Madantyaru; ಗೇರುಕಟ್ಟೆ ಪ್ರೌಢಶಾಲೆಯ 4 ಕಟ್ಟಡ ಶಿಥಿಲ!

ಅಕ್ಷರ ದಾಸೋಹ, ಕಂಪ್ಯೂಟರ್‌ ಕೊಠಡಿಯಲ್ಲಿ ಪಾಠ ಮಾಡುವ ಸಂದಿಗ್ಧತೆ; ಮುಖ್ಯ ಶಿಕ್ಷಕರ ಕೊಠಡಿಯಲ್ಲಿಯೇ ಅನ್ನ ದಾಸೋಹದ ವಸ್ತುಗಳ ಸಂಗ್ರಹ; ಉತ್ತಮ ಶಿಕ್ಷಣ ನೀಡುವ ಸಂಸ್ಥೆಗೆ ಸರಕಾರ, ಹಳೆ ವಿದ್ಯಾರ್ಥಿಗಳ ಬೆಂಬಲ ಅಗತ್ಯ

Team Udayavani, Oct 14, 2024, 1:02 PM IST

2(1)

ಸೋರುತ್ತಿರುವ ಆರ್‌ಸಿಸಿ ಕಟ್ಟಡ

ಮಡಂತ್ಯಾರು: ಗೇರುಕಟ್ಟೆ ಸಂಯುಕ್ತ ಪದವಿ ಪೂರ್ವ ಕಾಲೇಜು- ಪ್ರೌಢ ಶಾಲೆಯ ಆವರಣದ ತುಂಬ ಶಿಥಿಲ ಕಟ್ಟಡಗಳ ಸಂತೆಯೇ ತುಂಬಿದೆ. ಹೇಳುವುದಕ್ಕೆ ಇಲ್ಲಿ ಅಕ್ಷರದಾಸೋಹ, ಕಂಪ್ಯೂಟರ್‌ ರೂಂ ಸೇರಿ ಏಳೆಂಟು ಕಟ್ಟಡಗಳಿವೆ. ಆದರೆ, ಅವುಗಳ ಪೈಕಿ ನಾಲ್ಕು ಕಟ್ಟಡಗಳು ಶಿಥಿಲಗೊಂಡು ಬೀಳುವ ಸ್ಥಿತಿಯಲ್ಲಿವೆ. ಆದರೆ ಅವುಗಳನ್ನು ಕೆಡವಲೂ ಇಲ್ಲ, ಹೊಸ ಕಟ್ಟಡ ರಚನೆಗೂ ಮನಸು ಮಾಡಿಲ್ಲ. ಕೊನೆಗೆ, ಸರಿ ಮಾಡಬಹುದಾದ ಆರ್‌ಸಿಸಿ ಕಟ್ಟಡವನ್ನು ರಿಪೇರಿ ಕೂಡಾ ಮಾಡಿಲ್ಲ.

3 ದೊಡ್ಡ ಕಟ್ಟಡ ಅಪಾಯದಲ್ಲಿ
30 ವರ್ಷಗಳ ಹಿಂದೆ ನಿರ್ಮಾಣವಾದ ಮೂರು ದೊಡ್ಡ ಹಂಚಿನ ಮಾಡಿನ ಕಟ್ಟಡಗಳು ಶಿಥಿಲಾವಸ್ಥೆ ತಲುಪಿದೆ. ಮೇಲ್ಛಾವಣಿ ಕುಸಿತ, ಗೋಡೆ ಬಿರುಕಿನ ಕಾರಣಕ್ಕಾಗಿ ಈ ಕಟ್ಟಡದಲ್ಲಿ ಕ್ಲಾಸುಗಳನ್ನು ಮಾಡದೆ ಐದಾರು ವರ್ಷ ಸಂದಿದೆ. ಶಿಥಿಲವಾದ ಕಟ್ಟಡ ಕೆಡವಲು ಜಿಲ್ಲಾ ಪಂಚಾಯತ್‌ನಿಂದ ಅನುಮತಿ ದೊರಕಿತ್ತು. ಆದರೆ, ಕೆಡವಿಲ್ಲ. ಶಿಥಿಲವಾದ ಕಟ್ಟಡದ ಪಕ್ಕದಲ್ಲಿ ಮಕ್ಕಳು ಓಡಾಡದಂತೆ ಹಗ್ಗ ಕಟ್ಟಲಾಗಿದೆ.

ನೀರು ಜಿನುಗುವ ಹೊಸ ಕಟ್ಟಡ
ಇನ್ನು 15 ವರ್ಷಗಳ ಹಿಂದೆ ನಿರ್ಮಾಣವಾದ ಹೊಸ ಆರ್‌ಸಿಸಿ ಕಟ್ಟಡ ಕಳೆದ ಕೆಲವು ವರ್ಷಗಳಿಂದ ಸೋರಲು ಶುರುವಾಗಿದೆ. ಕಟ್ಟಡದ ಎರಡು ಕೋಣೆಗಳಲ್ಲಿ ಮಳೆಗಾಲದಲ್ಲಿ ನೀರು ಜಿನುಗುತ್ತಿರುತ್ತದೆ. ಒಳಗೆ ಮತ್ತು ಜಗಲಿಯಲ್ಲಿ ನೀರೋ ನೀರು. ಕಟ್ಟಡ ಶಿಥಿಲವಾದ ಹಿನ್ನೆಲೆಯಲ್ಲಿ ಈಗ ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸುತ್ತಿಲ್ಲ. ಮೂರು ವರ್ಷದ ಹಿಂದೆ ಇದಕ್ಕೆ ಬೀಗ ಬಿದ್ದಿದೆ.

ಹಳೆಯ ಕಟ್ಟಡ ಕೆಡವಿ, ಸಾಧ್ಯವಾಗುವುದಾದರೆ ಆರ್‌ಸಿಸಿ ಕಟ್ಟಡ ದುರಸ್ತಿ ಮಾಡಿ, ಹೊಸ ಕಟ್ಟಡ ನಿರ್ಮಿಸಿ ಕೊಡಿ. ಹೇಗಾದರೂ ಮಕ್ಕಳ ಅಗತ್ಯಕ್ಕೆ ಸ್ಪಂದಿಸಿ ಎನ್ನುವುದು ಊರಿನ ನಾಗರಿಕರು, ಮಕ್ಕಳು ಮತ್ತು ಪೋಷಕರ ಆಗ್ರಹ.

ಶಿಥಿಲಗೊಂಡಿರವ ಹಂಚಿನ ಮಾಡಿನ ಕಟ್ಟಡ.

ಈಗ ಕೊಠಡಿಗಳಿಲ್ಲದೆ ಸಮಸ್ಯೆ

  • ಎಲ್ಲ ಕಟ್ಟಡಗಳು ಶಿಥಿಲವಾಗಿರುವುದರಿಂದ ಮಕ್ಕಳಿಗೆ ಪಾಠ ಕೇಳಲು ಜಾಗವೇ ಇಲ್ಲದಂತಾಗಿದೆ.
  • ಕಂಪ್ಯೂಟರ್‌ ಕೊಠಡಿ ಎಂದು ಆರಂಭಿಸಲಾದ ಕಟ್ಟಡದಲ್ಲಿ 8ನೇ ತರಗತಿ ನಡೆಯುತ್ತಿದೆ.
  • 2015ರಲ್ಲಿ ನಿರ್ಮಾಣದ ಮಕ್ಕಳ ಅನ್ನಪೂರ್ಣ ಕೊಠಡಿಯಲ್ಲಿ 9ನೇ ತರಗತಿಯ ಸುಮಾರು 85 ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ.
  • ಮುಖ್ಯ ಶಿಕ್ಷಕರ ಕೊಠಡಿಯಲ್ಲಿಯೇ ಅನ್ನ ದಾಸೋಹದ ವಸ್ತುಗಳನ್ನು ಸಂಗ್ರಹಿಸಿ ಇಡಲಾಗಿದೆ.
  • ಮುಖ್ಯ ಶಿಕ್ಷಕರಿಗೆ, ಸಹ ಶಿಕ್ಷಕರಿಗೆ ಕುಳಿತುಕೊಳ್ಳಲು ಕೊಠಡಿ ಹಾಗೂ ಸಿಬಂದಿಗೆ ಶೌಚಾಲಯ ಬೇಕಾಗಿದೆ.
  • ಮಕ್ಕಳ ಪೋಷಕರ ಸಭೆ ಮತ್ತು ಶಾಲೆಯಲ್ಲಿ ನಡೆಯುವ ಇನ್ನಿತರ ಕಾರ್ಯಕ್ರಮಗಳಿಗಂತೂ ಜಾಗವೇ ಇಲ್ಲ.

ಉತ್ತಮ ಫ‌ಲಿತಾಂಶದ ಶಾಲೆ
ಈ ಪಿಯು – ಹೈಸ್ಕೂಲಿನಲ್ಲಿ ಈ ವರ್ಷ 196 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಕಳೆದ ವರ್ಷಕ್ಕಿಂತ ಈ ಸಂಖ್ಯೆ ಹೆಚ್ಚಾಗಿದೆ. ಅಂದರೆ ಗ್ರಾಮೀಣ ಭಾಗದ ಶಾಲೆಯ ಜನಪ್ರಿಯತೆ ಹೆಚ್ಚಾಗಿದೆ. 2023-24 ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇಕಡಾ 98.28 ಫಲಿತಾಂಶ ಬಂದಿದೆ. ಗ್ರಾಮೀಣ ಪ್ರದೇಶದಲ್ಲಿದ್ದರೂ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡಿದೆ. ಇಂಥ ಶಾಲೆಗೆ ತರಗತಿ ಕಟ್ಟಡಗಳ ಕೊರತೆ ಇದೆ. ಅದರ ಜತೆಗೆ ಶಿಕ್ಷಕರ ಕೊರತೆಯೂ ಕಾಡುತ್ತಿದೆ.

ಶಿಥಿಲ ಕಟ್ಟಡಗಳಿಂದ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ಆಗದಂತೆ ತತ್‌ಕ್ಷಣ ತೆರವು ಮಾಡಲು ಇಲಾಖೆಯೊಂದಿಗೆ ಮಾತುಕತೆ ನಡೆಸುತ್ತೇವೆ. ಕಟ್ಟಡ ದುರಸ್ತಿಗೆ ಗ್ರಾಮ ಪಂಚಾಯತ್‌ ಸಹಕಾರ ನೀಡುತ್ತಿದೆ.
-ಸಂತೋಷ್‌ ಪಾಟೀಲ ಎಸ್‌.,ಪಿಡಿಒ, ಕಳಿಯ ಗ್ರಾಪಂ

ಹಳೆ ವಿದ್ಯಾರ್ಥಿಗಳೇ ನೀವೂ ನೆರವು ಕೊಡಿ
ಶಾಲೆಯ ಸಣ್ಣಪುಟ್ಟ ಸಮಸ್ಯೆಗಳಿಗೆ ಪೋಷಕರು, ಕಳಿಯ ಗ್ರಾಪಂ, ವಿದ್ಯಾಭಿಮಾನಿಗಳು ಸಹಕಾರ ನೀಡುತ್ತಾರೆ. ಈ ವರ್ಷ ಇನ್ನೂ ಶಾಲಾ ಮೇಲುಸ್ತುವಾರಿ ಸಮಿತಿಯೇ ರಚನೆ ಆಗಿಲ್ಲ. ಉದ್ಯೋಗದಲ್ಲಿರುವ, ಹೊರದೇಶಗಳಲ್ಲಿರುವ ಹಳೆಯ ವಿದ್ಯಾರ್ಥಿಗಳು, ಸಂಘ -ಸಂಸ್ಥೆ, ಶಿಕ್ಷಣ ಪ್ರೇಮಿಗಳು ಜನಪ್ರತಿನಿಧಿಗಳ ಸಹಕಾರದಿಂದ ಶಾಲೆಯ ಸಮಸ್ಯೆಗಳನ್ನು ನಿವಾರಿಸಲು ಸಾಧ್ಯ ಎನ್ನುತ್ತಾರೆ ಉಪಪ್ರಾಂಶುಪಾಲೆ ಈಶ್ವರಿ ಕೆ.

ರಿಪೇರಿ ಮಾಡಿದರೆ ಜಾಗ ಸಿಕ್ಕೀತು
ಆರ್‌ಸಿಸಿ ಕಟ್ಟಡವನ್ನು ರಿಪೇರಿ ಮಾಡಿಸಿದರೆ ಮಳೆಗಾಲ ಹೊರತಾದ ಸಮಯದಲ್ಲಾದರೂ ಬಳಸಬಹುದು. ಮೂರು ವರ್ಷದ ಹಿಂದೆ ಮುಚ್ಚಿದ ಕೊಠಡಿ ದುರಸ್ತಿ ಮಾಡಿದರೆ ರಾಷ್ಟ್ರೀಯ ಶಿಕ್ಷಣ ನೀತಿಯಡಿಯಲ್ಲಿ ರೂಪಿಸಿರುವ ವೃತ್ತಿಶಿಕ್ಷಣಕ್ಕೆ ಬದಲಾದ ವಿಶೇಷ ಹಿಂದಿ ತರಗತಿ ಮಾಡಬಹುದು. ಐ.ಟಿ.ಐ. ಆಟೋಮೊಬೈಲ್‌ಗೆ ಸಂಬಂಧಿಸಿದ ಉಪಕರಣಗಳನ್ನು ಸಂಗ್ರಹಿಸಲು ಅನುಕೂಲವಾಗುತ್ತದೆ ಎಂದು ಮೇಲುಸ್ತುವಾರಿ ಸಮಿತಿ, ಪೋಷಕರ ಮತ್ತು ಶಿಕ್ಷಕರ ಅಭಿಪ್ರಾಯ.

-ಕೆ.ಎನ್‌. ಗೌಡ, ಗೇರುಕಟ್ಟೆ

ಟಾಪ್ ನ್ಯೂಸ್

Ballari-Cm

Ballari: ಸರಕಾರದ ಬಳಿ ಹಣವಿಲ್ಲವೆಂದು ಬಿಜೆಪಿಯ ಪೆದ್ದ ಶಿಖಾಮಣಿಗಳಿಂದಷ್ಟೇ ಅಪಪ್ರಚಾರ: ಸಿಎಂ

Belagavi: ಪಂಚಮಸಾಲಿ ಮೀಸಲಾತಿ ಚರ್ಚೆಗೆ ಸಭೆ ನಿಗದಿ ಮಾಡದ ಸಿಎಂ ವಿರುದ್ದ ಸ್ವಾಮೀಜಿ ಆಕ್ರೋಶ

0004

Renukaswamy Case; ದರ್ಶನ್,ಪವಿತ್ರಾ ಗೌಡ ಜಾಮೀನು ಅರ್ಜಿ ವಜಾ: ಜೈಲೇ ಗತಿ

Bantwal: ಮೊಡಂಕಾಪು ಶ್ರೀ ವನದುರ್ಗೆ ದೇವಸ್ಥಾನಕ್ಕೆ ಭೇಟಿ ನೀಡಿದ ನಟ ಶಿವಣ್ಣ ದಂಪತಿ

Bantwal: ಮೊಡಂಕಾಪು ಶ್ರೀ ವನದುರ್ಗೆ ದೇವಸ್ಥಾನಕ್ಕೆ ಭೇಟಿ ನೀಡಿದ ನಟ ಶಿವಣ್ಣ ದಂಪತಿ

Kambala: ನ. 27ಕ್ಕೆ ಶಿರ್ವ ನಡಿಬೆಟ್ಟು ಸೂರ್ಯ -ಚಂದ್ರ ಜೋಡುಕೆರೆ ಕಂಬಳ

Kambala: ನ. 27ಕ್ಕೆ ಶಿರ್ವ ನಡಿಬೆಟ್ಟು ಸೂರ್ಯ -ಚಂದ್ರ ಜೋಡುಕೆರೆ ಕಂಬಳ

Uddhav Thackeray: ಮಾಜಿ ಸಿಎಂ, ಶಿವಸೇನಾ ನಾಯಕ ಉದ್ಧವ್ ಠಾಕ್ರೆ ಆಸ್ಪತ್ರೆಗೆ ದಾಖಲು

Uddhav Thackeray: ಮಾಜಿ ಸಿಎಂ, ಶಿವಸೇನಾ ನಾಯಕ ಉದ್ಧವ್ ಠಾಕ್ರೆ ಆಸ್ಪತ್ರೆಗೆ ದಾಖಲು

1-munna-bg

Lawrence Bishnoi; ಗ್ಯಾಂಗ್ ನ ಹಿಟ್ ಲಿಸ್ಟ್ ನಲ್ಲಿ ಖ್ಯಾತ ಕಾಮಿಡಿಯನ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bantwal: ಮೊಡಂಕಾಪು ಶ್ರೀ ವನದುರ್ಗೆ ದೇವಸ್ಥಾನಕ್ಕೆ ಭೇಟಿ ನೀಡಿದ ನಟ ಶಿವಣ್ಣ ದಂಪತಿ

Bantwal: ಮೊಡಂಕಾಪು ಶ್ರೀ ವನದುರ್ಗೆ ದೇವಸ್ಥಾನಕ್ಕೆ ಭೇಟಿ ನೀಡಿದ ನಟ ಶಿವಣ್ಣ ದಂಪತಿ

Bantwal: ರೈಲು ಡಿಕ್ಕಿ ಹೊಡೆದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ…

Bantwal: ರೈಲು ಡಿಕ್ಕಿ ಹೊಡೆದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ…

Bantwal: ಶಾಲಾ ಬಸ್ ಚಾಲನೆ ವೇಳೆ ಚಾಲಕನಿಗೆ ಮೂರ್ಛೆ ರೋಗ… ವಿದ್ಯುತ್ ಕಂಬಕ್ಕೆ ಡಿಕ್ಕಿ

Bantwal: ಶಾಲಾ ಬಸ್ ಚಾಲನೆ ವೇಳೆ ಚಾಲಕನಿಗೆ ಮೂರ್ಛೆ ರೋಗ… ವಿದ್ಯುತ್ ಕಂಬಕ್ಕೆ ಡಿಕ್ಕಿ

Tragedy: ಬಸ್ ಚಾಲನೆ ವೇಳೆ ಚಾಲಕನಿಗೆ ಎದೆ ನೋವು… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರು

Tragedy: ಬಸ್ ಚಾಲನೆ ವೇಳೆ ಚಾಲಕನಿಗೆ ಎದೆ ನೋವು… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರು

Punjalkatte: ನಿಯಂತ್ರಣ ತಪ್ಪಿ ಉರುಳಿಬಿದ್ದ ಕಾರು; ಮಹಿಳೆ ಸಾವು

Punjalkatte: ನಿಯಂತ್ರಣ ತಪ್ಪಿ ಉರುಳಿಬಿದ್ದ ಕಾರು; ಮಹಿಳೆ ಸಾವು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Abhimanyu Son of Kashinath movie

Abhimanyu Son of Kashinath; ಕಾಶೀನಾಥ್‌ ಮಗನ ಹೊಸ ಸಿನಿಮಾ

Ballari-Cm

Ballari: ಸರಕಾರದ ಬಳಿ ಹಣವಿಲ್ಲವೆಂದು ಬಿಜೆಪಿಯ ಪೆದ್ದ ಶಿಖಾಮಣಿಗಳಿಂದಷ್ಟೇ ಅಪಪ್ರಚಾರ: ಸಿಎಂ

Belagavi: ಪಂಚಮಸಾಲಿ ಮೀಸಲಾತಿ ಚರ್ಚೆಗೆ ಸಭೆ ನಿಗದಿ ಮಾಡದ ಸಿಎಂ ವಿರುದ್ದ ಸ್ವಾಮೀಜಿ ಆಕ್ರೋಶ

0004

Renukaswamy Case; ದರ್ಶನ್,ಪವಿತ್ರಾ ಗೌಡ ಜಾಮೀನು ಅರ್ಜಿ ವಜಾ: ಜೈಲೇ ಗತಿ

Bantwal: ಮೊಡಂಕಾಪು ಶ್ರೀ ವನದುರ್ಗೆ ದೇವಸ್ಥಾನಕ್ಕೆ ಭೇಟಿ ನೀಡಿದ ನಟ ಶಿವಣ್ಣ ದಂಪತಿ

Bantwal: ಮೊಡಂಕಾಪು ಶ್ರೀ ವನದುರ್ಗೆ ದೇವಸ್ಥಾನಕ್ಕೆ ಭೇಟಿ ನೀಡಿದ ನಟ ಶಿವಣ್ಣ ದಂಪತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.