Actress: ಖ್ಯಾತ ನಟಿಯ ಮೇಲೆ ಸಾಮೂಹಿಕ ಅ*ತ್ಯಾಚಾರ.. ನಿರ್ದೇಶಕರಿಂದ ಶಾಕಿಂಗ್ ಸಂಗತಿ ರಿವೀಲ್


Team Udayavani, Oct 17, 2024, 5:21 PM IST

12

ಕೊಚ್ಚಿ: ಮಾಲಿವುಡ್‌ (Mollywood) ಸಿನಿಮಾರಂಗದದಲ್ಲಿ ಇತ್ತೀಚೆಗೆ ಹೇಮಾ ಸಮಿತಿ ವರದಿ (Hema Committee Report) ಸಲ್ಲಿಕೆ ಬಳಿಕ ಖ್ಯಾತ ಕಲಾವಿದರ ಮೇಲೆ ಲೈಂಗಿಕ ಕಿರುಕುಳ ಹಾಗೂ ಅತ್ಯಾಚಾರದ ಆರೋಪ ಕೇಳಿ ಬಂದಿದೆ. ʼಮೀಟೂʼ ಪ್ರಕರಣ ಸಿನಿಮಾರಂಗದಲ್ಲಿ ಚರ್ಚೆ ಆಗುತ್ತಿರುವ ಬೆನ್ನಲ್ಲೇ  ಹಿರಿಯ ನಿರ್ದೇಶಕರೊಬ್ಬರು ಶಾಕಿಂಗ್‌ ಸಂಗತಿಯೊಂದನ್ನು ಬಿಚ್ಚಿಟ್ಟಿದ್ದಾರೆ.

ಮಾಲಿವುಡ್ ನಿರ್ದೇಶಕ ಅಲೆಪ್ಪಿ ಅಶ್ರಫ್ (Filmmaker Alleppey Ashraf)‌ ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ 80ರ ದಶಕದಲ್ಲಿ ಖ್ಯಾತ ನಟಿಯೊಬ್ಬರ ಜತೆ ನಡೆದ ಕರಾಳ ಸಂಗತಿ ಬಗ್ಗೆ ಮಾತನಾಡಿದ್ದಾರೆ.

“1980ರ ದಶಕದ (1982ರಲ್ಲಿ) ಆರಂಭದಲ್ಲಿ ತಾರಾ ಆರ್ಟ್ಸ್ ವಿಜಯನ್ ಪ್ರಾಯೋಜಕತ್ವದಲ್ಲಿ ನಾನು, ಬೇಬಿ ಶಾಲಿನಿ ಮತ್ತು ರೋಹಿಣಿ ಅವರನ್ನು ಒಳಗೊಂಡ ತಂಡ ಅಮೆರಿಕಾಕ್ಕೆ ಹೋಗಿ ಮಿಮಿಕ್ರಿ ಕಾರ್ಯಕ್ರಮವನ್ನು ನೀಡಿದ್ದೆವು. ತಾರಾ ಆರ್ಟ್ಸ್ ವಿಜಯನ್ ಪ್ರತಿ ವರ್ಷ ಅಮೆರಿಕಾದಲ್ಲಿ ಈ ರೀತಿಯ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತದೆ. ಆ ವರ್ಷ ನಮ್ಮನ್ನು ಕರೆಸಲಾಗಿತ್ತು. ಕಾರ್ಯಕ್ರಮ ಯಶಸ್ವಿಯಾಗಿ ಸಾಗಿತ್ತು. ಇದೇ ಸಂದರ್ಭದಲ್ಲಿ ಅಲ್ಲೊಂದು ಕರಾಳ ಘಟನೆ ನಡೆದಿತ್ತು” ಎಂದು ಅಶ್ರಫ್‌ ಹಳೆಯ ಘಟನೆ ಬಗ್ಗೆ ಹೇಳಿದ್ದಾರೆ.

ಇದನ್ನೂ ಓದಿ: Somy Ali: ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ನಂಬರ್‌ ಕೇಳಿದ ಸಲ್ಮಾನ್‌ ಖಾನ್ ಮಾಜಿ ಗೆಳತಿ

“ಆಕೆ ಮಾಲಿವುಡ್‌ ಸಿನಿಮಾರಂಗದ ಖ್ಯಾತ ನಟಿ. ನಟ ನಝೀರ್‌ ಜತೆಗಿನ ಸಿನಿಮಾದಲ್ಲಿ ಸೇರಿದಂತೆ ಇತರೆ ಭಾಷೆಯ ಸಿನಿಮಾದಲ್ಲೂ ನಟಿಸಿ ಜನಪ್ರಿಯತೆಯನ್ನು ಗಳಿಸಿದ್ದ ನಟಿ. ಆ ಕಾಲದಲ್ಲಿ ಆಕೆಯ ಅಭಿನಯಕ್ಕೆ ಅಪಾರ ಅಭಿಮಾನಿಗಳಿದ್ದರು. ವೃತ್ತಿ ಬದುಕು ಉತ್ತುಂಗದಲ್ಲಿದ್ದಾಗಲೇ ಆಕೆಯ ಜೀವನದಲ್ಲಿ ಒಂದು ಕರಾಳ ಘಟನೆ ನಡೆಯಿತು” ಎಂದು ಅಶ್ರಫ್‌ ಹೇಳಿದ್ದಾರೆ.

ಸಿನಿಮಾ ನೆಪದಲ್ಲಿ ಖ್ಯಾತ ನಟಿ ಮೇಲೆ ಸಾಮೂಹಿಕ ಅತ್ಯಾಚಾರ:

ಅದೊಂದು ದಿನ ಆಕೆಗೆ ಅಮೆರಿಕಾದಿಂದ ಕರೆಯೊಂದು ಬರುತ್ತದೆ. ನೀವು ನಮ್ಮ ಸಿನಿಮಾದಲ್ಲಿ ನಟಿಸಬೇಕು. ಆದಷ್ಟು ಬೇಗ ನ್ಯೂಯಾರ್ಕ್‌ಗೆ ಬನ್ನಿ ಎಂದು ಕರೆ ಮಾಡಿದ ವ್ಯಕ್ತಿ ತಿಳಿಸುತ್ತಾರೆ. ಆ ಸಮಯದಲ್ಲಿ ನಟಿ ಇದು ತನಗೆ ಸಿಕ್ಕ ದೊಡ್ಡ ಅವಕಾಶವೆಂದು ಕೂಡಲೇ ಅಮೆರಿಕಾಕ್ಕೆ ತೆರಳುತ್ತಾಳೆ. ಅಲ್ಲಿಗೆ ಹೋದ ಬಳಿಕ ನಟಿಗೆ ಏರ್‌ಪೋರ್ಟ್‌ ನಲ್ಲಿ ಅದ್ಧೂರಿ ಸ್ವಾಗತ ಸಿಗುತ್ತದೆ. ಆ ಬಳಿಕ ಆಕೆಯ ವಿಶ್ರಾಂತಿಗೆ ಒಂದು ಅಪಾರ್ಟ್‌ಮೆಂಟ್‌ ನೀಡಲಾಗುತ್ತದೆ. ಅದೇ ದಿನ ಸಂಜೆ ಇಬ್ಬರು ಅಪರಿಚಿತರು ನಟಿಯ ಅಪಾರ್ಟ್‌ ಮೆಂಟ್‌ ಬರುತ್ತಾರೆ. ಇದರಿಂದ ನಟಿ ಇದ್ದಕ್ಕಿದ್ದಂತೆ ಗಾಬರಿಗೊಳ್ಳುತ್ತಾಳೆ. ಮನೆಗೆ ಬಂದ ಇಬ್ಬರು ನಟಿಯ ಮೇಲೆ ಸಾಮೂಹಿವಾಗಿ ಅತ್ಯಾಚಾರವೆಸಗುತ್ತಾರೆ. ಅವರು ಅಂಡರ್‌ ವರ್ಲ್ಡ್‌ ಮಾಫಿಯಾ ಗ್ಯಾಂಗ್‌ ವೊಂದರ ಸದಸ್ಯರಾಗಿರುತ್ತಾರೆ. ನಟಿಗೆ ತಾನು ಮೋಸದ ಜಾಲದಲ್ಲಿ ಸಿಲುಕಿದ್ದೇನೆ ಎನ್ನುವ ಅರಿವಾಗುತ್ತದೆ. ನಟಿಯನ್ನು ಕೋಣೆಯಲ್ಲಿ ಬಂಧಿಸಿ ನಿರಂತರವಾಗಿ ಕೆಲ ದಿನಗಳ ಅತ್ಯಾಚಾರವೆಸಯಲಾಗುತ್ತದೆ” ಎಂದು ಅಶ್ರಫ್‌ ತಮ್ಮ ಚಾನೆಲ್‌ ನಲ್ಲಿ ಕರಾಳ ಸಂಗತಿಯನ್ನು ಬಯಲು ಮಾಡಿದ್ದಾರೆ.

 ದುಷ್ಟರ ಕೈಯಿಂದ ಬದುಕಿ ಬಂದದ್ದೇಗೆ ಆ ನಟಿ?:

ಅತ್ಯಾಚಾರಿಗಳ ಕೈಯಲ್ಲಿ ಸಿಲುಕಿಕೊಂಡಿದ್ದ ನಟಿ ಅದೊಂದು ದಿನ ಕಿಡಿಗೇಡಿಗಳು ಇಲ್ಲದಿದ್ದಾಗ ಅಮೆರಿಕಾದಲ್ಲಿದ್ದ ಕೇರಳದ ತಾರಾ ಆರ್ಟ್ಸ್‌ನ ಮುಖ್ಯಸ್ಥ ವಿಜಯಟ್ಟನ್‌ ಅವರಿಗೆ ಕರೆ ಮಾಡಿ ಆದ ಸಂಗತಿಯನ್ನು ಹೇಳುತ್ತಾರೆ. ಆದರೆ ವಿಜಯಟ್ಟನ್‌ ಗೆ ನಟಿ ಇರುವ ಅಪಾರ್ಟ್‌ಮೆಂಟ್‌ ಹುಡುಕಲು ಕಷ್ಟವಾಗುತ್ತದೆ. ಆಗ ನಟಿ ಕಿಟಕಿಯ ಹೊರಗಡೆ ನೋಡಿ ಬಿಲ್ಡಿಂಗ್‌ ಹೊರಗಿದ್ದ ಕೆಲ ಬೋರ್ಡ್‌ಗಳ ಹೆಸರು ಹೇಳಿ ವಿಳಾಸವನ್ನು ಹೇಳುತ್ತಾರೆ. ಇದಾದ ಬಳಿಕ ಕಾರಿನಲ್ಲಿ ಸುರಕ್ಷಿತವಾಗಿ ನಟಿಯನ್ನು ಕರೆ ತರುತ್ತಾರೆ. ನೇರವಾಗಿ ಏರ್‌ ಪೋರ್ಟ್‌ಗೆ ಬಿಟ್ಟು ರಿಟರ್ನ್‌ ಟಿಕೆಟ್‌ ತೆಗೆದು ಆಕೆಯನ್ನು ಭಾರತಕ್ಕೆ ಕಳುಹಿಸಿ ಕೊಟ್ಟರು” ಎಂದು ಅಶ್ರಫ್‌ ಹೇಳಿದ್ದಾರೆ.

“ಈ ಘಟನೆ ನಂಬಲಸಾಧ್ಯ ಎನಿಸಿದರೂ ಇದು ಸತ್ಯ. ಹೊಸ ಪೀಳಿಗೆಗೆ ಇದು ಪಾಠವಾಗಬೇಕು ಎಂಬ ಕಾರಣದಿಂದ ಈ ವಿವರಗಳನ್ನು ಈಗ ಬಹಿರಂಗಪಡಿಸುತ್ತಿದ್ದೇನೆ” ಎಂದು ಅವರು ಹೇಳಿದ್ದಾರೆ.

ಟಾಪ್ ನ್ಯೂಸ್

1-wqewqew

Virat Kohli ಸಮಸ್ಯೆಗಳನ್ನು ಜಟಿಲಗೊಳಿಸಿದ್ದಾರೆ!; ಖ್ಯಾತ ಕ್ರಿಕೆಟ್ ವಿಶ್ಲೇಷಕ ಟೀಕೆ

1-asss-bg

Baba Siddique;ಪ್ರಕರಣ ರಾಜಕೀಯಗೊಳಿಸಬೇಡಿ: ನ್ಯಾಯಬೇಕು ಎಂದ ಪುತ್ರ

Emergency

Film Censor: ‘ಎಮರ್ಜೆನ್ಸಿ’ ಸಿನಿಮಾಕ್ಕೆ ಕೊನೆಗೂ ಸಿಕ್ಕಿತು ಸೆನ್ಸಾರ್‌ ಪ್ರಮಾಣಪತ್ರ!

1-cccc

Haryana; ಸೋಲಿನ ಬೆನ್ನಲ್ಲೇ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ ಕ್ಯಾಪ್ಟನ್ ಅಜಯ್ ಯಾದವ್

Congress Govt.,: ವಾಲ್ಮೀಕಿ ಸಮಾಜದ ಕ್ಷಮೆ ಕೇಳಲಿ: ಆರಗ ಜ್ಞಾನೇಂದ್ರ

Congress Govt.,: ವಾಲ್ಮೀಕಿ ಸಮಾಜದ ಕ್ಷಮೆ ಕೇಳಲಿ: ಆರಗ ಜ್ಞಾನೇಂದ್ರ

Vimana 2

Hoax bomb calls; ಕ್ರಮ ತೆಗೆದುಕೊಳ್ಳಲಾಗುತ್ತಿದೆ:ಸಚಿವ ರಾಮ್ ಮೋಹನ್ ನಾಯ್ಡು

Flight: ಹುಬ್ಬಳ್ಳಿ-ಅಹ್ಮದಾಬಾದ್‌ ವಿಮಾನ ಸೇವೆ ಆರಂಭಕ್ಕೆ ಜೋಶಿ,ನಾಯ್ಡು ಚರ್ಚೆ

Flight: ಹುಬ್ಬಳ್ಳಿ-ಅಹ್ಮದಾಬಾದ್‌ ವಿಮಾನ ಸೇವೆ ಆರಂಭಕ್ಕೆ ಜೋಶಿ,ನಾಯ್ಡು ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pushpa 2: ರಿಲೀಸ್‌ಗೂ ಮೊದಲೇ 900 ಕೋಟಿ ರೂ. ಕಲೆಕ್ಷನ್‌ ಮಾಡಿದ ಅಲ್ಲು ಅರ್ಜುನ್‌ ʼಪುಷ್ಪ-2ʼ

Pushpa 2: ರಿಲೀಸ್‌ಗೂ ಮೊದಲೇ 900 ಕೋಟಿ ರೂ. ಕಲೆಕ್ಷನ್‌ ಮಾಡಿದ ಅಲ್ಲು ಅರ್ಜುನ್‌ ʼಪುಷ್ಪ-2ʼ

Tollywood: ʼಬಾಹುಬಲಿʼ ಮೂರನೇ ಪಾರ್ಟ್‌ ಬರುತ್ತಾ?; ಖ್ಯಾತ ನಿರ್ಮಾಪಕ ಹೇಳಿದ್ದೇನು?

Tollywood: ʼಬಾಹುಬಲಿʼ ಮೂರನೇ ಪಾರ್ಟ್‌ ಬರುತ್ತಾ?; ಖ್ಯಾತ ನಿರ್ಮಾಪಕ ಹೇಳಿದ್ದೇನು?

8

Oscars 2025: ಆಸ್ಕರ್‌ ರೇಸ್‌ನಲ್ಲಿ ʼಕಲ್ಕಿ 2898 ಎಡಿʼ?: ಪೋಸ್ಟ್‌ ವೈರಲ್‌

13

Kollywood: 33 ವರ್ಷದ ಬಳಿಕ ರಜಿನಿ ಜತೆ ಮಣಿರತ್ನಂ ಸಿನಿಮಾ? ನಿರ್ದೇಶಕರ ಪತ್ನಿ ಹೇಳಿದ್ದೇನು?

Thalapathy 69: 8 ವರ್ಷದ ಬಳಿಕ ಮತ್ತೆ ಪೊಲೀಸ್‌ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ವಿಜಯ್

Thalapathy 69: 8 ವರ್ಷದ ಬಳಿಕ ಮತ್ತೆ ಪೊಲೀಸ್‌ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ವಿಜಯ್

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

3

Puttur: ರಸ್ತೆ ಬದಿ ನಿಂತಿದ್ದ ಬಾಲಕನ ಬಾಲಕನ ಮೇಲೆ ಅಪರಿಚಿತರಿಂದ ಹಲ್ಲೆ

4

Malpe: ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ

1

Udupi: ಅಡ್ಡಗಟ್ಟಿ ಹಲ್ಲೆ, ಜೀವಬೆದರಿಕೆ; ದೂರು

Minister Shivaraj Tangadagi: ಶೈಕ್ಷಣಿಕ, ಆರ್ಥಿಕ ಗಣತಿಗೆ ವಿರೋಧ ಸಲ್ಲ

Minister Shivaraj Tangadagi: ಶೈಕ್ಷಣಿಕ, ಆರ್ಥಿಕ ಗಣತಿಗೆ ವಿರೋಧ ಸಲ್ಲ

1-wqewqew

Virat Kohli ಸಮಸ್ಯೆಗಳನ್ನು ಜಟಿಲಗೊಳಿಸಿದ್ದಾರೆ!; ಖ್ಯಾತ ಕ್ರಿಕೆಟ್ ವಿಶ್ಲೇಷಕ ಟೀಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.