ವೀಟಿ ಮಕ್ಕಳೊಂದಿಗೆ ಮನೆಯಿಂದ ಕಾಣೆಯಾಗಿದ್ದಳು. ಸ್ವೀಟಿಯ ಬ್ಯಾಗ್ನಲ್ಲಿ ಜಾರ್ಜ್ ಫ್ರಾನ್ಸಿಸ್ನ ಆಧಾರ್ ಕಾರ್ಡ್ ಸಿಕ್ಕದ ಹಿನ್ನೆಲೆಯಲ್ಲಿ ಆತನನ್ನು ಸಂಪರ್ಕಿಸಿದಾಗ ಸ್ವೀಟಿಯನ್ನು ಪ್ರೀತಿಸುತ್ತಿರುವುದಾಗಿ ಹೇಳಿದ್ದ. ಈ ಸಂಬಂಧ ಬೆಂಗಳೂರಿನ ಡಿ.ಜೆ.ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು.
ಶ್ಮಶಾನ ಕಾವಲುಗಾರನಿಂದ ಮಾಹಿತಿ
ಶ್ಮಶಾನದ ಕಾವಲುಗಾರನಿಗೆ ನಾವಿಬ್ಬರೂ ಗಂಡ, ಹೆಂಡತಿ, ನಮ್ಮ ಮಕ್ಕಳು ಅನಾರೋಗ್ಯದಿಂದ ಸಾವಿಗೀಡಾಗಿವೆ ಎಂದು ಹೇಳಿ ಅ. 1ರಂದು ಒಂದು ಮಗುವನ್ನು, ಅ. 7ರಂದು ಮತ್ತೂಂದು ಮಗುವನ್ನು ಹೂತಿದ್ದರು. ಅನುಮಾನಗೊಂಡ ಕಾವಲುಗಾರ ಪೊಲೀಸರಿಗೆ ತಿಳಿಸಿದ್ದ. ತನಿಖೆ ಕೈಗೊಂಡ ಪೊಲೀಸರು ಮಕ್ಕಳ ನಿಜವಾದ ತಂದೆಗೆ ಸುದ್ದಿ ತಿಳಿಸಿದ್ದಾರೆ. ಮಗುವಿನ ತಂದೆ ಸ್ಥಳಕ್ಕೆ ಬಂದು ಚಿತ್ರ ವೀಕ್ಷಿಸಿ ಖಚಿತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CM Post: ಅಧಿಕಾರಕ್ಕಾಗಿ ಜೆಡಿಎಸ್ಗೆ ಸಿದ್ದರಾಮಯ್ಯ ದ್ರೋಹ: ಎಚ್.ಡಿ.ಕುಮಾರಸ್ವಾಮಿ
By Polls: ಚನ್ನಪಟ್ಟಣ ಕ್ಷೇತ್ರದಲ್ಲಿ ನಾನೇ ಅಭ್ಯರ್ಥಿ: ಡಿ.ಕೆ. ಶಿವಕುಮಾರ್
Channapatna by-election; ಸ್ಪರ್ಧೆ ಖಚಿತ ಎಂದ ಸಿಪಿ ಯೋಗೇಶ್ವರ್
By-Election: ಚನ್ನಪಟ್ಟಣ ಬಿಟ್ಟುಕೊಡುವ ಒಪ್ಪಂದ ಆಗಿಲ್ಲ: ಎಚ್ಡಿಕೆ
Ramanagara: ದನದ ಕೊಟ್ಟಿಗೆಯಲ್ಲಿ ನೇಣಿಗೆ ಶರಣಾದ ದಂಪತಿ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
ಪಾತಕಿ ಲಾರೆನ್ಸ್ ಜೈಲಿನಲ್ಲಿ-ಮುಂಬೈ ಪೊಲೀಸರಿಗೆ ವಶಕ್ಕೆ ಪಡೆಯಲು ಸಾಧ್ಯವಾಗುತ್ತಿಲ್ಲ ಯಾಕೆ?
Kinnigoli: ಒಂದೇ ಮಳೆಗೆ ಎದ್ದು ಹೋಯಿತು ಕಾಟಾಚಾರದ ತೇಪೆ!
Bengaluru: ಆತ್ಮಹತ್ಯೆಗೆ ಶರಣಾದ ಒಂದೇ ಕುಟುಂಬದ ನಾಲ್ವರು!
Madantyaru; ಗೇರುಕಟ್ಟೆ ಪ್ರೌಢಶಾಲೆಯ 4 ಕಟ್ಟಡ ಶಿಥಿಲ!
Gadag; ಲಿಂ. ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ 6ನೇ ಪುಣ್ಯಸ್ಮರಣೆ; ಮರಣವೇ ಮಹಾನವಮಿ ಆಚರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.