Delhi Capitals ಆಡಳಿತ ಬದಲಾವಣೆ: ಗಂಗೂಲಿ ಅಧಿಕಾರ ಕಡಿತ; ಪಂತ್‌ ಬಗ್ಗೆಯೂ ಹೊಸ ನಿರ್ಧಾರ


Team Udayavani, Oct 17, 2024, 3:50 PM IST

Delhi Capitals Management Change

ಹೊಸದಿಲ್ಲಿ: ಇಂಡಿಯನ್ ಪ್ರೀಮಿಯರ್ ಲೀಗ್ (IPL) ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಫ್ರಾಂಚೈಸ್‌ ನ ಸಹ-ಮಾಲೀಕರಾದ ಜಿಎಂಆರ್ ಮತ್ತು ಜೆಎಸ್‌ಡಬ್ಲ್ಯೂ ಗ್ರೂಪ್ಸ್ ಗುರುವಾರ (ಅ.17) ತಂಡದ ನಿರ್ವಹಣೆಗೆ ಸಂಬಂಧಿಸಿದಂತೆ ಜಂಟಿ ಹೇಳಿಕೆಯನ್ನು ನೀದೆ. ಹೊಸ ನೇಮಕಾತಿಗಳು, ನಾಯಕತ್ವದಲ್ಲಿನ ಬದಲಾವಣೆಗಳು ಮತ್ತು ಮುಖ್ಯವಾಗಿ ಸೌರವ್ ಗಂಗೂಲಿ (Sourav Ganguly) ಗೆ ಸಂಬಂಧಿಸಿದ ಬೆಳವಣಿಗೆಗಳ ಬಗ್ಗೆ ಡೆಲ್ಲಿ ಕ್ಯಾಪಿಟಲ್ಸ್‌ ಮಾಹಿತಿ ನೀಡಿದೆ.

ಟೀಂ ಇಂಡಿಯಾ ಮಾಜಿ ನಾಯಕ ಸೌರವ್‌ ಗಂಗೂಲಿ ಅವರು ಕಳೆದೆರಡು ಸೀಸನ್‌ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಿರ್ದೇಶಕರಾಗಿದ್ದರು. ಆದರೆ ಈ ಬಾರಿ ಅವರು ಡೆಲ್ಲಿ ಕ್ಯಾಪಿಟಲ್ಸ್‌ ಐಪಿಎಲ್‌ ತಂಡದೊಂದಿಗೆ ಮುಂದುವರಿಯುವುದು ಕಷ್ಟ ಎನ್ನಲಾಗಿದೆ.

ಮುಂದಿನ ಎರಡು ವರ್ಷಗಳಲ್ಲಿ, ಅವರು ಕ್ರಿಕೆಟ್‌ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಾರೆ, ಆದರೆ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್‌ ನ ಫ್ರಾಂಚೈಸಿಯಾದ ದಕ್ಷಿಣ ಆಫ್ರಿಕಾದ ಎಸ್‌ಎ20 ನಲ್ಲಿ ಪ್ರಿಟೋರಿಯಾ ಕ್ಯಾಪಿಟಲ್ಸ್ ಮತ್ತು ಮಹಿಳಾ ಪ್ರೀಮಿಯರ್ ಲೀಗ್ (WPL) ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಕೆಲಸ ಮಾಡಲಿದ್ದಾರೆ.

ಈ ಬದಲಾವಣೆಯು ಪ್ರಾಥಮಿಕವಾಗಿ ಜೆಎಸ್‌ ಡಬ್ಲ್ಯೂ ಗ್ರೂಪ್‌ ನೊಂದಿಗಿನ ಗಂಗೂಲಿ ಅವರ ಒಡನಾಟದ ಕಾರಣದಿಂದಾಗಿರುತ್ತದೆ. ಜೆಎಸ್‌ ಡ್ಲ್ಯೂ ಗ್ರೂಪ್ ಎರಡು ವರ್ಷಗಳ ನಂತರ ತಂಡದ ನಿಯಂತ್ರಣವನ್ನು ಮರಳಿ ಪಡೆಯುತ್ತದೆ. ಈ ಮಧ್ಯೆ, ಕಿರಣ್ ಕುಮಾರ್ ಗ್ರಾಂಧಿ ಒಡೆತನದ ಜಿಎಂಆರ್ ಗ್ರೂಪ್ ಮುಂದಿನ ಎರಡು ವರ್ಷಗಳವರೆಗೆ ಫ್ರಾಂಚೈಸಿಯ ಜವಾಬ್ದಾರಿಯನ್ನು ವಹಿಸಿಕೊಳ್ಳುವುದರಿಂದ, ಗಂಗೂಲಿ ಅವರು ಒಂದು ಹೆಜ್ಜೆ ಪಕ್ಕಕ್ಕೆ ಇಡಬೇಕಾಗುತ್ತದೆ. ಈ ವೇಳೆ ಮಾಜಿ ಆಟಗಾರರಾದ ವೈ ವೇಣುಗೋಪಾಲ್ ರಾವ್ ಮತ್ತು ಹೇಮಂಗ್ ಬದಾನಿ ಅವರು ಡೆಲ್ಲಿ ತಂಡದ ಉಸ್ತುವಾರಿ ವಹಿಸಲಿದ್ದಾರೆ.

ಅದಾಗ್ಯೂ ಗಂಗೂಲಿ ಐಪಿಎಲ್ ಹರಾಜಿನ ಭಾಗವಾಗುತ್ತಾರೆ. ಆದರೆ ಬಹುಶಃ ಸೀಮಿತ ಸಾಮರ್ಥ್ಯದಲ್ಲಿ ಇರಲಿದ್ದಾರೆ ಎಂದು ಕ್ರಿಕ್‌ ಬಜ್‌ ವರದಿ ಮಾಡಿದೆ. ಎರಡು ಗುಂಪುಗಳ ನಡುವಿನ ಒಪ್ಪಂದ ಪ್ರಕಾರ, ಹರಾಜು ಮತ್ತು ಆಟಗಾರರ ಧಾರಣೆಗೆ ಸಂಬಂಧಿಸಿದ ನಿರ್ಧಾರಗಳನ್ನು ಪಾಲುದಾರರು ಜಂಟಿಯಾಗಿ ತೆಗೆದುಕೊಳ್ಳುತ್ತಾರೆ.

“ಹರಾಜು, ನಾಯಕತ್ವ, ಆಟಗಾರರ ಬಿಡುಗಡೆಗಳು ಮತ್ತು ಉಳಿಸಿಕೊಳ್ಳುವಿಕೆಯಂತಹ ಪ್ರಮುಖ ನಿರ್ಧಾರಗಳನ್ನು ಡೆಲ್ಲಿ ಕ್ಯಾಪಿಟಲ್ಸ್ ಮಂಡಳಿಯು ಎರಡೂ ಗುಂಪುಗಳ ಹಿರಿಯ ನಾಯಕತ್ವದ ನಡುವೆ ಪರಸ್ಪರ ಒಪ್ಪಂದದೊಂದಿಗೆ ತೆಗೆದುಕೊಳ್ಳುತ್ತದೆ” ಎಂದು ಜಂಟಿ ಪತ್ರಿಕೆ ಪ್ರಕಟಣೆ ಹೇಳಿದೆ.

ನಾಯಕ ರಿಷಭ್‌ ಪಂತ್ ಅವರು‌ ತಂಡದಲ್ಲಿ ಉಳಿಸಿಕೊಳ್ಳಲು ಬಯಸುತ್ತಾರೆಯೇ, ಇಲ್ಲವೇ ಎನ್ನುವುದನ್ನು ಅವರ ನಿರ್ಧಾರಕ್ಕೆ ಫ್ರಾಂಚೈಸಿ ಬಿಟ್ಟಿದೆ.

ಟಾಪ್ ನ್ಯೂಸ್

1-cccc

Haryana; ಸೋಲಿನ ಬೆನ್ನಲ್ಲೇ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ ಕ್ಯಾಪ್ಟನ್ ಅಜಯ್ ಯಾದವ್

Congress Govt.,: ವಾಲ್ಮೀಕಿ ಸಮಾಜದ ಕ್ಷಮೆ ಕೇಳಲಿ: ಆರಗ ಜ್ಞಾನೇಂದ್ರ

Congress Govt.,: ವಾಲ್ಮೀಕಿ ಸಮಾಜದ ಕ್ಷಮೆ ಕೇಳಲಿ: ಆರಗ ಜ್ಞಾನೇಂದ್ರ

Vimana 2

Hoax bomb calls; ಕ್ರಮ ತೆಗೆದುಕೊಳ್ಳಲಾಗುತ್ತಿದೆ:ಸಚಿವ ರಾಮ್ ಮೋಹನ್ ನಾಯ್ಡು

Flight: ಹುಬ್ಬಳ್ಳಿ-ಅಹ್ಮದಾಬಾದ್‌ ವಿಮಾನ ಸೇವೆ ಆರಂಭಕ್ಕೆ ಜೋಶಿ,ನಾಯ್ಡು ಚರ್ಚೆ

Flight: ಹುಬ್ಬಳ್ಳಿ-ಅಹ್ಮದಾಬಾದ್‌ ವಿಮಾನ ಸೇವೆ ಆರಂಭಕ್ಕೆ ಜೋಶಿ,ನಾಯ್ಡು ಚರ್ಚೆ

Pushpa 2: ರಿಲೀಸ್‌ಗೂ ಮೊದಲೇ 900 ಕೋಟಿ ರೂ. ಕಲೆಕ್ಷನ್‌ ಮಾಡಿದ ಅಲ್ಲು ಅರ್ಜುನ್‌ ʼಪುಷ್ಪ-2ʼ

Pushpa 2: ರಿಲೀಸ್‌ಗೂ ಮೊದಲೇ 900 ಕೋಟಿ ರೂ. ಕಲೆಕ್ಷನ್‌ ಮಾಡಿದ ಅಲ್ಲು ಅರ್ಜುನ್‌ ʼಪುಷ್ಪ-2ʼ

Bommai BJP

By election; ಶಿಗ್ಗಾವಿ ಟಿಕೆಟ್‌ ಆಕಾಂಕ್ಷಿಗಳ ಎದೆಯಲ್ಲಿ ಢವಢವ

Sheik Hasina

Bangladesh ; ಶೇಖ್ ಹಸೀನಾ ಬಂಧನಕ್ಕೆ ಗಡುವು ವಿಧಿಸಿದ ನ್ಯಾಯಮಂಡಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೊದಲು ಮಳೆ ಕಾಟ ಬಳಿಕ ಬ್ಯಾಟರ್‌ ಗಳ ಶೂನ್ಯದಾಟ

INDvsNZ; ಮೊದಲು ಮಳೆ ಕಾಟ ಬಳಿಕ ಬ್ಯಾಟರ್‌ ಗಳ ಶೂನ್ಯದಾಟ: ಭಾರತ ಕೇವಲ 46ಕ್ಕೆ ಆಲೌಟ್

IPL Retention: Hyderabad list ready; ready to pay 23 crores for this foreign player!

IPL Retention: ಹೈದರಾಬಾದ್ ಪಟ್ಟಿ ಸಿದ್ದ;ಈ ವಿದೇಶಿ ಆಟಗಾರನಿಗೆ 23 ಕೋಟಿ ಕೊಡಲು ಸಿದ್ದ!

ಭಾರತದ ವನಿತಾ ಕ್ರಿಕೆಟ್‌ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಕ್ಯಾಪ್ಟನ್ಸಿಗೆ ಕುತ್ತು?

ಭಾರತದ ವನಿತಾ ಕ್ರಿಕೆಟ್‌ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಕ್ಯಾಪ್ಟನ್ಸಿಗೆ ಕುತ್ತು?

Ashes Series: 40 ವರ್ಷ ಬಳಿಕ ಪರ್ತ್‌ನಲ್ಲಿ ಆ್ಯಶಸ್‌ ಟೆಸ್ಟ್‌ ಸರಣಿ ಆರಂಭ

Ashes Series: 40 ವರ್ಷ ಬಳಿಕ ಪರ್ತ್‌ನಲ್ಲಿ ಆ್ಯಶಸ್‌ ಟೆಸ್ಟ್‌ ಸರಣಿ ಆರಂಭ

Hall of Fame: ಬೌಲಿಂಗ್‌ ತಾರೆ ನೀತು ಡೇವಿಡ್‌ಗೆ ಹಾಲ್‌ ಆಫ್ ಫೇಮ್‌ ಗೌರವ

Hall of Fame: ಬೌಲಿಂಗ್‌ ತಾರೆ ನೀತು ಡೇವಿಡ್‌ಗೆ ಹಾಲ್‌ ಆಫ್ ಫೇಮ್‌ ಗೌರವ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

1-cccc

Haryana; ಸೋಲಿನ ಬೆನ್ನಲ್ಲೇ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ ಕ್ಯಾಪ್ಟನ್ ಅಜಯ್ ಯಾದವ್

1-traa

Train; ಹಳಿತಪ್ಪಿದ ಅಗರ್ತಲಾ-ಲೋಕಮಾನ್ಯ ತಿಲಕ್ ಎಕ್ಸ್‌ಪ್ರೆಸ್‌ನ 8 ಬೋಗಿಗಳು

ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಗ್ರ್ಯಾಂಡ್‌ ಫಿನಾಲೆ

ಅ.19-20ರಂದು ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಗ್ರ್ಯಾಂಡ್‌ ಫಿನಾಲೆ

Congress Govt.,: ವಾಲ್ಮೀಕಿ ಸಮಾಜದ ಕ್ಷಮೆ ಕೇಳಲಿ: ಆರಗ ಜ್ಞಾನೇಂದ್ರ

Congress Govt.,: ವಾಲ್ಮೀಕಿ ಸಮಾಜದ ಕ್ಷಮೆ ಕೇಳಲಿ: ಆರಗ ಜ್ಞಾನೇಂದ್ರ

Bhool Bhulaiyaa 3; ವಿದ್ಯಾ-ಮಾಧುರಿ ನಾಟ್ಯ ಲಹರಿ

Bhool Bhulaiyaa 3; ವಿದ್ಯಾ-ಮಾಧುರಿ ನಾಟ್ಯ ಲಹರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.