Trasi-ಮರವಂತೆ ಬೀಚ್: ವಾಟರ್ ಗೇಮ್ಸ್ ಬೋಟಿಂಗ್ ಮತ್ತೆ ಆರಂಭ
| ದಸರಾ ರಜೆಯಲ್ಲಿ ಪ್ರವಾಸಿಗರ ದಂಡು | ಕಲ್ಲು ಬಂಡೆಗಳಲ್ಲಿ ವಿಹರಿಸುವಾಗ ಎಚ್ಚರವಿರಲಿ
Team Udayavani, Oct 16, 2024, 3:33 PM IST
ತ್ರಾಸಿಯ ಕಡಲ ತಟದಲ್ಲಿ ಬೋಟಿಂಗ್.
ಕುಂದಾಪುರ: ದಸರಾ ರಜೆಯ ಹಿನ್ನೆಲೆಯಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಕರಾವಳಿಯ ಪ್ರವಾಸಿ ತಾಣಗಳಿಗೆ ಜನ ಹರಿದು ಬರುತ್ತಿದ್ದು, ಅದೇ ರೀತಿ ವಿಶ್ವ ಪ್ರಸಿದ್ಧ ತ್ರಾಸಿ – ಮರವಂತೆ ಬೀಚ್ಗೂ ಬರುವಂತಹ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದೆ.
ದಸರಾ ರಜೆಯ ಹಿನ್ನೆಲೆಯಲ್ಲಿ ಕರಾವಳಿಯ ದೇಗುಲಗಳು, ಪ್ರವಾಸಿ ತಾಣಗಳಿಗೆ ಬರುವವರ ಸಂಖ್ಯೆ ಹೆಚ್ಚಿದ್ದು, ಹಾಗೆಯೇ ತ್ರಾಸಿ – ಮರವಂತೆ ಕಡಲ ಕಿನಾರೆಯಲ್ಲೂ ಪ್ರವಾಸಿಗರ ದಂಡೇ ಕಂಡು ಬರುತ್ತಿದೆ. ನವರಾತ್ರಿಗೂ ಮೊದಲು ಅಷ್ಟೊಂದು ಸಂಖ್ಯೆಯ ಪ್ರವಾಸಿಗರು ಇರಲಿಲ್ಲ. ಈಗ ತುಸು ಹೆಚ್ಚಿನ ಸಂಖ್ಯೆಯ ಜನ ಕಂಡು ಬರುತ್ತಿದ್ದಾರೆ.
ನಿರ್ಲಕ್ಷ್ಯ ಬೇಡ; ಎಚ್ಚರಿಕೆಯಿರಲಿ
ಹೆದ್ದಾರಿಯಲ್ಲಿ ಸಂಚರಿಸುವ ಸಾಕಷ್ಟು ಜನ ಪ್ರವಾಸಿಗರು ಇಲ್ಲಿ ಕೆಲ ಹೊತ್ತು ವಾಹನ ನಿಲ್ಲಿಸಿ, ವಿಹರಿಸಿ ತೆರಳುತ್ತಿದ್ದಾರೆ. ಆದರೆ ನಿರಂತರ ಮಳೆಯಾಗುತ್ತಿರುವುದರಿಂದ ಈಗಲೂ ಕಲ್ಲು ಬಂಡೆಗಳು ಪಾಚಿಗಟ್ಟಿ ಜಾರುತ್ತಿದ್ದು, ಸ್ವಲ್ಪ ಯಾಮಾರಿದರೂ ಅಪಾಯ ಸಂಭವಿಸುವ ಸಾಧ್ಯತೆ ಇರುತ್ತದೆ. ಇದಲ್ಲದೆ ಇನ್ನು ಕೆಲವರು ನೀರಿಗಿಳಿದು ಮೋಜಿ, ಮಸ್ತಿಯಲ್ಲಿ ತೊಡಗುತ್ತಿರುವುದು ಕಂಡು ಬಂದಿದ್ದು, ಇಲ್ಲಿನ ಕಡಲ ತೀರದಲ್ಲಿ ಜಾಸ್ತಿ ಆಳ ಇರುವುದರಿಂದ ಅಲೆಗಳು ಅಪ್ಪಳಿಸಿದರೆ ಅಪಾಯ. ಎಚ್ಚರಿಕೆ ಫಲಕ ಹಾಕಿದರೂ, ಅಪಾಯದ ಗಡಿ ದಾಟದಂತೆ ಕೆಂಪು ರಿಬ್ಬನ್ ಅಳವಡಿಸಿದ್ದರೂ, ಅದಕ್ಕೆ ಬೆಲೆ ನೀಡುತ್ತಿಲ್ಲ. ಆದ್ದರಿಂದ ಪ್ರವಾಸಿಗರು ನಿರ್ಲಕ್ಷ್ಯ ವಹಿಸದೇ, ಆದಷ್ಟು ಎಚ್ಚರಿಕೆಯಿಂದ ಇರಬೇಕಾದುದು ಅತ್ಯಗತ್ಯ.
ವಾಟರ್ ಗೇಮ್ಸ್ ಆರಂಭ
ತ್ರಾಸಿಯ ಕಡಲ ಕಿನಾರೆಯಲ್ಲಿ ಕಳೆದ ವರ್ಷದಿಂದ ವಿವಿಧ ರೀತಿಯ ವಾಟರ್ ಗೇಮ್ಸ್ ಗಳನ್ನು ಆರಂಭಿಸಲಾಗಿದ್ದು, ಮಳೆಗಾಲದಲ್ಲಿ ಸ್ಥಗಿತಗೊಳಿಸಲಾಗಿತ್ತು. ಈಗ ಅಕ್ಟೋಬರ್ ಮೊದಲ ವಾರದಿಂದ ಮತ್ತೆ ಆರಂಭಗೊಂಡಿದೆ. ಬೋಟಿಂಗ್, ಮರಳುಗಾಡಿನ ಬೈಕ್ ಸಹಿತ ವಿವಿಧ ಮೋಜು ಮಸ್ತಿಯ ಆಟಗಳು ಇಲ್ಲಿದ್ದು, ಸಂಜೆಯ ವೇಳೆ ಹೆಚ್ಚಿನ ಪ್ರವಾಸಿಗರು ಆಗಮಿಸಿ, ಆಟೋಟಗಳಲ್ಲಿ ಭಾಗಿಯಾಗುತ್ತಿರುವುದು ಕಂಡು ಬರುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ವಾಲ್ಮೀಕಿ ನಿಗಮದಲ್ಲಿ ಆಗಿರುವ ಅವ್ಯವಹಾರ ಸರಿಪಡಿಸಬೇಕು: ಪ್ರಸನ್ನಾನಂದಪುರಿ ಸ್ವಾಮೀಜಿ
Ellige Payana Yaavudo Daari Movie: ಟ್ರೇಲರ್ನಲ್ಲಿ ಅಭಿಮನ್ಯು ಪಯಣ
BBK11: ಗಲಾಟೆ ಭರದಲ್ಲಿ ಮಂಜುಗೆ ಕಿಸ್ ಮಾಡಿದ್ರಾ ಜಗದೀಶ್? ಏನಿದು ವೈರಲ್ ವಿಡಿಯೋ?
Drinking Water: ಕಾವೇರಿ 6ನೇ ಹಂತದ ಯೋಜನೆಗೆ ಡಿಪಿಆರ್ ಸಿದ್ಧ: ಡಿಸಿಎಂ ಶಿವಕುಮಾರ್
Kollywood: 33 ವರ್ಷದ ಬಳಿಕ ರಜಿನಿ ಜತೆ ಮಣಿರತ್ನಂ ಸಿನಿಮಾ? ನಿರ್ದೇಶಕರ ಪತ್ನಿ ಹೇಳಿದ್ದೇನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.