Baba Siddiqui Case: ಸಲ್ಮಾನ್ ಹತ್ಯೆಗೆ ಸಂಚು ಆರೋಪಿಗೆ ಪೊಲೀಸರಿಂದ ಹನಿಟ್ರ್ಯಾಪ್ ಬಲೆ!
ಮಹಿಳೆ ಮೂಲಕ ಬಿಷ್ಣೋಯ್ ಗ್ಯಾಂಗ್ ಸದಸ್ಯನ ಬಂಧಿಸಿದ ಪೊಲೀಸರು
Team Udayavani, Oct 21, 2024, 7:45 AM IST
ಹೊಸದಿಲ್ಲಿ: ನಟ ಸಲ್ಮಾನ್ ಖಾನ್ ಹತ್ಯೆಗೆ ಸಂಚು ರೂಪಿಸುತ್ತಿದ್ದ ಆರೋಪ ಹೊತ್ತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ಪ್ರಮುಖ ಸದಸ್ಯ ಸುಖ್ಬೀರ್ ಬಲ್ಬೀರ್ ಸಿಂಗ್ನನ್ನು ನವೀ ಮುಂಬಯಿ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರೊಂದಿಗೆ ಕಾರ್ಯನಿರ್ವಹಿಸುವ ಮಹಿಳೆಯೊಬ್ಬಳಿಂದ ಹನಿ ಟ್ರ್ಯಾಪ್ ಮಾಡಿಸಿ ಪಾಣಿಪತ್ನ ಹೊಟೇಲ್ ಒಂದಕ್ಕೆ ಸುಖ್ಬೀರ್ ಬಲ್ಬೀರ್ನನ್ನು ಕರೆಸಿದ ಪೊಲೀಸರು ಬುಧವಾರ ರಾತ್ರಿ ಅಲ್ಲಿ ಆತನನ್ನು ಬಂಧಿಸಿದ್ದಾರೆ. ಎನ್ಸಿಪಿ ನಾಯಕ ಬಾಬಾ ಸಿದ್ಧಿಕಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ಈತನನ್ನು ತನಿಖೆಗೆ ಒಳಪಡಿಸಲಾಗುವುದು ಎಂದು ಪೊಲಿಸರು ತಿಳಿಸಿದ್ದಾರೆ.
ಹನಿಟ್ರ್ಯಾಪ್ ನಡೆದಿದ್ದು ಹೇಗೆ?:
ಪೊಲೀಸರೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದ ಮಹಿಳೆಯೊಬ್ಬರು ಬಹಳ ದಿನಗಳ ಹಿಂದೆಯೇ ಸುಖ್ಬೀರ್ ಬಲ್ಬೀರ್ನನ್ನು ಸಂಪರ್ಕಿಸಿ ಆತನ ಸ್ನೇಹ ಸಂಪಾದಿಸಿದ್ದರು. ಬುಧವಾರ ರಾತ್ರಿ ಆತನಿಗೆ ಕರೆ ಮಾಡಿದ ಮಹಿಳೆ, “ನಾನು ಪಾಣಿಪತ್ನ ಅಭಿನಂದನ್ ಹೊಟೇಲ್ನಲ್ಲಿದ್ದೇನೆ. ಬಹಳ ಕುಡಿದಿದ್ದೇನೆ. ಇಲ್ಲಿಗೆ ಬನ್ನಿ’ ಎಂದು ಹೇಳಿದ್ದಾರೆ. ಮೊದಲಿಗೆ ಇದು ಸಂಚು ಎಂದು ಅನುಮಾನಿಸಿದ ಸುಖ್ಬೀರ್ ಬಲ್ಬೀರ್ನನ್ನು ಮಹಿಳೆಯು ಭರವಸೆ ನೀಡಿ ನಂಬಿಸಿ ಆತನನ್ನು ಕರೆಸಿಕೊಂಡಿದ್ದಾರೆ. ಅದೇ ಹೊಟೇಲ್ನಲ್ಲಿ ಸುಖ್ಬೀರ್ ಬಲ್ಬೀರ್ಗಾಗಿ ಕಾದಿದ್ದ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra: ಸೀಟು ಹಂಚಿಕೆ ಬಿಕ್ಕಟ್ಟು; ಶರದ್ ನೆರವು ಕೋರಿದ ಕಾಂಗ್ರೆಸ್, ಉದ್ಧವ್ ಪಕ್ಷ
Investigation: ಹಳಿಯ ಬೋಲ್ಟ್ ತೆಗೆದಿದ್ದಕ್ಕೆ ಮೈಸೂರು ರೈಲು ಅವಘಡ!
CM Marathon: ಎರಡು ಗಂಟೆಯಲ್ಲಿ 21 ಕಿ.ಮೀ. ದೂರ ಓಡಿದ ಕಾಶ್ಮೀರ ಸಿಎಂ ಒಮರ್!
Andhra Pradesh; 2 ಮಕ್ಕಳಿದ್ದವರಿಗೆ ಮಾತ್ರ ಚುನಾವಣ ಟಿಕೆಟ್!
Government Data: ರಸ್ತೆ ಅಪಘಾತದಲ್ಲಿ ಸಾವು: ಕರ್ನಾಟಕಕ್ಕೆ 5ನೇ ಸ್ಥಾನ!
MUST WATCH
ಹೊಸ ಸೇರ್ಪಡೆ
Shimoga; ದ್ವಿಚಕ್ರ ವಾಹನ ಶೋ ರೂಂನಲ್ಲಿ ಅಗ್ನಿ ಅವಘಡ; ಮಾಜಿ ಉದ್ಯೋಗಿಯ ಮೇಲೆ ಆರೋಪ
By Election; ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಒಲವು ಬಿಜೆಪಿ ಕಡೆಗೆ: ಶಾಸಕ ಭರತ್ ಶೆಟ್ಟಿ
Bagheera Trailer: ʼರಕ್ತ ಕುಡಿಯುವ ರಾಕ್ಷಸʼ, ಜನರ ರಕ್ಷಕ.. ʼಬಘೀರʼ ಟ್ರೇಲರ್ ಔಟ್
INDvsNZ 2ನೇ ಪಂದ್ಯಕ್ಕೆ ಪಂತ್ ಅನುಮಾನ;ಕೋಚ್-ಕ್ಯಾಪ್ಟನ್ ಮೇಲೆ ಜವಾಬ್ದಾರಿ ಹಾಕಿದ ಬಿಸಿಸಿಐ
Chikkamagaluru: ಕಾಫಿನಾಡಿನಲ್ಲಿ ಮಳೆಯ ಅಬ್ಬರ… ಸಾವಿರಾರು ಎಕರೆ ಬೆಳೆ ಜಲಾವೃತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.