Mangaluru: ಸಾವಯವ ಕೃಷಿಕ ಗ್ರಾಹಕ ಬಳಗದಿಂದ ನ. 1ರಂದು ನಗರದಲ್ಲಿ ಕಾರ್ಯಾಗಾರ

'ಎಲೆ ಅರಿವು' ಇದ್ದರೆ ಹಿತ್ತಲ ಗಿಡವೇ ಆಹಾರ!

Team Udayavani, Oct 15, 2024, 3:28 PM IST

9

ಮಹಾನಗರ: ಅನೇಕ ಕಾಯಿಲೆಗಳಿಗೆ ಹಿತ್ತಿಲಲ್ಲಿರುವ ಗಿಡಮೂಲಿಕೆಗಳೇ ರಾಮಬಾಣ. ಔಷಧ ಸೇವಿಸುವ ಬದಲು ತಿನ್ನುವ ಆಹಾರವೇ ಔಷಧೀಯ ಗುಣಗಳಿಂದ ಕೂಡಿರಬೇಕು. ಆ ಮೂಲಕ ರೋಗ ಮುಕ್ತ ಸಮಾಜ ನಿರ್ಮಾಣವಾಗಬೇಕು ಎಂಬ ಪರಿಕಲ್ಪನೆಯೊಂದಿಗೆ ಸಾವಯವ ಕೃಷಿಕ ಗ್ರಾಹಕ ಬಳಗ ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದೆ. ಅದುವೇ ‘ಎಲೆ ಅರಿವು’.

ಮನೆ ಪರಿಸರದಲ್ಲೇ ಇರುವ, ವಿವಿಧ ರೀತಿಯಲ್ಲಿ ಆಹಾರವಾಗಿ ಬಳಸಬಹುದಾದ ಎಲೆಗಳು, ಕಾಟು ಸಸಿಗಳು, ಹುಲ್ಲು ಸೇರಿದಂತೆ ಹಲವು ಗಿಡಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯಕ್ರಮವಿದು. ಮಧುಮೇಹ, ಶೀತ ಜ್ವರದ ಸಂದರ್ಭದಲ್ಲಿ ಮಾತ್ರೆ ನುಂಗುವ ಬದಲು ಅಮೃತ ಬಳ್ಳಿ, ನೆಲನೆಲ್ಲಿ ಯನ್ನು ಬಳಸಬಹುದು. ಎಲೆ ಅರಿವು ಕಾರ್ಯಕ್ರಮದಲ್ಲಿ ಇಂಥ ಹಿತ್ತಲ ಗಿಡಗಳನ್ನು ಪರಿಚಯಿಸಲಾಗುತ್ತದೆ.

ನ. 10ರಂದು ಕಾರ್ಯಕ್ರಮ
ಮಂಗಳೂರಿನ ನಂತೂರು ಶ್ರೀಭಾರತೀ ಸಭಾಭವನದಲ್ಲಿ ನವೆಂಬರ್‌ 10ರಂದು ಬೆಳಗ್ಗೆ 9.30ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಕಾರ್ಯಕ್ರಮ ನಡೆಯಲಿದೆ.

ವೇದಮಾಯು ಆಯುರ್ವೇದ ಆಸ್ಪತ್ರೆಯ ವೈದ್ಯ ಡಾ| ಕೇಶವ್‌ ರಾಜ್‌, ಪಿಲಿಕುಳದ ಡಾ| ಉದಯ್‌ ಕುಮಾರ್‌ ಶೆಟ್ಟಿ, ಡಾ| ಮನೋಹರ್‌ ಉಪಾಧ್ಯಾಯ ಹಾಗೂ ಪಾರಂಪರಿಕ ಜ್ಞಾನ ಹೊಂದಿರುವ ಅಜ್ಜಿಯೊಬ್ಬರು ಸೇರಿ ಸಾರ್ವಜನಿಕರಿಗೆ ಮಾಹಿತಿ ನೀಡಲಿದ್ದಾರೆ. ಇಲ್ಲಿ ತಜ್ಞರು ಮಾಹಿತಿ ನೀಡುವ ಜತೆಗೆ ಸಂವಾದಕ್ಕೂ ಅವಕಾಶವಿದೆ. ಅಂತಿಮವಾಗಿ ವೈದ್ಯರು ಅವಲೋಕನ ಮಾಡಲಿದ್ದಾರೆ.

30 ಮಂದಿ ನೋಂದಣಿ
ನವೆಂಬರ್‌ ತಿಂಗಳಲ್ಲಿ ನಡೆಯುವ ಉಚಿತ ಕಾರ್ಯಕ್ರಮಕ್ಕೆ ಈಗಾಗಲೇ 30 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಮಂಗಳೂರು ನಗರ, ಬಂಟ್ವಾಳ, ಕಾಸರಗೋಡು, ಪುತ್ತೂರು ಭಾಗಗಳಿಂದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತರು ಮುಂದಾಗಿದ್ದಾರೆ. 50ಕ್ಕಿಂತಲೂ ಅಧಿಕ ಮಂದಿ ನೋಂದಣಿ ಮಾಡಿಕೊಂಡಲ್ಲಿ ಮುಂದಿನ ದಿನಗಳಲ್ಲಿ ಇತರ ಭಾಗಗಳಲ್ಲೂ ಇಂತಹ ಕಾರ್ಯಕ್ರಮಕ್ಕೆ ವೇದಿಕೆ ತಯಾರಿಸಲಾಗುವುದು.
-ರತ್ನಾಕರ್‌ ಕುಳಾಯಿ ಸಾವಯವ ಕೃಷಿಕ ಗ್ರಾಹಕ ಬಳಗದ ಕಾರ್ಯದರ್ಶಿ

ಅ. 16ರಂದು ಖಾದ್ಯ ಕಾರ್ಯಾಗಾರ
ಮಂಗಳೂರಿನ ಶಕ್ತಿನಗರದಲ್ಲಿ ಸ್ವೋದ್ಯೋಗ ಮಾಹಿತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಹಾಲು ಕೆಸುವಿನ ಗೆಡ್ಡಯಿಂದ ಖಾದ್ಯ ತಯಾರಿಯ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಜೋನ್ಸನ್‌ ನೆಲ್ಯಾಡಿ ಮತ್ತು ತಂಡ ಈ ಕಾರ್ಯಕ್ರಮ ನಡೆಸಿಕೊಡಲಿದೆ.

ಟಾಪ್ ನ್ಯೂಸ್

6-yelandur

Yelandur: ಅಪರೂಪದ ನಕ್ಷತ್ರ ಆಮೆ ಕಳ್ಳ ಸಾಗಾಟ; ಇಬ್ಬರ ಬಂಧನ

Possibility of five days of heavy rain on the coast due to the fall in atmospheric pressure

Rain; ವಾಯುಭಾರ ಕುಸಿತದಿಂದ ಕರಾವಳಿಯಲ್ಲಿ ಐದು ದಿನ ಭಾರಿ ಗಾಳಿ ಮಳೆ ಸಾಧ್ಯತೆ

CM-Shinde

Deepavali Bonus: ಚುನಾವಣೆ ಘೋಷಣೆಗೂ ಮುನ್ನ ʼಮಹಾʼ ಸರಕಾರದಿಂದ ನೌಕರರಿಗೆ ಬೋನಸ್‌!

Santhebennur: Demand for Rs 2 thousand bribe; Deputy Tahsildar Lokayukta trap

Santhebennur: 2 ಸಾವಿರ ರೂ ಲಂಚಕ್ಕೆ ಬೇಡಿಕೆ; ಉಪ ತಹಶೀಲ್ದಾರ್ ಲೋಕಾಯುಕ್ತ ಬಲೆಗೆ

Madhu Bangarappa

Dharwad: ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್ ಪಡೆದಿದ್ದು ಸರಿ ಇದೆ : ಸಚಿವ ಮಧು ಬಂಗಾರಪ್ಪ

K. S. Eshwarappa: ಅ.20ರಂದು ಬ್ರಿಗೇಡ್‌ ಹೆಸರು ಘೋಷಣೆ

K. S. Eshwarappa: ಅ.20ರಂದು ಬ್ರಿಗೇಡ್‌ ಹೆಸರು ಘೋಷಣೆ

Shivamogga: ಜೈಲಿನಿಂದ ಮೊಬೈಲ್‌ ಬಳಸಿ ಪತ್ನಿಗೆ ಬೆದರಿಕೆ ಹಾಕಿದ ಕೈದಿ!

Shivamogga: ಜೈಲಿನಿಂದ ಮೊಬೈಲ್‌ ಬಳಸಿ ಪತ್ನಿಗೆ ಬೆದರಿಕೆ ಹಾಕಿದ ಕೈದಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10

Kulai: ಅವೈಜ್ಞಾನಿಕ ಕುಳಾಯಿ ಮೀನುಗಾರಿಕಾ ಜೆಟ್ಟಿ

8(1)

Padil ಸುತ್ತಮುತ್ತ: ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಂಡಗುಂಡಿ; ಸಂಚಾರ ದುಸ್ತರ

4(4)

Mangaluru: ಜನಸಾಗರವೇ ಸಂಭ್ರಮಿಸಿದ ಮಂಗಳೂರು ದಸರಾ

3

Bajpe ಪೇಟೆ ಸಣ್ಣ ಸೇತುವೆ, ತೋಡಿಗೆ ತ್ಯಾಜ್ಯ ಎಸೆತ; ಪರಿಸರವೆಲ್ಲ ದುರ್ನಾತ

1-male

Dakshina Kannada; ಜಿಲ್ಲೆಯ ವಿವಿಧೆಡೆ ಮಳೆ : ಬೆಳ್ತಂಗಡಿಯಲ್ಲಿ ಬರೆ ಕುಸಿತ

MUST WATCH

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

ಹೊಸ ಸೇರ್ಪಡೆ

6-yelandur

Yelandur: ಅಪರೂಪದ ನಕ್ಷತ್ರ ಆಮೆ ಕಳ್ಳ ಸಾಗಾಟ; ಇಬ್ಬರ ಬಂಧನ

Possibility of five days of heavy rain on the coast due to the fall in atmospheric pressure

Rain; ವಾಯುಭಾರ ಕುಸಿತದಿಂದ ಕರಾವಳಿಯಲ್ಲಿ ಐದು ದಿನ ಭಾರಿ ಗಾಳಿ ಮಳೆ ಸಾಧ್ಯತೆ

CM-Shinde

Deepavali Bonus: ಚುನಾವಣೆ ಘೋಷಣೆಗೂ ಮುನ್ನ ʼಮಹಾʼ ಸರಕಾರದಿಂದ ನೌಕರರಿಗೆ ಬೋನಸ್‌!

Santhebennur: Demand for Rs 2 thousand bribe; Deputy Tahsildar Lokayukta trap

Santhebennur: 2 ಸಾವಿರ ರೂ ಲಂಚಕ್ಕೆ ಬೇಡಿಕೆ; ಉಪ ತಹಶೀಲ್ದಾರ್ ಲೋಕಾಯುಕ್ತ ಬಲೆಗೆ

Madhu Bangarappa

Dharwad: ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್ ಪಡೆದಿದ್ದು ಸರಿ ಇದೆ : ಸಚಿವ ಮಧು ಬಂಗಾರಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.