BBK11: ಮನೆಮಂದಿಯ ಜಗಳ ನೋಡಿ ತಲೆ ಮೇಲೆ ಕೈಯಿಟ್ಟು ಕೂತ ಕ್ಯಾಪ್ಟನ್ ಹನುಮಂತು
Team Udayavani, Oct 21, 2024, 9:15 AM IST
ಬೆಂಗಳೂರು: ಬಿಗ್ ಬಾಸ್ ಕನ್ನಡ (Bigg Boss Kannada-11) ದ ದೊಡ್ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಆಗಮಿಸಿರುವ ಹನುಮಂತು ಮೊದಲ ದಿನವೇ ಮನರಂಜನೆ ನೀಡಲು ಶುರು ಮಾಡಿದ್ದಾರೆ.
ಹಳ್ಳಿಯಿಂದ ಬಿಗ್ ಬಾಸ್ ವೇದಿಕೆಗೆ ಬಂದಿರುವ ಗಾಯಕ ಹನುಮಂತು ಮನೆಗೆ ಬಂದ ಕೂಡಲೇ ಎಲ್ಲರೊಂದಿಗೆ ಬೆರೆಯಲು ಶುರು ಮಾಡಿದ್ದಾರೆ. ಒಬ್ಬೊಬ್ಬರ ಜತೆ ಮಾತನಾಡಿಕೊಂಡು ಬಿಗ್ ಬಾಸ್ ಮನೆಯನ್ನು ಅರ್ಥ ಮಾಡಿಕೊಳ್ಳಲು ಶುರು ಮಾಡಿದ್ದಾರೆ.
ಹನುಮಂತು ಅವರಿಗೆ ಮನೆಯ ಕ್ಯಾಪ್ಟನ್ಸಿಯ ಜವಾಬ್ದಾರಿಯನ್ನು ನೀಡಲಾಗಿದೆ. ಮನೆಯ ಸದಸ್ಯರಿಗೆ ಮನೆ ಕೆಲಸವನ್ನು ಹಂಚಿದ್ದಾರೆ. ಇದಲ್ಲದೆ ಹನುಮಂತು ಅವರಿಗೆ ಬಿಗ್ ಬಾಸ್ ಒಂದು ಸ್ಪೆಷೆಲ್ ಟಾಸ್ಕ್ ನೀಡಿದ್ದಾರೆ.
ಹನುಮಂತು ಅವರು ಯಾವ ಸದಸ್ಯ ಯಾವ ಸ್ಥಾನದಲ್ಲಿರಬೇಕೆಂದು ನಿರ್ಧರಿಸಬೇಕು. ಹನುಮಂತು ತಮಗೆ ತಿಳಿದಂತೆ ಒಬ್ಬೊಬ್ಬರನ್ನು ಒಂದೊಂದು ಸ್ಥಾನದಲ್ಲಿ ನಿಲ್ಲಿಸಿದ್ದಾರೆ. ಇದಕ್ಕೆ ಚೈತ್ರಾ ಅವರು ತಮಗೆ ಕೊಟ್ಟ 13ನೇ ಸ್ಥಾನಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭವ್ಯಾ ಅವರು ನನಗೆ ಈ ಸ್ಥಾನ ಯಾಕೆ ಕೊಟ್ರಿ ಎಂದು ಪ್ರಶ್ನಿಸಿದ್ದು, ಈ ವೇಳೆ ಹನುಮಂತು ನನಗೆ ಗೊತ್ತಿಲ್ಲ ಅಕ್ಕಾ ಎಂದಿದ್ದಾರೆ.
ಗರಂ ಆದ ಧರ್ಮಕೀರ್ತಿರಾಜ್: ಧರ್ಮಕೀರ್ತಿರಾಜ್ ತಮಗೆ ಕೊಟ್ಟ 9ನೇ ಸ್ಥಾನಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು, ತಾವು ಇಲ್ಲಿ ಲವ್ ಮಾಡೋಕೆ, ಚಪಾತಿ ಬೇಯಿಸೋಕೆ ಬಂದಿರುವುದಲ್ಲ ಎಂದಿದ್ದಾರೆ.
ಹನುಮಂತು ಕೊಟ್ಟ ಸ್ಥಾನ; ಬುಗಿಲೆದ್ದ ಅಸಮಾಧಾನ!
ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa pic.twitter.com/oXHUKRBL7P
— Colors Kannada (@ColorsKannada) October 21, 2024
ತಿವಿಕ್ರಮ್ ನೀವು ಕೊಟ್ಟ ಸ್ಥಾನ ಇಲ್ಲಿ ಯಾರಿಗೂ ಸಮಾಧಾನ ತಂದಿಲ್ಲ ಎಂದಿದ್ದಾರೆ. ಇದಕ್ಕೆ ಹನುಮಂತು ಏನು ಮಾಡುದೆಂದು ತಲೆ ಮೇಲೆ ಕೈಕೊಟ್ಟು ಕೂತಿದ್ದಾರೆ. ಹೀಗೆ ಜಗಳ ಮಾಡೋದಾದ್ರೆ ನಾನು ಬರ್ತಾನೆ ಇರಲಿಲ್ಲ. ನಾನು ಈ ಆಟದಲ್ಲಿ ಇಲ್ಲ, ಕ್ಯಾಪ್ಟನ್ ಕ್ಯಾನ್ಸಲ್ ಎಂದು ಹನುಮಂತು ಹೇಳಿರುವುದನ್ನು ಪ್ರೋಮೊದಲ್ಲಿ ತೋರಿಸಲಾಗಿದೆ.
ಸೋಮವಾರ ರಾತ್ರಿ(ಅ.21 ರಂದು) ಈ ಸಂಚಿಕೆ ಪ್ರಸಾರವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಹೋದವರನ್ನೆಲ್ಲ ವಾಪಸ್ ಕರೆಸಿದರೆ ಹುಚ್ಚ ವೆಂಕಟ್ ಅವರನ್ನು ಸಹ ಕರೆಸಬೇಕು.. ಕಿಚ್ಚ
BBK11: ರಂಜಿತ್ ನನ್ನ ಸಹೋದರನಂತೆ.. ಮತ್ತೆ ಬಿಗ್ಬಾಸ್ ಹೋಗೋ ಬಗ್ಗೆ ಮೌನ ಮುರಿದ ಜಗದೀಶ್
BBK11: ಆತ ಹೀರೋ, ಸಿಂಹವಲ್ಲ ಅವನು ಇಲಿ.. ಜಗದೀಶ್ ಬಗ್ಗೆ ರಂಜಿತ್ ಮಾತು
Actress: ಮನೆಯಲ್ಲಿ ನಿಷೇಧಿತ ಮಾದಕ ವಸ್ತು ಬಳಕೆ; ಖ್ಯಾತ ಕಿರುತೆರೆ ನಟಿ ಬಂಧನ
BBK11: ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಬಂದ ಹನುಮಂತ
MUST WATCH
ಹೊಸ ಸೇರ್ಪಡೆ
Consumer Court: ದೋಷಪೂರಿತ ಇವಿ ದ್ವಿಚಕ್ರ ವಾಹನ ಕೊಟ್ಟ ಕಂಪನಿಗೆ ಕೋರ್ಟ್ನಿಂದ 2ಲಕ್ಷ ದಂಡ
Puttur: ಐನ್ನೂರು ವಿದ್ಯಾರ್ಥಿಗಳಿದ್ದ ಕಾಲೇಜಿನಲ್ಲೀಗ ನಲ್ವತ್ತೇ ವಿದ್ಯಾರ್ಥಿಗಳು
Fraud: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ 9 ಲಕ್ಷ ವಂಚನೆ: ಮೂವರ ವಿರುದ್ಧ ಕೇಸ್
Bantwal: ಹೇಗಿದ್ದ ಕಲ್ಲಡ್ಕ ಈಗ ಹೇಗಾಗಿ ಹೋಗಿದೆ!
By Election; ಮೂರು ಕ್ಷೇತ್ರಕ್ಕೆ ಶೀಘ್ರ ಅಭ್ಯರ್ಥಿಗಳು ಅಂತಿಮ: ಸಚಿವ ಲಾಡ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.