Bhatkal; ಯತಿ ನರಸಿಂಹಾನಂದ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ


Team Udayavani, Oct 14, 2024, 8:25 PM IST

1-bhat-bg

ಭಟ್ಕಳ: ಪ್ರವಾದಿ ಮೊಹ್ಮದ್ ಪೈಗಂಬರರನ್ನು ಸ್ವಾಮೀ ನರಸಿಂಹಾನಂದ ಅವರು ಅವಹೇಳನ ಮಾಡಿದ್ದಾರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಇಲ್ಲಿನ ಮಜ್ಲಿಸೆ ಇಸ್ಲಾಹ-ವ-ತಂಝೀಮ್ ಸಂಸ್ಥೆಯ ನೇತೃತ್ವದಲ್ಲಿ ಸೋಮವಾರ ಸಂಜೆ ತಾಲೂಕು ಆಡಳಿತ ಸೌಧದ ಎದುರು ಬೃಹತ್ ಸಂಖ್ಯೆಯಲ್ಲಿ ಸೇರಿ ಪ್ರತಿಭಟನೆ ನಡೆಸಿ ಸಹಾಯಕ ಆಯುಕ್ತರ ಮೂಲಕ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಿಗೆ ಮನವಿ ಸಲ್ಲಿಸಿದರು.

ಮನವಿಯಲ್ಲಿ ಸ್ವಾಮೀ ನರಸಿಂಹಾನಂದ ಅವರು ಮುಸ್ಲಿಮರು ಮತ್ತು ಪ್ರವಾದಿ ಮೊಹ್ಮದ್ ಪೈಗಂಬರರ ಬಗ್ಗೆ ಇಲ್ಲಸಲ್ಲದ ಮಾತುಗಳನ್ನಾಡಿದ್ದಾರೆ. ಮುಸ್ಲಿಮರ ಬಗ್ಗೆ ಇವರು ಈ ಹಿಂದೆ ಕೂಡಾ ಅನೇಕ ಸಂದರ್ಭಗಳಲ್ಲಿ ದ್ವೇಷ ಭಾಷಣ ಮಾಡಿದ್ದು ಸಮುದಾಯವನ್ನು ಕೆಣಕುವ ಹಾಗೂ ಆ ಮೂಲಕ ಗಲಭೆ ಸೃಷ್ಟಿಸುವ ಹುನ್ನಾರ ಮಾಡಿದ್ದಾರೆ. ಬೇರೆ ಬೇರೆ ಸಮುದಾಯದವರಲ್ಲಿ ದ್ವೇಷ ಹುಟ್ಟುವಂತೆ ಮಾತುಗಳನ್ನಾಡುವ ಹಾಗೂ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ಹುನ್ನಾರ ಇವರದ್ದಾಗಿದೆ. ನರಸಿಂಹಾನಂದ ಅವರು ಹಲವು ಬಾರಿ ಮುಸ್ಲಿಮರ ಬಗ್ಗೆ ಇಲ್ಲಸಲ್ಲದ ಭಾಷಣ ಮಾಡಿ ಸಮುದಾಯದವರಿಗೆ ನೋವನ್ನುಂಟು ಮಾಡಿದ್ದಾರೆ. ಪ್ರವಾದಿ ಮೊಹ್ಮದ ಪೈಗಂಬರರ ಬಗ್ಗೆ ತಮ್ಮ ಅವಹೇಳನಕಾರಿ ಭಾಷಣವನ್ನು ಮುಂದುವರಿಸಿರುವುದು ತೀರಾ ಖಂಡನೀಯ. ಪ್ರವಾದಿ ಮತ್ತು ಮುಸ್ಲಿಮರ ವಿರುದ್ದ ಪದೇ ಪದೇ ಅವಹೇಳನಕಾರಿ ಮಾತುಗಳನ್ನಾಡುತ್ತಿರುವ ಸ್ವಾಮಿ ನರಸಿಂಹಾನಂದರನ್ನು ತತ್ ಕ್ಷಣ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಅವ ಮಾತನಾಡಿ ‘ಪ್ರವಾಸಿ ಮೊಹ್ಮದ್ ಪೈಗಂಬರರ ವಿರುದ್ದ ಅವಹೇಳನಕಾರಿ ಭಾಷಣ ಯಾರೇ ಮಾಡಿದರೂ ಸಹಿಸಲು ಸಾಧ್ಯವಿಲ್ಲ. ಅವಹೇಳನಕಾರಿ ಭಾಷಣದಿಂದ ಮುಸ್ಲೀಮ ಸಮುದಾಯಕ್ಕೆ ನೋವಾಗಿದೆ. ಪ್ರವಾದಿ ಮತ್ತು ಮುಸ್ಲಿಮರ ಬಗ್ಗೆ ಪದೇ ಪದೇ ಅವಹೇಳನಕಾರಿ ಹೇಳಿಕೆ ಕೇಳಿ ಬರುತ್ತಿದೆ. ಸಮಾಜದ ಶಾಂತಿ ಕದಡುವ ಇಂತಹವರ ಮೇಲೆ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ತಂಝೀಮ್ ನ ಇಮ್ರಾನ್ ಲಂಕಾ ಮತ್ತಿತರು ಮಾತನಾಡಿದರು. ಸಹಾಯಕ ಆಯುಕ್ತೆ ಡಾ.ನಯನಾ ಎನ್., ಅವರು ಮನವಿ ಸ್ವೀಕರಿಸಿ ಸರಕಾರಕ್ಕೆ ಕಳುಹಿಸುವ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ತಂಝೀಮ್ ಪದಾಧಿಕಾರಿಗಳು, ವಿವಿಧ ಮುಸ್ಲಿಂ ಸಂಘಟನೆಗಳ ಪ್ರಮುಖರು ಸೇರಿದಂತೆ ಸಾವಿರಾರು ಜನರು ಪಾಲ್ಗೊಂಡಿದ್ದರು. ಮನವಿಯ ಪ್ರತಿಯನ್ನು ರಾಜ್ಯ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಿಗೆ, ಮುಖ್ಯ ಮಂತ್ರಿ ಹಾಗೂ ಗೃಹ ಮಂತ್ರಿಗಳಿಗೆ ಕಳುಹಿಸಲಾಗಿದೆ.

ಪೊಲೀಸ್ ದೂರು ದಾಖಲು
ಯುಎಪಿಎ ಮತ್ತು ಎನ್.ಎಸ್.ಎ ಕಾಯ್ದೆಯಡಿ ಬಂಧಿಸಬೇಕು ಎಂದು ಆಗ್ರಹಿಸಿ ಭಟ್ಕಳದ ನಗರ ಠಾಣೆಯಲ್ಲಿ ದೂರೊಂದನ್ನು ದಾಖಲು ಮಾಡಲಾಗಿದೆ. ತಂಝೀಮ್ ಸಂಸ್ಥೆಯ ನೇತೃತ್ವದಲ್ಲಿ ಭಟ್ಕಳದ ವಿವಿಧ ಸಂಘಸಂಸ್ಥೆಗಳ ಮುಖಂಡರ ನಿಯೋಗವೊಂದು ಸೋಮವಾರ ಭಟ್ಕಳ ನಗರ ಠಾಣೆಗೆ ಭೇಟಿ ನೀಡಿ ಯತಿ ನರಸಿಂಹನಂದಾ ಸ್ವಾಮಿಯ ವಿರುದ್ಧ ಡಿ.ವೈ.ಎಸ್.ಪಿ. ಮಹೇಶ ಅವರಲ್ಲಿ ದೂರು ನೀಡಿದ್ದಾರೆ.

ಈ ಸಂದರ್ಭದಲ್ಲಿ ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ, ಹಾಗೂ ವಿವಿಧ ಜಮಾಅತ್‌ನ ಮುಖಂಡರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

ಮುನಿರತ್ನ ಅತ್ಯಾ*ಚಾರ ಪ್ರಕರಣ: ಮೂವರಿಗೆ ನಿರೀಕ್ಷಣ ಜಾಮೀನು

Munirathna Case: ಮೂವರಿಗೆ ನಿರೀಕ್ಷಣ ಜಾಮೀನು

ranaji-Trophy

Ranaji Trophy: ಮಧ್ಯಪ್ರದೇಶ- ಕರ್ನಾಟಕ ಪಂದ್ಯ ಡ್ರಾ

ಅಕ್ರಮ ನಡೆದಿದ್ದರೆ ಮೋದಿ, ಶಾ ನಮ್ಮನ್ನು ಸುಮ್ಮನೆ ಬಿಡುತ್ತಿದ್ದರಾ: ಪ್ರಿಯಾಂಕ್‌ ಪ್ರಶ್ನೆ

Priyank Kharge: ಅಕ್ರಮ ನಡೆದಿದ್ದರೆ ಮೋದಿ, ಶಾ ನಮ್ಮನ್ನು ಸುಮ್ಮನೆ ಬಿಡುತ್ತಿದ್ದರಾ

CT Ravi: ಮೊಕದ್ದಮೆ ವಾಪಸ್‌ಗೆ ಅರ್ಜಿ ಸಲ್ಲಿಸಿಲ್ಲ

CT Ravi: ಮೊಕದ್ದಮೆ ವಾಪಸ್‌ಗೆ ಅರ್ಜಿ ಸಲ್ಲಿಸಿಲ್ಲ

ಬೆದರಿಕೆಗೆ ಗೌಡರ ಕುಟುಂಬ ಜಗ್ಗದು: ಎಚ್‌.ಡಿ. ರೇವಣ್ಣ

H.D. Revanna: ಬೆದರಿಕೆಗೆ ಗೌಡರ ಕುಟುಂಬ ಜಗ್ಗದು

Nagendra

Valmiki Case: 94 ದಿನಗಳವರೆಗೆ ಬಂಧಿಯಾಗಿದ್ದ ನಾಗೇಂದ್ರಗೆ ಜಾಮೀನು

NZ–Pak

Womens T-20 World Cup: ಸೆಮಿಫೈನಲ್‌ ಪ್ರವೇಶಿಸಿದ ನ್ಯೂಜಿಲ್ಯಾಂಡ್‌; ಭಾರತ ಹೊರಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುನಿರತ್ನ ಅತ್ಯಾ*ಚಾರ ಪ್ರಕರಣ: ಮೂವರಿಗೆ ನಿರೀಕ್ಷಣ ಜಾಮೀನು

Munirathna Case: ಮೂವರಿಗೆ ನಿರೀಕ್ಷಣ ಜಾಮೀನು

ಅಕ್ರಮ ನಡೆದಿದ್ದರೆ ಮೋದಿ, ಶಾ ನಮ್ಮನ್ನು ಸುಮ್ಮನೆ ಬಿಡುತ್ತಿದ್ದರಾ: ಪ್ರಿಯಾಂಕ್‌ ಪ್ರಶ್ನೆ

Priyank Kharge: ಅಕ್ರಮ ನಡೆದಿದ್ದರೆ ಮೋದಿ, ಶಾ ನಮ್ಮನ್ನು ಸುಮ್ಮನೆ ಬಿಡುತ್ತಿದ್ದರಾ

CT Ravi: ಮೊಕದ್ದಮೆ ವಾಪಸ್‌ಗೆ ಅರ್ಜಿ ಸಲ್ಲಿಸಿಲ್ಲ

CT Ravi: ಮೊಕದ್ದಮೆ ವಾಪಸ್‌ಗೆ ಅರ್ಜಿ ಸಲ್ಲಿಸಿಲ್ಲ

Nagendra

Valmiki Case: 94 ದಿನಗಳವರೆಗೆ ಬಂಧಿಯಾಗಿದ್ದ ನಾಗೇಂದ್ರಗೆ ಜಾಮೀನು

Priyank: ಸೋಮಣ್ಣ,ರವಿ ದೇಶದ್ರೋಹಿಗಳಾ: ಅವರ ವಿರುದ್ಧದ ಪ್ರಕರಣವನ್ನೂ ವಾಪಸ್‌ ಪಡೆದಿದ್ದೇವೆ

Priyank: ಸೋಮಣ್ಣ,ರವಿ ದೇಶದ್ರೋಹಿಗಳಾ: ಅವರ ವಿರುದ್ಧದ ಪ್ರಕರಣವನ್ನೂ ವಾಪಸ್‌ ಪಡೆದಿದ್ದೇವೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

ಮುನಿರತ್ನ ಅತ್ಯಾ*ಚಾರ ಪ್ರಕರಣ: ಮೂವರಿಗೆ ನಿರೀಕ್ಷಣ ಜಾಮೀನು

Munirathna Case: ಮೂವರಿಗೆ ನಿರೀಕ್ಷಣ ಜಾಮೀನು

ranaji-Trophy

Ranaji Trophy: ಮಧ್ಯಪ್ರದೇಶ- ಕರ್ನಾಟಕ ಪಂದ್ಯ ಡ್ರಾ

ಅಕ್ರಮ ನಡೆದಿದ್ದರೆ ಮೋದಿ, ಶಾ ನಮ್ಮನ್ನು ಸುಮ್ಮನೆ ಬಿಡುತ್ತಿದ್ದರಾ: ಪ್ರಿಯಾಂಕ್‌ ಪ್ರಶ್ನೆ

Priyank Kharge: ಅಕ್ರಮ ನಡೆದಿದ್ದರೆ ಮೋದಿ, ಶಾ ನಮ್ಮನ್ನು ಸುಮ್ಮನೆ ಬಿಡುತ್ತಿದ್ದರಾ

CT Ravi: ಮೊಕದ್ದಮೆ ವಾಪಸ್‌ಗೆ ಅರ್ಜಿ ಸಲ್ಲಿಸಿಲ್ಲ

CT Ravi: ಮೊಕದ್ದಮೆ ವಾಪಸ್‌ಗೆ ಅರ್ಜಿ ಸಲ್ಲಿಸಿಲ್ಲ

ಬೆದರಿಕೆಗೆ ಗೌಡರ ಕುಟುಂಬ ಜಗ್ಗದು: ಎಚ್‌.ಡಿ. ರೇವಣ್ಣ

H.D. Revanna: ಬೆದರಿಕೆಗೆ ಗೌಡರ ಕುಟುಂಬ ಜಗ್ಗದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.