Siddapura: ಪುತ್ರನ ಮನೆ ಸಾಲದಿಂದ ತಂದೆ ಆತ್ಮಹ*ತ್ಯೆ
Team Udayavani, Oct 18, 2024, 10:00 PM IST
ಸಿದ್ದಾಪುರ: ಪುತ್ರ ಮನೆ ನಿರ್ಮಾಣಕ್ಕೆ ಸಾಕಷ್ಟು ಸಾಲ ಮಾಡಿಕೊಂಡಿದ್ದು, ಮನೆ ಕೂಡ ಪೂರ್ಣಗೊಳ್ಳದಿರುವುದರಿಂದ ತಂದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ವೆಯಲ್ಲಿ ನಡೆದಿದೆ.
ಬೆಳ್ವೆ ಗ್ರಾಮದ ಮಹಾಬಲ (75) ಆತ್ಮಹತ್ಯೆ ಮಾಡಿಕೊಂಡವರು. ಬೆಳ್ವೆ ಗ್ರಾಮದ ಭಾಸ್ಕರ ಅವರು 4 ವರ್ಷದ ಹಿಂದೆ ಮನೆ ಕಟ್ಟಲು ಪ್ರಾರಂಭಿಸಿದ್ದರು. ಮಗನ ಮನೆ ಕಟ್ಟಲು ತಾಯಿ ಕೂಡ ಸಾಲ ಮಾಡಿಕೊಟ್ಟಿದರು. ಅಪೂರ್ಣವಾಗಿದ್ದ ಮನೆಯನ್ನು ಅ. 13ರಂದು ಗೃಹ ಪ್ರವೇಶ ಮಾಡಿದ್ದರು.
ಮಗನ ಸಾಲದ ಚಿಂತೆಯಲ್ಲೇ ಕೊರಗಿದ್ದ ಮಹಾಬಲ ಅವರು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಹೇಳಲಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಬಿಹಾರದ 2 ಜಿಲ್ಲೆಗಳಲ್ಲಿ ಕಳ್ಳಭಟ್ಟಿ ದುರಂತ: ಒಟ್ಟು 35 ಮಂದಿ ಸಾವು
Maharashtra: ವಾಣಿಜ್ಯ ವಾಹನಗಳಿಗೂ ಇನ್ನು ಡೀಲರ್ಗಳಿಂದಲೇ ನೋಂದಣಿ
Court: ಬಾಲ್ಯವಿವಾಹ ತಡೆ ಕಾನೂನಿಗೆ ವೈಯಕ್ತಿಕ ಕಾನೂನು ಅಡ್ಡಿ ಆಗಬಾರದು: ಸುಪ್ರೀಂ
Gold Price: ದೆಹಲಿಯಲ್ಲಿ 80 ಸಾವಿರ ರೂ.ಗಳ ಸನಿಹಕ್ಕೆ ಚಿನ್ನದ ದರ
India Vs New Zealand Test: ಇನ್ನಿಂಗ್ಸ್ ಸೋಲು ತಪ್ಪಿಸಲು ಭಾರತ ಹೋರಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.