Cini Talk: ಸಿನಿಮಾ ನಿರ್ದೇಶಕ ಬಿಝಿನೆಸ್‌ ಮ್ಯಾನ್‌ ಅಲ್ಲ!: ನಿರ್ದೇಶಕ ಸೂರಿ ಮಾತು


Team Udayavani, Oct 18, 2024, 12:33 PM IST

director suri

ನಿರ್ದೇಶಕ ಸೂರಿ ಅವರು ಇರುವುದೇ ಹಾಗೆ, ತಾವಾಯಿತು, ತಮ್ಮ ಕೆಲಸವಾಯಿತು.. ಅನವಶ್ಯಕ ಪ್ರಚಾರ, ತೋರಿಕೆಯ ಮಾತುಗಳಿಂದ ದೂರ,ಬಲು ದೂರ… ಇಂತಿಪ್ಪ ಸೂರಿ ನಿರ್ದೇಶನದಲ್ಲಿ “ಕಾಗೆ ಬಂಗಾರ’ ಚಿತ್ರ ಬರಲಿದೆ ಎಂಬ ಸುದ್ದಿಯೊಂದು ಹೊರಬಿದ್ದು ತುಂಬಾ ತಿಂಗಳುಗಳೇ ಆಗಿ ಹೋಗಿವೆ. ಆದರೆ, ಆ ನಂತರ ಏನಾಯ್ತು, ಸೂರಿ ಏನು ಮಾಡುತ್ತಿದ್ದಾರೆ, ಸ್ಕ್ರಿಪ್ಟ್ ಫೈನಲ್‌ ಕೆಲಸ ಮುಗೀತಾ, ಶೂಟಿಂಗ್‌ ಯಾವಾಗ.. ಇಂತಹ ಕುತೂಹಲದೊಂದಿಗೆ ನಿರ್ದೇಶಕ ಸೂರಿ ಅವರಿಗೆ ಫೋನ್‌ ಮಾಡಿದಾಗ ಆ ಕಡೆಯಿಂದ ಒಂದಷ್ಟು ವಿಭಿನ್ನ ಚಿಂತನೆ, ಜೊತೆಗೆ ತೂಕದ ಮಾತುಗಳು ಬಂದವು. ಅದನ್ನು ಇಲ್ಲಿ ನೀಡಲಾಗಿದೆ.

1 ಕಾಗೆ ಬಂಗಾರ ಕೆಲಸ ಎಲ್ಲಿಗೆ ಬಂತು?

ಕಾಗೆ ಬಂಗಾರ ಕೆಲಸ ನಡೆಯುತ್ತಿದೆ. ಜಯಣ್ಣ ನಿರ್ಮಾಣ ಮಾಡುತ್ತಿರುವ ಸಿನಿಮಾವಿದು. ವಿರಾಟ್‌ ಹಾಗೂ ದುನಿಯಾ ವಿಜಯ್‌ ಪುತ್ರಿ ರಿತನ್ಯಾ ಮುಖ್ಯಭೂಮಿಕೆ ಯಲ್ಲಿದ್ದಾರೆ. “ಕಾಗೆ ಬಂಗಾರ’ ಸ್ಕ್ರಿಪ್ಟ್ ಬಹುತೇಕ ಮುಕ್ತಾಯವಾಗಿದೆ. ಸಿನಿಮಾಗಾಗಿ ಲೊಕೇಶನ್‌ ನೋಡುತ್ತಿದ್ದೇವೆ. ನಿರ್ಮಾಪಕರು, ಕಲಾ ನಿರ್ದೇಶಕರೊಂದಿಗೆ ಮಾತುಕತೆ ನಡೆಯುತ್ತಿದೆ. ಕಾಸ್ಟ್ಯೂಮ್‌ ಇತ್ಯಾದಿ ಎಲ್ಲ ಇನ್ನಷ್ಟು ತಯಾರಿ ಆಗಬೇಕು

2 “ಕೆಂಡ ಸಂಪಿಗೆ’, “ಪಾಪ್‌ ಕಾರ್ನ್ ಮಂಕಿ ಟೈಗರ್‌’ ಮತ್ತು “ಕಾಗೆ ಬಂಗಾರ’ದ ಸಂಬಂಧ ಏನು?

“ಕೆಂಡ ಸಂಪಿಗೆ’, “ಪಾಪ್‌ ಕಾರ್ನ್ ಮಂಕಿ ಟೈಗರ್‌ ಈ ಸಿನಿಮಾಗಳ ಒಂದು ರೌಂಡಪ್‌ ಮಾಡಬೇಕು. ಅದರಲ್ಲಿರುವ ವಿಚಾರ, ಆ ಬಾವಿ ಏನು, ಕಾಗೆ ಬಂಗಾರ ಪಾತ್ರ ಇವುಗಳ ಹಿನ್ನೆಲೆ ಕಥೆ ಇದನ್ನು ಹೇಳಬೇಕಾಗಿದೆ. ಸುರೇಂದ್ರ ಅವರು ಕೊಟ್ಟ ಕಥೆ ಇದು. “ಕೆಂಡ ಸಂಪಿಗೆ’, “ಪಾಪ್‌ ಕಾರ್ನ್ ಮಂಕಿ ಟೈಗರ್‌’ ಕಥೆಯ ಲಿಂಕ್‌ ಇಲ್ಲಿ ಸಣ್ಣದಾಗಿ ಕೊಡಲಾಗಿದೆ. ಹಿಂದಿನ ಕಥೆ ಜೊತೆ ಜೊತೆಗೆ ಈಗ ಏನು ನಡೆಯುತ್ತಿದೆ ಅನ್ನೊದನ್ನ ಒಟ್ಟಿಗೆ ಇಲ್ಲಿ ಹೇಳುತ್ತೇವೆ. ಇದು ಪ್ರೇಮ ಕಥೆ, ಎರಡು ಘಟ್ಟದಲ್ಲಿ ಕಥೆ ಸಾಗುತ್ತೆ. ನಮಗಿದು ಸ್ವಲ್ಪ ಸವಾಲಿನದ್ದಾಗಿದೆ. ಹಾಗಾಗಿ ತಯಾರಿ ಮಾಡಿಕೊಳ್ಳುತ್ತಿ ದ್ದೇವೆ. ಇನ್ನು ಒಂದೂವರೆ ತಿಂಗಳಲ್ಲಿ ಶೂಟಿಂಗ್‌ ಆರಂಭವಾಗಲಿದೆ.

3 ನಿಮ್ಮ ಸಿನಿಮಾ ರಿಲೀಸ್‌ ಸಮಯ ಬಿಟ್ಟರೆ ಮಿಕ್ಕಂತೆ ಸೂರಿ ದುನಿಯಾದಲ್ಲೇ ಇರುತ್ತೀರಿ?

ಹೌದು, ನಾನು ಸದಾ ಪ್ರಚಾರದಲ್ಲಿ ಇರಲು ಬಯಸುವುದಿಲ್ಲ. ಅದರ ಅವಶ್ಯಕತೆ, ಅನಿವಾರ್ಯತೆ ಇದ್ದಾಗ ಮಾತ್ರ ಅದರತ್ತ ಗಮನ ಹರಿಸುತ್ತೇನೆ. ನಾನು ಮಾತನಾಡುವುದ್ದಕಿಂತ ನನ್ನ ಸಿನಿಮಾ ಮಾತನಾಡಬೇಕು. ಬಹಳ ಇಷ್ಟಪಟ್ಟು ಈ ಕ್ಷೇತ್ರಕ್ಕೆ ಬಂದಿದ್ದೇನೆ. ನನಗೆ ಸಿನಿಮಾ ಎಷ್ಟು ಮುಖ್ಯವೋ, ಅಷ್ಟೇ ನನ್ನ ವೈಯಕ್ತಿಕ ಸ್ವಾತಂತ್ರ್ಯವೂ ಮುಖ್ಯ. ಯಾರೋ ಬಂದು ಏನೋ ಹೇಳಿದರು ಎಂಬ ಮಾತ್ರಕ್ಕೆ ನನ್ನಿಂದ ಎಲ್ಲವೂ ಆಗುವುದಿಲ್ಲ. ಅನೇಕರು ಬಂದು “ನಿಮ್ಮ ಹೆಸರಲ್ಲಿ ಅರ್ಪಿಸುವ ಹಾಕುತ್ತೇವೆ, ಸಿನಿಮಾಕ್ಕೆ ಬೈಟ್ಸ್‌ ಕೊಡಿ’ ಎಂದು ಕೇಳುತ್ತಾರೆ. ಏನೇ ಆಗಲಿ ಅಂತಿಮವಾಗಿ ಸಿನಿಮಾ ಚೆನ್ನಾಗಿದ್ದರೆ, ಅದೇ ಮಾತನಾಡುತ್ತದೆ. ಕೀರ್ತಿ ತಂದು ಕೊಡುತ್ತದೆ.

4 ಸಿನಿಮಾ ಹೊರತಾಗಿ ನಿಮ್ಮ ಪ್ರಪಂಚ?

ಸಿನಿಮಾದ ಜೊತೆಗೆ ನಮ್ಮದೇ ಆದ ಒಂದು ಪ್ರಪಂಚವಿರುತ್ತದೆ. ಎಷ್ಟೋ ಬಾರಿ ನಾವು ಈ ಜಂಜಾಟದಲ್ಲಿ ಅದರಿಂದ ದೂರ ಉಳಿದಿರುತ್ತೇವೆ. ಈಗ ಎಲ್ಲ ಅರ್ಥ ಆಗಿದೆ. ಈ ಜಂಜಾಟದಲ್ಲಿ ನನ್ನ ಅನೇಕ ಸಮಯ ಕಳೆದುಕೊಂಡೆ. ಇನ್ನು ನಾನು ಓದುವುದು, ನೋಡಬೇಕಾದ್ದು ಬಹಳಷ್ಟಿದೆ. ಅದರತ್ತವೂ ಗಮನ ಹರಿಸುತ್ತೇನೆ.

5 ನಿರ್ದೇಶಕರೇ ಈಗ ನಿರ್ಮಾಪಕರಾಗುತ್ತಿದ್ದಾರೆ. ನಿಮಗೆ ಆ ಯೋಚನೆ ಇಲ್ಲವೇ?

ನಾನು ಕ್ರಿಯೆಟಿವ್‌ ವ್ಯಕ್ತಿ, ಬಿಝಿನೆಸ್‌ ಮ್ಯಾನ್‌ ಅಲ್ಲ. ಎಲ್ಲವೂ ನಮ್ಮಿಂದಲೇ ಆಗುವಾಗ, ಗೊತ್ತಿಲ್ಲದೆ ಒಂದಿಷ್ಟು ತಪ್ಪುಗಳ ಸುಳಿಯಲ್ಲಿ ಸಿಲುಕುತ್ತೇವೆ. ಹಣಕಾಸು ಹಾಗೂ ಇತರ ವಿಚಾರಗಳ ಜಂಜಡದಿಂದ ಕೆಲಸಗಳು ನಿಧಾನವಾಗುತ್ತವೆ. ಈ ವಿಚಾರದ ಅರಿವು ನನಗೆ ಬೇಗನೇ ಆಯಿತು. ಮುಖ್ಯವಾಗಿ ನಾನು ಪ್ರೊಡ್ಯುಸರ್‌ ಆಗಲು ಬಂದಿಲ್ಲ. ನನಗೆ ಖುಷಿಯಾಗುವುದನ್ನು ಮಾಡಲು ಚಿತ್ರರಂಗಕ್ಕೆ ಬಂದಿದ್ದೇನೆ.

ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

INDvsNZ: 12ನೇ ತರಗತಿ ಪರೀಕ್ಷೆಗಾಗಿ ನ್ಯೂಜಿಲ್ಯಾಂಡ್‌ ವಿರುದ್ದ ಸರಣಿ ಕೈಬಿಟ್ಟ ಕ್ರಿಕೆಟರ್

INDvsNZ: 12ನೇ ತರಗತಿ ಪರೀಕ್ಷೆಗಾಗಿ ನ್ಯೂಜಿಲ್ಯಾಂಡ್‌ ವಿರುದ್ದ ಸರಣಿ ಕೈಬಿಟ್ಟ ಕ್ರಿಕೆಟರ್

sanjay-raut

Maharashtra; ಕೈ ನಾಯಕರಿಗೆ ಸಾಮರ್ಥ್ಯವಿಲ್ಲ..: ಸೀಟು ಹಂಚಿಕೆ ಕುರಿತು ರಾವತ್ ಅಸಮಾಧಾನ

UP: ಟೊಮ್ಯಾಟೋ ಸಾಗಿಸುತ್ತಿದ್ದ ಟ್ರಕ್ ಪಲ್ಟಿ… ರಾತ್ರಿಯಿಡೀ ಟೊಮ್ಯಾಟೋ ಕಾದು ಕೂತ ಪೊಲೀಸರು

UP: ಟೊಮ್ಯಾಟೊ ಸಾಗಿಸುತ್ತಿದ್ದ ಟ್ರಕ್ ಪಲ್ಟಿ… ರಾತ್ರಿಯಿಡೀ ಟೊಮ್ಯಾಟೊ ಕಾದು ಕೂತ ಪೊಲೀಸರು

Explainer: FBI ವಾಂಟೆಡ್‌ ಲಿಸ್ಟ್‌ ನಲ್ಲಿ ಭಾರತದ ಮಾಜಿ ರಾ ಅಧಿಕಾರಿ;ಯಾರು ವಿಕಾಸ್‌ ಯಾದವ್?

Explainer: FBI ವಾಂಟೆಡ್‌ ಲಿಸ್ಟ್‌ ನಲ್ಲಿ ಭಾರತದ ಮಾಜಿ ರಾ ಅಧಿಕಾರಿ;ಯಾರು ವಿಕಾಸ್‌ ಯಾದವ್?

Video: ನಿಮಗೆ ಮತ ಹಾಕಿದ್ದೇನೆ, ನನಗೊಂದು ಮದುವೆ ಮಾಡಿಸಿ.. ಶಾಸಕರ ಬಳಿ ಮನವಿ ಮಾಡಿದ ವ್ಯಕ್ತಿ

Video: ನಿಮಗೆ ಮತ ಹಾಕಿದ್ದೇನೆ, ನನಗೊಂದು ಮದುವೆ ಮಾಡಿಸಿ.. ಶಾಸಕರ ಬಳಿ ಮನವಿ ಮಾಡಿದ ವ್ಯಕ್ತಿ

Sandur By Poll: ನಾಗೇಂದ್ರ ಈಗಾಗಲೇ ಡಸ್ಟ್ ಬಿನ್ ನಲ್ಲಿ ಬಿದ್ದಿದ್ದಾನೆ: ಜನಾರ್ದನ ರೆಡ್ಡಿ

Sandur By Poll: ನಾಗೇಂದ್ರ ಈಗಾಗಲೇ ಡಸ್ಟ್ ಬಿನ್ ನಲ್ಲಿ ಬಿದ್ದಿದ್ದಾನೆ: ಜನಾರ್ದನ ರೆಡ್ಡಿ

Yahya Sinwar:ಕೊನೆಯಾದ ಹಮಾಸ್ ಮುಖ್ಯಸ್ಥನ ತಂತ್ರ: ಸೋಲಿನಲ್ಲಿ ಅಂತ್ಯ ಕಂಡ ಸಿನ್ವರ್ ಜೀವನ

Yahya Sinwar:ಕೊನೆಯಾದ ಹಮಾಸ್ ಮುಖ್ಯಸ್ಥನ ತಂತ್ರ: ಸೋಲಿನಲ್ಲಿ ಅಂತ್ಯ ಕಂಡ ಸಿನ್ವರ್ ಜೀವನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Bagheera movie song out

Bagheera ರುಧಿರ ಗಾನ…; ಶ್ರೀಮುರಳಿ ಸಿನಿಮಾದ ಹಾಡು ಬಂತು

simha roopini kannada movie

Simha Roopini: ಭಕ್ತಿ ಭಾವದ ʼಸಿಂಹ ರೂಪಿಣಿʼ: ಕಿನ್ನಾಳ್‌ ರಾಜ್‌ ನಿರ್ದೇಶನ

murhy

Murphy; ಸಂಬಂಧಗಳ ಸುತ್ತ ಮರ್ಫಿ; ಪ್ರೇಕ್ಷಕ ಪ್ರಭು ನಂಬಿದ ತಂಡ

mantrika kannada movie

Kannada Cinema; ಮಾಂತ್ರಿಕ ಆಟ ಶುರು

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

INDvsNZ: 12ನೇ ತರಗತಿ ಪರೀಕ್ಷೆಗಾಗಿ ನ್ಯೂಜಿಲ್ಯಾಂಡ್‌ ವಿರುದ್ದ ಸರಣಿ ಕೈಬಿಟ್ಟ ಕ್ರಿಕೆಟರ್

INDvsNZ: 12ನೇ ತರಗತಿ ಪರೀಕ್ಷೆಗಾಗಿ ನ್ಯೂಜಿಲ್ಯಾಂಡ್‌ ವಿರುದ್ದ ಸರಣಿ ಕೈಬಿಟ್ಟ ಕ್ರಿಕೆಟರ್

sanjay-raut

Maharashtra; ಕೈ ನಾಯಕರಿಗೆ ಸಾಮರ್ಥ್ಯವಿಲ್ಲ..: ಸೀಟು ಹಂಚಿಕೆ ಕುರಿತು ರಾವತ್ ಅಸಮಾಧಾನ

UP: ಟೊಮ್ಯಾಟೋ ಸಾಗಿಸುತ್ತಿದ್ದ ಟ್ರಕ್ ಪಲ್ಟಿ… ರಾತ್ರಿಯಿಡೀ ಟೊಮ್ಯಾಟೋ ಕಾದು ಕೂತ ಪೊಲೀಸರು

UP: ಟೊಮ್ಯಾಟೊ ಸಾಗಿಸುತ್ತಿದ್ದ ಟ್ರಕ್ ಪಲ್ಟಿ… ರಾತ್ರಿಯಿಡೀ ಟೊಮ್ಯಾಟೊ ಕಾದು ಕೂತ ಪೊಲೀಸರು

12

Manipal ಪರಿಸರದ 15-20 ಪಕ್ಷಿ ಪ್ರಭೇದ ಕಣ್ಮರೆ; ಇ ಬರ್ಡ್‌ ಪೋರ್ಟಲ್‌ನಲ್ಲಿ ದಾಖಲಾತಿ

11

Shirva: ಹುಲಿ ವೇಷ ಹಾಕಿ ಅನಾರೋಗ್ಯಪೀಡಿತ ಬಾಲಕನಿಗೆ ನೆರವು ನೀಡಿದ ಪೋರರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.