Murphy Review: ಅಲೆಗಳ ಅಬ್ಬರದಲ್ಲಿ ಪ್ರೇಮ ನಿನಾದ


Team Udayavani, Oct 19, 2024, 10:56 AM IST

Murphy movie review

ಒಂದು ಕಡೆ ಅಲೆಗಳ ಭೋರ್ಗರೆತ, ಇನ್ನೊಂದು ಕಡೆ ಮಳೆಯ ಆರ್ಭಟ, ಇದರ ನಡುವೆ ಇಂಪೆನಿಸುವ ಒಂದು ಪ್ರೇಮ ಕಾವ್ಯ… ಮಾತು, ಮೌನ, ಪ್ರೀತಿ, ಶೃಂಗಾರ, ವಿರಹ ಜೊತೆಗೊಂದಿಷ್ಟು ಕೌತುಕ, ರೋಚಕತೆ ಇವುಗಳ ಸಂಗಮವೇ ಮರ್ಫಿ.

ಈ ವಾರ ತೆರೆಕಂಡ ಮರ್ಫಿ ಸಿನಿಮಾ, ಕಡಲ ಅಲೆಗಳ ನಡುವೆ ದೋಣಿ ಸಾಗುವಂತೆ ಪ್ರೇಕ್ಷಕರನ್ನು ಸಂಬಂಧಗಳ ಅಲೆಯಲ್ಲಿ ತೇಲಿಸುತ್ತದೆ. ಚಿತ್ರ ಮುಗಿದ ಮೇಲೂ ಮರ್ಫಿಯ ಪಾತ್ರಗಳು ಮನಸ್ಸಿನಲ್ಲಿ ಅಚ್ಚೊತ್ತುತ್ತವೆ.

ನೋಡುವ ದೃಶ್ಯ, ಕೇಳುವ ಸಂಭಾಷಣೆ, ಕಥೆ ಸಾಗುವ ಹಾದಿ ಎಲ್ಲವೂ ರೋಮಾಂಚನ. ಚಿತ್ರಕ್ಕೆ ಕಥೆ ಬರೆದಿರುವ ಪ್ರಭು ಮುಂಡ್ಕೂರ್‌ ಅವರೇ ನಾಯಕನ ಸ್ಥಾನ ಅಲಂಕರಿಸಿದ್ದರಿಂದ ಚಿತ್ರವನ್ನು ಅತ್ಯಾಪ್ತವಾಗಿ ಪ್ರಸ್ತುತಪಡಿಸಿದ್ದಾರೆ. ಇದನ್ನು ಕಥೆ ಎನ್ನುವುದಕ್ಕಿಂತ ಕಾಡುವ ಪ್ರೇಮ ಕಾವ್ಯ ಎಂದರೆ ಬಹು ಸೂಕ್ತ. ಡೆವಿಡ್‌, ಜನನಿ, ಜೊಸೆಫ್ ಕಥೆಯ ಮುಖ್ಯ ಪಾತ್ರಗಳು.

ಇಲ್ಲಿ ಮರ್ಫಿ ಹೆಸರು ಸಾಂದರ್ಭಿಕ. ಇಲ್ಲೊಂದು ವಿಶೇಷ ವಸ್ತುವಿದೆ. ಈ ಮೂರು ಪಾತ್ರಗಳಿಗೆ ಕೊಂಡಿಯಾಗಿ, ಹೃದಯದ ಸಂವಹನಕ್ಕೆ ಕಿವಿಯಾಗಿರುವ ಆ ವಸ್ತು, ಚಿತ್ರವನ್ನು ಮುನ್ನಡೆಸುವ ಒಂದು ಮುಖ್ಯ ಪಾತ್ರವಾಗಿದೆ. ಆ ವಸ್ತು ಏನೆಂಬುದನ್ನು ಸಿನಿಮಾದಲ್ಲಿ ನೋಡಿದರೆ ಚೆನ್ನ.

ಸದಾ ಭೋರ್ಗರೆವ ಅಲೆಗಳು ಒಮ್ಮೆಲೆ ಶಾಂತವಾದಾಗ ಆವರಿಸುವ ಗಾಢ ಮೌನವೇ ಚಿತ್ರದ ಮಧ್ಯಂತರ. ಅಪ್ಪನ ಪ್ರೀತಿಗೆ ನೆರವಾಗುವ ಮಗ, ಮಗನ ಪ್ರೀತಿಗೆ ಪ್ರಿಯಕರನನ್ನು ತ್ಯಜಿಸುವ ಅಮ್ಮ, ಕಥೆಗೆ ತಿರುವು ನೀಡುವ ಅಪಘಾತ… ಎಲ್ಲ ಅಸ್ಪಷ್ಟಗಳಿಗೆ ಚಿತ್ರಾಂತ್ಯದಲ್ಲಿ ಉತ್ತರ ದೊರೆಯುತ್ತದೆ.

ಮಾತು-ಮೌನಗಳ ನಡುವೆ ಮರ್ಫಿ ಬರ್ಫಿಯಂತೆ ಸಿಹಿ ನೆನಪುಗಳನ್ನು ಬಿಚ್ಚಿಡುತ್ತದೆ. ಪ್ರಭು ಮುಂಡ್ಕೂರ್‌, ರೋಶನಿ ಪ್ರಕಾಶ್‌ ಅವರ ಅಭಿನಯ ಇಷ್ಟವಾಗುವ ಜೊತೆಗೆ ಪಾತ್ರದ ತೀವ್ರತೆ ಹೆಚ್ಚಿಸುತ್ತದೆ.. ಪಾತ್ರಗಳ ಭಾವೋದ್ವೆಗ, ರಮ್ಯತೆ, ರೋಚಕತೆಗಳನ್ನು ರಸವತ್ತಾಗಿ ಪ್ರೇಕ್ಷಕರ ಮುಂದಿಟ್ಟಿದ್ದಾರೆ. ಇಳಾ ಹಾಗೂ ದತ್ತಣ್ಣ ಅವರ ಪಾತ್ರಗಳೂ ಗಮನ ಸೆಳೆಯುತ್ತವೆ. ಚಿತ್ರ ಸಾಗುವ ಹಾದಿಯಲ್ಲಿ ನಡುವೆ ಅರಳುವ ಕಾವ್ಯದ ಮಾತುಗಳು, ಕೊಂಕಣಿ ಸಂಭಾಷಣೆಗಳು ಮನಸ್ಸಿಗೆ ಹತ್ತಿರವಾಗುತ್ತವೆ. ಆದರ್ಶ ಅವರ ಛಾಯಾಗ್ರಹಣ ಚಿತ್ರಕ್ಕೆ ಮೆರಗು ತಂದಿದೆ. ಕಥೆಗೆ ತಕ್ಕ ಪ್ರಕೃತಿಯ ಸೊಬಗು ಇಲ್ಲಿ ಅನಾವರಣವಾಗಿದೆ. ಕಾಡುವ ಕಥೆಯೊಂದನ್ನು ಕಣ್ತುಂಬಿಕೊಳ್ಳಬೇಕೆಂದರೆ “ಮರ್ಫಿ’ ಉತ್ತಮ ಆಯ್ಕೆ.

ನಿತೀಶ ಡಂಬಳ

ಟಾಪ್ ನ್ಯೂಸ್

Channapatna ByPoll: NDA ticket to Yogeshwar: Aswath Narayan Gowda confident

Channapatna ByPoll: ಎನ್ ಡಿಎ ಟಿಕೆಟ್ ಯೋಗೇಶ್ವರ್ ಗೆ: ಅಶ್ವಥ್ ನಾರಾಯಣ ಗೌಡ ವಿಶ್ವಾಸ

ನಾಡಿಗೆ ಬಂದ ಕಾಡಾನೆ… ಸಿಡಿಮದ್ದಿಗೂ ಜಗ್ಗದೆ ಅರಣ್ಯ ಸಿಬ್ಬಂದಿಗಳನ್ನು ಕಾಡಿದ ಆನೆ ಹಿಂಡು

ನಾಡಿಗೆ ಬಂದ ಕಾಡಾನೆ… ಸಿಡಿಮದ್ದಿಗೂ ಜಗ್ಗದೆ ಅರಣ್ಯ ಸಿಬ್ಬಂದಿಗಳನ್ನು ಕಾಡಿದ ಆನೆ ಹಿಂಡು

13-

Gudibanda: ದೇವಸ್ಥಾನದಲ್ಲಿ ಕಳವು; ಆರೋಪಿಗಳು ಪೊಲೀಸ್ ವಶಕ್ಕೆ

ByPoll ticket: ಬಿಜೆಪಿ ನಾಯಕರ ವಿರುದ್ದವೇ ಕಿಡಿಕಾರಿದ ಎಚ್‌ ಡಿ ಕುಮಾರಸ್ವಾಮಿ

ByPoll ticket: ಬಿಜೆಪಿ ನಾಯಕರ ವಿರುದ್ದವೇ ಕಿಡಿಕಾರಿದ ಎಚ್‌ ಡಿ ಕುಮಾರಸ್ವಾಮಿ

Jersey Unveiled: ಉಡುಪಿ ಪತ್ರಕರ್ತರ ‘ರಜತ ಕ್ರೀಡಾ ಸಂಭ್ರಮ’ದ ಜೆರ್ಸಿ ಅನಾವರಣ

Jersey Unveiled: ಉಡುಪಿ ಪತ್ರಕರ್ತರ ‘ರಜತ ಕ್ರೀಡಾ ಸಂಭ್ರಮ’ದ ಜೆರ್ಸಿ ಅನಾವರಣ

Channapatna ByPoll: ಜೆಡಿಎಸ್ ಗೆ ಟಿಕೆಟ್ ನೀಡುವಂತೆ ಒತ್ತಾಯವಿಲ್ಲ, ಆದರೆ…: ನಿಖಿಲ್‌

Channapatna ByPoll: ಜೆಡಿಎಸ್ ಗೆ ಟಿಕೆಟ್ ನೀಡುವಂತೆ ಒತ್ತಾಯವಿಲ್ಲ, ಆದರೆ…: ನಿಖಿಲ್‌

Tahshildar: ತೀರ್ಥಹಳ್ಳಿಯ ನೂತನ ಪ್ರಭಾರ ತಹಶೀಲ್ದಾರ್ ಆಗಿ ರಂಜಿತ್ ಎಸ್. ನೇಮಕ!

Tahshildar: ತೀರ್ಥಹಳ್ಳಿಯ ನೂತನ ಪ್ರಭಾರ ತಹಶೀಲ್ದಾರ್ ಆಗಿ ರಂಜಿತ್ ಎಸ್. ನೇಮಕ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Simha Roopini Movie Review

Simha Roopini Movie: ಮಾರಮ್ಮದೇವಿಯ ಸಿಂಹರೂಪ

Mantrika Movie Review

Mantrika Movie Review: ಮೂಢನಂಬಿಕೆಯ ಸುತ್ತ ಮಾಂತ್ರಿಕ

Prakarana Tanikha Hantadallide Review

Prakarana Tanikha Hantadallide Review: ಕುತೂಹಲ ಘಟ್ಟದಲ್ಲಿ ಪ್ರಕರಣದ ತನಿಖೆ

Martin movie review

Martin Movie Review: ಆ್ಯಕ್ಷನ್‌ ಅಬ್ಬರದಲ್ಲಿ ಮಾರ್ಟಿನ್‌ ಮಿಂಚು

Minchu Hulu Review

Minchu Hulu Review: ಮಿಂಚುಹುಳು ತಂದ ಹೊಸಕಿರಣ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

14-yellapur

Yellapur: ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಲಾರಿ

Channapatna ByPoll: NDA ticket to Yogeshwar: Aswath Narayan Gowda confident

Channapatna ByPoll: ಎನ್ ಡಿಎ ಟಿಕೆಟ್ ಯೋಗೇಶ್ವರ್ ಗೆ: ಅಶ್ವಥ್ ನಾರಾಯಣ ಗೌಡ ವಿಶ್ವಾಸ

ಯಕ್ಷಧ್ರುವ ಯುರೋಪ್‌ ಘಟಕ ಉದ್ಘಾಟನೆ; ಮಕ್ಕಳಿಂದ ಮಾಯಾಮೃಗ ಪ್ರದರ್ಶನ

ಯಕ್ಷಧ್ರುವ ಯುರೋಪ್‌ ಘಟಕ ಉದ್ಘಾಟನೆ; ಮಕ್ಕಳಿಂದ ಮಾಯಾಮೃಗ ಪ್ರದರ್ಶನ

ನಾಡಿಗೆ ಬಂದ ಕಾಡಾನೆ… ಸಿಡಿಮದ್ದಿಗೂ ಜಗ್ಗದೆ ಅರಣ್ಯ ಸಿಬ್ಬಂದಿಗಳನ್ನು ಕಾಡಿದ ಆನೆ ಹಿಂಡು

ನಾಡಿಗೆ ಬಂದ ಕಾಡಾನೆ… ಸಿಡಿಮದ್ದಿಗೂ ಜಗ್ಗದೆ ಅರಣ್ಯ ಸಿಬ್ಬಂದಿಗಳನ್ನು ಕಾಡಿದ ಆನೆ ಹಿಂಡು

13-

Gudibanda: ದೇವಸ್ಥಾನದಲ್ಲಿ ಕಳವು; ಆರೋಪಿಗಳು ಪೊಲೀಸ್ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.