Follow-up ಬಾಂಗ್ಲಾ; ಬಂಧಿತನ ತೀವ್ರ ವಿಚಾರಣೆ: ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡದ ಮಾಣಿಕ್‌

ಗದ್ದೆ-ತೋಟದ ಕೆಲಸಕ್ಕೂ ಹಿಂದಿಯವರು!

Team Udayavani, Oct 15, 2024, 6:40 AM IST

police crime

ಮಂಗಳೂರು: ನಕಲಿ ಪಾಸ್‌ಪೋರ್ಟ್‌ ಮೂಲಕ ದುಬಾೖಗೆ ತೆರಳಲು ಯತ್ನಿಸಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದು ಬಜಪೆ ಪೊಲೀಸರ ವಶದಲ್ಲಿರುವ ಬಾಂಗ್ಲಾ ಪ್ರಜೆ ಮೊಹಮ್ಮದ್‌ ಮಾಣಿಕ್‌ ಹುಸೇನ್‌ನ ವಿಚಾರಣೆ ತೀವ್ರವಾಗಿ ನಡೆಯುತ್ತಿದೆ. ಆದರೆ ಆತನಿಂದ ಹೆಚ್ಚಿನ ಮಾಹಿತಿಗಳು ಪೊಲೀಸರಿಗೆ ಸಿಕ್ಕಿಲ್ಲ ಎಂದು ತಿಳಿದು ಬಂದಿದೆ.

ಮಾಣಿಕ್‌ನನ್ನು ಒಂದು ವಾರ ಕಾಲ ಪೊಲೀಸ್‌ ಕಸ್ಟಡಿಗೆ ಪಡೆಯಲಾಗಿದ್ದು, ಆತನಿಂದ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕುವ ಕೆಲಸ ಪೊಲೀಸರು ಮಾಡುತ್ತಿದ್ದಾರೆ. ಆತ ಚೆನ್ನೈಯಿಂದ ಮಂಗಳೂರಿಗೆ ಬಂದಿರುವುದು, ಇಲ್ಲಿಂದ ಮೂಡುಬಿದಿರೆಗೆ ತೆರಳಿರುವುದು ಅಲ್ಲಿಂದ ಉಡುಪಿಗೆ ಹೋಗಿರುವುದು ಮುಂತಾದವುಗಳ ಕುರಿತೂ ಬಾಯಿ ಬಿಡಿಸಲಾಗುತ್ತಿದೆ. ಮುಖ್ಯವಾಗಿ ಕಮಿಷನರೆಟ್‌ ವ್ಯಾಪ್ತಿ ಅಥವಾ ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿ ಆತನ ಪರಿಚಯಸ್ಥ ಬಾಂಗ್ಲಾವಾಸಿಗಳು ಇದ್ದಾರೆಯೇ ಎನ್ನುವ ಬಗ್ಗೆ ವಿಚಾರಿಸಲಾಗುತ್ತಿದೆ. ಆ ಮೂಲಕ ಮಹತ್ವದ ಸುಳಿವು ಪಡೆಯುವ ಕೆಲಸವನ್ನೂ ಪೊಲೀಸರು ಮಾಡುತ್ತಿದ್ದಾರೆ.

ಕಸ್ಟಡಿ ಅವಧಿ ಇನ್ನೂ ನಾಲ್ಕು ದಿನಗಳು ಬಾಕಿ ಇರುವುದರಿಂದ ಆತನಿಂದ ಎಲ್ಲ ಮಾಹಿತಿಗಳನ್ನು ಸಂಗ್ರಹಿಸಲಾಗುವುದು ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಕೊಣಾಜೆ ಠಾಣೆ ವ್ಯಾಪ್ತಿಯಲ್ಲಿ ವಿಚಾರಣೆ

ಈ ನಡುವೆ ಕೊಣಾಜೆ ಠಾಣೆ ವ್ಯಾಪ್ತಿಯಲ್ಲಿ ಬಿಹಾರ ರಾಜ್ಯದ ಆಧಾರ್‌ ಕಾರ್ಡ್‌ ಹೊಂದಿದ್ದ ಕೆಲವು ಕಾರ್ಮಿಕರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಆದರೆ ಅವರ ದಾಖಲೆಗಳೆಲ್ಲ ಸರಿಯಾಗಿದ್ದುದರಿಂದ ಕೆಲವು ಸೂಚನೆಗಳನ್ನು ನೀಡಲಾಗಿದೆ ಎಂದು ತಿಳಿದು ಬಂದಿದೆ.

ನಿತ್ಯ ನೂರಾರು ಮಂದಿ ಬಂದರೂ ತಪಾಸಣೆ ಇಲ್ಲ

ಮಂಗಳೂರು ನಗರ ವ್ಯಾಪ್ತಿಯ ಬಸ್ಸು, ರೈಲು ನಿಲ್ದಾಣಗಳಲ್ಲಿ ಪ್ರತಿ ನಿತ್ಯ ಲಗೇಜುಗಳು ಸಹಿತ ಸಾಕಷ್ಟು ಮಂದಿ ಹೊರರಾಜ್ಯದ ಕಾರ್ಮಿಕರು ಕಂಡುಬರುತ್ತಾರೆ. ಮಂಗಳೂರು ಜಂಕ್ಷನ್‌, ಸೆಂಟ್ರಲ್‌ ರೈಲು ನಿಲ್ದಾಣಗಳ ಮೂಲಕ ಬರುವ ಇವರು ಬಸ್ಸು ನಿಲ್ದಾಣಕ್ಕೆ ಬಂದು ಅಲ್ಲಿಂದ ವಿವಿಧ ಕಡೆಗಳಿಗೆ ತೆರಳುತ್ತಾರೆ. ಅವರು ಯಾರು, ಎಲ್ಲಿಂದ ಬಂದಿದ್ದಾರೆ, ಯಾಕೆ ಬಂದಿದ್ದಾರೆ? ಬ್ಯಾಗ್‌ಗಳಲ್ಲಿ ಏನಿದೆ? ಅವರನ್ನು ಕರೆಸಿಕೊಂಡಿರುವುದು ಯಾರು? ಎಂದು ವಿಚಾರಣೆ ನಡೆಸುವ ಕೆಲಸ ರೈಲು ನಿಲ್ದಾಣ ಅಥವಾ ಬಸ್ಸು ನಿಲ್ದಾಣದಲ್ಲಿ ಆಗುತ್ತಿಲ್ಲ.

ಚಾಲಕ – ನಿರ್ವಾಹಕರು ಗಮನ ಹರಿಸಬೇಕಿದೆ

ಹಿಂದಿ ಹೊರತಾಗಿ ಕೆಲವು ಸ್ಥಳೀಯ ಭಾಷೆಗಳನ್ನು ಇಂತಹವರು ಮಾತನಾಡುತ್ತಾರೆ. ಅದು ಯಾವ ಭಾಷೆ ಎಂದು ಇಲ್ಲಿನವರಿಗೆ ಅರ್ಥವಾಗುವುದಿಲ್ಲ. ಇಲ್ಲಿನ ಊರುಗಳ ಉಚ್ಚಾರವೂ ಸರಿಯಾಗಿ ಇರುವುದಿಲ್ಲ. ಹಾಗಾಗಿ ಬಸ್ಸು ಚಾಲಕ- ನಿರ್ವಾಹಕರು, ಆಟೋ ಚಾಲಕರು ಇಂಥವರ ಬಗ್ಗೆ ಹೆಚ್ಚಿನ ಗಮನ ಹರಿಸಿ ಪೊಲೀಸರಿಗೆ ಮಾಹಿತಿ ನೀಡುವುದರಿಂದ ಬಾಂಗ್ಲಾ ಅಥವಾ ಇತರ ದೇಶಗಳಿಂದ ಅಕ್ರಮವಾಗಿ ಬರುವವರ ಬಗ್ಗೆ ನಿಗಾ ವಹಿಸಲು ಸಾಧ್ಯ.

ಗದ್ದೆ-ತೋಟದ ಕೆಲಸಕ್ಕೂ ಹಿಂದಿಯವರು!

ಕೈಗಾರಿಕೆ, ಮೀನುಗಾರಿಕೆ ಮಾತ್ರವಲ್ಲದೆ ಗ್ರಾಮಾಂತರ ಭಾಗದಲ್ಲಿ ಗದ್ದೆ ತೋಟದ ಕೆಲಸದಲ್ಲೂ ಹಿಂದಿ ಮಾತನಾಡುವವರು ಕಂಡುಬರುತ್ತಿದ್ದಾರೆ. ಸ್ಥಳೀಯರು ಇಂತಹ ಕೆಲಸದಿಂದ ವಿಮುಖರಾಗಿರುವುದರಿಂದ ಹಿಂದಿ ಮಾತನಾಡುವವರು ಅಂತಹ ಕೆಲಸ ಮಾಡುತ್ತಿದ್ದಾರೆ. ಇವರು ಎಲ್ಲಿಯವರೆಂದು ಪರಿಶೀಲಿಸುವ ಕೆಲಸ ಆಗುತ್ತಿಲ್ಲ.

ಟಾಪ್ ನ್ಯೂಸ್

Cancer Rates: ದೇಶದಲ್ಲಿ ಕ್ಯಾನ್ಸರ್ ಕೇಸ್ ಹೆಚ್ಚಳ… ಬಾಯಿ, ಸ್ತನ ಕ್ಯಾನ್ಸರ್ ಗಳೇ ಹೆಚ್ಚು

Cancer Cases: ದೇಶದಲ್ಲಿ ಕ್ಯಾನ್ಸರ್ ಕೇಸ್ ಹೆಚ್ಚಳ… ಬಾಯಿ, ಸ್ತನ ಕ್ಯಾನ್ಸರ್ ಗಳೇ ಹೆಚ್ಚು

Election Date: ಮಹಾರಾಷ್ಟ್ರ, ಜಾರ್ಖಂಡ್ ರಾಜ್ಯಗಳಿಗೆ ಇಂದು ಚುನಾವಣೆ ದಿನಾಂಕ ಘೋಷಣೆ!

Election Date: ಮಹಾರಾಷ್ಟ್ರ, ಜಾರ್ಖಂಡ್ ರಾಜ್ಯಗಳಿಗೆ ಇಂದು ಚುನಾವಣೆ ದಿನಾಂಕ ಘೋಷಣೆ!

2

Bilichukki Hallihakki kannada Movie: ಇದು ಹಳ್ಳಿ ಹಕ್ಕಿಯ ಬಿಳಿಚುಕ್ಕಿ

Security: ಬಾಬಾ ಸಿದ್ದಿಕಿ ಹತ್ಯೆ ಬೆನ್ನಲ್ಲೇ ಸಲ್ಮಾನ್ ಖಾನ್ ಗೆ ಹೆಚ್ಚುವರಿ ಭದ್ರತೆ

Security: ಬಾಬಾ ಸಿದ್ದಿಕಿ ಹತ್ಯೆ ಬೆನ್ನಲ್ಲೇ ಸಲ್ಮಾನ್ ಖಾನ್ ಗೆ ಹೆಚ್ಚುವರಿ ಭದ್ರತೆ

salman

Baba Siddique Case: ಸಲ್ಮಾನ್‌ಗೆ ನೆರವಾಗುವ ಎಲ್ಲರಿಗೂ ಇದೇ ಗತಿ: ಬಿಷ್ಣೋಯ್‌ ಗ್ಯಾಂಗ್‌!

Chinnaswamy

India-New Zeland Test: ಚಿನ್ನಸ್ವಾಮಿ ಮೈದಾನಕ್ಕೆ 25ನೇ ಟೆಸ್ಟ್‌ ಪಂದ್ಯದ ಗರಿಮೆ

HAL

Central Government: ಭದ್ರತಾ ಉದ್ಯಮದ ಪ್ರಧಾನ ಸಂಸ್ಥೆ ಎಚ್‌ಎಎಲ್‌ಗೆ “ಮಹಾರತ್ನ’


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-seers

Anganwadi workers; ಅಂಗನವಾಡಿ ಕಾರ್ಯಕರ್ತೆಯರಿಗೆ ಕಳಪೆ ಸೀರೆ

adike

Areca nut; ಅಡಿಕೆ ಎಲೆ ಹಳದಿ ವ್ಯಾಪಕ ; ನಾಲ್ಕು ವರ್ಷಗಳಿಂದ ನಡೆದೇ ಇಲ್ಲ ಸಮೀಕ್ಷೆ

1-male

Dakshina Kannada; ಜಿಲ್ಲೆಯ ವಿವಿಧೆಡೆ ಮಳೆ : ಬೆಳ್ತಂಗಡಿಯಲ್ಲಿ ಬರೆ ಕುಸಿತ

BJP FLAG

BJP; ಬಂಟ್ವಾಳ, ಉಡುಪಿಯಲ್ಲಿ ಇಂದು ಜನಪ್ರತಿನಿಧಿಗಳ ಸಮಾವೇಶ: ವಿಜಯೇಂದ್ರ,  ಅಶೋಕ್‌ ಭಾಗಿ

1-alvas

Yoga Competition; ಆಳ್ವಾಸ್‌ ಕಾಲೇಜಿನ ಐವರು ರಾಷ್ಟ್ರಮಟ್ಟಕ್ಕೆ

MUST WATCH

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

ಹೊಸ ಸೇರ್ಪಡೆ

Cancer Rates: ದೇಶದಲ್ಲಿ ಕ್ಯಾನ್ಸರ್ ಕೇಸ್ ಹೆಚ್ಚಳ… ಬಾಯಿ, ಸ್ತನ ಕ್ಯಾನ್ಸರ್ ಗಳೇ ಹೆಚ್ಚು

Cancer Cases: ದೇಶದಲ್ಲಿ ಕ್ಯಾನ್ಸರ್ ಕೇಸ್ ಹೆಚ್ಚಳ… ಬಾಯಿ, ಸ್ತನ ಕ್ಯಾನ್ಸರ್ ಗಳೇ ಹೆಚ್ಚು

Arrested: ವೃದ್ಧ ದಂಪತಿ ಮನೆಗೆ ನುಗ್ಗಿ ಒಡವೆ, ನಗದು ದರೋಡೆ; ಮೂವರ ಬಂಧನ

Arrested: ವೃದ್ಧ ದಂಪತಿ ಮನೆಗೆ ನುಗ್ಗಿ ಒಡವೆ, ನಗದು ದರೋಡೆ; ಮೂವರ ಬಂಧನ

Bengaluru: ಮದ್ಯದ ಬಾಟಲಿಯಿಂದ ಹೊಡೆದು ಸ್ನೇಹಿತನ ಹತ್ಯೆ

Bengaluru: ಮದ್ಯದ ಬಾಟಲಿಯಿಂದ ಹೊಡೆದು ಸ್ನೇಹಿತನ ಹತ್ಯೆ

Bengaluru: ಕಾಲೇಜಲ್ಲೇ ಮಹಿಳಾ ಪ್ರೊಫೆಸರ್‌ ಆತ್ಮಹತ್ಯೆಗೆ ಯತ್ನ

Bengaluru: ಕಾಲೇಜಲ್ಲೇ ಮಹಿಳಾ ಪ್ರೊಫೆಸರ್‌ ಆತ್ಮಹತ್ಯೆಗೆ ಯತ್ನ

Ramanagar: ಮಕ್ಕಳ ಕೊಲೆ; ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ

Ramanagar: ಮಕ್ಕಳ ಕೊಲೆ; ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.