Udupi: ಇಂದ್ರಾಳಿ ರೈಲ್ವೇ ಸೇತುವೆ ಕಾಮಗಾರಿಗೆಂದು ಮುಕ್ತಿ?

ಸವಾರರ ನಿತ್ಯ ಸಂಕಟ, ವ್ಯಾಪಾರಿಗಳಿಗೆ ಆರ್ಥಿಕ ಸಂಕಷ್ಟ; ಒಂದೊಂದು ಡ್ರಾಯಿಂಗ್‌ಗೂ ಬೇಕಿದೆ ಏಳೆಂಟು ಸಹಿ; ಎಲ್ಲದಕ್ಕೂ ರೈಲ್ವೇ ಇಲಾಖೆ ಅನುಮತಿಗೆೆ ಕಾಯಬೇಕು; ಗರ್ಡರ್‌ ಬಂದು ವರ್ಷ ಕಳೆದರೂ ಚುರುಕು ಪಡೆಯದ ಕಾಮಗಾರಿ

Team Udayavani, Oct 15, 2024, 3:52 PM IST

11

ಉಡುಪಿ: ಹಲವಾರು ವರ್ಷಗಳಿಂದ ಗ್ರಹಣ ಬಡಿದಂತಿರುವ ಇಂದ್ರಾಳಿ ರೈಲ್ವೇ ಸೇತುವೆ ಕಾಮಗಾರಿಗೆ ಮುಕ್ತಿ ಯಾವಾಗ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ.

ಗರ್ಡರ್‌ ಬಂದ ತಿಂಗಳೊಳಗೆ ಕಾಮಗಾರಿ ಶುರುವಾಗಿ ಎರಡು ಮೂರು ತಿಂಗಳಲ್ಲಿ ಸೇತುವೆ ಸಂಚಾರ ಮುಕ್ತವಾಗಲಿದೆ ಎಂದು ಜನ ಪ್ರತಿನಿಧಿಗಳು, ಅಧಿಕಾರಿಗಳು ವರ್ಷದ ಹಿಂದೇ ಹೇಳಿದ್ದರು. ಆದರೆ, ಇಲ್ಲಿನ ಸ್ಥಿತಿಯೇ ಬೇರೆಯಿದೆ. ಗರ್ಡರ್‌ ಬಂದು ವರ್ಷ ಕಳೆದರೂ ಕಾಮಗಾರಿ ಮಾತ್ರ ಸಾಗುವುದೇ ಇಲ್ಲ. ಕಾರಣ ಒಂದು ನಟ್‌, ಬೋಲ್ಡ್‌ ಫಿಟ್‌ ಮಾಡಲೂ ರೈಲ್ವೇ ಇಲಾಖೆಯವರು ಅನುಮತಿಸಬೇಕು. ಇಲಾಖೆ ಅಧಿಕಾರಿಗಳನ್ನು ಹಿಡಿಯುವುದೇ ಗುತ್ತಿಗೆದಾರರಿಗೆ ಸವಾಲಾಗಿದೆ.

ಇಲ್ಲಿನ ಸಂಪರ್ಕ ರಸ್ತೆ ಕಾಮಗಾರಿ ಪೂರ್ಣಗೊಂಡು ಹಲವು ವರ್ಷ ಕಳೆದರೂ ರೈಲ್ವೇ ಸೇತುವೆ ಮಾತ್ರ ಐದು ವರ್ಷದಿಂದ ಕಾಮಗಾರಿಯೇ ಕಂಡಿಲ್ಲ. ಒಂದೇ ರಸ್ತೆಯಲ್ಲಿ ದ್ವಿಮುಖ ಸಂಚಾರ ನಿತ್ಯವೂ ಪ್ರಯಾಣಿಕರನ್ನು ಹೈರಾಣಾಗಿಸುತ್ತಿದೆ.

ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ವಿಪರೀತ ವಾಹನ ದಟ್ಟಣೆಯಿಂದ ಟ್ರಾಫಿಕ್‌ ಜಾಮ್‌ ಸಂಭವಿಸಿ ಜನರು ತೊಂದರೆ ಅನುಭವಿಸುವಂತಾಗುತ್ತದೆ. ಜನರ ಓಡಾಟಕ್ಕಂತೂ ಇಲ್ಲಿ ಸಾಧ್ಯವೇ ಇಲ್ಲದ ಪರಿಸ್ಥಿತಿ ನಿರ್ಮಾಣಗೊಂಡಿದೆ. ರೈಲ್ವೇ ಸೇತುವೆ ನಿರ್ಮಾಣಕ್ಕೆ ಗರ್ಡರ್‌ ಬಂದೂ ವರ್ಷ ಕಳೆಯುತ್ತ ಬಂದರೂ ಇನ್ನೂ ಸೇತುವೆ ಕೆಲಸ ಚುರುಕು ಪಡೆದಿಲ್ಲ ಎಂದು ಸ್ಥಳೀಯರ ಅಸಮಾಧಾನ ಹೊರಹಾಕಿದ್ದಾರೆ.

ಜನರ ಗೋಳು ಕೇಳುವರಾರು?
ಹೆದ್ದಾರಿ ಅಗಲಗೊಂಡ ಅನಂತರ ರೈಲ್ವೇ ಸೇತುವೆ ಕಾಮಗಾರಿ ಅರ್ಧಕ್ಕೆ ನಿಂತ ಹಿನ್ನೆಲೆಯಲ್ಲಿ ಜನರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಈ ಪರಿಸರದಲ್ಲಿ ಆರ್ಥಿಕತೆ ಹೊಡೆತ ಬಿದ್ದಿದೆ. ಸಮೀಪದಲ್ಲಿರುವ ಅಂಗಡಿ, ಹೊಟೇಲ್‌, ಪೆಟ್ರೋಲ್‌ ಬಂಕ್‌ಗೆ ಸಮರ್ಪಕವಾಗಿ ವ್ಯಾಪಾರವಿಲ್ಲದೆ ಪರಿತಪಿಸುವಂತಾಗಿದೆ. ಸಮೀಪದಲ್ಲಿಯೇ ಶಾಲೆ, ಮಸೀದಿ, ರೈಲ್ವೇ ನಿಲ್ದಾಣ ರಸ್ತೆ, ಬ್ಯಾಂಕ್‌ಗಳಿದ್ದು, ಇಲ್ಲಿನ ಓಡಾಟಕ್ಕೆ ಜನ ಸಾಮಾನ್ಯರು, ಮಕ್ಕಳು ಸಾಕಷ್ಟು ಹಿಂಸೆ ಅನುಭವಿಸುತ್ತಿದ್ದಾರೆ. ಈ ಕಾಮಗಾರಿಯ ಗುತ್ತಿಗೆದಾರರು ವೇತನ ಪಾವತಿಸದ ಕಾರಣ ಕಾರ್ಮಿಕರು ಕೂಡ ಮುಷ್ಕರ ಹೂಡಿದ್ದಾರೆ.

ಪ್ರತಿಯೊಂದನ್ನು ಪರಿಶೀಲಿಸುವ ರೈಲ್ವೇ
ಇಂದ್ರಾಳಿ ರೈಲ್ವೇ ಸೇತುವೆ ನಿರ್ಮಾಣ ವಿಳಂಬಕ್ಕೆ ಸುರಕ್ಷತಾ ದೃಷ್ಟಿಯಿಂದ ರೈಲ್ವೇ ಇಲಾಖೆ ಮಾರ್ಗದರ್ಶಿಯೇ ಕಾರಣ ಎನ್ನಲಾಗುತ್ತಿದೆ. ಗರ್ಡರ್‌ ಜೋಡಣೆ ವೆಲ್ಡಿಂಗ್‌ ಗುಣಮಟ್ಟವನ್ನು ರೈಲ್ವೇ ಸುರಕ್ಷತಾ ಆಯುಕ್ತಾಲಯ ಮತ್ತು ರೈಲ್ವೇ ಆರ್‌ಡಿಎಸ್‌ಒ(ರಿಸರ್ಚ್‌ ಡಿಸೈನ್‌ ಆ್ಯಂಡ್‌ ಸ್ಟಾಂಡರ್ಡ್‌ ಆರ್ಗನೈಸೇಶನ್‌) ಸಂಬಂಧಪಟ್ಟ ತಾಂತ್ರಿಕ ಎಂಜಿನಿಯರ್‌ ಪರಿಶೀಲಿಸುವುದು ಕಡ್ಡಾಯವಾಗಿದೆ. ಪ್ರತಿಯೊಂದು ಕೆಲಸವೂ ಅವರು ಅನುಮೋದನೆಗೊಂಡ ಅನಂತರವೇ ಮುನ್ನಡೆಯಾಗಬೇಕು. ಗರ್ಡರ್‌ ರೂಪುಗೊಳ್ಳುತ್ತಿರುವ ಪ್ರತೀ ನಕ್ಷೆಗೂ ಆರ್‌ಡಿಎಸ್‌ಒ, ರೈಲ್ವೇ ಸೇಫ್ಟಿ ಸಂಬಂಧಿಸಿದ ಅಧಿಕಾರಿಗಳ ಏಳೆಂಟು ಸಹಿಗೆ ಹೆದ್ದಾರಿ ಎಂಜಿನಿಯರ್‌ ಅವರ ಹಿಂದೆ ಓಡಬೇಕು. ಒಂದೊಂದು ಸಹಿ, ಒಂದೊಂದು ಅನುಮೋದನೆಯಾಗಲು 8ರಿಂದ 9 ದಿನವಾದರೂ ಸಮಯ ತಗಲುತ್ತಿದೆ ಎಂದು ಹೆದ್ದಾರಿ ಸಚಿವಾಲಯ ಮೂಲಗಳು ತಿಳಿಸಿವೆ. ಸದ್ಯದ ಮಟ್ಟಿಗೆ ಗರ್ಡರ್‌ನ ಜೋಡಣೆ ಕೆಲಸ ವೇಗದಿಂದ ಸಾಗುತ್ತಿದೆ. ಸೇತುವೆ ಶೀಘ್ರ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕಾಮಗಾರಿ ಚುರುಕು ಪಡೆದುಕೊಂಡಿದೆ ಎಂದು ಎಂಜಿನಿಯರ್‌ ಸೂಚಿಸಿದ್ದಾರೆ.

ಕ್ರಮ ಕೈಗೊಳ್ಳುವ ಎಚ್ಚರಿಕೆ
ಇಂದ್ರಾಳಿ ರೈಲ್ವೇ ಕಾಮಗಾರಿ ಸಂಬಂಧಿಸಿ ಶೀಘ್ರ ಪೂರ್ಣಗೊಳಿಸಲು ಹೆದ್ದಾರಿ, ರೈಲ್ವೇ ಸಚಿವಾಲಯದ ಅಧಿಕಾರಿಗಳ ಜತೆಗೆ ಚರ್ಚಿಸಿ ಸೂಚನೆ ನೀಡಲಾಗಿದೆ. ವಿಳಂಬಕ್ಕೆ ಕಾರಣವಾದ ಅಧಿಕಾರಿಗಳ ವಿರುದ್ದ ಕ್ರಮ ತೆಗೆದುಕೊಳ್ಳುವ ಬಗ್ಗೆಯೂ ಎಚ್ಚರಿಕೆ ನೀಡಲಾಗಿದೆ.
-ಡಾ| ಕೆ. ವಿದ್ಯಾಕುಮಾರಿ, ಜಿಲ್ಲಾಧಿಕಾರಿ, ಉಡುಪಿ.

ಅಪಘಾತಗಳ ಸರಮಾಲೆ
ಸೇತುವೆ ಕಾಮಗಾರಿ ಅರ್ಧಕ್ಕೆ ನಿಂತ ಬಳಿಕ ಈ ಪರಿಸರದಲ್ಲಿ ನಿರಂತರ ಅಪಘಾತಗಳು ಸಂಭವಿಸುತ್ತಿವೆ. ರಾತ್ರಿ, ಹಗಲು ವಾಹನಗಳು ನಿಯಂತ್ರಣ ತಪ್ಪಿ ಅಪಘಾತ ವಾಗುತ್ತಿದ್ದು, ಹಲವು ಮಂದಿ ಪೆಟ್ಟು ಮಾಡಿಕೊಂಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂಜೆ ಮತ್ತು ಬೆಳಗ್ಗೆ ಸಮಯದಲ್ಲಿ ಇಲ್ಲಿನ ಶಾಲೆ ಬಿಡುವ ಸಮಯದಲ್ಲಿ ಮಕ್ಕಳು ರಸ್ತೆ ದಾಟಲು ಆತಂಕ ಪಡುತ್ತಿದ್ದಾರೆ. ಸ್ವಲ್ವ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.

-ಅವಿನ್‌ ಶೆಟ್ಟಿ

ಟಾಪ್ ನ್ಯೂಸ್

6-yelandur

Yelandur: ಅಪರೂಪದ ನಕ್ಷತ್ರ ಆಮೆ ಕಳ್ಳ ಸಾಗಾಟ; ಇಬ್ಬರ ಬಂಧನ

Possibility of five days of heavy rain on the coast due to the fall in atmospheric pressure

Rain; ವಾಯುಭಾರ ಕುಸಿತದಿಂದ ಕರಾವಳಿಯಲ್ಲಿ ಐದು ದಿನ ಭಾರಿ ಗಾಳಿ ಮಳೆ ಸಾಧ್ಯತೆ

CM-Shinde

Deepavali Bonus: ಚುನಾವಣೆ ಘೋಷಣೆಗೂ ಮುನ್ನ ʼಮಹಾʼ ಸರಕಾರದಿಂದ ನೌಕರರಿಗೆ ಬೋನಸ್‌!

Santhebennur: Demand for Rs 2 thousand bribe; Deputy Tahsildar Lokayukta trap

Santhebennur: 2 ಸಾವಿರ ರೂ ಲಂಚಕ್ಕೆ ಬೇಡಿಕೆ; ಉಪ ತಹಶೀಲ್ದಾರ್ ಲೋಕಾಯುಕ್ತ ಬಲೆಗೆ

Madhu Bangarappa

Dharwad: ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್ ಪಡೆದಿದ್ದು ಸರಿ ಇದೆ : ಸಚಿವ ಮಧು ಬಂಗಾರಪ್ಪ

K. S. Eshwarappa: ಅ.20ರಂದು ಬ್ರಿಗೇಡ್‌ ಹೆಸರು ಘೋಷಣೆ

K. S. Eshwarappa: ಅ.20ರಂದು ಬ್ರಿಗೇಡ್‌ ಹೆಸರು ಘೋಷಣೆ

Shivamogga: ಜೈಲಿನಿಂದ ಮೊಬೈಲ್‌ ಬಳಸಿ ಪತ್ನಿಗೆ ಬೆದರಿಕೆ ಹಾಕಿದ ಕೈದಿ!

Shivamogga: ಜೈಲಿನಿಂದ ಮೊಬೈಲ್‌ ಬಳಸಿ ಪತ್ನಿಗೆ ಬೆದರಿಕೆ ಹಾಕಿದ ಕೈದಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Possibility of five days of heavy rain on the coast due to the fall in atmospheric pressure

Rain; ವಾಯುಭಾರ ಕುಸಿತದಿಂದ ಕರಾವಳಿಯಲ್ಲಿ ಐದು ದಿನ ಭಾರಿ ಗಾಳಿ ಮಳೆ ಸಾಧ್ಯತೆ

Udupi: ಬಿಎಸ್‌ ಎನ್‌ ಎಲ್‌ ಕೇಬಲ್‌ ಕಳವು-ಗುಜರಿ ಅಂಗಡಿಯಲ್ಲಿ ಕಾಪರ್‌ ಕೇಬಲ್‌ ಪತ್ತೆ!

Udupi: ಬಿಎಸ್‌ ಎನ್‌ ಎಲ್‌ ಕೇಬಲ್‌ ಕಳವು-ಗುಜರಿ ಅಂಗಡಿಯಲ್ಲಿ ಕಾಪರ್‌ ಕೇಬಲ್‌ ಪತ್ತೆ!

13

Shirva: ಕೊರಗರೂ ಮನುಷ್ಯರೆಂಬ ಭಾವನೆ ಸಾರ್ವತ್ರಿಕವಾಗಲಿ

12

Padubidri: ಮುದರಂಗಡಿಯಲ್ಲಿ ಕಾಡುಕೋಣ ಹಾವಳಿ; ವಾಹನ ಸವಾರರಿಗೆ ಅಪಾಯ

1-byndoor

Byndoor: ಡಿವೈಡರ್‌ ಗೆ ಗುದ್ದಿದ ಸ್ಕೂಟರ್‌; ಸಹಸವಾರ ಸಾವು, ಸವಾರ ಗಂಭೀರ

MUST WATCH

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

ಹೊಸ ಸೇರ್ಪಡೆ

6-yelandur

Yelandur: ಅಪರೂಪದ ನಕ್ಷತ್ರ ಆಮೆ ಕಳ್ಳ ಸಾಗಾಟ; ಇಬ್ಬರ ಬಂಧನ

Possibility of five days of heavy rain on the coast due to the fall in atmospheric pressure

Rain; ವಾಯುಭಾರ ಕುಸಿತದಿಂದ ಕರಾವಳಿಯಲ್ಲಿ ಐದು ದಿನ ಭಾರಿ ಗಾಳಿ ಮಳೆ ಸಾಧ್ಯತೆ

CM-Shinde

Deepavali Bonus: ಚುನಾವಣೆ ಘೋಷಣೆಗೂ ಮುನ್ನ ʼಮಹಾʼ ಸರಕಾರದಿಂದ ನೌಕರರಿಗೆ ಬೋನಸ್‌!

Santhebennur: Demand for Rs 2 thousand bribe; Deputy Tahsildar Lokayukta trap

Santhebennur: 2 ಸಾವಿರ ರೂ ಲಂಚಕ್ಕೆ ಬೇಡಿಕೆ; ಉಪ ತಹಶೀಲ್ದಾರ್ ಲೋಕಾಯುಕ್ತ ಬಲೆಗೆ

Madhu Bangarappa

Dharwad: ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್ ಪಡೆದಿದ್ದು ಸರಿ ಇದೆ : ಸಚಿವ ಮಧು ಬಂಗಾರಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.