Israeli Military: ಹೆಜ್ಬುಲ್ಲಾ ಬ್ಯಾಂಕಿಂಗ್ ಸಂಸ್ಥೆ ಗುರಿಯಾಗಿಸಿ ಇಸ್ರೇಲ್ ದಾಳಿ
ಬೈರುತ್ನ 10ಕ್ಕೂ ಹೆಚ್ಚು ಕಡೆ ವೈಮಾನಿಕ ದಾಳಿ
Team Udayavani, Oct 22, 2024, 7:50 AM IST
ಬೈರುತ್: ಇಲ್ಲಿನ ದಕ್ಷಿಣ ಉಪನಗರಗಳಲ್ಲಿ ಇಸ್ರೇಲ್ ಸೇನೆ ಸೋಮವಾರ ವಾಯುದಾಳಿ ನಡೆಸಿದ್ದು, ಹೆಜ್ಬುಲ್ಲಾದ ಬ್ಯಾಂಕಿಂಗ್ ಸಂಸ್ಥೆ ಅಲ್-ಖರ್ದ್ ಅಲ್-ಹಸನ್ಗೆ ಸೇರಿದ ಕಟ್ಟಡವನ್ನು ಉಡಾಯಿಸಿದೆ.
ಅಲ್-ಖರ್ದ್ ಅಲ್-ಹಸನ್ ಹೆಜ್ಬುಲ್ಲಾದ ಭಯೋತ್ಪಾದನ ಚಟುವಟಿಕೆಗಳಿಗೆ ಹಣ ಸಹಾಯ ಮಾಡುತ್ತಿದೆ ಎಂದು ಇಸ್ರೇಲ್ ಆರೋಪಿಸಿದೆ. ಇದೇ ವೇಳೆ, ಬೈರುತ್ನ ಉಪ ನಗರ ಗಳಲ್ಲಿ 10ಕ್ಕೂ ಹೆಚ್ಚು ವೈಮಾನಿಕ ದಾಳಿಗಳು ನಡೆದಿದ್ದು, ಇಲ್ಲಿನ ನಾಗರಿಕ ಕಟ್ಟಡಗಳನ್ನು ಗುರಿಯಾಗಿಸಲಾಗಿದೆ ಎಂದು ಬೈರುತ್ನ ಘೋಬೈರಿ ಉಪನ ಗರದ ಮೇಯರ್ ಆರೋಪಿಸಿದ್ದಾರೆ. ದಾಳಿಗೂ ಮುನ್ನ ರವಿವಾರ ಇಸ್ರೇಲ್ ಅಲ್-ಖರ್ದ್ ಅಲ್-ಹಸನ್ ಕಟ್ಟಡ ಗುರಿಯಾಗಿಸಿ ದಾಳಿ ನಡೆಸುವುದಾಗಿ ಟ್ವೀಟ್ ಮಾಡಿ ಎಚ್ಚರಿಸಿತ್ತು.
ಸುರಂಗದಲ್ಲಿ ಯಾಹ್ಯಾ ಸಿನ್ವರ್ ಪತ್ನಿ: ವೀಡಿಯೋ
2023ರ ಅ.7ರ ದಾಳಿ ರೂವಾರಿ, ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವರ್ ಪತ್ನಿ ಅಬು ಜಮಾರ್ ದಾಳಿ ಯ ಹಿಂದಿನ ದಿನ ಗಾಜಾದ ಸುರಂ ಗವೊಂದಕ್ಕೆ ಹೋಗುವ ವೀಡಿಯೋ ಸಿಕ್ಕಿದೆ. ಆಕೆ ಬಳಿಯಿದ್ದ 26.89 ಲಕ್ಷ ರೂ.ನ ಹರ್ಮೀಸ್ ಬಕೀನ್ ಬ್ಯಾಗ್ ಬಗ್ಗೆ ಚರ್ಚೆ ಶುರುವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UPI Payment: ಮಾಲ್ದೀವ್ಸ್ನಲ್ಲಿ ಭಾರತದ ಯುಪಿಐ ಪಾವತಿ ವ್ಯವಸ್ಥೆ!
US Election: ಫ್ರೆಂಚ್ ಫ್ರೈಸ್ ತಯಾರಿಸಿ ಕಮಲಾಗೆ ಟಾಂಗ್ ಕೊಟ್ಟ ಡೊನಾಲ್ಡ್ ಟ್ರಂಪ್
leaked letter: ಇರಾನ್ ಮೇಲೆ ದಾಳಿಗೆ ಇಸ್ರೇಲ್ ಸಿದ್ಧವಾಗಿತ್ತು: ವರದಿ
Israel ಪಡೆಗಳಿಂದ ಭಾರೀ ದಾಳಿ: ಉತ್ತರ ಗಾಜಾದಲ್ಲಿ ಕನಿಷ್ಠ 73 ಮಂದಿ ಬ*ಲಿ
Vasundhra Oswal; ಭಾರತೀಯ ಬಿಲಿಯನೇರ್ ನ ಪುತ್ರಿ ಉಗಾಂಡಾದಲ್ಲಿ ವಶಕ್ಕೆ!
MUST WATCH
ಹೊಸ ಸೇರ್ಪಡೆ
Renukaswamy Case: ಹೈಕೋರ್ಟ್ನಲ್ಲಿ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
Jewellery: ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನಾಭರಣ ದರೋಡೆ; ಮಾಲೀಕನಿಂದ ಗುಂಡಿನ ದಾಳಿ!
Tragedy: ಮಗ ಮೃತಪಟ್ಟ ವಿಚಾರ ಕೇಳಿ ತಂದೆಗೂ ಹೃದಯಾಘಾತ… ಮುಗಿಲು ಮುಟ್ಟಿದ ಆಕ್ರಂದನ
Shakib Fans: ಶಕೀಬ್ ಅಭಿಮಾನಿಗಳಿಗೆ ವಿರೋಧಿ ಗುಂಪಿನಿಂದ ಹಲ್ಲೆ
ಗದಗ: ತುಂಗಭದ್ರಾ ನದಿಗೆ ಬಿದ್ದು ನಾಪತ್ತೆಯಾಗಿದ್ದ ಯುವಕನ ಶವ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.