Rain: ನಾಡಿದ್ದು ಪಶ್ಚಿಮ ಬಂಗಾಲ,ಒಡಿಶಾಕ್ಕೆ ಚಂಡಮಾರುತ:ಮುನ್ನೆಚ್ಚರಿಕೆ ನೀಡಿದ ಹವಾಮಾನ ಇಲಾಖೆ
ಕರ್ನಾಟಕ ಸೇರಿ ಹಲವು ದಕ್ಷಿಣದ ರಾಜ್ಯಗಳಲ್ಲಿ ಮಳೆ
Team Udayavani, Oct 22, 2024, 7:50 AM IST
ಭುವನೇಶ್ವರ: ಬಂಗಾಲಕೊಲ್ಲಿ ಹಾಗೂ ಅಂಡಮಾನ್ನಲ್ಲಿ ಸೋಮವಾರ ವಾಯು ಭಾರ ಕುಸಿತ ಉಂಟಾಗಿದೆ.
ಅ.23ರ ಒಳಗಾಗಿ ಅದು ಚಂಡಮಾರುತವಾಗಿ ಮಾರ್ಪಾಡಾಗಲಿದ್ದು, ಒಡಿಶಾದ ಪುರಿ ಹಾಗೂ ಪಶ್ಚಿಮ ಬಂಗಾಲದ ನಡುವೆ ಹಾದು ಹೋಗಲಿದೆ ಐಎಂಡಿ ಹೇಳಿದೆ. ಈ ಹಿನ್ನೆಲೆಯಲ್ಲಿ ಶನಿವಾರದ ವರೆಗೆ ಮೀನುಗಾರರು ಸಮುದ್ರಕ್ಕೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ.
ಒಡಿಶಾದಲ್ಲಿ ಚಂಡಮಾರುತದ ಪ್ರಭಾವ ಹೆಚ್ಚು ಕಾಲ ಇರಲಿದೆ. ರಾಜ್ಯದ ಕರಾವಳಿಯಲ್ಲಿ ಧಾರಾಕಾರ ಮಳೆಯಾಗಲಿದ್ದು, ಪ್ರತೀ ಗಂಟೆಗೆ 100 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ.
ತಂಡಗಳ ನಿಯೋಜನೆ: ಚಂಡಮಾರುತ ಹಿನ್ನೆಲೆಯಲ್ಲಿ ಎನ್ಡಿಆರ್ಎಫ್ನ 25 ತಂಡಗಳನ್ನು ಪಶ್ಚಿಮ ಬಂಗಾಲದಲ್ಲಿ, 11 ತಂಡಗಳನ್ನು ಒಡಿಶಾದಲ್ಲಿ ನಿಯೋಜಿಸ ಲಾಗಿದೆ. ಜತೆಗೆ ಸೇನೆಯ ರಕ್ಷಣ ಹಾಗೂ ಪರಿಹಾರ ತಂಡ, ಕೋಸ್ಟ್ ಗಾರ್ಡ್ ತಂಡಗಳೂ ಸಿದ್ಧತೆ ನಡೆಸಿವೆ.
ಕರ್ನಾಟಕದಲ್ಲಿ ಮಳೆ: ಚಂಡಮಾರುತ ಪ್ರಭಾವದಿಂದಾಗಿ ಕರ್ನಾಟಕದ ಕರಾ ವಳಿ ಹಾಗೂ ಉತ್ತರ ಒಳನಾಡು, ಗುಜ ರಾತ್, ಗೋವಾ, ಮಧ್ಯ ಮಹಾರಾಷ್ಟ್ರ, ಕೇರಳ, ತಮಿಳುನಾಡು, ರಾಯಲ ಸೀಮಾ ಹಾಗೂ ಆಂಧ್ರಪ್ರದೇಶಗಳಲ್ಲಿ ಮಳೆಯಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bishnoi: ಬಿಷ್ಣೋಯಿನ ಕೊಲ್ಲುವ ಪೊಲೀಸ್ ಅಧಿಕಾರಿಗೆ 1.11 ಕೋಟಿ ರೂ. ಬಹುಮಾನ! ಕರ್ಣಿ ಸೇನಾ
Uttarakhand: ಲಿವ್-ಇನ್ ಜೋಡಿಗಳ ನೋಂದಾಣಿಗೆ ಕೇವಲ 1 ತಿಂಗಳ ಗಡುವು
SHOCKING! ಪಾನಿಪೂರಿಗೆ ರುಚಿ ಹೆಚ್ಚಿಸಲು ಹಾರ್ಪಿಕ್, ಯೂರಿಯಾ ಬಳಕೆ
Tirupati Ticket Scandal: ಜಗನ್ ಪಕ್ಷದ ನಾಯಕಿಯಿಂದ ತಿರುಪತಿ ಟಿಕೆಟ್ ಗೋಲ್ಮಾಲ್!
bypoll: ನಾಳೆ ವಯನಾಡು ಲೋಕ ಉಪ ಸಮರಕ್ಕೆ ಪ್ರಿಯಾಂಕಾ ನಾಮಪತ್ರ
MUST WATCH
ಹೊಸ ಸೇರ್ಪಡೆ
Renukaswamy Case: ಹೈಕೋರ್ಟ್ನಲ್ಲಿ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
Jewellery: ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನಾಭರಣ ದರೋಡೆ; ಮಾಲೀಕನಿಂದ ಗುಂಡಿನ ದಾಳಿ!
Tragedy: ಮಗ ಮೃತಪಟ್ಟ ವಿಚಾರ ಕೇಳಿ ತಂದೆಗೂ ಹೃದಯಾಘಾತ… ಮುಗಿಲು ಮುಟ್ಟಿದ ಆಕ್ರಂದನ
Shakib Fans: ಶಕೀಬ್ ಅಭಿಮಾನಿಗಳಿಗೆ ವಿರೋಧಿ ಗುಂಪಿನಿಂದ ಹಲ್ಲೆ
ಗದಗ: ತುಂಗಭದ್ರಾ ನದಿಗೆ ಬಿದ್ದು ನಾಪತ್ತೆಯಾಗಿದ್ದ ಯುವಕನ ಶವ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.