Investigation: ಗೆಳೆಯನನ್ನು ಸಿಲುಕಿಸಲು ಬಾಲಕನಿಂದ ಟ್ವೀಟ್ ಬಾಂಬ್!
Team Udayavani, Oct 17, 2024, 7:50 AM IST
ಹೊಸದಿಲ್ಲಿ: ಕೇವಲ 3 ದಿನಗಳ ಅವಧಿಯಲ್ಲಿ ದೇಶದ ಸುಮಾರು 20 ಅಂತಾರಾಷ್ಟ್ರೀಯ ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. 4 ಕರೆಗಳ ಹಿಂದಿನ ಆರೋಪಿ ಪತ್ತೆಯಾಗಿದ್ದು, ತನಿಖೆ ಆರಂಭಿಸಿದ ಪೊಲೀಸರಿಗೆ ಅಚ್ಚರಿ ಕಾದಿತ್ತು.
ಏಕೆಂದರೆ ಈ ಕರೆಗಳನ್ನು ಮಾಡಿದ್ದು ಛತ್ತೀಸ್ಗಢದ ರಾಜ್ನಂದ್ಗಾವ್ನ ಅಪ್ರಾಪ್ತ ವಯಸ್ಕ. ಆತ ತನ್ನ ಗೆಳೆಯನ ಮೇಲಿನ ದ್ವೇಷಕ್ಕೆ ಈ ಕೃತ್ಯ ಎಸಗಿರುವುದಾಗಿ ಹೇಳಿದ್ದಾನೆ! 11ನೇ ತರಗತಿ ಅರ್ಧಕ್ಕೇ ಬಿಟ್ಟಿರುವ ಈತ ಗೆಳೆಯನೊಂದಿಗೆ ಹಣದ ವಿಚಾರವಾಗಿ ಜಗಳವಾಡಿದ್ದು, ಬಳಿಕ ಆತನನ್ನು ಹುಸಿ ಬಾಂಬ್ ಪ್ರಕರಣದಲ್ಲಿ ಸಿಲುಕಿಸುವ ಉದ್ದೇಶದಿಂದ ಆತನ ಹೆಸರಲ್ಲಿ ಟ್ವೀಟರ್ ಖಾತೆ ತೆರೆದು ಅ. 14ರಂದು ನ್ಯೂಯಾರ್ಕ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ, ಮಸ್ಕತ್ಗೆ ಹೊರಟಿದ್ದ 2 ಹಾಗೂ ಜೆಡ್ಡಾಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಬಾಂಬ್ ಇರುವುದಾಗಿ ಸಂದೇಶ ಕಳುಹಿಸಿದ್ದ.
ಇನ್ನೂ ಕೆಲವು ಪ್ರಕರಣಗಳು ದಾಖ ಲಾಗಿದ್ದು, ಡಾರ್ಕ್ವೆಬ್ ಮೂಲಕ ಈ ಕೃತ್ಯ ನಡೆಸಲಾಗುತ್ತಿದೆ; ಕೆಲವು ಆರೋಪಿಗಳನ್ನು ಗುರುತಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಹೇಳಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court ಮುಂದಿನ ಮುಖ್ಯ ನ್ಯಾಯಾಧೀಶರಾಗಿ ನ್ಯಾ. ಸಂಜೀವ್ ಖನ್ನಾ ಹೆಸರು ಶಿಫಾರಸು
Tragedy: ಕಾರು ಪಲ್ಟಿಯಾಗಿ ಮಕ್ಕಳು ಸೇರಿದಂತೆ ಒಂದೇ ಕುಟುಂಬದ 7 ಮಂದಿ ಮೃತ್ಯು, ಸಿಎಂ ಸಂತಾಪ
India- Canada: ಭಾರತದ ಮೇಲೆ ನಿರ್ಬಂಧ ವಿಧಿಸಿದರೆ ಕೆನಡಾಕ್ಕೆ ನಷ್ಟ!
Raids: ಜೂನಿಯರ್ ಆಡಿಟರ್ ಮನೆಯಲ್ಲಿ ಕೆಜಿಗಟ್ಟಲೆ ಚಿನ್ನ, ಬೆಳ್ಳಿ ಕಂಡು ಅಧಿಕಾರಿಗಳೇ ದಂಗು
Haryana: 2ನೇ ಬಾರಿಗೆ ಸಿಎಂ ಆಗಿ ಸೈನಿ ಇಂದು ಪ್ರಮಾಣ ವಚನ, ಪ್ರಧಾನಿ, ಬಿಜೆಪಿ ಗಣ್ಯರು ಭಾಗಿ
MUST WATCH
ಹೊಸ ಸೇರ್ಪಡೆ
Channapatna ಗರಿಗೆದರಿದ ʼಕೈʼ ಕಸರತ್ತು; ಡಿಕೆ ಸುರೇಶ್ ಪರವಾಗಿ ಎಂ.ಸಿ.ಅಶ್ವಥ್ ಚಂಡಿಕಾಯಾಗ
Supreme Court ಮುಂದಿನ ಮುಖ್ಯ ನ್ಯಾಯಾಧೀಶರಾಗಿ ನ್ಯಾ. ಸಂಜೀವ್ ಖನ್ನಾ ಹೆಸರು ಶಿಫಾರಸು
Argentina: ಹೋಟೆಲ್ ಬಾಲ್ಕನಿಯ 3ನೇ ಮಹಡಿಯಿಂದ ಬಿದ್ದು ಖ್ಯಾತ ಗಾಯಕ ಮೃತ್ಯು
Bengaluru: ರಾಜಕಾಲುವೆ ಒತ್ತುವರಿಯೇ ಅವಾಂತರಕ್ಕೆ ಕಾರಣ; ಆಯುಕ್ತ
Haveri: ಧಾರಾಕಾರ ಮಳೆ; ರಸ್ತೆ ಕಾಣದೆ ಚರಂಡಿಗೆ ಬಿದ್ದು ಕೊಚ್ಚಿ ಹೋದ ಬಾಲಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.