BBK11: ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಬಂದ ಹನುಮಂತ
Team Udayavani, Oct 20, 2024, 10:00 AM IST
ಬೆಂಗಳೂರು: ಬಿಗ್ ಬಾಸ್ ಕನ್ನಡ (Bigg Boss Kannada-11) ಮನೆಗೆ ಹೊಸ ಸದಸ್ಯ ಆಗಮನವಾಗಿದ್ದಾರೆ. ಈ ಸೀಸನ್ ನಲ್ಲಿ ಮೊದಲ ವೈಲ್ಡ್ ಕಾರ್ಡ್ ಎಂಟ್ರಿಯಾಗಿದೆ.
ಜಗದೀಶ್ ಹಾಗೂ ರಂಜಿತ್ ಅವರನ್ನು ಬಿಗ್ ಬಾಸ್ ನಿಯಮದ ಉಲ್ಲಂಘನೆ ಮಾಡಿದ್ದಕ್ಕಾಗಿ ದೊಡ್ಮನೆಯಿಂದ ಆಚೆ ಕಳುಹಿಸಿದ್ದಾರೆ. ಈ ಶಾಕ್ ನಲ್ಲಿದ್ದ ಮನೆಮಂದಿಗೆ ಹೊಸ ಸದಸ್ಯರ ಆಗಮನದಿಂದ ಸರ್ಪ್ರೈಸ್ ನೀಡಿದ್ದಾರೆ.
ಸರಿಗಮಪ ರಿಯಾಲಿಟಿ ಶೋ ಮೂಲಕ ಜನಮನ್ನಣೆ ಗಳಿಸಿದ ಕುರಿಗಾಹಿ ಹನುಮಂತ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಪ್ರವೇಶ ಪಡೆದಿದ್ದಾರೆ
ಬಿಗ್ ಬಾಸ್ ಹೊಸ ಅಧ್ಯಾಯದಲ್ಲಿ ಮೊದಲ ವೈಲ್ಡ್ ಕಾರ್ಡ್ ಎಂಟ್ರಿ ಎಂದು ಹನುಮಂತ ಡ್ಯಾನ್ಸ್ ಮಾಡುತ್ತಲೇ ಬಿಗ್ ಬಾಸ್ ಮನೆಗೆ ಬಂದಿದ್ದಾರೆ.
ವೈಲ್ಡ್ಕಾರ್ಡ್ ಎಂಟ್ರಿ ಮನೆಯವರಿಗೆ ಮೈಲ್ಡ್ ಆಗಿ ಶಾಕ್ ಕೊಡ್ತಾ?
ಸೂಪರ್ ಸಂಡೇ ವಿತ್ ಬಾದ್ಷಾ ಸುದೀಪ | ಇಂದು ರಾತ್ರಿ 9#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa pic.twitter.com/oEcNVSlySo
— Colors Kannada (@ColorsKannada) October 20, 2024
ಹನುಮಂತ ನಿಮಗೆ ಬಿಗ್ ಬಾಸ್ ಮನೆಗೆ ಸ್ವಾಗತ ಎಂದಾಗ ಊಟ ಮಾಡುತ್ತಿದ್ದೇನೆ ಮತ್ತೆ ಮಾತನಾಡುತ್ತೇನೆ ಎಂದು ಮುಗ್ಧವಾಗಿ ಉತ್ತರಿಸಿದ್ದಾರೆ. ಇದಲ್ಲದೆ ಬಿಗ್ ಮನೆಗೆ ಬಂದ ಹನುಮಂತ ಈ ಮನೆಯ ಕ್ಯಾಪ್ಟನ್ ಆಗಿದ್ದಾರೆ ಎಂದು ಬಿಗ್ ಬಾಸ್ ಅನೌನ್ಸ್ ಮಾಡಿದ್ದಾರೆ.
ಯಾರು ಈ ಹನುಮಂತು?
ಸರಿಗಮಪ ಸೀಸನ್ – 15 ನಲ್ಲಿ ಕಾಣಿಸಿಕೊಂಪ ಪ್ರತಿಭಾವಂತ ಗಾಯಕ, ಸೋಶಿಯಲ್ ಮೀಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡ ಹನಮಂತ ಹಾವೇರಿಯ ಚಿಲ್ಲೂರ ಬಡ್ನಿ ಎಂಬ ಪುಟ್ಟ ಗ್ರಾಮದವನು.
ಕುರಿಗಾಹಿ ಅಗಿದ್ದ ಈತ ಕುರಿಗಳನ್ನು ಮೇಯಿಸುತ್ತಲೇ ಹಾಡು ಹಾಡುತ್ತಿದ್ದ, ಸರಿಗಮಪ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದ. ಅಲ್ಲಿನ ರನ್ನರ್ ಅಪ್ ಆದ ಬಳಿಕ ಜನಮನ್ನಣೆಯನ್ನು ಗಳಿಸಿದ್ದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ರಂಜಿತ್ ನನ್ನ ಸಹೋದರನಂತೆ.. ಮತ್ತೆ ಬಿಗ್ಬಾಸ್ ಹೋಗೋ ಬಗ್ಗೆ ಮೌನ ಜಗದೀಶ್
BBK11: ಆತ ಹೀರೋ, ಸಿಂಹವಲ್ಲ ಅವನು ಇಲಿ.. ಜಗದೀಶ್ ಬಗ್ಗೆ ರಂಜಿತ್ ಮಾತು
Actress: ಮನೆಯಲ್ಲಿ ನಿಷೇಧಿತ ಮಾದಕ ವಸ್ತು ಬಳಕೆ; ಖ್ಯಾತ ಕಿರುತೆರೆ ನಟಿ ಬಂಧನ
BBK11: ಸಾಧ್ಯವಾದರೆ ನನ್ನನ್ನು ವಾಪಸ್ ಕರೆಸಿಕೊಳ್ಳಿ.. ಬಿಗ್ ಬಾಸ್ಗೆ ಜಗದೀಶ್ ಮನವಿ..
BBK11: ಅಪ್ಪನಿಗೆ ಹುಟ್ಟಿದರೆ ಎನ್ನುವ ಮಾತು.. ಮಾನಸ, ಚೈತ್ರಾಗೆ ಕಿಚ್ಚನಿಂದ ತರಾಟೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.