ಪರಿಶಿಷ್ಟರ ಮೇಲೆ ದೌರ್ಜನ್ಯ; 7 ವರ್ಷದಲ್ಲಿ 488 ಪ್ರಕರಣ!


Team Udayavani, Oct 21, 2024, 4:02 PM IST

ಪರಿಶಿಷ್ಟರ ಮೇಲೆ ದೌರ್ಜನ್ಯ; 7 ವರ್ಷದಲ್ಲಿ 488 ಪ್ರಕರಣ!

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನಾಂಗದ ಮೇಲೆ ದೌರ್ಜನ್ಯ, ಹಲ್ಲೆ, ಕೊಲೆ ಹಾಗೂ ಅತ್ಯಾಚಾರ, ಜಾತಿನಿಂದನೆ ಯಂತಹ ಗಂಭೀರ ಪ್ರಕರಣಗಳೂ ಹೆಚ್ಚು ಹೆಚ್ಚು ದಾಖಲಾಗುತ್ತಿರುವುದು ಜಿಲ್ಲಾಡಳಿತ ಅಂಕಿ, ಅಂಶಗಳಿಂದ ದೃಢಪಟ್ಟಿದೆ.

ಹೌದು, ಕಳೆದ 7 ವರ್ಷದಲ್ಲಿ ಜಿಲ್ಲೆಯಲ್ಲಿ ಪರಿಶಿಷ್ಟರ ಮೇಲೆ ಬರೋಬ್ಬರಿ 488 ವಿವಿಧ ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 21 ಕೊಲೆ ಪ್ರಕರಣಗಳು ದಾಖಲಾದರೆ, 17 ಅತ್ಯಾಚಾರ ಪ್ರಕರಣಗಳು ಹಾಗೂ 68 ಪೋಕ್ಸೋ ಪ್ರಕರಣಗಳು ದಾಖಲಾಗಿರುವುದು ತೀವ್ರ ಆತಂಕ, ಕಳವಳಕ್ಕೆ ಕಾರಣವಾಗಿದೆ. ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಜನಾಂಗ ಹೆಚ್ಚಿನ ಪ್ರಮಾಣದಲ್ಲಿದೆ. ಆದರೆ, ಪರಿಶಿಷ್ಟರ ಮೇಲೆಯೇ ಜಾತಿಯ ಕಾರಣಕ್ಕೆ 488 ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, ಪ್ರತಿ ವರ್ಷ ಕೂಡ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಳ ಕಂಡಿರುವುದು ಎದ್ದು ಕಾಣುತ್ತಿದೆ. ಕಳೆದ 2018ರಿಂದ 2024ರ ಸೆಪ್ಪೆಂಬರ್‌ 9ರ ವರೆಗೂ ಜಿಲ್ಲೆಯಲ್ಲಿ 488 ದೌರ್ಜನ್ಯ ಪ್ರಕರಣಗಳು ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿವೆ.

ವಿಭಾಗವಾರು ಪ್ರಕರಣಗಳ ವಿವರ: ಇನ್ನೂ ಜಿಲ್ಲೆಯಲ್ಲಿ ಒಟ್ಟು 7 ವರ್ಷದಲ್ಲಿ ಪರಿಶಿಷ್ಟರ ಮೇಲೆ ದಾಖಲಾಗಿರುವ 488, ದೌರ್ಜನ್ಯ ಪ್ರಕರಣಗಳ ಪೈಕಿ ಜಿಲ್ಲೆಯ ಚಿಂತಾಮಣಿ ಉಪ ವಿಭಾಗದಲ್ಲಿ 261 ಹೆಚ್ಚು ದಾಖಲಾಗಿದ್ದು, ಆ ಪೈಕಿ 222 ದೌರ್ಜನ್ಯ ಪ್ರಕರಣಗಳು, 8 ಕೊಲೆ ಪ್ರಕರಣಗಳು, 7 ಅತ್ಯಾಚಾರ ಹಾಗೂ 24 ಪೋಕೊÕà ಪ್ರಕರಣಗಳು ದಾಖಲಾದರೆ, ಚಿಕ್ಕಬಳ್ಳಾಪುರ ಉಪ ವಿಭಾಗದಲ್ಲಿ ಒಟ್ಟು ದಾಖಲಾದ 227 ಪ್ರಕರಣಗಳ ಪೈಕಿ 160 ದೌರ್ಜನ್ಯ ಪ್ರಕರಣಗಳು, 13 ಕೊಲೆ, 10 ಅತ್ಯಾಚಾರ ಪ್ರಕರಣಗಳು ಹಾಗೂ 44 ಪೋಕ್ಸೋ ಪ್ರಕರಣಗಳು ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿವೆ.

304 ಪ್ರಕರಣಗಳಲ್ಲಿ ಪರಿಹಾರ: ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಜನಾಂಗದ ಮೇಲೆ ಕಳೆದ 7 ವರ್ಷದಲ್ಲಿ 488 ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, 304 ಪ್ರಕರಣಗಳಲ್ಲಿ ಮಾತ್ರ ಸಂತ್ರಸ್ತರಿಗೆ ಸರ್ಕಾರ ಪರಿಹಾರ ಕಲ್ಪಿಸಿದೆ. ಉಳಿದ ಪ್ರಕರಣಗಳಿಗೆ ಪರಿಹಾರ ಕಲ್ಪಿಸಿಲ್ಲ. 14 ಮಂದಿ ಕೊಲೆಯಾದ ವ್ಯಕ್ತಿಗಳ ಪೈಕಿ 4 ಕುಟುಂಬಗಳಿಗೆ ಸರ್ಕಾರ ಉದ್ಯೋಗದ ಆಸರೆ ಕಲ್ಪಿಸಿದೆ. 10 ಕುಟುಂಬಗಳಿಗೆ ಪಿಂಚಣಿ ಸೌಕರ್ಯ ಕಲ್ಪಿಸಿದೆ. ಒಟ್ಟಿನಲ್ಲಿ ಜಿಲ್ಲೆಯಲ್ಲಿ ದಲಿತರ ಮೇಲೆ ವಿವಿಧ ರೀತಿಯಲ್ಲಿ ದೌರ್ಜನ್ಯ, ಜಾತಿ ನಿಂದನೆ, ಕೊಲೆ, ದಲಿತ ಮಹಿಳೆಯರ ಮೇಲೆ ಅತ್ಯಾಚಾರ, ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರದಂತ ಗಂಭೀರ ಸ್ವರೂಪದ ದೌರ್ಜನ್ಯಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವುದು ಜಿಲ್ಲೆಯ ಕಾನೂನು ಸುವ್ಯವಸ್ಥೆ ಬಗ್ಗೆ ಜಿಲ್ಲೆಯ ಪೊಲೀಸ್‌ ಇಲಾಖೆ ಹಾಗೂ ಜಿಲ್ಲಾಡಳಿತ ಒಮ್ಮೆ ಅವಲೋಕನ ಮಾಡಬೇಕಿದೆ.

ದ್ವೇಷ,ಅಸೂಯೆ ಮತ್ತಿತರ ಕಾರಣದಿಂದ ಕೊಲೆ,ಅತ್ಯಾಚಾರ: ಜಿಲ್ಲೆಯಲ್ಲಿ ಕಳೆದ 2018ರಿಂದ 2024ರ ಸೆಪ್ಪೆಂಬರ್‌ 9ರ ವರೆಗೂ ಒಟ್ಟು 21 ಮಂದಿ ದಲಿತರು ಕೊಲೆ ಆಗಿದ್ದಾರೆ. ಆ ಪೈಕಿ ಚಿಂತಾಮಣಿ ಉಪ ವಿಭಾಗದಲ್ಲಿ 8 ಮಂದಿ ದಲಿತರು ಕೊಲೆ ಆಗಿದ್ದರೆ, ಚಿಕ್ಕಬಳ್ಳಾಪುರ ಉಪ ವಿಭಾಗದಲ್ಲಿ 13 ಮಂದಿ ದಲಿತರನ್ನು ಕೊಲೆ ಮಾಡಲಾಗಿದೆ. ದ್ವೇಷ, ಅಸೂಯೆ, ಜಮೀನು ವಿವಾದ ಮತ್ತಿತರ ಕಾರಣಗಳಿಗೆ ದಲಿತರ ಕೊಲೆಯಾಗಿದೆ. ಅಲ್ಲದೆ, 21 ಮಂದಿ ಮೇಲೆ ಅತ್ಯಾಚಾರ, 68 ಅಪ್ರಾಪ್ತರ ಮೇಲೆ ಅತ್ಯಾಚಾರ ವಿಶೇಷ ಪ್ರಕರಣಗಳು ಕಳೆದ 7 ವರ್ಷದಲ್ಲಿ ದಾಖಲಾಗಿದೆ.

ಕಾಗತಿ ನಾಗರಾಜಪ್ಪ

ಟಾಪ್ ನ್ಯೂಸ್

Bengaluru: 1 ಕೆ.ಜಿ. ಬೆಳ್ಳಿಯ ಬೆಲೆ ಈಗ 95 ಸಾವಿರ ರೂ.!

Bengaluru: 1 ಕೆ.ಜಿ. ಬೆಳ್ಳಿಯ ಬೆಲೆ ಈಗ 95 ಸಾವಿರ ರೂ.!

Sand

Kuap: ಪಾಂಗಾಳ ಪಾಪನಾಶಿನಿ ಹೊಳೆಯಲ್ಲಿ ಅಕ್ರಮ ಮರಳುಗಾರಿಕೆ ಪತ್ತೆ

Supreme Court: ಹಿಂದುತ್ವ ಬದಲು ಸಂವಿಧಾನತ್ವ ಬಳಕೆ ಪಿಐಎಲ್‌ ವಜಾ

Supreme Court: ಹಿಂದುತ್ವ ಬದಲು ಸಂವಿಧಾನತ್ವ ಬಳಕೆ ಪಿಐಎಲ್‌ ವಜಾ

Supreme Court: ಸಿಜೆಐಗೆ ಎಸ್‌ಪಿ ಸಂಸದ ರಾಮ್‌ಗೋಪಾಲ್‌ ನಿಂದನೆ

Supreme Court: ಸಿಜೆಐಗೆ ಎಸ್‌ಪಿ ಸಂಸದ ರಾಮ್‌ಗೋಪಾಲ್‌ ನಿಂದನೆ

Yogeshwar

Channapatna; ಯೋಗೇಶ್ವರ್‌ಗೆ ಮಣೆ ಹಾಕಲು ಕಾಂಗ್ರೆಸ್‌ ಸಿದ್ಧ?

1-cppp

C.P.Yogeshwara ಕಿಡಿ: ರಾಜಕಾರಣಕ್ಕೆ ನಿಖಿಲ್‌ ತರಲು ಯತ್ನ, ನನಗೆ ಅನ್ಯಾಯ…

1-a-PSI

545 PSI ನೇಮಕಾತಿ: ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-

Gudibanda: ದೇವಸ್ಥಾನದಲ್ಲಿ ಕಳವು; ಆರೋಪಿಗಳು ಪೊಲೀಸ್ ವಶಕ್ಕೆ

Cheque Bounce Case: ಚಿಂತಾಮಣಿ ಟಿಎಪಿಸಿಎಂಎಸ್‌ಗೆ 1.22 ಕೋಟಿ ದಂಡ

Cheque Bounce Case: ಚಿಂತಾಮಣಿ ಟಿಎಪಿಸಿಎಂಎಸ್‌ಗೆ 1.22 ಕೋಟಿ ದಂಡ

0528

Chikkaballapur: ಕೈ ಚೆಲ್ಲಿದ ಜನಪ್ರತಿನಿಧಿಗಳು: ಸುಂಕ ವಸೂಲಿಗೆ ನಗರಸಭೆ ಟೆಂಡರ್‌!

dinesh-gu

COVID ಹಗರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಕ್ರಮ:ಚಿಕ್ಕಬಳ್ಳಾಪುರದಲ್ಲಿ ದಿನೇಶ್‌ ಗುಂಡೂರಾವ್‌

Gudibande: ದಪ್ಪರ್ತಿ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಕನ್ನ…

Gudibande: ದಪ್ಪರ್ತಿ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಕನ್ನ…

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Bengaluru: 1 ಕೆ.ಜಿ. ಬೆಳ್ಳಿಯ ಬೆಲೆ ಈಗ 95 ಸಾವಿರ ರೂ.!

Bengaluru: 1 ಕೆ.ಜಿ. ಬೆಳ್ಳಿಯ ಬೆಲೆ ಈಗ 95 ಸಾವಿರ ರೂ.!

Sand

Kuap: ಪಾಂಗಾಳ ಪಾಪನಾಶಿನಿ ಹೊಳೆಯಲ್ಲಿ ಅಕ್ರಮ ಮರಳುಗಾರಿಕೆ ಪತ್ತೆ

Supreme Court: ಹಿಂದುತ್ವ ಬದಲು ಸಂವಿಧಾನತ್ವ ಬಳಕೆ ಪಿಐಎಲ್‌ ವಜಾ

Supreme Court: ಹಿಂದುತ್ವ ಬದಲು ಸಂವಿಧಾನತ್ವ ಬಳಕೆ ಪಿಐಎಲ್‌ ವಜಾ

Supreme Court: ಸಿಜೆಐಗೆ ಎಸ್‌ಪಿ ಸಂಸದ ರಾಮ್‌ಗೋಪಾಲ್‌ ನಿಂದನೆ

Supreme Court: ಸಿಜೆಐಗೆ ಎಸ್‌ಪಿ ಸಂಸದ ರಾಮ್‌ಗೋಪಾಲ್‌ ನಿಂದನೆ

Yogeshwar

Channapatna; ಯೋಗೇಶ್ವರ್‌ಗೆ ಮಣೆ ಹಾಕಲು ಕಾಂಗ್ರೆಸ್‌ ಸಿದ್ಧ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.