Mantrika Movie Review: ಮೂಢನಂಬಿಕೆಯ ಸುತ್ತ ಮಾಂತ್ರಿಕ


Team Udayavani, Oct 19, 2024, 12:10 PM IST

Mantrika Movie Review

ನಂಬಿಕೆ ಇರಬೇಕು, ಆದರೆ ಮೂಢನಂಬಿಕೆ ಇರಬಾರದು. ಯಾರೋ ಹೇಳಿದ ಮಾತನ್ನು ಕೇಳಿ ತೊಂದರೆಗೆ ಸಿಲುಕಬಾರದು… ಇಂತಹ ಒಂದು ಅಂಶವನ್ನಿಟ್ಟುಕೊಂಡು ತೆರೆಗೆ ಬಂದಿರುವ ಸಿನಿಮಾ “ಮಾಂತ್ರಿಕ’.

ಸಿನಿಮಾ ತಂಡ ಟೈಟಲ್‌ ಕಾರ್ಡ್‌ನಲ್ಲಿ ಹೇಳಿಕೊಂಡಂತೆ ಇದು ಸಿನಿಮಾ ವಿದ್ಯಾರ್ಥಿಗಳು ಮಾಡಿದ ಸಿನಿಮಾ. ಅಲ್ಲಿಗೆ ಮಿಕ್ಕಿದ್ದನ್ನು ಊಹಿಸಿಕೊಳ್ಳುವುದು ಸುಲಭ. ವ್ಯಾನವರ್ಣ ಜಮ್ಮುಲ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಚಿತ್ರವಿದು. ಜೊತೆಗೆ ವ್ಯಾಸವಾನ್‌ ಕೃಷ್ಟ ಎಂಬ ಘೋಸ್ಟ್‌ ಹಂಟರ್‌ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ.

ಇಡೀ ಸಿನಿಮಾ “ಮಾರ್ನುಡಿ’ ಎಂಬ ಮಾಲ್‌ವೊಂದರ ಸುತ್ತ ಸಾಗುತ್ತದೆ. ಈ ಮಾಲ್‌ನೊಳಗೆ ಹೋದವರು ಭಯಭೀತರಾಗುತ್ತಾರೆ, ನಾನಾ ತೊಂದರೆ ಸಿಲುಕುತ್ತಾರೆ, ದೆವ್ವವಿದೆ ಎಂಬ ಭಯ ಎಲ್ಲರನ್ನು ಆವರಿಸಿಬಿಡುತ್ತದೆ. ಹಾಗಾದರೆ ನಿಜಕ್ಕೂ ಆ ಮಾಲ್‌ನಲ್ಲಿ ದೆವ್ವ ಇದೆಯಾ ಅಥವಾ ಇದರ ಹಿಂದೆ ಬೇರೆಯವರ ಕೈವಾಡ ಏನಾದರೂ ಉಂಟಾ… ಇಂತಹ ಪ್ರಶ್ನೆಗಳೊಂದಿಗೆ ವ್ಯಾಸವಾನ್‌ ಕೃಷ್ಣ ಘೋಸ್ಟ್‌ ಹಂಟರ್‌ ಆಗಿ ಮಾರ್ನುಡಿಯ ಹಿಂದೆ ಬೀಳುತ್ತಾರೆ. ಅಲ್ಲಿಂದ ಒಂದೊಂದೇ ಕುತೂಹಲಗಳು ತೆರೆದುಕೊಳ್ಳುತ್ತದೆ. ಅದೇನು ಎಂಬುದನ್ನು ತೆರೆಮೇಲೆಯೇ ನೋಡಬೇಕು.

ನಿರ್ದೇಶಕ ವ್ಯಾನವರ್ಣ ಜಮ್ಮುಲ ಅವರಿಗೆ ಏನೋ ಹೊಸದನ್ನು ಕಟ್ಟಿಕೊಡಬೇಕೆಂಬ ತುಡಿತ. ಅದೇ ಕಾರಣದಿಂದ ರೆಗ್ಯುಲರ್‌ ಪ್ಯಾಟರ್ನ್ ಬಿಟ್ಟ ಸಿನಿಮಾವಾಗಿ “ಮಾಂತ್ರಿಕ’ ಚಿತ್ರ ಮೂಡಿಬಂದಿದೆ. ಇಲ್ಲಿ ದೃಶ್ಯವೈಭವಕ್ಕಿಂತ ಹಿನ್ನೆಲೆ ಸಂಗೀತದ ಅಬ್ಬರವೇ ಹೆಚ್ಚು. ಮಾತು ಕಮ್ಮಿ ಕೆಲಸ ಜಾಸ್ತಿ ಎಂಬಂತೆ ತೆರೆಮೇಲೆ ಒಂದಷ್ಟು ಘಟನೆಗಳು ನಡೆಯುತ್ತಲೇ ಇರುತ್ತದೆ. ಹೆಚ್ಚು ಪಾತ್ರಗಳಿಲ್ಲ. ಹೀಗೆ ಬಂದು ಹಾಗೆ ಹೋಗುವ ಪಾತ್ರಗಳೇ ಜಾಸ್ತಿ. ಹಾಗೆ ನೋಡಿದರೆ ಚಿತ್ರದ ಒನ್‌ಲೈನ್‌ ಚೆನ್ನಾಗಿದೆ. ಅದನ್ನು ಇನ್ನಷ್ಟು ಚೆನ್ನಾಗಿ ನಿರೂಪಿಸುವ ಹಾಗೂ ಪರಿಣಾಮಕಾರಿಯಾಗಿ ತೋರಿಸುವ ಅವಕಾಶವಿತ್ತು.

ಕರ್ನಾಟಕ – ಮಹಾರಾಷ್ಟ್ರದ ಗಡಿ ಮಾರ್ನುಡಿ ಎಂಬ ಸ್ಥಳದಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆಯುವ ಟೈಂ ಟ್ರಾವೆಲ್‌ ಕಥೆಯಿದು. ಮೊದಲು ನಮ್ಮ ಮನಸಿ ನಲ್ಲಿರುವ ಭಯ ಹೋಗಬೇಕು ಎಂಬ ಸಂದೇಶ ನೀಡಲು ಪ್ರಯತ್ನಿಸಿದ್ದಾರೆ. ವ್ಯಾಸವಾನ್‌ ಕೃಷ್ಟ ಎಂಬ ಘೋಸ್ಟ್‌ ಹಂಟರ್‌ ಪಾತ್ರದಲ್ಲೂ ಕಾಣಿಸಿ ಕೊಂಡಿರುವ ವ್ಯಾನ ವರ್ಣ ಜಮ್ಮುಲ ನಿರ್ಮಾಣ, ನಿರ್ದೇಶನ ಸೇರಿದಂತೆ 8 ವಿಭಾಗದಲ್ಲಿ ಕೆಲಸ ಮಾಡಿದ್ದಾರೆ.

ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

1-a-japan

Japan: ಪ್ರಧಾನಿ ಕಚೇರಿಗೆ ವ್ಯಾನ್ ನುಗ್ಗಿಸಲು ಯತ್ನಿಸಿದ ದುಷ್ಕರ್ಮಿ!

chattsghar

Chhattisgarh: ನಕ್ಸಲರಿಂದ ಬಾಂಬ್ ಸ್ಫೋಟ… ಇಬ್ಬರು ಅರೆಸೇನಾ ಪಡೆ ಯೋಧರಿಗೆ ಗಾಯ

Channapatna ByPoll: NDA ticket to Yogeshwar: Aswath Narayan Gowda confident

Channapatna ByPoll: ಎನ್ ಡಿಎ ಟಿಕೆಟ್ ಯೋಗೇಶ್ವರ್ ಗೆ: ಅಶ್ವಥ್ ನಾರಾಯಣ ಗೌಡ ವಿಶ್ವಾಸ

ನಾಡಿಗೆ ಬಂದ ಕಾಡಾನೆ… ಸಿಡಿಮದ್ದಿಗೂ ಜಗ್ಗದೆ ಅರಣ್ಯ ಸಿಬ್ಬಂದಿಗಳನ್ನು ಕಾಡಿದ ಆನೆ ಹಿಂಡು

ನಾಡಿಗೆ ಬಂದ ಕಾಡಾನೆ… ಸಿಡಿಮದ್ದಿಗೂ ಜಗ್ಗದೆ ಅರಣ್ಯ ಸಿಬ್ಬಂದಿಗಳನ್ನು ಕಾಡಿದ ಆನೆ ಹಿಂಡು

13-

Gudibanda: ದೇವಸ್ಥಾನದಲ್ಲಿ ಕಳವು; ಆರೋಪಿಗಳು ಪೊಲೀಸ್ ವಶಕ್ಕೆ

ByPoll ticket: ಬಿಜೆಪಿ ನಾಯಕರ ವಿರುದ್ದವೇ ಕಿಡಿಕಾರಿದ ಎಚ್‌ ಡಿ ಕುಮಾರಸ್ವಾಮಿ

ByPoll ticket: ಬಿಜೆಪಿ ನಾಯಕರ ವಿರುದ್ದವೇ ಕಿಡಿಕಾರಿದ ಎಚ್‌ ಡಿ ಕುಮಾರಸ್ವಾಮಿ

Jersey Unveiled: ಉಡುಪಿ ಪತ್ರಕರ್ತರ ‘ರಜತ ಕ್ರೀಡಾ ಸಂಭ್ರಮ’ದ ಜೆರ್ಸಿ ಅನಾವರಣ

Jersey Unveiled: ಉಡುಪಿ ಪತ್ರಕರ್ತರ ‘ರಜತ ಕ್ರೀಡಾ ಸಂಭ್ರಮ’ದ ಜೆರ್ಸಿ ಅನಾವರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Simha Roopini Movie Review

Simha Roopini Movie: ಮಾರಮ್ಮದೇವಿಯ ಸಿಂಹರೂಪ

Prakarana Tanikha Hantadallide Review

Prakarana Tanikha Hantadallide Review: ಕುತೂಹಲ ಘಟ್ಟದಲ್ಲಿ ಪ್ರಕರಣದ ತನಿಖೆ

Murphy movie review

Murphy Review: ಅಲೆಗಳ ಅಬ್ಬರದಲ್ಲಿ ಪ್ರೇಮ ನಿನಾದ

Martin movie review

Martin Movie Review: ಆ್ಯಕ್ಷನ್‌ ಅಬ್ಬರದಲ್ಲಿ ಮಾರ್ಟಿನ್‌ ಮಿಂಚು

Minchu Hulu Review

Minchu Hulu Review: ಮಿಂಚುಹುಳು ತಂದ ಹೊಸಕಿರಣ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

1-a-japan

Japan: ಪ್ರಧಾನಿ ಕಚೇರಿಗೆ ವ್ಯಾನ್ ನುಗ್ಗಿಸಲು ಯತ್ನಿಸಿದ ದುಷ್ಕರ್ಮಿ!

18-bng

Patna Biological Park: ಬನ್ನೇರುಘಟ್ಟಕ್ಕೆ ಬಿಹಾರದಿಂದ ಅತಿಥಿಗಳು!

chattsghar

Chhattisgarh: ನಕ್ಸಲರಿಂದ ಬಾಂಬ್ ಸ್ಫೋಟ… ಇಬ್ಬರು ಅರೆಸೇನಾ ಪಡೆ ಯೋಧರಿಗೆ ಗಾಯ

17-bng

Bengaluru: ಬಾಂಬ್‌ ಬೆದರಿಕೆ ಸಂದೇಶ ಕಳುಹಿಸಿದ್ದ ಆರೋಪಿ ಪಶ್ಚಿಮ ಬಂಗಾಳದಲ್ಲಿ ಬಂಧನ

16-bng

Bengaluru: ಹೂಡಿಕೆಯಲ್ಲಿ ಹಣ ದ್ವಿಗುಣ ಆಮಿಷ ತೋರಿಸಿ 35.35 ಲಕ್ಷ ರೂ. ವಂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.