Banned ಮೀನುಗಾರಿಕೆ ಈಗಲೂ ಸಕ್ರಿಯ

ಬುಲ್‌ಟ್ರಾಲ್‌, ಕೃತಕ ಲೈಟ್‌ ಬಳಸಿ ಮೀನು ಹಿಡಿಯುವುದನ್ನು ತಡೆಯುವುದೇ ಸವಾಲು

Team Udayavani, Oct 21, 2024, 7:30 AM IST

fishermen

ಉಡುಪಿ: ಕರ್ನಾಟಕ ಕರಾವಳಿಯ ಸಮುದ್ರದ 12 ನಾಟಿಕಲ್‌ ಮೈಲಿನೊಳಗೆ ಬುಲ್‌ಟ್ರಾಲ್‌ ಹಾಗೂ ರಾತ್ರಿ ವೇಳೆ ಕೃತಕ ಲೈಟ್‌ ಅಳವಡಿಸಿಕೊಂಡು ಮೀನು ಹಿಡಿಯುವುದನ್ನು ನಿಷೇಧಿಸಿದ್ದರೂ ಇದು ಪೂರ್ಣ ಪ್ರಮಾಣದಲ್ಲಿ ನಿಂತಿಲ್ಲ. ಇದನ್ನು ತಡೆಯುವುದೇ ಮೀನುಗಾರಿಕೆ ಇಲಾಖೆಗೆ ಸವಾಲಾಗಿದೆ.

ಕೇಂದ್ರ ಹಾಗೂ ರಾಜ್ಯ ಸರಕಾರ ಈಗಾಗಲೇ ಬುಲ್‌ಟ್ರಾಲ್‌ ಮೂಲಕ ಮೀನು ಹಿಡಿಯುವುದನ್ನು ಸಂಪೂರ್ಣ ವಾಗಿ ನಿಷೇಧಿಸಿದೆ. ಆದರೆ ಬುಲ್‌ಟ್ರಾಲ್‌ ಮೂಲಕ ನಿರಂತರವಾಗಿ ಮೀನು ಹಿಡಿಯುವುದು ನಡೆಯುತ್ತಲೇ ಇದೆ. ಈ ಬಗ್ಗೆ ಜಿಲ್ಲಾಡಳಿತದಿಂದ ಮೀನುಗಾರಿಕೆ ಇಲಾಖೆಗೆ ಎಚ್ಚರಿಕೆ ನೀಡಿದರೂ ಪೂರ್ಣ ಪ್ರಮಾಣದಲ್ಲಿ ನಿಲ್ಲಿಸಲು ಇಲಾಖೆಗೆ ಸಾಧ್ಯವಾಗುತ್ತಿಲ್ಲ. ಬುಲ್‌ಟ್ರಾಲ್‌ ಮೀನುಗಾರಿಕೆಯಿಂದಾಗಿ ನಾಡದೋಣಿ ಮೀನುಗಾರರಿಗೆ ಸಮಸ್ಯೆಯಾಗುತ್ತಿದೆ.

ನಿಷೇಧಕ್ಕೆ ಕಾರಣ
ಬುಲ್‌ಟ್ರಾಲ್‌ ಮೀನುಗಾರಿಕೆಯು ನೀರಿನ ಅಡಿಭಾಗದಲ್ಲಿ ಬುಲ್‌ಟ್ರಾಲ್‌ ಕಟ್ಟಿ ಎಳೆಯುವುದರಿಂದ ಮೀನಿನ ಮರಿಗಳು ಹೆಚ್ಚೆಚ್ಚು ಇದರೊಳಗೆ ಸಿಲುಕಿ ಬೆಳೆಯುವ ಮೊದಲೇ ಸಾಯುತ್ತವೆ. ಮುಂಗಾರಿನ ಅವಧಿಯಲ್ಲಿ ಬಹುತೇಕ ಮೀನುಗಳು ಕಡಲ ತೀರದಲ್ಲಿ ಸಂತಾನೋತ್ಪತ್ತಿಗೆ ಬರು ವುದರಿಂದ ಆ ಅವಧಿಯಲ್ಲಿ ಬುಲ್‌ಟ್ರಾಲ್‌ ಮಾಡಿದರೆ ಮೀನಿನ ಸಂತಾನೋತ್ಪತ್ತಿಗೆ ಸಮಸ್ಯೆ ಯಾಗು ತ್ತದೆ. ಹೀಗಾಗಿ ಬುಲ್‌ಟ್ರಾಲ್‌ ಮೀನು ಗಾರಿಕೆಯನ್ನು ಸರಕಾರ ನಿಷೇಧಿಸಿದೆ ಮತ್ತು ನ್ಯಾಯಾಲಯ ಕೂಡ ಸರಕಾರದ ಕ್ರಮವನ್ನು ಎತ್ತಿ ಹಿಡಿದಿದೆ.

ನಾಡದೋಣಿ ಮೀನುಗಾರರಿಗೆ ಸಮಸ್ಯೆ ಯಾಕೆ?
ಜಿಲ್ಲೆಯಲ್ಲಿ ಸುಮಾರು 5 ಸಾವಿರ ನಾಡದೋಣಿಗಳಿದ್ದು, ಇವು ಸಮುದ್ರದ ತೀರಭಾಗದಲ್ಲಿ ಹೆಚ್ಚೆಚ್ಚು ಮೀನುಗಾರಿಕೆ ನಡೆಯುತ್ತವೆ. ಬಂಗುಡೆ, ಬೂತಾಯಿಯನ್ನೇ ಪ್ರಧಾನವಾಗಿ ಹಿಡಿಯಲಾಗುತ್ತದೆ. ಬೇರೆ ಕೆಲವು ಮೀನುಗಳು ಬರುತ್ತವೆ. ಬುಲ್‌ಟ್ರಾಲ್‌ ತೀರದ ಭಾಗದಲ್ಲಿ ಎಳೆಯುವುದರಿಂದ ನಾಡದೋಣಿ ಮೀನುಗಾರಿಕೆಗೆ ಮೀನಿನ ಕೊರತೆ ಎದುರಾಗುತ್ತದೆ.

ಮೀನಿನ ಬಲೆ ಹೇಗಿರಬೇಕು
ನಿರ್ದಿಷ್ಟ ಪ್ರಮಾಣದಷ್ಟು ಬೆಳೆಯು ವವರೆಗೂ ಮೀನಿನ ಮರಿಗಳನ್ನು ಹಿಡಿಯಲೇ ಬಾರದು ಎಂಬ ನಿಯಮವಿದೆ. ಅದಕ್ಕಾಗಿಯೇ 30-35 ಎಂಎಂಗಿಂತ ಕಡಿಮೆ ಬಲೆಯನ್ನು ಬಳಸುವಂತಿಲ್ಲ. ನಾಡದೋಣಿ, ಪರ್ಸಿನ್‌ ಸಹಿತ ಎಲ್ಲ ಮೀನುಗಾರರು ಈ ನಿರ್ದಿಷ್ಟ ಪ್ರಮಾಣಕ್ಕಿಂತ ಹೆಚ್ಚಿರುವ ಬಲೆಗಳನ್ನೇ ಬಳಸುತ್ತಾರೆ. ಆದರೆ ಬುಲ್‌ಟ್ರಾಲ್‌ ಮಾತ್ರ ಇದಕ್ಕೆ ವ್ಯತಿರಿಕ್ತವಾಗಿರುವುದರಿಂದ ಬುಲ್‌ಟ್ರಾಲ್‌ ನಿಷೇಧಿಸಲಾಗಿದೆ. 30-35 ಎಂಎಂಗಿಂತ ಕಡಿಮೆ ಬಲೆಯನ್ನು ಬಳಸಿದಲ್ಲಿ ದೂರು ಆಧರಿಸಿ ಇಲಾಖೆಯಿಂದಲೂ ಕ್ರಮ ವಹಿಸಲಾಗುತ್ತದೆ.

ಕೃತಕ ಲೈಟ್‌ ಬಳಕೆ
ಬೆಳದಿಂಗಳು ಹೊರತುಪಡಿಸಿ ಉಳಿದ ದಿನಗಳಲ್ಲಿ ರಾತ್ರಿವೇಳೆ ಬೋಟು ಗಳಲ್ಲಿ ಕೃತಕ ಲೈಟ್‌ ಬಳಸಿ ಮೀನು ಹಿಡಿಯ ಲಾಗುತ್ತದೆ. ಇದೊಂದು ರೀತಿಯಲ್ಲಿ ಪ್ರಕೃತಿಗೆ ವಿರುದ್ಧವಾದ ನೀತಿ. ಕೃತಕ ಲೈಟ್‌ಗೆ ಮೀನುಗಳು ಸಹಜವಾಗಿ ಒಟ್ಟಾಗಿ ಒಂದೆಡೆ ಸೇರುತ್ತವೆ. ಆಗ ಬಲೆ ಹಾಕಿ ಮೀನು ಹಿಡಿಯುವುದು. ಈ ಬಗ್ಗೆಯೂ ಮೀನುಗಾರರಿಂದಲೇ ದೂರು ಬಂದ ಹಿನ್ನೆಲೆಯಲ್ಲಿ ನಿಷೇಧ ಮಾಡಲಾಗಿದೆ. ಆದರೂ ಕೃತಕ ಲೈಟ್‌ ಬಳಕೆ ಮಾತ್ರ ನಡೆಯುತ್ತಲೇ ಇದೆ. ಇದನ್ನು ತಡೆಯಲು ಪರಿಣಾಮಕಾರಿ ಕ್ರಮ ಅಗತ್ಯ.

ಏಕರೂಪ ನೀತಿ ಬೇಕು
ಮೀನುಗಾರಿಕೆಗೆ ಸಂಬಂಧಿಸಿ ಕೇರಳ, ಗೋವಾ, ಮಹಾರಾಷ್ಟ್ರ ಸಹಿತವಾಗಿ ಎಲ್ಲ ರಾಜ್ಯಗಳಿಂದ ಮಾಹಿತಿ ಪಡೆದು ಕರ್ನಾಟಕ ಸರಕಾರ ಒಂದು ಏಕರೂಪ ನೀತಿ ಜಾರಿಗೆ ಕೇಂದ್ರಕ್ಕೆ ಒತ್ತಡ ಹೇರಬೇಕು ಹಾಗೂ ರಾಜ್ಯದಲ್ಲಿ ಈ ಸಂಬಂಧ ನಿಮಯ ಜಾರಿಯಾಗಬೇಕು. ಯಾವುದೇ ಒಂದು ಬಂದರಿನಲ್ಲಿ ಕಟ್ಟುನಿಟ್ಟಿನ ಕ್ರಮವಾದ ತತ್‌ಕ್ಷಣ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಹೀಗಾಗಿ ಇಡೀ ವ್ಯವಸ್ಥೆಯೇ ಏಕರೂಪವಾಗಿ ನಿಮಯ ಅನುಷ್ಠಾನ ಮಾಡಿದಲ್ಲಿ ಮಾತ್ರ ಕೆಲವು ಸಮಸ್ಯೆಗೆ ಪರಿಹಾರ ಸಿಗಲಿದೆ ಎಂಬುದು ಮೀನುಗಾರಿಕ ಮುಖಂಡರ ವಾದವಾಗಿದೆ.

ಕಠಿನ ಕ್ರಮ
ಬುಲ್‌ಟ್ರಾಲ್‌ ಹಾಗೂ ಕೃತಕ ಲೈಟ್‌ ಬಳಸಿ ಮೀನು ಹಿಡಿಯವುದನ್ನು ನಿಷೇಧಿಸಲಾಗಿದ್ದು, ಈ ರೀತಿಯ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವವರ ವಿರುದ್ಧ ನಿಯಮಾನುಸಾರ ಕಠಿನ ಕ್ರಮ ತೆಗೆದುಕೊಳ್ಳಲಿದ್ದೇವೆ. ಈ ಬಗ್ಗೆ ಜಿಲ್ಲಾಧಿಕಾರಿಯವರಿಂದಲೂ ಸೂಚನೆ ಬಂದಿದೆ.
-ವಿವೇಕ್‌, ಜಂಟಿ ನಿರ್ದೇಶಕ ಮೀನುಗಾರಿಕೆ ಇಲಾಖೆ

ಟಾಪ್ ನ್ಯೂಸ್

By Election; ಮೂರು ಕ್ಷೇತ್ರಕ್ಕೆ ಶೀಘ್ರ ಅಭ್ಯರ್ಥಿಗಳು ಅಂತಿಮ: ಸಚಿವ ಲಾಡ್

By Election; ಮೂರು ಕ್ಷೇತ್ರಕ್ಕೆ ಶೀಘ್ರ ಅಭ್ಯರ್ಥಿಗಳು ಅಂತಿಮ: ಸಚಿವ ಲಾಡ್

Sirsi: ಮೂಡಾ ಹಗರಣದ ಮೂಲಕ ಸಿದ್ರಾಮಣ್ಣ ಹೊಸ ದಾಖಲೆಯನ್ನೇ ನಿರ್ಮಿಸಿದ್ದಾರೆ: ಕಾಗೇರಿ ಲೇವಡಿ

Sirsi: ಮುಡಾ ಹಗರಣದ ಮೂಲಕ ಸಿದ್ರಾಮಣ್ಣ ಹೊಸ ದಾಖಲೆಯನ್ನೇ ನಿರ್ಮಿಸಿದ್ದಾರೆ: ಕಾಗೇರಿ ಲೇವಡಿ

nisha yogeshwar

Video: ಎಲ್ಲಾ ಸತ್ಯ ಹೊರ ತರುತ್ತೇನೆ: ತಂದೆ ವಿರುದ್ದ ಬಾಂಬ್‌ ಹಾಕಿದ ಸಿಪಿವೈ ಪುತ್ರಿ ನಿಶಾ

013

Kiccha Sudeep: ಪ್ರಜ್ಞೆಯಲ್ಲಿರುವಾಗ ನನ್ನ ತಾಯಿಯನ್ನು ಕೊನೆಯ ಬಾರಿಗೆ ನೋಡಲು ಆಗಲೇ ಇಲ್ಲ..

New Threat: ನ.1ರಿಂದ 19ರವರೆಗೆ ಏರ್ ಇಂಡಿಯಾದಲ್ಲಿ ಪ್ರಯಾಣಿಸಬೇಡಿ: ಪನ್ನು ಬೆದರಿಕೆ

New Threat: ನ.1ರಿಂದ 19ರವರೆಗೆ ಏರ್ ಇಂಡಿಯಾದಲ್ಲಿ ಪ್ರಯಾಣಿಸಬೇಡಿ: ಪನ್ನು ಬೆದರಿಕೆ

Bagheera Trailer:‌ ʼರಕ್ತ ಕುಡಿಯುವ ರಾಕ್ಷಸʼ, ಜನರ ರಕ್ಷಕ.. ʼಬಘೀರʼ ಟ್ರೇಲರ್‌ ಔಟ್

Bagheera Trailer:‌ ʼರಕ್ತ ಕುಡಿಯುವ ರಾಕ್ಷಸʼ, ಜನರ ರಕ್ಷಕ.. ʼಬಘೀರʼ ಟ್ರೇಲರ್‌ ಔಟ್

INDvsNZ 2ನೇ ಪಂದ್ಯಕ್ಕೆ ಪಂತ್‌ ಅನುಮಾನ;ಕೋಚ್-ಕ್ಯಾಪ್ಟನ್‌ ಮೇಲೆ ಜವಾಬ್ದಾರಿ ಹಾಕಿದ ಬಿಸಿಸಿಐ

INDvsNZ 2ನೇ ಪಂದ್ಯಕ್ಕೆ ಪಂತ್‌ ಅನುಮಾನ;ಕೋಚ್-ಕ್ಯಾಪ್ಟನ್‌ ಮೇಲೆ ಜವಾಬ್ದಾರಿ ಹಾಕಿದ ಬಿಸಿಸಿಐ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

Udupi: ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ; ಮಲ್ಪೆ ಠಾಣೆಯಲ್ಲಿ ದೂರು ದಾಖಲು

court

Udupi; ಶ್ರೀಕೃಷ್ಣ ಮಠಕ್ಕೆ ಬಂದು ಮೋಸ ಮಾಡಿದ ವ್ಯಕ್ತಿಗೆ ಜಾಮೀನು

1-a-MLC

MLC Election; ಇಂದು ವಿಧಾನಪರಿಷತ್‌ ಉಪ ಚುನಾವಣೆ

suicide (2)

Kundapur; ವಿಪರೀತ ತಲೆನೋವು: ಮಹಿಳೆ ಸಾ*ವು

1-ajekaaa

Ajekar: ಸೇತುವೆಗೆ ಕಾರು ಢಿಕ್ಕಿ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Consumer Court: ದೋಷಪೂರಿತ ಇವಿ ದ್ವಿಚಕ್ರ ವಾಹನ ಕೊಟ್ಟ ಕಂಪನಿಗೆ ಕೋರ್ಟ್‌ನಿಂದ 2ಲಕ್ಷ ದಂಡ

Consumer Court: ದೋಷಪೂರಿತ ಇವಿ ದ್ವಿಚಕ್ರ ವಾಹನ ಕೊಟ್ಟ ಕಂಪನಿಗೆ ಕೋರ್ಟ್‌ನಿಂದ 2ಲಕ್ಷ ದಂಡ

2

Puttur: ಐನ್ನೂರು ವಿದ್ಯಾರ್ಥಿಗಳಿದ್ದ ಕಾಲೇಜಿನಲ್ಲೀಗ ನಲ್ವತ್ತೇ ವಿದ್ಯಾರ್ಥಿಗಳು

Fraud: ವಿದೇಶದಲ್ಲಿ ಉದ್ಯೋಗ‌ ಕೊಡಿಸುವುದಾಗಿ 9 ಲಕ್ಷ ವಂಚನೆ: ಮೂವರ ವಿರುದ್ಧ ಕೇಸ್‌ 

Fraud: ವಿದೇಶದಲ್ಲಿ ಉದ್ಯೋಗ‌ ಕೊಡಿಸುವುದಾಗಿ 9 ಲಕ್ಷ ವಂಚನೆ: ಮೂವರ ವಿರುದ್ಧ ಕೇಸ್‌ 

1(1)

Bantwal: ಹೇಗಿದ್ದ ಕಲ್ಲಡ್ಕ ಈಗ ಹೇಗಾಗಿ ಹೋಗಿದೆ!

By Election; ಮೂರು ಕ್ಷೇತ್ರಕ್ಕೆ ಶೀಘ್ರ ಅಭ್ಯರ್ಥಿಗಳು ಅಂತಿಮ: ಸಚಿವ ಲಾಡ್

By Election; ಮೂರು ಕ್ಷೇತ್ರಕ್ಕೆ ಶೀಘ್ರ ಅಭ್ಯರ್ಥಿಗಳು ಅಂತಿಮ: ಸಚಿವ ಲಾಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.