Santhekatte: ಪರ್ಯಾಯ ರಸ್ತೆಯೂ ಸಮಸ್ಯೆಗಳ ಆಗರ

ಓವರ್‌ಪಾಸ್‌ ಕಾಮಗಾರಿ ಅವಾಂತರ: ಸ್ಥಳೀಯರ ಸಂಚಾರಕ್ಕೆ ರೂಪಿಸಿದ ರಸ್ತೆಯಲ್ಲೂ ಹತ್ತಾರು ಕಿರಿಕಿರಿ; ರವಿವಾರದ ಸಂತೆ ಮಧ್ಯೆ ಓಡಾಡಬೇಕು; ಇಳಿಜಾರು ರಸ್ತೆಯಲ್ಲಿ ಹೊಂಡ, ಗುಂಡಿ; ಟ್ರಾಫಿಕ್‌ ಜಾಮ್‌

Team Udayavani, Oct 14, 2024, 3:52 PM IST

8(1)

ಉಡುಪಿ: ಸಂತಕಟ್ಟೆಯ ಓವರ್‌ಪಾಸ್‌ ಕಾಮಗಾರಿಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡುವುದೇ ಯಮಯಾತನೆಯಾಗಿದೆ. ಇದರ ನಡುವೆ ಸ್ಥಳೀಯರ ಸಂಚಾರಕ್ಕಾಗಿ ರೂಪಿಸಿರುವ ಪರ್ಯಾಯ ರಸ್ತೆಯೂ ಸಮಸ್ಯೆಯ ಆಗರವಾಗಿದೆ.

ಉಡುಪಿಯಿಂದ ಬ್ರಹ್ಮಾವರ ಕಡೆ ಹೋಗು ವವರಿಗೆ ಹಾಗೂ ನೇಜಾರು, ಕೆಮ್ಮಣ್ಣು, ಮಲ್ಪೆ, ಹೂಡೆ ಮೊದಲಾದ ಭಾಗದವರು ಕಲ್ಯಾಣಪುರ ಮೂಲಕವಾಗಿ ಬ್ರಹ್ಮಾವರ ಕಡೆಗೆ ಹೋಗಲು ಪರ್ಯಾಯ ರಸ್ತೆಯೊಂದನ್ನು ಸೂಚಿಸಲಾಗಿದೆ. ಆದರೆ ಆ ರಸ್ತೆ ಮಾತ್ರ ಸಂಚಾರ ಯೋಗ್ಯವಾಗಿಲ್ಲ. ಅಷ್ಟು ಮಾತ್ರವಲ್ಲದೆ ರವಿವಾರ ಸಂತೆ ಮಧ್ಯದಲ್ಲೇ ಸಂಚಾರ ಮಾಡಬೇಕಾದ ಸ್ಥಿತಿಯೂ ಇದೆ.

ಕಲ್ಯಾಣಪುರದಿಂದ ಸಂತೆ ಮಾರುಕಟ್ಟೆ ಪ್ರಾಂಗಣದ ಸಮೀಪದಲ್ಲೇ ಸಂಚಾರಿ ಇಳಿಜಾರಿನ ರಸ್ತೆಯಲ್ಲಿ ಹೆದ್ದಾರಿಗೆ ಸಂಪರ್ಕಿಸಬೇಕಾಗಿದೆ. ಸ್ಥಳೀಯರಿಗೆ ಈ ರಸ್ತೆ ಬಿಟ್ಟು ಬೇರೆ ಮಾರ್ಗವಿಲ್ಲ. ಉಡುಪಿಯಿಂದ ಬ್ರಹ್ಮಾವರಕ್ಕೆ ಹೋಗುವ ಸರ್ವಿಸ್‌ ರಸ್ತೆಯಲ್ಲಿ ಸಂತೆಕಟೆಯಿಂದ ವಾಪಸ್‌ ಬಂದು ರೋಬೋಸಾಫ್ಟ್ ಎದುರುಗಡೆಯಲ್ಲಿ ಎಡಕ್ಕೆ ತಿರುವು ಪಡೆದು ರಾ.ಹೆ.ಗೆ ಬಂದು ಓವರ್‌ಪಾಸ್‌ ಕೆಳಗಡೆ ಗುಂಡಿಯ ಮೂಲಕವೇ ಬ್ರಹ್ಮಾವರದ ಕಡೆಗೆ ಸಾಗಬೇಕಾಗಿದೆ.

ಪ್ರತೀ ರವಿವಾರ ಸಂತೆಕಟ್ಟೆಯಲ್ಲಿ ಸಂತೆ ನಡೆಯುತ್ತದೆ. ಇದೀಗ ಓವರ್‌ಪಾಸ್‌ ಕಾಮಗಾರಿ ನಡೆಯುತ್ತಿರುವುದರಿಂದ ಸಂತೆಕಟ್ಟೆ ಸಂತೆ ಪ್ರಾಂಗಣದ ರಸ್ತೆಯನ್ನು ವಾಹನ ಸಂಚಾರಕ್ಕೆ ಪರ್ಯಾಯ ರಸ್ತೆಯಾಗಿ ಗುರುತಿಸಿರುವುದರಿಂದ ಬಹುತೇಕ ಸ್ಥಳೀಯ ವಾಹನಗಳು ಇದೇ ಮಾರ್ಗದಲ್ಲಿ ಸಂಚಾರ ಮಾಡುತ್ತಿವೆ. ರವಿವಾರ ಸಂತೆ ಇರುವುದರಿಂದ ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೂ ಟ್ರಾಫಿಕ್‌ ಜಾಮ್‌ ಆಗಿರುತ್ತದೆ. ಮಾರುಕಟ್ಟೆ ಪ್ರಾಂಗಣ ಹೊರತುಪಡಿಸಿ ರಸ್ತೆ ಬದಿಯಲ್ಲೂ ಹಣ್ಣು ತರಕಾರಿ ಸಹಿತ ಬಗೆಬಗೆಯ ವಸ್ತುಗಳನ್ನು ಇಟ್ಟು ಮಾರಾಟ ಮಾಡಲಾಗುತ್ತದೆ. ನಿರಂತರ ವಾಹನ ಸಂಚಾರವೂ ನಡೆಯುತ್ತಿರುವುದರಿಂದ ಸಂತೆಗೆ ಹೋಗುವವರಿಗೂ ಮತ್ತು ವಾಹನ ಸವಾರರಿಗೂ ಸಮಸ್ಯೆಯಾಗುತ್ತಿದೆ.

ಅಪಾಯಕಾರಿ ಇಳಿಜಾರು, ಹೊಂಡ-ಗುಂಡಿ!
ಸಂತೆಕಟ್ಟೆ ಪ್ರಾಂಗಣದಿಂದ ಮುಂದೆ ರಸ್ತೆ ಸಂಪೂರ್ಣ ಇಳಿಜಾರು ಇರುವುದರಿಂದಲೇ ಅಪಾಯ ಹೆಚ್ಚಿದೆ. ಇದರ ಜತೆಗೆ ರಸ್ತೆ ಡಾಮರು ಅಥವಾ ಕಾಂಕ್ರೀಟ್‌ ಕೂಡ ಇಲ್ಲ. ಬೃಹದಾಕಾರದ ಗುಂಡಿಗಳು ಬಿದ್ದಿರುವುದರಿಂದ ಮಳೆ ಬಂದರೆ ಸಂಪೂರ್ಣ ಕೆಸರುಮಯವಾಗಿರುತ್ತದೆ. ಎರಡು ಇಕ್ಕೆಲಗಳಲ್ಲಿ ಹುಲ್ಲಿನ ಪೊದೆ ಬೆಳೆದಿರುವುದರಿಂದ ಆಯ ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿ.

ಕನಿಷ್ಠ ಸೌಲಭ್ಯ ಒದಗಿಸಿ: ಜನರ ಆಗ್ರಹ
ಪರ್ಯಾಯ ರಸ್ತೆ ಎಂದು ಸೂಚಿಸಿರುವುದರಿಂದ ಕನಿಷ್ಠ ವಾಹನ ಸಂಚಾರ ಯೋಗ್ಯವಾಗಿಸಬೇಕು. ಈ ರಸ್ತೆಯಲ್ಲಿ ವಾಹನ ಸಂಚಾರವೇ ಕಷ್ಟವಾಗಿದೆ. ಅಪಾಯ ಕಾರಿ ಗುಂಡಿಗಳು ಇವೆ. ತೇಪೆ ಹಚ್ಚಲು ವೆಟ್‌ಮಿಕ್ಸ್‌ ಹಾಕಿದ್ದರಿಂದ ದೊಡ್ಡ ದೊಡ್ಡ ಜೆಲ್ಲಿಕಲ್ಲು ಮೇಲೆದ್ದಿರುವುದರಿಂದ ವಾಹನ ಸವಾರರಿಗೆ ಸಮಸ್ಯೆ ಯಾಗುತ್ತಿದೆ. ಸ್ಥಳೀಯಾಡಳಿತ ಅಥವಾ ಸಂಬಂಧಪಟ್ಟ ಇಲಾಖೆಯ ಅಧಿಕಾರಿ ಗಳು ಕನಿಷ್ಠ ಸೌಲಭ್ಯ ಒದಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ದಾರಿ ತಪ್ಪಿಸುವ ದಾರಿಗಳು!
ಸ್ಥಳೀಯರಿಗೆ ಪರ್ಯಾಯ ಮಾರ್ಗ ಗೊತ್ತಿರುವುದರಿಂದ ಸಂತಕೆಟ್ಟೆ ವೃತ್ತದಿಂದ ಸ್ವಲ್ಪ ಮುಂದೆ ಸಾಗಿ ವಾಟರ್‌ ಟ್ಯಾಂಕ್‌ ಸಮೀಪದಲ್ಲಿ ಬಲಕ್ಕೆ ತಿರುವು ಪಡೆದು ಹೆದ್ದಾರಿಗೆ ಹೋಗುತ್ತಿದ್ದಾರೆ. ಆದರೆ ಹೊಸಬರಿಗೆ ಈ ರಸ್ತೆ ಅರಿವಿಗೆ ಬರುವುದಿಲ್ಲ. ಸಂತೆಕಟ್ಟೆಯಿಂದ ಹಾಗೆಯೇ ಮುಂದೆ ಸಾಗಿ ಕಲ್ಯಾಣಪುರ ನದಿಯವರೆಗೂ ಹೋಗಿ ರಸ್ತೆ ಎಂಡ್‌ ಆದಲ್ಲಿ ಯುಟರ್ನ್ ಪಡೆದು ವಾಪಸ್‌ ಬರುವುದು ಹೆಚ್ಚಾಗುತ್ತಿದೆ. ಪರ್ಯಾಯ ಮಾರ್ಗದ ಸಣ್ಣ ಬೋರ್ಡ್‌ ಅಳವಡಿಸಿದ್ದರೂ ಸರಿಯಾಗಿ ಕಾಣುತ್ತಿಲ್ಲ. ಹೀಗಾಗಿ ಹೊಸಬರು ದಾರಿ ತಪ್ಪುವುದೇ ಹೆಚ್ಚಾಗಿದೆ.

-ರಾಜು ಖಾರ್ವಿ ಕೊಡೇರಿ

ಟಾಪ್ ನ್ಯೂಸ್

Hasana-HDK

By Poll: ಚನ್ನಪಟ್ಟಣ ಕ್ಷೇತ್ರಕ್ಕೆ ವಾರದೊಳಗೆ ಅಭ್ಯರ್ಥಿ ಘೋಷಣೆ: ಎಚ್‌.ಡಿ.ಕುಮಾರಸ್ವಾಮಿ

1-eq-weq

Darshan ಅಭಿಮಾನಿಗಳಿಂದಾಗಿ ಶ್ರವಣ ಶಕ್ತಿ ಕಳೆದುಕೊಂಡೆ: ಡಾ. ಗೊ.ರು.ಚನ್ನಬಸಪ್ಪ

rain

Rain Alert: ರಾಜ್ಯದ 18 ಜಿಲ್ಲೆಗಳಲ್ಲಿ ಅ.17ರವರೆಗೆ ಭಾರೀ ಮಳೆ ಸಾಧ್ಯತೆ

1-goutham-gambhir

Gambhir; ಕೊಹ್ಲಿಗೆ ರನ್ ಗಳಿಸುವ ಹಸಿವಿದೆ, ಪ್ರತಿ ಪಂದ್ಯದ ಬಳಿಕ ತೀರ್ಪು ಅಗತ್ಯವಿಲ್ಲ

Sweet Recipes: ನಾಲಿಗೆ ಚಪ್ಪರಿಸುವ ರಸಭರಿತ ಗರಿಗರಿ ಜಿಲೇಬಿ… ಇಲ್ಲಿದೆ ಸುಲಭ ವಿಧಾನ

Sweet Recipes: ನಾಲಿಗೆ ಚಪ್ಪರಿಸುವ ರಸಭರಿತ ಗರಿಗರಿ ಜಿಲೇಬಿ… ಇಲ್ಲಿದೆ ಸುಲಭ ವಿಧಾನ

Basangouda Patil Yatnal: ಫಸ್ಟ್‌ ಲೈನ್‌ ನಾಯಕರ ಆಸ್ತಿ ಬಗ್ಗೆ ತನಿಖೆ ಆಗಲಿ

Basangouda Patil Yatnal: ಫಸ್ಟ್‌ ಲೈನ್‌ ನಾಯಕರ ಆಸ್ತಿ ಬಗ್ಗೆ ತನಿಖೆ ಆಗಲಿ

By election: Liquor sale banned in Udupi district for two days

By election: ಉಡುಪಿ ಜಿಲ್ಲೆಯಲ್ಲಿ ಎರಡು ದಿನ ಮದ್ಯ ಮಾರಾಟ ನಿಷೇಧ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Devadurga

Udupi: ಬಾಂಗ್ಲಾದೇಶದ ಅಕ್ರಮ ವಲಸಿಗರು ಪೊಲೀಸ್‌ ಕಸ್ಟಡಿಗೆ

By election: Liquor sale banned in Udupi district for two days

By election: ಉಡುಪಿ ಜಿಲ್ಲೆಯಲ್ಲಿ ಎರಡು ದಿನ ಮದ್ಯ ಮಾರಾಟ ನಿಷೇಧ

Kambala: ನ. 27ಕ್ಕೆ ಶಿರ್ವ ನಡಿಬೆಟ್ಟು ಸೂರ್ಯ -ಚಂದ್ರ ಜೋಡುಕೆರೆ ಕಂಬಳ

Kambala: ನ. 27ಕ್ಕೆ ಶಿರ್ವ ನಡಿಬೆಟ್ಟು ಸೂರ್ಯ -ಚಂದ್ರ ಜೋಡುಕೆರೆ ಕಂಬಳ

7

Shutter Box: ಈಶಾನ್ಯದಲ್ಲಿ ಕರಾವಳಿ ಪ್ರವಾಸೋದ್ಯಮ ಪ್ರಚಾರ

Udupi: ಅ. 24 ರಿಂದ ಮೂರೂ ದಿನಗಳ ಕಾಲ ಶ್ರೀ ಕೃಷ್ಣನ ಉಡುಪಿಯಲ್ಲಿ ಜ್ಞಾನದ ಹಬ್ಬ

Udupi: ಅ. 24 ರಿಂದ ಮೂರೂ ದಿನಗಳ ಕಾಲ ಶ್ರೀ ಕೃಷ್ಣನ ಉಡುಪಿಯಲ್ಲಿ ಜ್ಞಾನದ ಹಬ್ಬ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

ACT

Kundapura: ದನದ ಮಾಂಸ ಸಾಗಾಟ; ಓರ್ವನ ವಶ

Hasana-HDK

By Poll: ಚನ್ನಪಟ್ಟಣ ಕ್ಷೇತ್ರಕ್ಕೆ ವಾರದೊಳಗೆ ಅಭ್ಯರ್ಥಿ ಘೋಷಣೆ: ಎಚ್‌.ಡಿ.ಕುಮಾರಸ್ವಾಮಿ

1-wewewq

Actor Atul Parchure; ಖ್ಯಾತ ನಟ ಅತುಲ್ ಪರ್ಚುರೆ ವಿಧಿವಶ

de

Mangaluru: ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಕೊಳೆತ ಶವ ಪತ್ತೆ

4

Mangaluru: ಪ್ರಾರ್ಥನೆಗೆ ಬಂದಿದ್ದ ವ್ಯಕ್ತಿ ಮೃತ್ಯು; ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.