BBK11: 1 ರಿಂದ 11 ಸೀಸನ್ಸ್.. ಬಿಗ್ಬಾಸ್ ನಿರೂಪಣೆಗೆ ಕಿಚ್ಚ ಪಡೆದ ಸಂಭಾವನೆ ಎಷ್ಟು?
Team Udayavani, Oct 14, 2024, 3:34 PM IST
ಬೆಂಗಳೂರು: ಬಿಗ್ ಬಾಸ್ ಸೀಸನ್ -11(Bigg Boss Kannada-11) ಯಶಸ್ವಿಯಾಗಿ ಸಾಗುತ್ತಿರುವ ಬೆನ್ನಲ್ಲೇ ಕಿಚ್ಚ ಸುದೀಪ್ (Kiccha Sudeep) ಇದು ತನ್ನ ಕೊನೆಯ ಸೀಸನ್ ಎಂದು ಟ್ವೀಟ್ ಮಾಡಿದ ಬಳಿಕ ವೀಕ್ಷಕರು ಶಾಕ್ ಆಗಿದ್ದಾರೆ.
ಬಿಗ್ ಬಾಸ್ನಲ್ಲಿ ಯಾವುದೇ ಸ್ಪರ್ಧಿಗಳಿರಲಿ, ವಾರಪೂರ್ತಿ ದೊಡ್ಮನೆಯೊಳಗೆ ಏನೇ ಆಗಿರಲಿ ವೀಕ್ಷಕರು ಮಾತ್ರ ಶನಿವಾರ – ಭಾನುವಾರ ಬರುವ ಕಿಚ್ಚನ ಪಂಚಾಯ್ತಿ ನೋಡುವುದನ್ನು ಮಾತ್ರ ಮಿಸ್ ಮಾಡಲ್ಲ. ಕಳೆದ 10 ಸೀಸನ್ನಿಂದ ಕಿಚ್ಚ ಕಿರುತೆರೆಯಲ್ಲಿ ʼಬಿಗ್ ಬಾಸ್ʼ ಆಗಿಯೇ ವೀಕ್ಷಕರ ಪ್ರೀತಿ – ಪ್ರೋತ್ಸಾಹವನ್ನು ಗಳಿಸಿದ್ದಾರೆ.
ಇದನ್ನೂ ಓದಿ: Bigg Boss Kannada: ಕಿಚ್ಚನ ಬಳಿಕ ಈ ಸ್ಟಾರ್ಗಳು ಆಗ್ತಾರಾ ಕಿರುತೆರೆಯ ʼಬಿಗ್ ಬಾಸ್ʼ..?
2013ರಲ್ಲಿ ಆರಂಭವಾದ ಬಿಗ್ ಬಾಸ್ ಸೀಸನ್ -11ರವರೆಗೂ ಯಶಸ್ವಿಯಾಗಿ ಸಾಗಿ ಬಂದಿರುವುದರ ಹಿಂದೆ ಕಿಚ್ಚ ಸುದೀಪ್ ಅವರ ನಿರೂಪಣೆಯೂ ಒಂದು ಕಾರಣವೆಂದರೆ ತಪ್ಪಾಗದು.
ಸೀಸನ್ ಗಳು ಮುಂದುವರೆದಂತೆ ಬಿಗ್ ಬಾಸ್ ಟಿಆರ್ಪಿ ಕೂಡ ಭರ್ಜರಿಯಾಗಿ ಸದ್ದು ಮಾಡಿವೆ. ಮೊನ್ನೆ ಮೊನ್ನೆ ಬಂದ ಬಿಗ್ ಬಾಸ್ ಸೀಸನ್ -11ಗೂ ಉತ್ತಮ ಟಿಆರ್ ಪಿ ಬಂದಿದೆ.
ಬಿಗ್ಬಾಸ್ ನಡೆಸಿಕೊಡಲು ಕಿಚ್ಚ ಎಷ್ಟು ಸಂಭಾವನೆ ಪಡೆಯುತ್ತಿದ್ದರು ಎನ್ನುವುದರ ಬಗ್ಗೆ ಮಾಹಿತಿಯೊಂದು ರಿವೀಲ್ ಆಗಿದೆ.
ಮೊದಲ 5 ಬಿಗ್ ಬಾಸ್ ಸೀಸನ್ಗಳಿಗಾಗಿ ಕಿಚ್ಚ ಒಟ್ಟಿಗೆಯೇ ಒಪ್ಪಂದ ಮಾಡಿಕೊಂಡಿದ್ದರು. ಅದಕ್ಕಾಗಿ 20 ಕೋಟಿ ರೂ. ಸಂಭಾವನೆ ಪಡೆದಿದ್ದರು. ಅಂದರೆ ಪ್ರತಿ ಸೀಸನ್ಗೆ 4 ಕೋಟಿ ರೂ.ಯಂತೆ ಸಂಭಾವನೆ ಪಡೆಯುತ್ತಿದ್ದರು ಎನ್ನಲಾಗಿದೆ. ಅಲ್ಲಿಂದ ಮುಂದೆ ಬಂದ ಸೀಸನ್ಗೆ ಕಿಚ್ಚನ ವ್ಯಾಲ್ಯೂಕ್ಕೆ ತಕ್ಕಂತೆ ಅವರ ಸಂಭಾವನೆಯೂ ಹೆಚ್ಚಾಗುತ್ತಾ ಬಂತು.
ಸದ್ಯ ನಡೆಯುತ್ತಿರುವ 11ನೇ ಸೀಸನ್ ನಿರೂಪಣೆ ಮಾಡಲು ಕಿಚ್ಚ ಸುದೀಪ್ 8 ಕೋಟಿ ರೂ. ಸಂಭಾವನೆ ಪಡೆದಿರುವುದಾಗಿ ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ವಾಹಿನಿ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿಯಿಲ್ಲ.
ಬಿಗ್ ಬಾಸ್ ಶೋ ಆರಂಭವಾದಾಗ ಪತ್ರಕರ್ತರೊಬ್ಬರು ಸಂಭಾವನೆ ಬಗ್ಗೆ ಪ್ರಶ್ನೆಯೊಂದನ್ನು ಕೇಳಲಾಗಿತ್ತು. ಆದರೆ ಇದಕ್ಕೆ ಕಿಚ್ಚ ನೇರವಾಗಿ ಉತ್ತರಿಸದೆ, ಜಾಣ್ಮೆಯಿಂದ ಪ್ರತಿಕ್ರಿಯೆ ನೀಡಿದ್ದರು.
ಬಿಗ್ ಬಾಸ್ ಗೆ ಆಯಾ ಭಾಷೆಯಲ್ಲಿ ಅಪಾರ ವೀಕ್ಷಕರಿದ್ದಾರೆ. ಸಾಮಾನ್ಯವಾಗಿ ಸ್ಟಾರ್ ನಟರೇ ಬಿಗ್ ಬಾಸ್ ನಡೆಸಿಕೊಡುತ್ತಾರೆ. ಅವರು ಪ್ರತಿ ಸೀಸನ್ಗೆ ತನ್ನ ಸಂಭಾವನೆಯನ್ನು ಹೆಚ್ಚಿಸಿಕೊಳ್ಳುತ್ತಾರೆ.
ಸದ್ಯ ಬಿಗ್ ಬಾಸ್ 11ರ ಬಳಿಕ ದೊಡ್ಮನೆ ಆಟಕ್ಕೆ ಯಾರು ನಿರೂಪಕರಾಗುತ್ತಾರೆ ಅಗುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರ ಹುಡುಕುವಲ್ಲಿ ವೀಕ್ಷಕರು ನಿರತರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bigg Boss Kannada: ಕಿಚ್ಚನ ಬಳಿಕ ಈ ಸ್ಟಾರ್ಗಳು ಆಗ್ತಾರಾ ಕಿರುತೆರೆಯ ʼಬಿಗ್ ಬಾಸ್ʼ..?
BBK11: ಇಡೀ ಬಿಗ್ ಬಾಸ್ ಮನೆಗೆ ಆತಂಕ ತಂದ ಆ ಒಂದು ಕರೆ… ಮಾಡಿದ್ಯಾರು…?
BBK11: ಬಿಗ್ ಬಾಸ್ ನಿರೂಪಣೆಗೆ ಕಿಚ್ಚ ಗುಡ್ ಬೈ.. ಫ್ಯಾನ್ಸ್ ಶಾಕ್
BBK11: ಬಿಗ್ಬಾಸ್ ಕಾರ್ಯಕ್ರಮಕ್ಕೆ ಶಾಕ್ ನೀಡಿದ ಪೊಲೀಸರು; ಆಗಿದ್ದೇನು?
BBK11: ಈ ವಾರ ಮನೆಯಿಂದ ಯಾರು ಹೋಗಲ್ಲ.. ಕಾರಣವೇನು?
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Darshan ಅಭಿಮಾನಿಗಳಿಂದಾಗಿ ಶ್ರವಣ ಶಕ್ತಿ ಕಳೆದುಕೊಂಡೆ: ಡಾ. ಗೊ.ರು.ಚನ್ನಬಸಪ್ಪ
Rain Alert: ರಾಜ್ಯದ 18 ಜಿಲ್ಲೆಗಳಲ್ಲಿ ಅ.17ರವರೆಗೆ ಭಾರೀ ಮಳೆ ಸಾಧ್ಯತೆ
Gambhir; ಕೊಹ್ಲಿಗೆ ರನ್ ಗಳಿಸುವ ಹಸಿವಿದೆ, ಪ್ರತಿ ಪಂದ್ಯದ ಬಳಿಕ ತೀರ್ಪು ಅಗತ್ಯವಿಲ್ಲ
Sweet Recipes: ನಾಲಿಗೆ ಚಪ್ಪರಿಸುವ ರಸಭರಿತ ಗರಿಗರಿ ಜಿಲೇಬಿ… ಇಲ್ಲಿದೆ ಸುಲಭ ವಿಧಾನ
Basangouda Patil Yatnal: ಫಸ್ಟ್ ಲೈನ್ ನಾಯಕರ ಆಸ್ತಿ ಬಗ್ಗೆ ತನಿಖೆ ಆಗಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.