By Election: ನಿಖಿಲ್‌ ಸ್ಪರ್ಧೆಗೆ ಒತ್ತಡ: ಜಯಮುತ್ತು ಕಣಕ್ಕೆ?

ಅಭ್ಯರ್ಥಿ ಸಂಬಂಧ ದೇವೇಗೌಡ ನೇತೃತ್ವದಲ್ಲಿ ಎಚ್‌ಡಿಕೆ ಚರ್ಚೆ, ಇಂದಿನ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಬಹುತೇಕ ನಿರ್ಧಾರ

Team Udayavani, Oct 22, 2024, 7:42 AM IST

Nikhil

ಬೆಂಗಳೂರು: ಚನ್ನ ಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಸ್ಪರ್ಧೆಗೆ ಕಾರ್ಯಕರ್ತರ ಒತ್ತಡ ಹೆಚ್ಚಾಗಿದ್ದರೂ ಈ ಹಿಂದೆ ಕೇಳಿಬಂದಿದ್ದಂತೆ ಜಯಮುತ್ತು ಅವರೇ ಜೆಡಿಎಸ್‌ನಿಂದ ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆಗಳು ದಟ್ಟವಾಗಿವೆ.

ಮಂಗಳವಾರ ಕೇಂದ್ರ ಸಚಿವರೂ ಆಗಿರುವ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯಲಿ ರುವ ಚನ್ನಪಟ್ಟಣ ಕಾರ್ಯಕರ್ತರು, ಮುಖಂಡರ ಸಭೆಯಲ್ಲಿ ಈ ಕುರಿತ ನಿರ್ಣಯ ಹೊರಬೀಳುವ ನಿರೀಕ್ಷೆ ಇದೆ. ಸೋಮವಾರ ಎಚ್‌.ಡಿ. ದೇವೇಗೌಡರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಕುಮಾರ ಸ್ವಾಮಿ ಹಾಗೂ ನಿಖಿಲ್‌ ಕುಮಾರಸ್ವಾಮಿ ಸುದೀರ್ಘ‌ ಚರ್ಚೆ ನಡೆಸಿದ್ದು, ಯೋಗೇಶ್ವರ್‌ ನಡೆ ಬಗ್ಗೆ ಬಿಜೆಪಿ ವರಿಷ್ಠರ ಗಮನಕ್ಕೆ ತರಲು ನಿರ್ಧಾರವಾಗಿದೆ.

ಶಿಗ್ಗಾವಿ, ಸಂಡೂರು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿ ಘೋಷಣೆ ವಿಚಾರದಲ್ಲಿ ಜೆಡಿಎಸ್‌ ತಕರಾರು ಮಾಡಿಲ್ಲ. ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಸ್ವಾತಂತ್ರ್ಯವನ್ನು ಬಿಜೆಪಿಯ ವರಿಷ್ಠರು ಕುಮಾರಸ್ವಾಮಿಗೆ ಕೊಟ್ಟರೂ ಯೋಗೇಶ್ವರ್‌ ಹಾಗೂ ರಾಜ್ಯ ಬಿಜೆಪಿಯ ಕೆಲವು ನಾಯಕರು ಅಡ್ಡಗಾಲು ಹಾಕುತ್ತಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ನಡೆದಿದ್ದ ಸಭೆಯಲ್ಲಿ ಜೆಡಿಎಸ್‌ ಚಿಹ್ನೆಯಿಂದ ಸ್ಪರ್ಧಿಸುವಂತೆ ಯೋಗೇಶ್ವರ್‌ಗೆ ಅವಕಾಶ ಕೊಟ್ಟರೂ ತಿರಸ್ಕರಿಸಿದ ಬಗ್ಗೆ ಚರ್ಚೆಯಾಗಿದೆ.

ನಿಖಿಲ್‌ ಸ್ಪರ್ಧೆ ಈಗ ಬೇಕೇ?
ಎಲ್ಲಕ್ಕಿಂತ ಮಿಗಿಲಾಗಿ ಬಹುತೇಕ ಕಾರ್ಯಕರ್ತರು ನಿಖಿಲ್‌ ಅವರನ್ನೇ ಸ್ಪರ್ಧೆಗಿಳಿಸುವಂತೆ ಒತ್ತಡ ಹಾಕುತ್ತಿದ್ದು, ಇದಕ್ಕೆ ನಿಖೀಲ್‌ ಒಪ್ಪುತ್ತಿಲ್ಲ ಎನ್ನುವುದನ್ನೂ ಗಮನಕ್ಕೆ ತರಲಾಯಿತು. ಕುಟುಂಬ ರಾಜಕಾರಣದ ಆರೋಪ ಎದುರಿಸಬೇಕಾಗುತ್ತದೆ. ಅದರ ಬದಲು ಜಯಮುತ್ತು ಅಥವಾ ಪ್ರಸನ್ನ ಅವರಿಗೆ ಟಿಕೆಟ್‌ ಕೊಡುವುದು ಒಳಿತು. ಸಾರ್ವತ್ರಿಕ ಚುನಾವಣೆಯಲ್ಲಿ ನಿಖಿಲ್‌ ಸ್ಪರ್ಧಿಸುವುದು ಸೂಕ್ತ ಎಂಬ ಚರ್ಚೆಗಳು ಪರಸ್ಪರ ನಡೆದಿವೆ.

“ಪಕ್ಷದ ಕಾರ್ಯಕರ್ತನಾಗಿ ರಾಜ್ಯಾದ್ಯಂತ ಓಡಾಡುತ್ತಿದ್ದೇನೆ. ಸಂಘಟನೆಗಾಗಿ ಇಚ್ಛಾಶಕ್ತಿಯಿಂದ ಕೆಲಸ ಮಾಡುತ್ತಿದ್ದೇನೆ. ಕಾಂಗ್ರೆಸ್‌ ವಿರುದ್ಧ ಗೆಲ್ಲಬೇಕಷ್ಟೇ. ನಾನು ಎಂದೂ ಆಕಾಂಕ್ಷಿ ಎಂದಿಲ್ಲ. ಕಾರ್ಯಕರ್ತರಲ್ಲಿ ಅಂತಹ ಭಾವನೆ ಇರಬಹುದು. ಎರಡೂ ಪಕ್ಷದವರು ಸೇರಿ ತೀರ್ಮಾನಿಸಬೇಕು ಎಂಬುದು ನನ್ನ ನಿಲುವು. ವೈಯಕ್ತಿಕ ವಾಗಿ ನಾನು ಯಾವುದೇ ತೀರ್ಮಾನ ತೆಗೆದುಕೊಳ್ಳಲಾಗುವುದಿಲ್ಲ. ವೈಯಕ್ತಿಕ ಅಭಿಪ್ರಾಯವನ್ನು ಸಾರ್ವಜನಿಕವಾಗಿ ಹೊರಹಾಕಲಾಗದು. ಎಲ್ಲ ಸಾಧಕ- ಬಾಧಕ ಅಳೆದು ತೂಗಿ ಚರ್ಚಿಸಬೇಕಿದೆ.’ -ನಿಖಿಲ್‌ ಕುಮಾರಸ್ವಾಮಿ, ಜೆಡಿಎಸ್‌ ಯುವ ಘಟಕದ ಅಧ್ಯಕ್ಷ

ಹಿಂದೆ ಸರಿಯುತ್ತಿರುವುದೇಕೆ ನಿಖಿಲ್‌?
ಪ್ರತೀ ಬಾರಿ ಕುಟುಂಬದವರಿಗೆ ಮಣೆ ಹಾಕಲಾಗುತ್ತದೆ ಆರೋಪದಿಂದ ಮುಕ್ತಿ

ಕಾರ್ಯಕರ್ತರಿಗೆ ಬಿಟ್ಟುಕೊಟ್ಟರೆ ಮಾತ್ರ ಈ ಆಪಾದನೆಯಿಂದ ವಿಮುಕ್ತಿ ಸಾಧ್ಯ

ಸೋತ ಪುತ್ರನಿಗೆ ಗೆಲುವಿನ ಮೆಟ್ಟಿಲು ಹತ್ತಿಸಲು ತಂದೆ ತಿಣುಕಾಡುತ್ತಿದ್ದಾರೆ ಎಂಬ ಭಾವನೆ ಬರಬಾರದು

ನಿಖಿಲ್‌ ಅವರನ್ನು ಸ್ಪರ್ಧೆಗಿಳಿಸಲು ಕುಮಾರಸ್ವಾಮಿ ಸಾಹಸ ಎನ್ನುವ ಸಿ.ಪಿ. ಯೋಗೇಶ್ವರ್‌ ಆರೋಪ ಸುಳ್ಳಾಗಿಸುವುದು

ಟಾಪ್ ನ್ಯೂಸ್

Renukaswamy Case: ಹೈಕೋರ್ಟ್‌ನಲ್ಲಿ ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

Renukaswamy Case: ಹೈಕೋರ್ಟ್‌ನಲ್ಲಿ ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

Jewellery: ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನಾಭರಣ ದರೋಡೆ; ಮಾಲೀಕನಿಂದ ಗುಂಡಿನ ದಾಳಿ!

Jewellery: ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನಾಭರಣ ದರೋಡೆ; ಮಾಲೀಕನಿಂದ ಗುಂಡಿನ ದಾಳಿ!

Tragedy: ಹೃದಯಾಘಾತದಿಂದ ಮಗ ಮೃತಪಟ್ಟ ವಿಚಾರ ಕೇಳಿ ತಂದೆಯೂ ಹೃದಯಾಘಾತದಿಂದ ಮೃತ್ಯು

Tragedy: ಮಗ ಮೃತಪಟ್ಟ ವಿಚಾರ ಕೇಳಿ ತಂದೆಗೂ ಹೃದಯಾಘಾತ… ಮುಗಿಲು ಮುಟ್ಟಿದ ಆಕ್ರಂದನ

Shakib Fans: ಶಕೀಬ್‌ ಅಭಿಮಾನಿಗಳಿಗೆ ವಿರೋಧಿ ಗುಂಪಿನಿಂದ ಹಲ್ಲೆ

Shakib Fans: ಶಕೀಬ್‌ ಅಭಿಮಾನಿಗಳಿಗೆ ವಿರೋಧಿ ಗುಂಪಿನಿಂದ ಹಲ್ಲೆ

ಗದಗ: ತುಂಗಭದ್ರಾ ನದಿಗೆ ಬಿದ್ದು ನಾಪತ್ತೆಯಾಗಿದ್ದ ಯುವಕನ ಶವ ಪತ್ತೆ

ಗದಗ: ತುಂಗಭದ್ರಾ ನದಿಗೆ ಬಿದ್ದು ನಾಪತ್ತೆಯಾಗಿದ್ದ ಯುವಕನ ಶವ ಪತ್ತೆ

Sandalwood: ಪಯಣದಲ್ಲಿ ನೀನಿರು ಸಾಕು..: ಅಭಿಮನ್ಯು ಚಿತ್ರದ ಹಾಡು ಬಂತು

Sandalwood: ಪಯಣದಲ್ಲಿ ನೀನಿರು ಸಾಕು..: ಅಭಿಮನ್ಯು ಚಿತ್ರದ ಹಾಡು ಬಂತು

Bishnoi: ಬಿಷ್ಣೋಯಿನ ಕೊಂದ ಪೊಲೀಸ್‌ ಅಧಿಕಾರಿಗೆ 1.11 ಕೋಟಿ ರೂ. ಬಹುಮಾನ! ಕರ್ಣಿ ಸೇನಾ

Bishnoi: ಬಿಷ್ಣೋಯಿನ ಕೊಲ್ಲುವ ಪೊಲೀಸ್‌ ಅಧಿಕಾರಿಗೆ 1.11 ಕೋಟಿ ರೂ. ಬಹುಮಾನ! ಕರ್ಣಿ ಸೇನಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Renukaswamy Case: ಹೈಕೋರ್ಟ್‌ನಲ್ಲಿ ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

Renukaswamy Case: ಹೈಕೋರ್ಟ್‌ನಲ್ಲಿ ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

Tragedy: ಹೃದಯಾಘಾತದಿಂದ ಮಗ ಮೃತಪಟ್ಟ ವಿಚಾರ ಕೇಳಿ ತಂದೆಯೂ ಹೃದಯಾಘಾತದಿಂದ ಮೃತ್ಯು

Tragedy: ಮಗ ಮೃತಪಟ್ಟ ವಿಚಾರ ಕೇಳಿ ತಂದೆಗೂ ಹೃದಯಾಘಾತ… ಮುಗಿಲು ಮುಟ್ಟಿದ ಆಕ್ರಂದನ

Rain: ಚಿತ್ರದುರ್ಗದಲ್ಲಿ ತಡರಾತ್ರಿ ವರುಣನ ಅಬ್ಬರ… ಕೆರೆಯಂತಾದ ನಾಯಕನಹಟ್ಟಿ ಪೊಲೀಸ್ ಠಾಣೆ

Rain: ಚಿತ್ರದುರ್ಗದಲ್ಲಿ ತಡರಾತ್ರಿ ವರುಣನ ಅಬ್ಬರ… ಕೆರೆಯಂತಾದ ನಾಯಕನಹಟ್ಟಿ ಪೊಲೀಸ್ ಠಾಣೆ

NS-Bosaraju

Congress Government: ಸಚಿವ ಬೋಸರಾಜ ಪತ್ನಿ ವಿರುದ್ಧ ಅರಣ್ಯ ಭೂಕಬಳಿಕೆಯ ಆರೋಪ

CPY

By Election: ಸಿ.ಪಿ. ಯೋಗೇಶ್ವರ್‌ ಮೈತ್ರಿ ಅಭ್ಯರ್ಥಿಯೋ? ಬಂಡಾಯವೋ? ಕಾಂಗ್ರೆಸ್ಸಿಗೋ?

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Renukaswamy Case: ಹೈಕೋರ್ಟ್‌ನಲ್ಲಿ ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

Renukaswamy Case: ಹೈಕೋರ್ಟ್‌ನಲ್ಲಿ ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

Jewellery: ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನಾಭರಣ ದರೋಡೆ; ಮಾಲೀಕನಿಂದ ಗುಂಡಿನ ದಾಳಿ!

Jewellery: ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನಾಭರಣ ದರೋಡೆ; ಮಾಲೀಕನಿಂದ ಗುಂಡಿನ ದಾಳಿ!

Tragedy: ಹೃದಯಾಘಾತದಿಂದ ಮಗ ಮೃತಪಟ್ಟ ವಿಚಾರ ಕೇಳಿ ತಂದೆಯೂ ಹೃದಯಾಘಾತದಿಂದ ಮೃತ್ಯು

Tragedy: ಮಗ ಮೃತಪಟ್ಟ ವಿಚಾರ ಕೇಳಿ ತಂದೆಗೂ ಹೃದಯಾಘಾತ… ಮುಗಿಲು ಮುಟ್ಟಿದ ಆಕ್ರಂದನ

Shakib Fans: ಶಕೀಬ್‌ ಅಭಿಮಾನಿಗಳಿಗೆ ವಿರೋಧಿ ಗುಂಪಿನಿಂದ ಹಲ್ಲೆ

Shakib Fans: ಶಕೀಬ್‌ ಅಭಿಮಾನಿಗಳಿಗೆ ವಿರೋಧಿ ಗುಂಪಿನಿಂದ ಹಲ್ಲೆ

ಗದಗ: ತುಂಗಭದ್ರಾ ನದಿಗೆ ಬಿದ್ದು ನಾಪತ್ತೆಯಾಗಿದ್ದ ಯುವಕನ ಶವ ಪತ್ತೆ

ಗದಗ: ತುಂಗಭದ್ರಾ ನದಿಗೆ ಬಿದ್ದು ನಾಪತ್ತೆಯಾಗಿದ್ದ ಯುವಕನ ಶವ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.