Puttur: ಬೀದಿ ಬದಿ ವ್ಯಾಪಾರಿಗಳಿಗೆ ನೆರವಾದ ಪಿಎಂ ಸ್ವನಿಧಿ ಯೋಜನೆ

ಪುತ್ತೂರು: ಫಲಾನುಭವಿಗಳ ಸಂಖ್ಯೆ ಹೆಚ್ಚಳ

Team Udayavani, Oct 17, 2024, 1:27 PM IST

4

ಸಾಂದರ್ಭಿಕ ಚಿತ್ರ

ಪುತ್ತೂರು: ನಾಲ್ಕು ವರ್ಷದ ಹಿಂದೆ ಕೇಂದ್ರ ಸರಕಾರ ಜಾರಿಗೊಳಿಸಿದ ಪಿಎಂ ಸ್ವನಿಧಿ ಯೋಜನೆ ಪುತ್ತೂರಿನ ನಗರದ ಬೀದಿ ವ್ಯಾಪಾರಿಗಳಿಗೆ ನೆರವಾಗಿದೆ.

ಈ ಯೋಜನೆಗೆ ವರ್ಷದಿಂದ ವರ್ಷಕ್ಕೆ ಫಲಾನುಭವಿಗಳ ಸಂಖ್ಯೆ ಹೆಚ್ಚಿದ್ದು ಯೋಜನೆಗೆ ಉತ್ತಮ ಪ್ರತಿಕ್ರಿಯೆ ಕಂಡು ಬಂದಿರುವುದನ್ನು ಅಂಕಿ ಅಂಶ ತೆರೆದಿಟ್ಟಿದೆ.

ಏನಿದು ಪಿಎಂ ಸ್ವನಿಧಿ..!
ಬೀದಿ ಬದಿ ವ್ಯಾಪಾರಿಗಳಿಗೆ ಆರ್ಥಿಕ ಸಹಕಾರ ನೀಡುವ ನಿಟ್ಟಿನಲ್ಲಿ 2020ರಲ್ಲಿ ಆರಂಭಗೊಂಡ ಪ್ರಧಾನಮಂತ್ರಿ ಸ್ಟ್ರೀಟ್‌ ವೆಂಡರ್ಸ್‌ ಆತ್ಮನಿರ್ಭರ ನಿಧಿ (ಪಿಎಂ ಸ್ವನಿಧಿ 10 ಸಾವಿರದಿಂದ ಗರಿಷ್ಠ 50 ಸಾವಿರದವರೆಗೂ ಸಾಲ ಸೌಲಭ್ಯವನ್ನು ಅನುಷ್ಠಾನಿಸಿತ್ತು.) ನಗರದಲ್ಲಿ ಬೀದಿಬದಿ ವ್ಯಾಪಾರ ನಿರತರಿಗೆ ಈ ಸಾಲ ಸೌಲಭ್ಯದ ಪ್ರಯೋಜನ ಲಭಿಸುತ್ತದೆ. ಪ್ರತೀ ನಗರಾಡಳಿತ ಸಂಸ್ಥೆಗಳು ತಮ್ಮ ವ್ಯಾಪ್ತಿಯ ಬೀದಿ ವ್ಯಾಪಾರಿಗಳನ್ನು ಗುರುತಿಸಿ ಈ ಸಾಲ ಸೌಲಭ್ಯ ನೀಡಬೇಕು.

2021ರಲ್ಲಿ ಪುತ್ತೂರು ನಗರದಲ್ಲಿ 360 ಗುರಿ ನಿಗದಿಪಡಿಸಲಾಗಿತ್ತು. ಗುರಿ ಮೀರಿದ ಸಾಧನೆಗಾಗಿ 2022ರಲ್ಲಿ 652, 2023ರಲ್ಲಿ 750 ಗುರಿ ನೀಡಲಾಗಿತ್ತು. 2024ರಲ್ಲಿ 1,070 ಗುರಿ ನೀಡಲಾಗಿದೆ. 10 ಸಾವಿರ ರೂ. ಸಾಲಕ್ಕೆ ಸಂಬಂಧಿಸಿ 760 ಮಂದಿಗೆ, 20 ಸಾವಿರ ರೂ. ಸಾಲಕ್ಕೆ ಸಂಬಂಧಿಸಿ 247 ಮಂದಿಗೆ ಸಾಲ ದೊರಕಿದೆ. 50 ಸಾವಿರ ರೂ.76 ಮಂದಿ ಸಾಲ ಸಿಕ್ಕಿದೆ. 10 ಸಾವಿರ ರೂ. ಸಾಲ ಪಡೆದು ಮರು ಪಾವತಿ ಮಾಡಿದವರು 20 ಸಾವಿರ ರೂ. ಸಾಲ ಪಡೆಯಲು ಅರ್ಹತೆ ಹೊಂದಿ ದ್ದರೆ, 20 ಸಾವಿರ ರೂ. ಸಾಲ ಪಡೆದು ಮರು ಪಾವತಿ ಮಾಡಿದವರು 50 ಸಾವಿರ ರೂ. ಸಾಲ ಪಡೆಯಲು ಅರ್ಹತೆ ಹೊಂದುತ್ತಾರೆ.

ಯಾರು ಅರ್ಹರು ?
ಎಲ್ಲ ಬೀದಿ ಬದಿ ವ್ಯಾಪಾರಿಗಳು, ಲೈನ್‌ ಸೇಲ್‌ ಮಾಡುವವರು, ತಳ್ಳುಗಾಡಿ ವ್ಯಾಪಾರಿಗಳು, ಪೆಟ್ಟಿಗೆ ಅಂಗಡಿಯವರು, ಸಂತೆಯಲ್ಲಿ ತರಕಾರಿ ಇತ್ಯಾದಿ ಮಾರುವವರು, ತಲೆ ಹೊರೆ ವ್ಯಾಪಾರಿಗಳು, ಚರುಮುರಿ ಫಾಸ್ಟ್‌ಫುಡ್‌ ವ್ಯಾಪಾರಿಗಳು, ಹಾಲು ಮಾರುವವರು ಮೊದಲಾದವರು ಈ ಯೋಜನೆ ವ್ಯಾಪ್ತಿಯಲ್ಲಿ ಸೇರಿದ್ದಾರೆ. ಅರ್ಹ ಫಲಾನುಭವಿಗಳು ನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಸಂಪರ್ಕಿಸಿ ಇದರ ಪ್ರಯೋಜನ ಪಡೆದುಕೊಳ್ಳಬಹುದು.

ಡಿಜಿಟಲ್‌ ವ್ಯವಹಾರ
ಪಿಎಂ ಸ್ವನಿಧಿ ಯೋಜನೆಯಡಿ ಸಾಲ ಪಡೆದ ಬೀದಿಬದಿ ವ್ಯಾಪಾರಿಗಳಿಗೆ ಬ್ಯಾಂಕ್‌ ಮೂಲಕ ಕ್ಯುಆರ್‌ ಕೋಡ್‌ ನೀಡಿ ಡಿಜಿಟಲ್‌ ವ್ಯಾಪಾರಕ್ಕೂ ಉತ್ತೇಜನ ನೀಡುವ ಕಾರ್ಯ ನಡೆಯುತ್ತಿದೆ.

ಪುತ್ತೂರಿನಲ್ಲಿ ಈ ಬಾರಿ 1,070 ಗುರಿ ನೀಡಲಾಗಿದ್ದು 860 ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಸಾಲ ನೀಡಲು ಬ್ಯಾಂಕ್‌ಗೆ ಶಿಫಾರಸ್ಸು ಪತ್ರ ನೀಡಲಾಗಿದೆ. ಇನ್ನೂ ಅರ್ಹರಿದ್ದರೆ ಅವರಿಗೂ ನೀಡಲಾ ಗುತ್ತದೆ. ಆಯಾ ನಗರದ ನಿವಾಸಿಗಳು ಮಾತ್ರ ಸೌಲಭ್ಯ ಪಡೆಯಬಹುದು.
-ಮಧು ಎಸ್‌. ಮನೋಹರ್‌,ಪೌರಯುಕ್ತ, ನಗರಸಭೆ ಪುತ್ತೂರು

ಟಾಪ್ ನ್ಯೂಸ್

ತಂತ್ರಜ್ಞಾನ ಬಳಕೆಯಿಂದ ಹೊಸತನಕ್ಕೆ ತೆರೆದುಕೊಂಡ ತುಳು ನಾಟಕ ರಂಗ

Tulu theater: ತಂತ್ರಜ್ಞಾನ ಬಳಕೆಯಿಂದ ಹೊಸತನಕ್ಕೆ ತೆರೆದುಕೊಂಡ ತುಳು ನಾಟಕ ರಂಗ

Lawrwnce: ಬಿಷ್ಣೋಯಿ ಗ್ಯಾಂಗ್‌ ಸದಸ್ಯರ ಗಡಿಪಾರು ಮನವಿಗೆ ಕೆನಡಾ ಪ್ರತಿಕ್ರಿಯೆ ಇಲ್ಲ: ಭಾರತ

Lawrwnce: ಬಿಷ್ಣೋಯಿ ಗ್ಯಾಂಗ್‌ ಸದಸ್ಯರ ಗಡಿಪಾರು ಮನವಿಗೆ ಕೆನಡಾ ಪ್ರತಿಕ್ರಿಯೆ ಇಲ್ಲ: ಭಾರತ

Panaji: ಗೋವಾದಲ್ಲಿ ಧಾರಾಕಾರ ಮಳೆ: ಜನಜೀವನ ಅಸ್ತವ್ಯಸ್ತ

Panaji: ಗೋವಾದಲ್ಲಿ ಧಾರಾಕಾರ ಮಳೆ: ಜನಜೀವನ ಅಸ್ತವ್ಯಸ್ತ

12

Actress: ಖ್ಯಾತ ನಟಿಯ ಮೇಲೆ ಸಾಮೂಹಿಕ ಅ*ತ್ಯಾಚಾರ.. ನಿರ್ದೇಶಕರಿಂದ ಶಾಕಿಂಗ್ ಸಂಗತಿ ರಿವೀಲ್

police crime

UP; ಬಹ್ರೈಚ್ ಘಟನೆ ಆರೋಪಿಗಳು ನೇಪಾಳಕ್ಕೆ ಪರಾರಿಯಾಗುತ್ತಿದ್ದ ವೇಳೆ ಎನ್ ಕೌಂಟರ್

ಪ್ರಯಾಣಿಕರ ಗಮನಕ್ಕೆ- ರೈಲು ಪ್ರಯಾಣದ Advance Ticket ಬುಕ್ಕಿಂಗ್‌ ನಿಯಮದಲ್ಲಿ ಬದಲಾವಣೆ…

ಪ್ರಯಾಣಿಕರ ಗಮನಕ್ಕೆ- ರೈಲು ಪ್ರಯಾಣದ Advance Ticket ಬುಕ್ಕಿಂಗ್‌ ನಿಯಮದಲ್ಲಿ ಬದಲಾವಣೆ…

240 Km ಅಂತರದಲ್ಲಿ ಸೇನಾ ದಂಪತಿ ಆತ್ಮಹತ್ಯೆ… ಜೊತೆಯಲ್ಲೇ ಅಂತ್ಯಸಂಸ್ಕಾರ ಮಾಡುವಂತೆ ಪತ್ರ

240Km ಅಂತರದಲ್ಲಿ ಸೇನಾ ದಂಪತಿ ಆತ್ಮಹ*ತ್ಯೆ… ಜೊತೆಯಲ್ಲೇ ಅಂತ್ಯಸಂಸ್ಕಾರ ನಡೆಸುವಂತೆ ಪತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Maninalkur: ಶಿಥಿಲಾವಸ್ಥೆಯಲ್ಲಿ ಹಳೆ ಶಾಲಾ ಕಟ್ಟಡ; ಕ್ರಮಕ್ಕೆ ಆಗ್ರಹ

3

Kadaba: ಐತ್ತೂರು ಅರಣ್ಯಾಧಿಕಾರಿಗಳಿಂದ ಒತ್ತುವರಿ ತೆರವು

2

Subrahmanya: ನೆಟ್ಟಣ ರೈಲು ನಿಲ್ದಾಣ; ಬಸ್‌ಗಾಗಿ ಕಾದು ಸುಸ್ತಾದ ಪ್ರಕರಣ

1(1)

Vitla: ಈ ಕಿಂಡಿ ಅಣೆಕಟ್ಟಲ್ಲಿ ನೀರೇ ನಿಲ್ಲುವುದಿಲ್ಲ, ಓಡಾಟಕ್ಕೂ ಭಯ!

Symoblic

Belthangady: ಬಾಲಕಿಗೆ ಕಿರುಕುಳ; ಪೋಕ್ಸೋ ಪ್ರಕರಣ ದಾಖಲು

MUST WATCH

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

ಹೊಸ ಸೇರ್ಪಡೆ

ತಂತ್ರಜ್ಞಾನ ಬಳಕೆಯಿಂದ ಹೊಸತನಕ್ಕೆ ತೆರೆದುಕೊಂಡ ತುಳು ನಾಟಕ ರಂಗ

Tulu theater: ತಂತ್ರಜ್ಞಾನ ಬಳಕೆಯಿಂದ ಹೊಸತನಕ್ಕೆ ತೆರೆದುಕೊಂಡ ತುಳು ನಾಟಕ ರಂಗ

Minister; ಸತೀಶ್ ಜಾರಕಿಹೊಳಿ ಸಿಎಂ‌ ಆಗಲಿ: ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ

Minister; ಸತೀಶ್ ಜಾರಕಿಹೊಳಿ ಸಿಎಂ‌ ಆಗಲಿ ಎಂದ ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ

Lawrwnce: ಬಿಷ್ಣೋಯಿ ಗ್ಯಾಂಗ್‌ ಸದಸ್ಯರ ಗಡಿಪಾರು ಮನವಿಗೆ ಕೆನಡಾ ಪ್ರತಿಕ್ರಿಯೆ ಇಲ್ಲ: ಭಾರತ

Lawrwnce: ಬಿಷ್ಣೋಯಿ ಗ್ಯಾಂಗ್‌ ಸದಸ್ಯರ ಗಡಿಪಾರು ಮನವಿಗೆ ಕೆನಡಾ ಪ್ರತಿಕ್ರಿಯೆ ಇಲ್ಲ: ಭಾರತ

14(1)

Gundlupete: 3 ತಿಂಗಳಿಂದ ಉಪಟಳ ನೀಡುತ್ತಿದ್ದ ಚಿರತೆ ಬೋನಿಗೆ

Komal Kumar’s Yala kunni ready to release

Komal Kumar: ತೆರೆಗೆ ಬರಲು ಸಿದ್ದವಾಯ್ತು ʼಯಲಾ ಕುನ್ನಿʼ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.