Vitla: ಈ ಕಿಂಡಿ ಅಣೆಕಟ್ಟಲ್ಲಿ ನೀರೇ ನಿಲ್ಲುವುದಿಲ್ಲ, ಓಡಾಟಕ್ಕೂ ಭಯ!

ಸೂಕ್ತ ನಿರ್ವಹಣೆ ಇಲ್ಲದೆ ಸೊರಗಿದ ಪುಣಚ ಗ್ರಾಮದ ಆಲಂತಡ್ಕದ 30 ವರ್ಷಗಳಷ್ಟು ಹಳೆಯ ಅಣೆಕಟ್ಟು; 3 ಕಿ.ಮೀ. ವ್ಯಾಪ್ತಿಯ ಕೃಷಿಕರಿಗೆ ಅನುಕೂಲವಾಗಿತ್ತು; ಈಗಲೂ 150ಕ್ಕೂ ಅಧಿಕ ಮಂದಿಗೆ ಇದುವೇ ಕಾಲು ಸಂಕ

Team Udayavani, Oct 17, 2024, 1:00 PM IST

1(1)

3ನೇ ವಾರ್ಡಿನ ಆಲಂತಡ್ಕ ದಿಂದ 4ನೇ ವಾರ್ಡಿನ ಮಲ್ಯ ಭಾಗವನ್ನು ಸಂಪರ್ಕಿಸುವ ನಿಟ್ಟಿನಲ್ಲಿ ನಿರ್ಮಾಣವಾದ ಕಿಂಡಿ ಅಣೆಕಟ್ಟು.

ವಿಟ್ಲ: ಪುಣಚ ಗ್ರಾಮದ 3ನೇ ವಾರ್ಡಿನ ಆಲಂತಡ್ಕದಿಂದ 4ನೇ ವಾರ್ಡಿನ ಮಲ್ಯ ಪ್ರದೇಶವನ್ನು ಸಂಪರ್ಕಿಸುವ ಕಿಂಡಿ ಅಣೆಕಟ್ಟು ಸಹಿತ ಕಾಲು ಸಂಕವನ್ನು ಸುಮಾರು 30 ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿತ್ತು. ಸಮರ್ಪಕವಾದ ನಿರ್ವಹಣೆ ಇಲ್ಲದೆ ನಡೆದಾಡಲೂ ಆಗದ, ನೀರೂ ನಿಲ್ಲದ ಕಿಂಡಿ ಅಣೆಕಟ್ಟೆ ಅಪಾಯದ ಸನ್ನಿವೇಶಕ್ಕೆ ಕಾರಣವಾಗಿದೆ.

ಕಾಲು ಸಂಕದ ತಳ ಭಾಗದಲ್ಲಿ ತುಕ್ಕು ಹಿಡಿದ ಸ್ಥಿತಿಯಲ್ಲಿ ಸರಳುಗಳು ಕಾಣಿಸಲಾರಂಭಿಸಿದೆ. ಹೀಗಾಗಿ ನಡೆದಾಡಲು ಭಯಪಡುವಂಥ ಸ್ಥಿತಿ ನಿರ್ಮಾಣವಾಗಿದೆ. ಎರಡು ಬದಿಯ ತಡೆಗೋಡೆಗಳೂ ಕುಸಿದುಬಿದ್ದಿದೆ. ಮಳೆಗಾ ಲದಲ್ಲಿ ನೀರು ತುಂಬಿ ಹರಿಯುವಾಗ ಪಾದಚಾರಿಗಳು ಕಾಲುಸಂಕ ಮುರಿದುಬಿದ್ದು ನೀರಿನಲ್ಲಿ ಕೊಚ್ಚಿಹೋಗುವ ಸಂಭವವಿದೆ. ಇದನ್ನು ಮನಗಂಡ ಗ್ರಾಮಸ್ಥರು ಸ್ಥಳೀಯಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.

ನೀರು ನಿಲ್ಲುವುದಿಲ್ಲ, ನಡೆದಾಡಲು ಭಯ
ಈ ಕಿಂಡಿ ಅಣೆಕಟ್ಟಿನಲ್ಲಿ ನೀರು ತುಂಬಿದಾಗ ಸುಮಾರು 3 ಕಿ.ಮೀ. ವ್ಯಾಪ್ತಿಯ ಕೃಷಿಕ‌ರಿಗೆ ಪ್ರಯೋಜನವಾಗುತ್ತಿತ್ತು. ಆದರೆ ಅಣೆಕಟ್ಟಿನ ಹಲಗೆಗಳು ಎರಡನೇ ವರ್ಷಕ್ಕೇ ಬರಲಿಲ್ಲ. ಆಮೇಲೆ ಸ್ಥಳೀಯರು ತಾವೇ ಖರ್ಚು ಮಾಡಿ, ಕೃಷಿ ಉಪಯೋಗಕ್ಕೆ ನೀರು ಬೇಕೆಂದು ತಡೆಕಟ್ಟುತ್ತಿದ್ದರು. ಅದು ಕೂಡಾ ಸುರಕ್ಷಿತವಾಗಿರಲಿಲ್ಲ. ನೀರು ಸೋರುತ್ತಿತ್ತು. ಶಾಲಾ ಮಕ್ಕಳು ಸೇರಿದಂತೆ ಸುಮಾರು 150ಕ್ಕೂ ಅಧಿಕ ಮಂದಿ ಪ್ರತೀ ದಿನ ಭಯದಲ್ಲೇ ಈ ಕಾಲು ಸಂಕದ ಮೇಲೆ ಓಡಾಡುತ್ತಿದ್ದಾರೆ. ಕಾಲು ಸಂಕದ ಹಾಗೂ ಅಣೆಕಟ್ಟಿನ ದುರಸ್ತಿಯನ್ನು ಪ್ರತೀವರ್ಷ ನಡೆಸದೇ ಇದ್ದುದರಿಂದ, ಸಂಪರ್ಕ ವ್ಯವಸ್ಥೆ ಕಡಿದುಹೋಗುವ ಸಾಧ್ಯತೆಯಿದೆ.

ಅಣೆಕಟ್ಟು ನಿರ್ವಹಣೆಗೆ ಆಗ್ರಹ
ಸ್ಥಳೀಯರ ಪ್ರಕಾರ ಕಲ್ಲಾಜೆ – ಮಲ್ಯ ಕಿಂಡಿ ಅಣೆಕಟ್ಟು 1995ರಲ್ಲಿ ನಿರ್ಮಾಣವಾಗಿದೆ. ಆಗಿನ ಜಿಲ್ಲಾ ಪಂಚಾಯತ್‌ ಸದಸ್ಯ ಕೃಷ್ಣ ನಾಯ್ಕ ಅವರು ಅನುದಾನ ಒದಗಿಸಿದ್ದರೆನ್ನಲಾಗಿದೆ. ಪುಣಚ ಗ್ರಾಮದ 3 ಮತ್ತು 4ನೇ ವಾರ್ಡ್‌ಗಳ ನಡುವೆ ಸಂಪರ್ಕ ಕಲ್ಪಿಸುವ ಈ ಕಾಲು ಸಂಕವನ್ನು ನಿರ್ವಹಣೆ ಮಾಡಬೇಕೆಂದು ಗ್ರಾಮಸ್ಥರಾದ ವಸಂತ ನಾಯಕ್‌ ಆಜೇರು ಅವರು ಪಂಚಾಯತ್‌ ಅಭಿವೃದ್ಧಿ ಅಧಿಕಾರಿ/ ಅಧ್ಯಕ್ಷರಿಗೆ ಮನವಿ ನೀಡಿದ್ದರು. ಆದರೆ ಈ ತನಕ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಅವರು ಹೇಳಿದ್ದಾರೆ.

ಕಾಲುಸಂಕದ ಅಡಿ ಭಾಗದಲ್ಲಿ ತುಕ್ಕುಹಿಡಿದ ಕಬ್ಬಿಣ. 30 ವರ್ಷ ಹಳೆಯ ಅಣೆಕಟ್ಟಿನ ಒಂದು ಭಾಗ ಕುಸಿದಿದೆ.

ನವೀಕರಣ ಇಲ್ಲವೇ ಮರು ನಿರ್ಮಾಣ
ಕಿಂಡಿ ಅಣೆಕಟ್ಟಿಗೆ ಹಲಗೆ ಹಾಕಲಾಗುತ್ತಿಲ್ಲ. ಹಲವು ವರ್ಷಗಳ ಹಿಂದೆಯೇ ಹಲಗೆ ಹಾಕುವುದನ್ನು ನಿಲ್ಲಿಸಲಾಗಿದ್ದು, ನೀರುಣಿಸುವ ದೃಷ್ಟಿಯಿಂದ ಪ್ರಯತ್ನ ಮಾಡಿದ್ದೇವೆ. ಕಾಲುಸಂಕದ ಅಡಿಭಾಗದಲ್ಲಿ ಕಬ್ಬಿಣ ತುಕ್ಕುಹಿಡಿದು ಕುಸಿದು ಬೀಳುವ ಸಂಭವವಿದೆ. ನಡೆದಾಡುವವರು ಸೂಕ್ಷ್ಮವಾಗಿ ಗಮನಿಸಿ, ಹೆಜ್ಜೆಯೂರುವ ಸ್ಥಿತಿಯಿದೆ. ಇದನ್ನು ತತ್‌ಕ್ಷಣ ನವೀಕರಣಗೊಳಿಸಬೇಕಾಗಿದೆ ಅಥವಾ ಮರು ನಿರ್ಮಾಣಕ್ಕೆ ಸರಕಾರ ಅನುದಾನ ಬಿಡುಗಡೆ ಮಾಡಬೇಕಾಗಿದೆ.
-ವಸಂತ ನಾಯಕ್‌ ಆಜೇರು, ಕೃಷಿಕರು

ಕೃಷಿಕರಿಗೆ ಅನುಕೂಲವಾದೀತು
ಎರಡು ಬದಿಯ ತಡೆಗೋಡೆಗಳೂ ಕುಸಿದುಬಿದ್ದಿದೆ. ಸಂಕವೂ ಶಿಥಿಲಗೊಂಡಿದೆ. ಎಪ್ರಿಲ್‌ 15ರ ವರೆಗೆ ನೀರು ನಿಂತು ಸ್ಥಳೀಯ ಕೃಷಿಕರ ತೋಟಕ್ಕೆ ನೀರುಣಿಸುವ ಕಿಂಡಿ ಅಣೆಕಟ್ಟು ಅತ್ಯಂತ ಉಪಯುಕ್ತವಾಗಿದೆ. ಈ ಬಗ್ಗೆ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು.
-ಶಂಕರನಾರಾಯಣ ಭಟ್‌ ಮಲ್ಯ, ಕೃಷಿಕರು

ಎರಡೂ ಬದಿ ಕುಸಿದುಬಿದ್ದಿದೆ!
ಕಿಂಡಿ ಅಣೆಕಟ್ಟಿನ ಎರಡೂ ಬದಿಯಲ್ಲಿ ಕಪ್ಪುಕಲ್ಲು ಕಟ್ಟಿ ತಡೆಗೋಡೆ ನಿರ್ಮಿಸಲಾಗಿತ್ತು. ನೀರಿನ ಒತ್ತಡಕ್ಕೆ ಅದು ಕೂಡ ಕುಸಿದುಬಿದ್ದಿದೆ. ರಭಸದಿಂದ ಬರುವ ನೀರು ಪಕ್ಕದ ಕೃಷಿಕರ ತೋಟ, ಭೂಮಿಯನ್ನು ಕೊಚ್ಚಿಕೊಂಡು ಹೋಗುವ ಸಂಭವವಿದೆ. ಮಳೆಗಾಲದಲ್ಲಿ ಪ್ರವಾಹ ಮತ್ತು ನೀರು ಅಪಾಯದ ಮಟ್ಟಕ್ಕೆ ತಲುಪುತ್ತದೆ ಮತ್ತು ಅದಕ್ಕೆ ತಡೆಗೋಡೆ, ಅಣೆಕಟ್ಟು, ಕಾಲುಸಂಕ ಎಲ್ಲವೂ ನಾಶವಾಗಬಹುದಾಗಿದೆ.

ಮುಂದಿನ ವರ್ಷಕ್ಕಾದರೂ ಆದೀತು!
ಈ ಕಿಂಡಿ ಅಣೆಕಟ್ಟಿನ ಬಗ್ಗೆ ಈಗಲೇ ಸರಕಾರ ಕ್ರಮ ಕೈಗೊಂಡರೆ ಮುಂದಿನ ಬೇಸಗೆ ಹೊತ್ತಿಗಾದರೂ ನಿರ್ಮಾಣವಾದೀತು. ಆ ಮೂಲಕ ಜನರು ಮಳೆಗಾಲದಲ್ಲಿ ನಿರ್ಭಯವಾಗಿ ಈ ಅಣೆಕಟ್ಟಿನ ಮೇಲೆ ಓಡಾಡಬಹುದು. ಹೀಗಾಗಿ ಕೂಡಲೇ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆ ವ್ಯಕ್ತವಾಗಿದೆ.

-ಉದಯಶಂಕರ್‌ ನೀರ್ಪಾಜೆ

ಟಾಪ್ ನ್ಯೂಸ್

ಪ್ರಯಾಣಿಕರ ಗಮನಕ್ಕೆ- ರೈಲು ಪ್ರಯಾಣದ Advance Ticket ಬುಕ್ಕಿಂಗ್‌ ನಿಯಮದಲ್ಲಿ ಬದಲಾವಣೆ…

ಪ್ರಯಾಣಿಕರ ಗಮನಕ್ಕೆ- ರೈಲು ಪ್ರಯಾಣದ Advance Ticket ಬುಕ್ಕಿಂಗ್‌ ನಿಯಮದಲ್ಲಿ ಬದಲಾವಣೆ…

240 Km ಅಂತರದಲ್ಲಿ ಸೇನಾ ದಂಪತಿ ಆತ್ಮಹತ್ಯೆ… ಜೊತೆಯಲ್ಲೇ ಅಂತ್ಯಸಂಸ್ಕಾರ ಮಾಡುವಂತೆ ಪತ್ರ

240Km ಅಂತರದಲ್ಲಿ ಸೇನಾ ದಂಪತಿ ಆತ್ಮಹ*ತ್ಯೆ… ಜೊತೆಯಲ್ಲೇ ಅಂತ್ಯಸಂಸ್ಕಾರ ನಡೆಸುವಂತೆ ಪತ್ರ

Kerala:ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯದ ಮುಖ್ಯ ಅರ್ಚಕರಾಗಿ ಅರುಣ್‌ ಕುಮಾರ್‌ ಆಯ್ಕೆ

Kerala:ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯದ ಮುಖ್ಯ ಅರ್ಚಕರಾಗಿ ಅರುಣ್‌ ಕುಮಾರ್‌ ಆಯ್ಕೆ

Delhi Capitals Management Change

Delhi Capitals ಆಡಳಿತ ಬದಲಾವಣೆ: ಗಂಗೂಲಿ ಅಧಿಕಾರ ಕಡಿತ; ಪಂತ್‌ ಬಗ್ಗೆಯೂ ಹೊಸ ನಿರ್ಧಾರ

11

Somy Ali: ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ನಂಬರ್‌ ಕೇಳಿದ ಸಲ್ಮಾನ್‌ ಖಾನ್ ಮಾಜಿ ಗೆಳತಿ

Kalaburagi; ಕಾರು-ಬೈಕ್-ಲಾರಿ ನಡುವೆ ಡಿಕ್ಕಿ: ನಾಲ್ವರ ಸಾವು

Kalaburagi; ಕಾರು-ಬೈಕ್-ಲಾರಿ ನಡುವೆ ಡಿಕ್ಕಿ: ನಾಲ್ವರ ಸಾವು

7–ullala

Ullala: ಇನ್ಸ್‌ಪೆಕ್ಟರ್ ಕೊಠಡಿಯೊಳಗೆಯೇ ಹಿಂದೂ ಸಂಘಟನೆ ಮುಖಂಡನಿಗೆ ಮುಸ್ಲಿಂ ಯುವಕ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Maninalkur: ಶಿಥಿಲಾವಸ್ಥೆಯಲ್ಲಿ ಹಳೆ ಶಾಲಾ ಕಟ್ಟಡ; ಕ್ರಮಕ್ಕೆ ಆಗ್ರಹ

4

Puttur: ಬೀದಿ ಬದಿ ವ್ಯಾಪಾರಿಗಳಿಗೆ ನೆರವಾದ ಪಿಎಂ ಸ್ವನಿಧಿ ಯೋಜನೆ

3

Kadaba: ಐತ್ತೂರು ಅರಣ್ಯಾಧಿಕಾರಿಗಳಿಂದ ಒತ್ತುವರಿ ತೆರವು

2

Subrahmanya: ನೆಟ್ಟಣ ರೈಲು ನಿಲ್ದಾಣ; ಬಸ್‌ಗಾಗಿ ಕಾದು ಸುಸ್ತಾದ ಪ್ರಕರಣ

Symoblic

Belthangady: ಬಾಲಕಿಗೆ ಕಿರುಕುಳ; ಪೋಕ್ಸೋ ಪ್ರಕರಣ ದಾಖಲು

MUST WATCH

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

ಹೊಸ ಸೇರ್ಪಡೆ

ಪ್ರಯಾಣಿಕರ ಗಮನಕ್ಕೆ- ರೈಲು ಪ್ರಯಾಣದ Advance Ticket ಬುಕ್ಕಿಂಗ್‌ ನಿಯಮದಲ್ಲಿ ಬದಲಾವಣೆ…

ಪ್ರಯಾಣಿಕರ ಗಮನಕ್ಕೆ- ರೈಲು ಪ್ರಯಾಣದ Advance Ticket ಬುಕ್ಕಿಂಗ್‌ ನಿಯಮದಲ್ಲಿ ಬದಲಾವಣೆ…

240 Km ಅಂತರದಲ್ಲಿ ಸೇನಾ ದಂಪತಿ ಆತ್ಮಹತ್ಯೆ… ಜೊತೆಯಲ್ಲೇ ಅಂತ್ಯಸಂಸ್ಕಾರ ಮಾಡುವಂತೆ ಪತ್ರ

240Km ಅಂತರದಲ್ಲಿ ಸೇನಾ ದಂಪತಿ ಆತ್ಮಹ*ತ್ಯೆ… ಜೊತೆಯಲ್ಲೇ ಅಂತ್ಯಸಂಸ್ಕಾರ ನಡೆಸುವಂತೆ ಪತ್ರ

13(1)

Udupi: ಸಂತೆಕಟ್ಟೆ ಓವರ್‌ಪಾಸ್‌ ಕಾಮಗಾರಿ ಚುರುಕು

11

Kulai: ಬೃಹತ್‌ ಟ್ರಕ್‌ ಓಡಾಟದಿಂದ ರಸ್ತೆಗೆ ಹಾನಿ

Kerala:ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯದ ಮುಖ್ಯ ಅರ್ಚಕರಾಗಿ ಅರುಣ್‌ ಕುಮಾರ್‌ ಆಯ್ಕೆ

Kerala:ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯದ ಮುಖ್ಯ ಅರ್ಚಕರಾಗಿ ಅರುಣ್‌ ಕುಮಾರ್‌ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.