Belthangady: ವಿದ್ಯುತ್ ಸ್ಪರ್ಶ: ನಾರಾವಿಯ ವ್ಯಕ್ತಿ ಸಾವು
Team Udayavani, Oct 20, 2024, 12:26 AM IST
ಬೆಳ್ತಂಗಡಿ: ನಾರಾವಿ ಗ್ರಾಮದ ನೂಜೋಡಿಯಲ್ಲಿ ವ್ಯಕ್ತಿಯೋರ್ವರು ವಿದ್ಯುತ್ ಸ್ಪರ್ಶಿಸಿ ಸಾವಿಗೀಡಾದ ಘಟನೆ ಅ.19ರಂದು ಸಂಭವಿಸಿದೆ.
ನೂಜೋಡಿ ಮೊಂಟ ಮಲೆಕುಡಿಯ ಅವರು ತನ್ನ ಜಮೀನಿನ ಬಳಿ ಹಾದು ಹೋಗುವ ಸಿಂಗಲ್ ಪೇಸ್ ಇರುವ 3 ವಿದ್ಯುತ್ ವಯರ್ ಹಾದುಹೋಗುವ ವಿದ್ಯುತ್ ಲೈನ್ ಮೇಲೆ ತೆಂಗಿನ ಮರದ ಗರಿ (ಮಡಲು) ಬಿದ್ದಿರುವುದನ್ನು ಕಂಡರು.
ಅದನ್ನು ಕೋಲಿನಿಂದ ಎಳೆದಾಗ ತಂತಿ ತುಂಡಾಗಿ ಕೆಳಗೆ ಬಿದ್ದು ಇವರು ಆಘಾತಕ್ಕೊಳಗಾಗಿ ಸ್ಥಳದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಪುತ್ರ ನೀಡಿದ ದೂರಿನಮೇರೆಗೆ ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress Government: ಸಿದ್ದರಾಮಯ್ಯ ನೇತೃತ್ವದ್ದು ಶೇ.80 ಕಮಿಷನ್ ಸರಕಾರ: ನಳಿನ್
Mangaluru: ಇ.ಡಿ. ದಾಳಿಯಿಂದ ಸಿಎಂ ಸಿದ್ದರಾಮಯ್ಯ ನಿಜ ಬಣ್ಣ ಬಯಲು: ಸಂಸದ ಚೌಟ
Council By Election: ಪರಿಷತ್ ಉಪ ಚುನಾವಣೆ: 53 ಸೂಕ್ಷ್ಮ ಮತಗಟ್ಟೆಗಳು: ಜಿಲ್ಲಾಧಿಕಾರಿ
Udupi: ಭೈರತಿ ಮುಡಾ ಪ್ರಕರಣದ ದಾಖಲೆಗಳ ಸುಟ್ಟಿರುವುದು ಕರಂದ್ಲಾಜೆ ನೋಡಿದ್ದಾರಾ?: ಲಕ್ಷ್ಮೀ
Udupi: ವಿದ್ಯುನ್ ಹೆಬ್ಬಾರ್ಗೆ ಫೋಟೋಗ್ರಾಫರ್ ಆಫ್ ದಿ ಇಯರ್ ಪ್ರಶಸ್ತಿ ಪ್ರದಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.