Mangaluru: ಸೇತುವೆ ಮೇಲೆ ಸಂಚಾರ ನಿರ್ಬಂಧದಿಂದ ಕಂಗೆಟ್ಟ ನಾಗರಿಕರು

ಪೊಳಲಿ: ಪರ್ಯಾಯ ಮಾರ್ಗಕ್ಕೆ ಜಿಲ್ಲಾಡಳಿತ ಚಿಂತನೆ

Team Udayavani, Oct 18, 2024, 1:29 PM IST

4

ಮಹಾನಗರ: ಬಹಳಷ್ಟು ನಾಗರಿಕರು ಸಂಚರಿಸುವ ಪ್ರಮುಖ ಸೇತುವೆಯಾದ ಪೊಳಲಿ ಸೇತುವೆಯಲ್ಲಿ ಶಾಲಾ ಮಕ್ಕಳ ಬಸ್‌, ಪ್ರಯಾಣಿಕರ ಬಸ್‌ ಸಾಗಾಟ ನಿರ್ಬಂಧಿಸಿರುವುದು ಸ್ಥಳೀಯರಿಗೆ ತೀವ್ರ ಸಮಸ್ಯೆ ತಂದೊಡ್ಡಿದೆ.

ಜಿಲ್ಲೆಯ 4 ಸೇತುವೆಗಳು ಕ್ಷೀಣವಾಗಿರುವುದರಿಂದ ಅವುಗಳ ರಿಪೇರಿಯಾಗುವವರೆಗೂ ಘನ ವಾಹನ ಸಂಚಾರ ನಿರ್ಬಂಧಿಸುವ ಸರಕಾರದ ನಿರ್ದೇಶನ ದಂತೆ ಪೊಳಲಿ ಸೇತುವೆಯಲ್ಲೂ ಘನ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ಇದರ ನಡುವೆಯೇ ವಿಧಾನ ಪರಿಷತ್‌ ಉಪಚುನಾವಣೆ ಘೋಷಣೆಯಾಗಿದ್ದು, ಅದರ ನೀತಿ ಸಂಹಿತೆಯೂ ಇರುವ ಕಾರಣ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೇರಿ ಕ್ರಮ ಕೈಗೊಳ್ಳುವುದಕ್ಕೂ ಅಡ್ಡಿಯಾಗಿದೆ. ನೀತಿ ಸಂಹಿತೆ ಮುಗಿದ ಬಳಿಕ ಬಂಟ್ವಾಳ, ಮಂಗಳೂರು ಉತ್ತರ ಇಬ್ಬರು ಶಾಸಕರು ಜಿಲ್ಲಾಧಿಕಾರಿಯವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ.

ತಾತ್ಕಾಲಿಕ ಸೇತುವೆಗೆ ಯೋಜನೆ
ಸೇತುವೆ ರಿಪೇರಿಯಾಗುವ ವರೆಗೂ ನಾಗರಿಕರ ವಾಹನ ಸಂಚಾರಕ್ಕೆ ಪೂರಕವಾಗಿ ತಾತ್ಕಾಲಿಕ ಸೇತುವೆ ರಚಿಸಬೇಕು ಎನ್ನುವ ಆಗ್ರಹ ಸ್ಥಳೀಯರದ್ದು, ಅದಕ್ಕಾಗಿ ಬುಧವಾರ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಪರ್ಯಾಯ ಮಾರ್ಗದ ಬಗ್ಗೆ ಅಂದಾಜು ಪಟ್ಟಿ ಸಿದ್ಧಪಡಿಸುವ ಸಾಧ್ಯತೆ ಇದೆ.

ವರದಿ ನೋಡಿ ಮುಂದಿನ ಕ್ರಮ
ನಮ್ಮ ಅಧಿಕಾರಿಗಳು ಪೊಳಲಿಗೆ ಭೇಟಿ ನೀಡಿದ್ದಾರೆ. ಲೋಕೋಪಯೋಗಿ ಇಲಾಖೆಯವರು ಪರ್ಯಾಯ ಮಾರ್ಗದ ಬಗ್ಗೆ ವಿಮರ್ಶೆ ಮಾಡಿದ್ದು, ಏನು ಮಾಡಬಹುದು ಎಂಬ ಬಗ್ಗೆ ವರದಿ ಕೊಡಲಿದ್ದಾರೆ. ಚುನಾವಣೆ ಇರುವ ಕಾರಣ ಸಭೆ ಮಾಡಲಾಗುತ್ತಿಲ್ಲ. ಅವರ ವರದಿ ನೋಡಿಕೊಂಡು ಏನು ಮಾಡಬಹುದೋ ಅದನ್ನು ಮಾಡುತ್ತೇವೆ.
-ಮುಲ್ಲೈ ಮುಗಿಲನ್‌, ಜಿಲ್ಲಾಧಿಕಾರಿ, ದ.ಕ.

ಸಾರ್ವಜನಿಕರಿಗೆ ತೊಂದರೆ
ಸಾರ್ವಜನಿಕರು, ಶಾಲಾ ಮಕ್ಕಳಿಗೆ ತೊಂದರೆಯಾಗಿದೆ, ಕೇವಲ ಶಾಲಾ ಮಕ್ಕಳು, ಪ್ರಯಾಣಿಕರ ಬಸ್‌ ಮಾತ್ರ ನಿರ್ಬಂಧಿಸಿದ್ದು ಯಾಕೆ? ಉಳಿದೆಲ್ಲಾ ವಾಹನಗಳೂ ಸಂಚರಿಸುತ್ತಿವೆ ಎನ್ನು ವುದು ಸ್ಥಳೀಯರ ಆಕ್ಷೇಪ. ಪೊಳಲಿ ಸೇತುವೆ ಎರಡೂ ಬದಿಗಳಲ್ಲಿ ಕಬ್ಬಿಣದ ತೊಲೆಗಳನ್ನು ಹಾಕಿದ್ದು ಸರಿಯಲ್ಲ.
-ಬಾಲಕೃಷ್ಣ ರಾವ್‌ ನೂಯಿ, ನಾಗರಿಕರು, ಅಡ್ಡೂರು

ಮುಂದೆ ಮೇ ತಿಂಗಳ ವರೆಗೆ ತಾತ್ಕಾಲಿಕ ರಸ್ತೆಯನ್ನು ಈಗಿನ ಸೇತುವೆಯ ಕೆಳಭಾಗದಲ್ಲಿ ನಿರ್ಮಿಸುವುದಕ್ಕೆ ಸಾಧ್ಯವಿದೆ, ಮಣ್ಣು ಕಲ್ಲು ಹಾಕಿ, ಮಧ್ಯೆ ಮೋರಿಯನ್ನೂ ನಿರ್ಮಿಸಿ ಮಾರ್ಗ ನಿರ್ಮಿಸಿದರೆ ನೀರೂ ಸರಾಗವಾಗಿ ಹರಿಯಬಹುದು, ಆ ವೇಳೆಗೆ ರಿಪೇರಿ ಪೂರ್ಣಗೊಳಿಸಬಹುದು ಎನ್ನುತ್ತಾರೆ ಪೊಳಲಿ ಅಡ್ಡೂರು ಫಲ್ಗುಣಿ ಸೇತುವೆ ಹೋರಾಟ ಸಮಿತಿಯ ಅಧ್ಯಕ್ಷ ವೆಂಕಟೇಶ್‌ ನಾವಡ ಪೊಳಲಿ.

ಸದ್ಯ ಘನ ವಾಹನ ಸಂಚಾರ ಸ್ಥಗಿತಗೊಂಡಿರುವುದು ಸಮಸ್ಯೆಯಾಗಿದೆ, ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿ ಅವರು ಸ್ವಂತ ಹಣ ಹಾಕಿ ಟೆಂಪೊವೊಂದನ್ನು ನೀಡಿದ್ದು ಚಾಲಕ, ಡೀಸೆಲ್‌ ವೆಚ್ಚವನ್ನೂ ನೀಡುತ್ತಿದ್ದಾರೆ. ಇದು ಅಡ್ಡೂರು ಪೊಳಲಿ ಮಧ್ಯೆ ಸಂಚರಿಸುವ ಜನರಿಗೆ ತುಸು ನೆರವಾಗಿದೆ.

ಟಾಪ್ ನ್ಯೂಸ್

Train

Train; ದೀಪಾವಳಿಗೆ ಬೆಂಗಳೂರು- ಕಾರವಾರ ವಿಶೇಷ ರೈಲು

HDK (3)

MUDA ಮಾತ್ರವಲ್ಲ ಸಿದ್ದರಾಮಯ್ಯ ಇನಕಲ್ ನಿವೇಶನವೂ ಅಕ್ರಮ: ಎಚ್ ಡಿಕೆ ಮತ್ತೊಂದು ಬಾಂಬ್

INDvsNZ: ಟೆಸ್ಟ್‌ ಕ್ರಿಕೆಟ್‌ ನಲ್ಲಿ 9000 ರನ್‌ ಪೂರೈಸಿದ ವಿರಾಟ್‌ ಕೊಹ್ಲಿ

INDvsNZ: ಟೆಸ್ಟ್‌ ಕ್ರಿಕೆಟ್‌ ನಲ್ಲಿ 9000 ರನ್‌ ಪೂರೈಸಿದ ವಿರಾಟ್‌ ಕೊಹ್ಲಿ

1-satyendrar

ED ಯಿಂದ ಬಂಧನಕ್ಕೊಳಗಾಗಿದ್ದ ಆಪ್ ನಾಯಕ ಸತ್ಯೇಂದ್ರ ಜೈನ್‌ ಗೆ ಜಾಮೀನು

INDvsNZ: 12ನೇ ತರಗತಿ ಪರೀಕ್ಷೆಗಾಗಿ ನ್ಯೂಜಿಲ್ಯಾಂಡ್‌ ವಿರುದ್ದ ಸರಣಿ ಕೈಬಿಟ್ಟ ಕ್ರಿಕೆಟರ್

INDvsNZ: 12ನೇ ತರಗತಿ ಪರೀಕ್ಷೆಗಾಗಿ ನ್ಯೂಜಿಲ್ಯಾಂಡ್‌ ವಿರುದ್ದ ಸರಣಿ ಕೈಬಿಟ್ಟ ಕ್ರಿಕೆಟರ್

sanjay-raut

Maharashtra; ಕೈ ನಾಯಕರಿಗೆ ಸಾಮರ್ಥ್ಯವಿಲ್ಲ..: ಸೀಟು ಹಂಚಿಕೆ ಕುರಿತು ರಾವತ್ ಅಸಮಾಧಾನ

UP: ಟೊಮ್ಯಾಟೋ ಸಾಗಿಸುತ್ತಿದ್ದ ಟ್ರಕ್ ಪಲ್ಟಿ… ರಾತ್ರಿಯಿಡೀ ಟೊಮ್ಯಾಟೋ ಕಾದು ಕೂತ ಪೊಲೀಸರು

UP: ಟೊಮ್ಯಾಟೊ ಸಾಗಿಸುತ್ತಿದ್ದ ಟ್ರಕ್ ಪಲ್ಟಿ… ರಾತ್ರಿಯಿಡೀ ಟೊಮ್ಯಾಟೊ ಕಾದು ಕೂತ ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

Mangaluru: ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಿಂದ ಸಂಚಾರ: ಅಪಘಾತಕ್ಕೆ ಆಹ್ವಾನ

8(3)

Mangaluru: ಗುಂಡಿ ಬಿದ್ದ ರಸ್ತೆಗಳಿಗೆ ಜಲ್ಲಿಕಲ್ಲೇ ಆಧಾರ; ಅಪಾಯದಲ್ಲಿ ಸವಾರರು

5

Jokatte: ಸಂಪೂರ್ಣ ಹದೆಗೆಟ್ಟ ಕೂಳೂರು, ಕೈಗಾರಿಕೆ ವಲಯದ-ಜೋಕಟ್ಟೆ ರಸ್ತೆ

3(1)

Mangaluru: ಪ್ಲಾಸ್ಟಿಕ್‌ ಬ್ರಹ್ಮರಾಕ್ಷಸನ ತಡೆವ ಮಂತ್ರದಂಡ ಬೇಕಿದೆ !

11

Kulai: ಬೃಹತ್‌ ಟ್ರಕ್‌ ಓಡಾಟದಿಂದ ರಸ್ತೆಗೆ ಹಾನಿ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Train

Train; ದೀಪಾವಳಿಗೆ ಬೆಂಗಳೂರು- ಕಾರವಾರ ವಿಶೇಷ ರೈಲು

ಟಿಕೆಟ್‌ ಕೊಡಿಸದೆ ವಂಚನೆ: ಸಚಿವ ಜೋಶಿ ಸೋದರ, ಸೋದರಿ, ಅಳಿಯನ ವಿರುದ್ಧ ಕೇಸ್‌

ಟಿಕೆಟ್‌ ಕೊಡಿಸದೆ ವಂಚನೆ: ಸಚಿವ ಜೋಶಿ ಸೋದರ, ಸೋದರಿ, ಅಳಿಯನ ವಿರುದ್ಧ ಕೇಸ್‌

HDK (3)

MUDA ಮಾತ್ರವಲ್ಲ ಸಿದ್ದರಾಮಯ್ಯ ಇನಕಲ್ ನಿವೇಶನವೂ ಅಕ್ರಮ: ಎಚ್ ಡಿಕೆ ಮತ್ತೊಂದು ಬಾಂಬ್

INDvsNZ: ಟೆಸ್ಟ್‌ ಕ್ರಿಕೆಟ್‌ ನಲ್ಲಿ 9000 ರನ್‌ ಪೂರೈಸಿದ ವಿರಾಟ್‌ ಕೊಹ್ಲಿ

INDvsNZ: ಟೆಸ್ಟ್‌ ಕ್ರಿಕೆಟ್‌ ನಲ್ಲಿ 9000 ರನ್‌ ಪೂರೈಸಿದ ವಿರಾಟ್‌ ಕೊಹ್ಲಿ

1-satyendrar

ED ಯಿಂದ ಬಂಧನಕ್ಕೊಳಗಾಗಿದ್ದ ಆಪ್ ನಾಯಕ ಸತ್ಯೇಂದ್ರ ಜೈನ್‌ ಗೆ ಜಾಮೀನು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.