Mangaluru: ಗುಂಡಿ ಬಿದ್ದ ರಸ್ತೆಗಳಿಗೆ ಜಲ್ಲಿಕಲ್ಲೇ ಆಧಾರ; ಅಪಾಯದಲ್ಲಿ ಸವಾರರು

ಆಗಾಗ್ಗೆ ಅಗೆಯುವುದರಿಂದ ಮುಂದುವರಿದ ರಸ್ತೆ ಅವ್ಯವಸ್ಥೆ; ಎಲ್ಲ ಕಡೆಯೂ ಹೊಂಡಗುಂಡಿ

Team Udayavani, Oct 18, 2024, 3:14 PM IST

8(3)

ಬಿಜೈ ಚರ್ಚ್‌ ರಸ್ತೆ.

ಮಹಾನಗರ: ವಿವಿಧ ಕಾಮಗಾರಿ ಉದ್ದೇಶಕ್ಕೆ ನಗರದ ಹಲವು ಕಡೆಗಳಲ್ಲಿ ರಸ್ತೆ ಅಗೆಯುತ್ತಿದ್ದು, ಅವುಗಳನ್ನು ಮತ್ತೆ ಸುಸ್ಥಿತಿಗೆ ತರುವಲ್ಲಿ ಸ್ಥಳೀಯಾಡಳಿತ ಹಿಂದೇಟು ಹಾಕುತ್ತಿದೆ. ಇನ್ನೂ ಕೆಲವೆಡೆ ರಸ್ತೆಗಳು ಗುಂಡಿ ಬಿದ್ದಿದ್ದು, ವಾಹನ ಸವಾರರಿಗೆ ಅಪಾಯ ಸೂಚಿಸುತ್ತಿದೆ.

ಜೈಲ್‌ ರಸ್ತೆ ಮೂಲಕ ಬಿಜೈ ಮಾರುಕಟ್ಟೆ ತಲುಪುವ ರಸ್ತೆಯ ಪಿಂಟೋಸ್‌ ಬೇಕರಿ ಬಳಿ ಕಳೆದ ಅನೇಕ ವರ್ಷಗಳಿಂದ ಆಗಾಗ್ಗೆ ಅಗೆಯಲಾಗುತ್ತಿದೆ. ಅದರಂತೆ ಕೆಲವು ತಿಂಗಳ ಹಿಂದೆಯೂ ಕಾಂಕ್ರೀಟ್‌ ರಸ್ತೆ ಅಗೆಯಲಾಗಿತ್ತು. ರಸ್ತೆಯ ಮಧ್ಯ ಭಾಗದಲ್ಲಿ ಅಗೆದು ಒಳಚರಂಡಿ ಕಾಮಗಾರಿ ನಡೆಸಲಾಗಿತ್ತು. ಕಾಮಗಾರಿ ಮುಗಿದರೂ ರಸ್ತೆ ಸುಸ್ಥಿತಿಗೆ ತರಲಿಲ್ಲ. ಸದ್ಯ ಆ ರಸ್ತೆಯಲ್ಲಿ ಅಗೆದ ಜಾಗಕ್ಕೆ ಜಲ್ಲಿಕಲ್ಲು ಹಾಕಲಾಗಿದೆ. ಕಲ್ಲು ಹದ ಮಾಡದ ಪರಿಣಾಮ ಅವು ದ್ವಿಚಕ್ರ ವಾಹನ ಸವಾರರಿಗೆ ಅಪಾಯ ಉಂಟುಮಾಡುತ್ತಿದೆ. ಮುಖ್ಯ ರಸ್ತೆಯಲ್ಲಿ ಟ್ರಾಫಿಕ್‌ ಜಾಮ್‌ ಉಂಟಾದರೆ ವಾಹನ ಸವಾರರು ಇದೇ ರಸ್ತೆ ಬಳಕೆ ಮಾಡುತ್ತಾರೆ. ಗುಂಡಿ ಬಿದ್ದ ರಸ್ತೆ, ಜಲ್ಲಿಕಲ್ಲು ಎದ್ದು ಟ್ರಾಫಿಕ್‌ ಜಾಮ್‌ಗೂ ಕಾರಣವಾಗಿದೆ.

ಭಗವತಿ ನಗರ ರಸ್ತೆ
ಕೊಡಿಯಾಲಬೈಲು ಬಳಿಯ ಭಗವತಿ ನಗರ ರಸ್ತೆ ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ. ಇಲ್ಲಿನ ರಸ್ತೆಗೆ ಅರ್ಧ ಡಾಮರು, ಕಾಂಕ್ರೀಟ್‌, ಇಂಟರ್‌ಲಾಕ್‌ ಅಳವಡಿಸಲಾಗಿದೆ. ರಸ್ತೆಯ ಮಧ್ಯಭಾಗ ದಲ್ಲಿ ರಸ್ತೆ ಅವ್ಯವಸ್ಥೆಯಿಂದ ಕೂಡಿನೆ.

ಅಶೋಕನಗರ

ಅಶೋಕನಗರ ರಸ್ತೆ
ಉರ್ವಸ್ಟೋರ್‌ನಿಂದ ಅಶೋಕನಗರ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸಂಚಾರ ದುಸ್ತರವಾಗಿದೆ. ದ್ವಿಚಕ್ರ ವಾಹನಗಳು ಇಲ್ಲಿನ ಹೊಂಡ-ಗುಂಡಿಗೆ ಬಿದ್ದು, ಸ್ಕಿಡ್‌ ಆಗುವ ಆತಂಕವೂ ಈ ರಸ್ತೆಯಲ್ಲಿದೆ. ಉರ್ವಸ್ಟೋರ್‌ನಿಂದ ಅಶೋಕನಗರ, ಉರ್ವ ಮಾರುಕಟ್ಟೆ ಸಹಿತ ಕೆಲವೊಂದು ಪ್ರದೇಶಗಳಿಗೆ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಇದೇ ಮಾರ್ಗದಲ್ಲಿ ಹತ್ತಾರು ಮನೆಗಳಿದ್ದು, ವಸತಿ ಪ್ರದೇಶದಿಂದ ಕೂಡಿದೆ. ಇದೇ ಕಾರಣಕ್ಕೆ ನೂರಾರು ವಾಹನಗಳು ದಿನಂಪ್ರತಿ ಅತ್ತಿಂದಿತ್ತ ಸಂಚರಿಸುತ್ತದೆ. ಹೊಂಡ -ಗುಂಡಿಯಿಂದ ಕೂಡಿದ ಈ ರಸ್ತೆಯಲ್ಲಿ ಸದ್ಯ ಸಂಚಾರ ಸಂಕಷ್ಟವೆನಿಸಿದೆ. ಕೆಲವು ತಿಂಗಳ ಹಿಂದೆ ಈ ರಸ್ತೆಗೆ ಡಾಮರು ಹಾಕಲಾಗಿತ್ತು. ಮತ್ತೆ ಗುಂಡಿ ಬಿದ್ದಿದ್ದು, ಬಳಿಕ ತಾತ್ಕಾಲಿಕ ತೇಪೆ ಹಾಕಲಾಗಿತ್ತು. ಆದರೂ ಕೆಲವು ತಿಂಗಳಿನಿಂದ ಸುರಿದ ಮಳೆಗೆ ಮತ್ತೆ ಗುಂಡಿಮಯವಾಗಿದೆ. ಎದುರಿನಿಂದ ಬೇರೆ ವಾಹನ ಬರುತ್ತಿದ್ದರೆ ಅದನ್ನು ತಪ್ಪಿಸುವುದೇ ವಾಹನ ಸವಾರರಿಗೆ ಸವಾಲಾಗಿದೆ. ಮಳೆ ಬಂದರಂತೂ ಇಲ್ಲಿನ ಗುಂಡಿಯ ತುಂಬಾ ನೀರು ತುಂಬಿ, ಗುಂಡಿ ಯಾವುದು? ರಸ್ತೆ ಯಾವುದು? ಎಂದು ತಿಳಿಯುವುದು ಕಷ್ಟ.

ಉರ್ವ ಮಾರುಕಟ್ಟೆ

ಕಳಪೆ ಕಾಮಗಾರಿಯಿಂದ ರಸ್ತೆ ಪೂರ್ತಿ ಗುಂಡಿ
ಕೊಟ್ಟಾರ ಸಮೀಪದ ದಡ್ಡಲಕಾಡು ರಸ್ತೆ ಹೊಂಡಗುಂಡಿಗಳಿಂದ ಕೂಡಿದ್ದು ಸಂಚಾರಕ್ಕೆ ಅಯೋಗ್ಯವಾಗಿದೆ. ಐದಾರು ವರ್ಷಳಿಂದ ರಸ್ತೆ ಅವ್ಯವಸ್ಥೆಯಿಂದ ಕೂಡಿದೆ. ಕಳಪೆ ಕಾಮಗಾರಿಯಿಂದ ರಸ್ತೆ ಪೂರ್ತಿ ಗುಂಡಿಯಿಂದ ಕೂಡಿದೆ. ನಗರದ ಕಾಪಿಕಾಡ್‌ನಿಂದ ದಡ್ಡಲಕಾಡು ಮುಖೇನ ಕೊಟ್ಟಾರ ಸಂಪರ್ಕ ರಸ್ತೆ ಪೂರ್ತಿ ಹೊಂಡಗಳೇ ಇವೆ. ಈ ರಸ್ತೆಯನ್ನು ಅನೇಕ ಬಾರಿ ಡಾಮರು ಕಾಮಗಾರಿ ನಡೆಸಿದರೂ ಇಲ್ಲಿನ ಹೊಂಡಗುಂಡಿಗಳಿಗೆ ಮುಕ್ತಿ ಎಂಬುವುದು ಸಿಗುತ್ತಿಲ್ಲ. ಈ ಹಿಂದೆ ಡಾಮರು ಹಾಕಿದ ಕೆಲವೇ ತಿಂಗಳಲ್ಲಿ ರಸ್ತೆ ಪೂರ್ತಿ ಗುಂಡಿ ಬಿದ್ದಿರುವ ಉದಾಹರಣೆಗಳಿವೆ. ಇದೀಗ ಮಳೆಗಾಲ ಆರಂಭದಲ್ಲಿ ರಸ್ತೆಯ ಮತ್ತಷ್ಟು ಕಡೆಗಳಲ್ಲಿ ಗುಂಡಿಗಳಾಗಿದ್ದು, ಇದರಿಂದಾಗಿ ವಾಹನ ಸವಾರರಿಗೆ ಮತ್ತು ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ.

ಟಾಪ್ ನ್ಯೂಸ್

CM-Panchamsali

Reservation: ಪಂಚಮಸಾಲಿ ಮೀಸಲು ವಿಚಾರ ತಜ್ಞರು, ಸಂಪುಟದಲ್ಲಿ ಚರ್ಚಿಸಿ ಕ್ರಮ: ಸಿಎಂ

K. S. Eshwarappa: ಬ್ರಿಗೇಡ್ ನಿಂದ ಸರ್ಕಾರಗಳನ್ನು ಜಾಗೃತಗೊಳಿಸೋಣ

K. S. Eshwarappa: ಬ್ರಿಗೇಡ್ ನಿಂದ ಸರ್ಕಾರಗಳನ್ನು ಜಾಗೃತಗೊಳಿಸೋಣ

ISREL-3

Israel ಗಾಜಾದಲ್ಲಿ ಕಾರ್ಯಾಚರಣೆ ನಿಲ್ಲಿಸದೆ ಒತ್ತೆಯಾಳುಗಳ ಬಿಡುಗಡೆ ಇಲ್ಲ: ಹಮಾಸ್!

1-a-cm-bai

ED ತನಿಖೆಗೆ ಮುಡಾ ಎಲ್ಲಾ ದಾಖಲೆ ನೀಡಲಿದೆ: ಸಚಿವ ಬೈರತಿ ಸುರೇಶ್ ಹೇಳಿಕೆ

3

La Tomatina: ಏನಿದು ಲಾ ಟೊಮಾಟಿನಾ ಹಬ್ಬ…ಈ ಹಬ್ಬದ ವಿಶೇಷತೆ ಏನು ಗೊತ್ತಾ?

1-dog

Police dog; ರೈತನ ಮನೆಯಿಂದ ಕಳವಾಗಿದ್ದ 1.07 ಕೋಟಿ ರೂ.ಹಣ ಪತ್ತೆಗೆ ನೆರವಾದ ಶ್ವಾನ

Train

Train; ದೀಪಾವಳಿಗೆ ಬೆಂಗಳೂರು- ಕಾರವಾರ ವಿಶೇಷ ರೈಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

Mangaluru: ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಿಂದ ಸಂಚಾರ: ಅಪಘಾತಕ್ಕೆ ಆಹ್ವಾನ

5

Jokatte: ಸಂಪೂರ್ಣ ಹದೆಗೆಟ್ಟ ಕೂಳೂರು, ಕೈಗಾರಿಕೆ ವಲಯದ-ಜೋಕಟ್ಟೆ ರಸ್ತೆ

4

Mangaluru: ಸೇತುವೆ ಮೇಲೆ ಸಂಚಾರ ನಿರ್ಬಂಧದಿಂದ ಕಂಗೆಟ್ಟ ನಾಗರಿಕರು

3(1)

Mangaluru: ಪ್ಲಾಸ್ಟಿಕ್‌ ಬ್ರಹ್ಮರಾಕ್ಷಸನ ತಡೆವ ಮಂತ್ರದಂಡ ಬೇಕಿದೆ !

11

Kulai: ಬೃಹತ್‌ ಟ್ರಕ್‌ ಓಡಾಟದಿಂದ ರಸ್ತೆಗೆ ಹಾನಿ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Udupi: ವಂಚನೆ ಪ್ರಕರಣ: ಅ.21ಕ್ಕೆ ಜಾಮೀನು ಅರ್ಜಿ ವಿಚಾರಣೆ

Udupi: ವಂಚನೆ ಪ್ರಕರಣ: ಅ.21ಕ್ಕೆ ಜಾಮೀನು ಅರ್ಜಿ ವಿಚಾರಣೆ

CM-Panchamsali

Reservation: ಪಂಚಮಸಾಲಿ ಮೀಸಲು ವಿಚಾರ ತಜ್ಞರು, ಸಂಪುಟದಲ್ಲಿ ಚರ್ಚಿಸಿ ಕ್ರಮ: ಸಿಎಂ

K. S. Eshwarappa: ಬ್ರಿಗೇಡ್ ನಿಂದ ಸರ್ಕಾರಗಳನ್ನು ಜಾಗೃತಗೊಳಿಸೋಣ

K. S. Eshwarappa: ಬ್ರಿಗೇಡ್ ನಿಂದ ಸರ್ಕಾರಗಳನ್ನು ಜಾಗೃತಗೊಳಿಸೋಣ

ISREL-3

Israel ಗಾಜಾದಲ್ಲಿ ಕಾರ್ಯಾಚರಣೆ ನಿಲ್ಲಿಸದೆ ಒತ್ತೆಯಾಳುಗಳ ಬಿಡುಗಡೆ ಇಲ್ಲ: ಹಮಾಸ್!

1-a-cm-bai

ED ತನಿಖೆಗೆ ಮುಡಾ ಎಲ್ಲಾ ದಾಖಲೆ ನೀಡಲಿದೆ: ಸಚಿವ ಬೈರತಿ ಸುರೇಶ್ ಹೇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.