BBK11 ಬಿಗ್ ಬಾಸ್ ಮನೆಯಲ್ಲಿ ಸದ್ದು ಮಾಡಿದ 5 ಕೋಟಿ ಲಂಚ, ರೋಲ್ ಕಾಲ್ ಲಾಯರ್..


Team Udayavani, Oct 17, 2024, 11:16 PM IST

bigg

ಬೆಂಗಳೂರು: ಬಿಗ್ ಬಾಸ್ ಕನ್ನಡ (Bigg Boss Kannada-11) ಕಾರ್ಯಕ್ರಮದ ಮೂರನೇ ವಾರದ ದೊಡ್ಮನೆ ಆಟ ಮನೆಯ ಹೊರಗೂ ಸದ್ದು ಮಾಡಿದೆ.

ಕಳೆದ ಎರಡು ದಿನಗಳಿಂದ ಬಿಗ್ ಬಾಸ್ ಆಟ ಜಗದೀಶ್ ಸುತ್ತವೇ ಹೆಚ್ಚು ಸದ್ದು ಮಾಡುತ್ತಿದೆ. ಜಗದೀಶ್ ಮಾತು, ನಡವಳಿಕೆ ಹಾಗೂ ಮೌನ ಕೂಡ ಬಿಗ್ ಬಾಸ್ ವೀಕ್ಷಕರನ್ನು ಸೆಳೆಯುತ್ತಿದೆ.

ಹೆಣ್ಮಕ್ಕಳ ಬಗ್ಗೆ ಜಗದೀಶ್ ಅವರು ಏನೋ ಮಾತನಾಡಿದ್ದಾರೆ ಎನ್ನುವ ಕಾರಣಕ್ಕೆ ಇಡೀ ಮನೆಯೇ ಜಗದೀಶ್ ಅವರ ಮೇಲೆ ತಿರುಗಿ ಬಿದ್ದಿದೆ. ಮಂಜು, ರಂಜಿತ್, ಚೈತ್ರಾ, ಮಾನಸ ಸೇರಿದಂತೆ ಮನೆಯವರು ಜಗದೀಶ್ ಮೇಲೆ ಆಕ್ರೋಶ ವ್ಯಕಪಡಿಸಿದ್ದಾರೆ.

ನಾನು ಲೈಫ್ ಅಲ್ಲಿ ಯಾರಿಗೂ ಮೋಸ ಮಾಡಿಲ್ಲ. ಬಿಗ್ ಬಾಸ್ ಒಂದು ದೊಡ್ಡ ವೇದಿಕೆ. ಇಲ್ಲಿ ನಾವು ಫರ್ಫೆಮೆನ್ಸ್ ಮಾಡಿದ್ದೇವೆ ಅಂದರೆ ಸುಮ್ಮನೆ ಅಲ್ಲ. ನಾನು ಇಲ್ಲಿಂದ ಹೋಗಬೇಕೆಂದು ಅನ್ನಿಸಿದ್ರೂ ನನಗೆ ಹೋಗಲು ಮನಸ್ಸು ಆಗ್ತಾ ಇಲ್ಲ ಎಂದು ಜಗದೀಶ್ ಶಿಶಿರ್ ಜತೆ ಮಾತನಾಡಿದ್ದಾರೆ.

ಟಾಸ್ಕ್ ನಲ್ಲಿ ಜತೆಯಾದ ಮಂಜು – ಜಗದೀಶ್:
ನಾಮಿನೇಷನ್ ನಿಂದ ಪಾರಾಗುವ ಟಾಸ್ಕ್ ನಲ್ಲಿ ಏಳು ಜೋಡಿಗಳನ್ನು ಮಾಡಲಾಗಿದೆ. ಇದರಲ್ಲಿ ಮಂಜು ಹಾಗೂ ಜಗದೀಶ್ ಅವರು ಜೋಡಿ ಆಗಿದ್ದಾರೆ. ಟಾಸ್ಕ್ ಬಗ್ಗೆ ಇಬ್ಬರು ಮಾತನಾಡಿದ್ದಾರೆ.

ಅಂತಿಮವಾಗಿ ನಾಮಿನೇಷನ್ ನಲ್ಲಿರುವವರು:
ಅಂತಿಮವಾಗಿ ನಾಮಿನೇಷನ್ ನಲ್ಲಿ ಧನರಾಜ್, ಜಗದೀಶ್, ಮಂಜು, ಮಾನಸ,ಹಂಸಾ, ಸುರೇಶ್, ಮೋಕ್ಷಿತಾ ನಾಮಿನೇಷನ್ ಪಟ್ಟಿಯಲ್ಲಿ ಉಳಿದುಕೊಂಡಿದ್ದಾರೆ.

ತಾಳ್ಮೆ ಕಳೆದುಕೊಂಡ ಬಿಗ್ ಬಾಸ್:
ನಾಮಿನೇಷನ್ ದೃಷ್ಟಿಯಲ್ಲಿ ಮುಖ್ಯವಾಗಿರುವ ಟಾಸ್ಕ್ ಸಮಯದಲ್ಲಿ  ಗೋಲ್ಡ್ ಸುರೇಶ್ ಅವರ ಹಂಸಾ ಅವರ ಬಗ್ಗೆ ಕೆಟ್ಟದಾಗಿ ಏನೋ ಮಾತನಾಡಿದ್ದಾರೆ. ಇದಕ್ಕೆ ಗೋಲ್ಡ್ ಸುರೇಶ್ ಅವರು ಈ ರೀತಿ ‌ನನ್ನ ಹತ್ರ ಮಾತನಾಡಬೇಡ ಎಂದಿದ್ದಾರೆ. ಸುರೇಶ್
ಹೆಣ್ಮಕ್ಕಳ ‌ಬಗ್ಗೆ ಮಾತನಾಡುವಾಗ ಎಚ್ಚರವೆಂದು ಹೇಳಿದ್ದಾರೆ. ಇದಕ್ಕೆ  ಜಗದೀಶ್ ಮಾತನಾಡ್ತೀನಿ ನೀನ್ಯಾರೋ ಕೇಳೋಕೆ. ನನಗೆ ‌ಮೋಸ ಮಾಡಿದವರ ಬಗ್ಗೆ ನಾನು ಮಾತನಾಡ್ತೇನೆ ಎಂದಿದ್ದಾರೆ. ಈ ವೇಳೆ ಚೈತ್ರಾ ಅವರೊಂದಿಗೂ ಜಗದೀಶ್ ವಾಗ್ವಾದಕ್ಕೆ ಇಳಿದಿದ್ದಾರೆ. ಇತ್ತ ಹಂಸಾ ಅವರು ಇಲ್ಲಿ ಏನೆಲ್ಲ ಹೇಳಿಸಿಕೊಳ್ಳೋಕ್ಕೆ ನಾವು ರೆಡಿಯಿಲ್ಲ. ನಿನ್ನ ಅಪ್ಪನಿಗೆ ಹುಟ್ಟಿದರೆ ಬಾ ಎಂದು ಜಗದೀಶ್ ಅವರಿಗೆ ಸವಾಲೆಸೆದ ಚೈತ್ರಾ.

ಯಾರು ಮೋಸ ಮಾಡಿದ್ರು ನಿನಗೆ, ಆ ಪದವನ್ನು ಬಳಸಿದ್ದೇಕೆ ಎಂದು ಮನೆಯ ಎಲ್ಲಾ ಹೆಣ್ಮಕ್ಕಳು ಜಗದೀಶ್ ಮೇಲೆ ಮುಗಿಬಿದಿದ್ದಾರೆ.

ಚೈತ್ರಾ ಅವರ ವೈಯಕ್ತಿಕ ವಿಚಾರ ತೆಗೆದು, 5 ಕೋಟಿ ರೂಪಾಯಿ ತೆಗೆದು ಇಲ್ಲಿಗೆ ಬಂದಿಲ್ಲ. 5 ಕೋಟಿ ಲಂಚ ತೆಗೆದು ಬಂದಿಲ್ಲ. ಚಾರ್ಜ್ ಶೀಟ್ ಅಲ್ಲೂ ನಿನ್ನ ಹೆಸರು ಇದೆ ಎಂದು ಜಗದೀಶ್ ಹೇಳಿದ್ದಾರೆ. ಇದಕ್ಕೆ ಚೈತ್ರಾ ನಿನ್ನ ಅಪ್ಪನದು ದುಡ್ಡು ನಾನು ತಕ್ಕೊಂಡಿಲ್ಲ. ನಿನ್ನ ಹಾಗೆ ರೋಲ್ ಕಾಲ್ ಲಾಯರ್ ನಾವಲ್ಲ. ರೋಲ್ ಕಾಲ್ ಲಾಯರ್, ಲೈಸನ್ಸ್ ಇಲ್ಲದಿರುವ ಲಾಯರ್ ಎಂದು ಚೈತ್ರಾ ಅವರು ಗರಂ ಆಗಿದ್ದಾರೆ.

ಮಾತು ಎತ್ತಿದ್ರೆ ಹೊಡೆಯೋಕೆ ಬರ್ತಿಯಾ ನೀನು ಎಂದು ರಂಜಿತ್ ಗೆ ಜಗದೀಶ್ ಹೇಳಿದ್ದಾರೆ. ಇದಕ್ಕೆ ರಂಜಿತ್ ಸಿಗೋ‌ ನಿನಗೆ ಐತೆ ಎಂದಿದ್ದಾರೆ. ರಂಜಿತ್ ಕೆಟ್ಟದಾಗಿ ಏನೋ ಹೇಳಲು ಹೋದಾಗ ಸಹ ಸ್ಪರ್ಧಿ ಅವರ ಬಾಯಿ ಮುಚ್ಚಿಸಿದ್ದಾರೆ.

ಇದನ್ನು ನೋಡಿದ ಬಿಗ್ ಬಾಸ್ ನಿಮಗೆ ಕಡೆಯ ಎಲ್ಲರೂ ಕುಳಿತುಕೊಳ್ಳಿ ಎಂದು ಎಚ್ಚರಿಕೆ ನೀಡಿದ್ದಾರೆ.

ಜಗದೀಶ್ ಬಗ್ಗೆ ಸಹ ಸ್ಪರ್ಧಿಗಳು ಹೇಳಿದ್ದೇನು?:
ದಯವಿಟ್ಟು ಅವರನ್ನು ‌ಮನೆಯಿಂದ ಹೊರಗೆ ಕಳಿಸುವುದು ಬೇಡ ಆಟ ಇವತ್ತಿನಿಂದ ಶುರುವಾಗುತ್ತದೆ. ನನ್ನ ‌ಮೇಲೆ ಕೇಸ್ ಆಗಿರುವುದು ಹೌದು ಇದು ಜಗತ್ತಿಗೆ ಗೊತ್ತು. ನಾನು ಇದರಿಂದ ಮಾನಸಿಕವಾಗಿ ಕುಗ್ಗಿಲ್ಲ ಎಂದು ಚೈತ್ರಾ ಹೇಳಿದ್ದಾರೆ.

ನಾನು ಅವರ ಅಮ್ಮನ ಬಗ್ಗೆ ಕೆಟ್ಟದಾಗಿ ಹೇಳಿಲ್ಲ ಎಂದು ಮಾನಸ ಸ್ಪಷ್ಟನೆ ನೀಡಿದ್ದಾರೆ.

ಕಂಟೆಂಟ್ ಕೊಡುತ್ತಾರೆ ಅಂಥ ಹೇಳ್ತಾರೆ ಅಲ್ವಾ ಆ ವ್ಯಕ್ತಿ ಮನೆಯಿಂದ ಹೊರಗೆ ಹೋಗುವುದು ಬೇಡ. ಆ ವ್ಯಕ್ತಿ ಮನೆಯಲ್ಲಿರಬೇಕು ಕರುನಾಡಿನ ಜನ ಯಾವ ರೀತಿ ಕಂಟೆಂಟ್ ಕೊಡುತ್ತಾರೆ ಅಂಥ ನೋಡಬೇಕೆಂದು ಭವ್ಯಾ ಅವರು ಜಗದೀಶ್ ಬಗ್ಗೆ ಹೇಳಿದ್ದಾರೆ.

ಹೆಣ್ಮಕ್ಕಳ ಬಗ್ಗೆ ಈ ರೀತಿ ಭಾಷೆಯಲ್ಲಿ ಮಾತನಾಡುವುದು ಖಂಡಿತವಾಗಿ ತಪ್ಪು. ಇದರಿಂದ ನನ್ನ ಮನಸ್ಸಿಗೆ ನೋವಾಗಿದೆ ಎಂದು ಹಂಸಾ ಹೇಳಿದ್ದಾರೆ.

ಜಗದೀಶ್ ಅವರಿಗೆ ಮಹಿಳೆಯರ ಬಗ್ಗೆ ಕನಿಷ್ಠ ಗೌರವ ಕೂಡ ಇಲ್ಲ. ಬಹುಶಃ ಮನೆಯಲ್ಲೂ ಅವರು ಹೀಗೆ ‌ಇರುತ್ತಾರೆ ಎಂದು ಗೌತಮಿ ಅವರು ಹೇಳಿದ್ದಾರೆ.

ಹೆಣ್ಮಕ್ಕಳ ಬಗ್ಗೆ ಆ ವ್ಯಕ್ತಿ ಮಾತನಾಡುವಾಗ ನಮ್ಮ ರಕ್ತ ಕುದಿಯುತ್ತದೆ. ನಾನು ಅವರ ಮೇಲೆ ಕೈ‌ಮೇಲೆ ಮಾಡಿರುವುದು ಹೌದು ಎಂದು ರಂಜಿತ್ ಹೇಳಿದ್ದಾರೆ.

ಬಿಗ್ ಬಾಸ್ ಜಗದೀಶ್ ಅವರು ಹಂಸಾ ಅವರ ಬಗ್ಗೆ ಆಡಿದ ಅವಹೇಳನಕಾರಿ ಮಾತಿಗೆ ಬಗ್ಗೆ ವಿವರ ಕೇಳಿದ್ದಾರೆ.

ಜಗದೀಶ್ ಅವರ ಮೇಲೆ ಯಾರು ಕೈ ಮಾಡಿಲ್ಲ. ಮಾನಸ ಅವರು ತಾಯಿ ಬಗ್ಗೆ ಏನು ಇಲ್ಲ. ಇದರಲ್ಲಿ ಮಾನಸ ಅವರ ತಪ್ಪಿಲ್ಲ ಎಂದು ಶಿಶಿರ್ ಅವರು ಬಿಗ್ ಬಾಸ್ ಗೆ ಹೇಳಿದ್ದಾರೆ.

ಮಹಿಳೆಯರಿಗೆ ನಿಂದನೆ: ದೈಹಿಕ ಹಲ್ಲೆ: ಜಗದೀಶ್, ರಂಜಿತ್ ಮನೆಯಿಂದ ಔಟ್:

ಮಹಿಳೆಯರಿಗೆ ‌ನಿಂದಿಸಿ ಮಾತನಾಡಿದ್ದಕ್ಕೆ ಜಗದೀಶ್ ಅವರನ್ನು ಹಾಗೂ ದೈಹಿಕವಾಗಿ ಹಲ್ಲೆ ನಡೆಸಿದ್ದಕ್ಕೆ ರಂಜಿತ್ ಅವರನ್ನು ಬಿಗ್ ಬಾಸ್ ಮನೆಯಿಂದ ಆಚೆ ಕಳುಹಿಸಿದ್ದಾರೆ.

ಇತ್ತ ಸಹ ಸ್ಪರ್ಧಿಗಳ ಒಂದು ಅವಕಾಶ ಕೊಡಿ ಬಿಗ್ ಬಾಸ್ ಎಂದು ಮನವಿ ಮಾಡಿರುವುದನ್ನು ತೋರಿಸಲಾಗಿದೆ.

ಟಾಪ್ ನ್ಯೂಸ್

sensex-down

Share Market: ಸೆನ್ಸೆಕ್ಸ್‌ ಸತತ ಪತನ: 2 ತಿಂಗಳ ಕನಿಷ್ಠ ಕುಸಿತ ದಾಖಲಿಸಿದ ಷೇರುಪೇಟೆ

rathan-tata

Mumbai: ಅರಬಿ ಸಮುದ್ರದಲ್ಲಿ ರತನ್‌ ಟಾಟಾ ಚಿತಾ ಭಸ್ಮ ವಿಸರ್ಜನೆ

Salmana

Bollywood Actor: ಸಲ್ಮಾನ್‌ ಹತ್ಯೆಗೆ 25 ಲಕ್ಷ ಸುಪಾರಿ ಕೊಟ್ಟ ಬಿಷ್ಣೋಯ್‌: ಪೊಲೀಸ್‌

Priyanka-VA

By Poll: ಪ್ರಿಯಾಂಕಾ ವಾದ್ರಾ ವಿರುದ್ಧ ವಯನಾಡಿನಲ್ಲಿ ಸಿಪಿಐ ಅಭ್ಯರ್ಥಿ ಕಣಕ್ಕೆ

supreme-Court

Citizenship: ವಲಸಿಗರಿಗೆ ಪೌರತ್ವ ನೀಡುವ ಮಾನ್ಯತೆ ಎತ್ತಿಹಿಡಿದ ಸುಪ್ರೀಂಕೋರ್ಟ್‌

Udupi: ಗೀತಾರ್ಥ ಚಿಂತನೆ-67: ಅರ್ಜುನನ ಅಹಂ ನಾಶಕ್ಕೆ ಕೃಷ್ಣತಂತ್ರ

Udupi: ಗೀತಾರ್ಥ ಚಿಂತನೆ-67: ಅರ್ಜುನನ ಅಹಂ ನಾಶಕ್ಕೆ ಕೃಷ್ಣತಂತ್ರ

Shivamogga:7 ಶಂಕಿತ ಬಾಂಗ್ಲಾದೇಶಿಯರ ವಶ

Shivamogga:7 ಶಂಕಿತ ಬಾಂಗ್ಲಾದೇಶಿಯರ ವಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Komal Kumar’s Yala kunni ready to release

Komal Kumar: ತೆರೆಗೆ ಬರಲು ಸಿದ್ದವಾಯ್ತು ʼಯಲಾ ಕುನ್ನಿʼ

Arjun Sarja announces new film Seetha Payana

Seetha Payana: ಅರ್ಜುನ್‌ ಸರ್ಜಾ ನಿರ್ದೇಶನದಲ್ಲಿ ʼಸೀತಾ ಪಯಣʼ; ನಿರಂಜನ್‌ ಹೀರೋ

Chethan Kumar: ನಟ ಚೇತನ್‌ ವಿರುದ್ಧದ ವಾರಂಟ್‌ ಹಿಂಪಡೆದ ಕೋರ್ಟ್ ‌

Chethan Kumar: ನಟ ಚೇತನ್‌ ವಿರುದ್ಧದ ವಾರಂಟ್‌ ಹಿಂಪಡೆದ ಕೋರ್ಟ್ ‌

2

Actor Darshan: ಅ.22ಕ್ಕೆ ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಸಾಧ್ಯತೆ

ja

BBK11: ನೀವು ಬಿಗ್ ಬಾಸ್ ಟ್ರೋಫಿ ಗೆಲ್ಲಬಹುದು, ಜನರ ಮನಸ್ಸು ಗೆಲ್ಲೋದು ನಾನೇ.. ಜಗದೀಶ್

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

sensex-down

Share Market: ಸೆನ್ಸೆಕ್ಸ್‌ ಸತತ ಪತನ: 2 ತಿಂಗಳ ಕನಿಷ್ಠ ಕುಸಿತ ದಾಖಲಿಸಿದ ಷೇರುಪೇಟೆ

rathan-tata

Mumbai: ಅರಬಿ ಸಮುದ್ರದಲ್ಲಿ ರತನ್‌ ಟಾಟಾ ಚಿತಾ ಭಸ್ಮ ವಿಸರ್ಜನೆ

Salmana

Bollywood Actor: ಸಲ್ಮಾನ್‌ ಹತ್ಯೆಗೆ 25 ಲಕ್ಷ ಸುಪಾರಿ ಕೊಟ್ಟ ಬಿಷ್ಣೋಯ್‌: ಪೊಲೀಸ್‌

Priyanka-VA

By Poll: ಪ್ರಿಯಾಂಕಾ ವಾದ್ರಾ ವಿರುದ್ಧ ವಯನಾಡಿನಲ್ಲಿ ಸಿಪಿಐ ಅಭ್ಯರ್ಥಿ ಕಣಕ್ಕೆ

1-a-kota-pammu

Pramod Madhwaraj ಅವರದ್ದು ಯಾರನ್ನೂ ದ್ವೇಷಿಸದ ಅಪರೂಪದ ವ್ಯಕ್ತಿತ್ವ: ಕೋಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.