Mangaluru: ಸರಕಾರಿ ಶಾಲಾ ಶೌಚಾಲಯಗಳಿಗೆ ಹೊಸ ರೂಪ

ಅಖೀಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್‌ ಜಿಲ್ಲಾ ಸಮಿತಿಯಿಂದ ವಿನೂತನ ಅಭಿಯಾನ

Team Udayavani, Oct 21, 2024, 3:39 PM IST

10(2)

ಮಹಾನಗರ: ಸರಕಾರಿ ಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಸರಕಾರ ಅಷ್ಟಾಗಿ ಮುರ್ತುವರ್ಜಿ ತೋರಿಸದಿರುವ ಹಿನ್ನೆಲೆಯಲ್ಲಿ ಸ್ಥಳೀಯವಾಗಿಯೇ ಸಂಘ – ಸಂಸ್ಥೆಗಳ ನೆರವಿನಿಂದಲೇ ಬಹುತೇಕ ಕಡೆಗಳಲ್ಲಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಇದೀಗ ಅಂತಹುದೇ ಕಾರ್ಯವೊಂದನ್ನು ಅಖೀಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್‌ನ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಕೈಗೆತ್ತಿಕೊಂಡಿದೆ.

ಸರಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿರುವ ಬಡ ಮಕ್ಕಳ ಆರೋಗ್ಯ, ನೈರ್ಮಲ್ಯ ಮತ್ತು ಹಕ್ಕು ಸಂರಕ್ಷಣೆಯ ಹಿತದೃಷ್ಟಿಯಿಂದ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಸರಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ‘ಶೌಚಾಲಯ’ಗಳನ್ನು ಸ್ವಯಂಪ್ರೇರಿತ ಶ್ರಮದಾನದ ಮೂಲಕ ಮತ್ತು ದುರಸ್ತಿಗೊಳಿಸಿ ನವೀಕರಿಸಿ ‘ಸ್ವಚ್ಛಾಲಯ’ಗಳನ್ನಾಗಿ ಪರಿವರ್ತಿಸುವ ವಿನೂತನ ಪರಿಕಲ್ಪನೆ ಇದಾಗಿದೆ.

ಮೊದಲು ಮತ್ತು ಅನಂತರ

 

1,000ಕ್ಕೂ ಹೆಚ್ಚು ಸರಕಾರಿ ಶಾಲೆಗಳ ಶೌಚಾಲಯ ಸ್ವತ್ಛತೆ
ಯೋಜನೆಯಂತೆ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಸುಮಾರು 1,000ಕ್ಕೂ ಹೆಚ್ಚಿನ ಸರಕಾರಿ ಶಾಲೆಗಳ ಶೌಚಾಲಯಗಳನ್ನು ‘ಸ್ವಚ್ಛಾಲಯ’ಗಳನ್ನಾಗಿ ಪರಿವರ್ತಿಸುವ ಮೂಲಕ ಬಡಮಕ್ಕಳಿಗೆ ಉತ್ತಮ ವ್ಯವಸ್ಥೆ ಕಲ್ಪಿಸಲು ನೆರವಾಗುವುದು ಈ ಅಭಿಯಾನದ ಉದ್ದೇಶ.

ಯೋಜನೆಯಡಿ ಶೌಚಾಲಯದ ಕಟ್ಟಡಕ್ಕೆ ಬಣ್ಣ ಬಳಿಯುವುದು, ಛಾವಣಿ, ನೆಲ ದುರಸ್ತಿ, ಕಮೋಡ್‌ಗಳ ಸ್ವತ್ಛತೆ, ನೀರಿನ ವ್ಯವಸ್ಥೆ ಸರಿಪಡಿಸುವುದು ಮೊದಲಾದ ಕೆಲಸಗಳನ್ನು ಕೈಗೊಳ್ಳಲಾಗುವುದು.

ಮೊದಲು

ಅನಂತರ

ಇಂದು ಉದ್ಘಾಟನೆ
ಅಭಿಯಾನದಡಿ ಸ್ವತ್ಛಗೊಳಿಸಿ ಸುಂದರಗೊಳಿಸಲಾದ ಶೌಚಾಲಯಗಳ ಉದ್ಘಾಟನೆ ಕಾರ್ಯಕ್ರಮ ಅ. 21ರಂದು ಆಯಾ ಶಾಲೆಗಳಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಜಿ.ಪಂ. ಸಿಇಒ, ಶಿಕ್ಷಣ ಇಲಾಖೆ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮನಪಾ ಸದಸ್ಯರು, ಶಿಕ್ಷಕರು, ಶಾಲೆಯ ಹಳೆ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಪ್ರಮುಖರು, ಸಂಸ್ಥಾಪಕಧ್ಯಕ್ಷ ಅಖೀಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್‌ನ ಪ್ರಮುಖರು ಸಹಿತ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ ಎಂದು ದ.ಕ. ಜಿಲ್ಲಾಧ್ಯಕ್ಷ ಸಂತೋಷ್‌ ಕೊಲ್ಯ ತಿಳಿಸಿದ್ದಾರೆ.

ಸಮಿತಿ ರಾಜ್ಯಾಧ್ಯಕ್ಷ ದೀಪಕ್‌ ಜಿ. ಬೆಳ್ತಂಗಡಿ ಅವರ ನೇತೃತ್ವದಲ್ಲಿ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಪ್ರಮುಖರು ತಿಳಿಸಿದ್ದಾರೆ. ಮೂರು ಶಾಲಾ ಶೌಚಾಲಯ ಅಭಿವೃದ್ಧಿ ಅಭಿಯಾನದ ಆರಂಭಿಕ ಹಂತ ಈಗಾಗಲೇ ಆರಂಭವಾಗಿದೆ. ದಸರಾ ರಜಾ ಸಂದರ್ಭದಲ್ಲಿ ಮಂಗಳೂರಿನ ಹೊಯ್ಗೆಬಜಾರ್‌ನ ಶ್ರೀ ಜ್ಞಾನೋದಯ ಸರಕಾರಿ ಕಿ.ಪ್ರಾ. ಶಾಲೆ, ವೆಲೆನ್ಸಿಯಾ ಸೂಟರ್‌ಪೇಟೆಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಕಾವೂರಿನ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಶೌಚಾಲಯಗಳನ್ನು ಸ್ವತ್ಛ ಸುಂದರಗೊಳಿಸಲಾಗಿದೆ.

ಟಾಪ್ ನ್ಯೂಸ್

Yogeshwar

Channapatna; ಯೋಗೇಶ್ವರ್‌ಗೆ ಮಣೆ ಹಾಕಲು ಕಾಂಗ್ರೆಸ್‌ ಸಿದ್ಧ?

1-cppp

C.P.Yogeshwara ಕಿಡಿ: ರಾಜಕಾರಣಕ್ಕೆ ನಿಖಿಲ್‌ ತರಲು ಯತ್ನ, ನನಗೆ ಅನ್ಯಾಯ…

1-a-PSI

545 PSI ನೇಮಕಾತಿ: ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Special Court: ವಿಶೇಷಚೇತನರ ನ್ಯಾಯಾಲಯ ತೆರೆಯಲಿದೆ ದೆಹಲಿ ಸರ್ಕಾರ

Special Court: ವಿಶೇಷಚೇತನರ ನ್ಯಾಯಾಲಯ ತೆರೆಯಲಿದೆ ದೆಹಲಿ ಸರ್ಕಾರ

1-a-shegaji

Contractors ಬಾಕಿ 31,000 ಕೋಟಿ ರೂ. ಪಾವತಿಸದಿದ್ದರೆ ಪ್ರತಿಭಟನೆ

BBK11: ಹನುಮಂತು ಮೇಲೆ ಮುಗಿಬಿದ್ದ ಸ್ಪರ್ಧಿಗಳು; ನನಗೆ ಆಗ್ತಾ ಇಲ್ಲ ಅಂದ ಹಳ್ಳಿಹೈದ

BBK11: ಹನುಮಂತು ಮೇಲೆ ಮುಗಿಬಿದ್ದ ಸ್ಪರ್ಧಿಗಳು; ನನಗೆ ಆಗ್ತಾ ಇಲ್ಲ ಅಂದ ಹಳ್ಳಿಹೈದ

Bollywood Actor: ಸಲ್ಮಾನ್‌ಗೆ ಬೆದರಿಕೆ ಒಡ್ಡಿದ ಬಳಿಕ ಕ್ಷಮೆ ಕೇಳಿದ ವ್ಯಕ್ತಿ!

Bollywood Actor: ಸಲ್ಮಾನ್‌ಗೆ ಬೆದರಿಕೆ ಒಡ್ಡಿದ ಬಳಿಕ ಕ್ಷಮೆ ಕೇಳಿದ ವ್ಯಕ್ತಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

death

Mangaluru: ಅಪರಿಚಿತ ಶವ ಪತ್ತೆ; ಸೂಚನೆ

12

Kavoor: ಒಳಚರಂಡಿಯಿಂದ ಹೊರಚಿಮ್ಮುವ ಮಲಿನ ನೀರು; ಸಾಂಕ್ರಾಮಿಕ ರೋಗ ಭೀತಿ

9

Mangaluru: ಪಾಲಿಕೆ ಸಾಮಾನ್ಯ ಸಭೆಗೆ ಈ ಬಾರಿಯೂ ಅಡ್ಡಿ

8(1)

Pandeshwar ರೈಲು ಹಳಿ ದುರಸ್ತಿ; ವಾಹನ ಸವಾರರಿಗೆ ಸಂಕಷ್ಟ

5

Kinnigoli: ಪಕ್ಷಿಕೆರೆ-ಕೊಯಿಕುಡೆ ರಸ್ತೆಯುದ್ದಕ್ಕೂ ಹೊಂಡ ಗುಂಡಿ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Yogeshwar

Channapatna; ಯೋಗೇಶ್ವರ್‌ಗೆ ಮಣೆ ಹಾಕಲು ಕಾಂಗ್ರೆಸ್‌ ಸಿದ್ಧ?

1-cppp

C.P.Yogeshwara ಕಿಡಿ: ರಾಜಕಾರಣಕ್ಕೆ ನಿಖಿಲ್‌ ತರಲು ಯತ್ನ, ನನಗೆ ಅನ್ಯಾಯ…

1-a-PSI

545 PSI ನೇಮಕಾತಿ: ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Special Court: ವಿಶೇಷಚೇತನರ ನ್ಯಾಯಾಲಯ ತೆರೆಯಲಿದೆ ದೆಹಲಿ ಸರ್ಕಾರ

Special Court: ವಿಶೇಷಚೇತನರ ನ್ಯಾಯಾಲಯ ತೆರೆಯಲಿದೆ ದೆಹಲಿ ಸರ್ಕಾರ

1-a-shegaji

Contractors ಬಾಕಿ 31,000 ಕೋಟಿ ರೂ. ಪಾವತಿಸದಿದ್ದರೆ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.