Bantwala: ಹೆದ್ದಾರಿಯಂಚಿನ ನಿವಾಸಿಗಳ ನರಕ ಯಾತನೆ

ಕಾಮಗಾರಿ ಅವ್ಯವಸ್ಥೆ: ರಸ್ತೆ ಬದಿಯ ಮನೆಗಳ ಅಡಿಪಾಯವನ್ನೇ ಅಲುಗಾಡಿಸಿದ ಜೆಸಿಬಿಗಳು; ತಗ್ಗಿನಲ್ಲಿರುವ ಮನೆಗಳ ಅಂಗಳಕ್ಕೇ ಮಣ್ಣು, ದಾರಿಯೇ ಇಲ್ಲ; ತೋಟ, ಗದ್ದೆ ತುಂಬ ಕೆಸರು!

Team Udayavani, Oct 22, 2024, 12:18 PM IST

1(1)

ಕಲ್ಲಡ್ಕದಲ್ಲಿ ರಸ್ತೆ ಕಾಮಗಾರಿಯಿಂದಾಗಿ ಅಪಾಯಕಾರಿ ಸ್ಥಿತಿಯಲ್ಲಿ ಇರುವ ಮನೆಗಳು, ಪೆರ್ನೆ ಸಮೀಪದ ದೋರ್ಮೆಯಲ್ಲಿ ಕೃಷಿ ಭೂಮಿಗೆ ನುಗ್ಗುತ್ತಿರುವ ಕೆಸರು ನೀರು

ಬಂಟ್ವಾಳ: ಬಿ.ಸಿ.ರೋಡು- ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವ್ಯವಸ್ಥೆಯಿಂದಾಗಿ ಹೆದ್ದಾರಿಯಲ್ಲಿ ಸಾಗುವವರು ಒಂದು ರೀತಿಯ ಸಮಸ್ಯೆ ಎದುರಿಸಿದರೆ ಹೆದ್ದಾರಿಯ ಇಕ್ಕೆಲಗಳಲ್ಲಿ ಮನೆ, ಕೃಷಿ ಭೂಮಿ, ವ್ಯವಹಾರ ನಡೆಸುತ್ತಿರುವವರು ನಿತ್ಯ ನರಕಯಾತನೆ ಅನುಭವಿಸಬೇಕಾದ ಸ್ಥಿತಿ ಇದೆ. ಹೆದ್ದಾರಿ ಅಂಚಿನ ಎಷ್ಟೋ ಮನೆಗಳು ಅಪಾಯದಲ್ಲಿವೆ. ದಾರಿಯನ್ನು ಕಳೆದುಕೊಂಡಿವೆ. ಸಾಕಷ್ಟು ಕೃಷಿ ಭೂಮಿಗಳಿಗೆ ಮಳೆ ನೀರಿನ ಜತೆಗೆ ಕೆಸರು ನುಗ್ಗಿ ಇಡೀ ಕೃಷಿಯೇ ನಾಶವಾಗುವ ಸ್ಥಿತಿ ಎದುರಾಗಿದೆ.

ನೇರವಾದ ಹೆದ್ದಾರಿಯ ನಿರ್ಮಾಣ, ಏರು- ತಗ್ಗುಗಳನ್ನು ನಿವಾರಿಸುವ ಪ್ರಯತ್ನದಲ್ಲಿ ಹೆದ್ದಾರಿ ಅಂಚಿನ ನಿವಾಸಿಗಳ ಹಿತವನ್ನು ನೋಡದೆ ವಿನ್ಯಾಸ ಮಾಡಲಾಗಿದೆ. ಇದರ ಪರಿಣಾಮ ಎತ್ತರದಲ್ಲಿರುವ ಮತ್ತು ತಗ್ಗಿನಲ್ಲಿರುವ ಮನೆಗಳು ಸಂಪರ್ಕದ ದಾರಿಯನ್ನೇ ಕಳೆದುಕೊಂಡಿವೆ. ಎತ್ತರದಲ್ಲಿರುವ ಮನೆಗಳ ಬುಡಕ್ಕೇ ಜೆಸಿಬಿ ನುಗ್ಗಿದೆ. ಹೀಗಾಗಿ ಕೆಲವು ಮನೆಗಳ ಪಂಚಾಂಗವೇ ಅಪಾಯದಲ್ಲಿದೆ. ತಗ್ಗಿನಲ್ಲಿರುವ ಮನೆಗಳ ಅಂಗಳಕ್ಕೆ ಮಣ್ಣು ನುಗ್ಗಿ ಈಗಲೂ ಅಂಗಳದಲ್ಲಿ ಮಣ್ಣಿನ ರಾಶಿ ಕಾಣಬಹುದಾಗಿದೆ. ಸಾಕಷ್ಟು ಕೃಷಿ ತೋಟಗಳು, ಗದ್ದೆಗಳಲ್ಲಿ ಮಣ್ಣು, ಕೆಸರು ತುಂಬಿದ್ದು, ಬೆಳೆ ನಾಶದ ಜತೆಗೆ ಮತ್ತೆ ಕೃಷಿ ಮಾಡಲಾಗದ ಸ್ಥಿತಿ ಇದೆ.

ಮನೆ, ಕೃಷಿಯ ಜತೆಗೆ ಹೆದ್ದಾರಿ ಬದಿ ಸಣ್ಣ ಅಂಗಡಿ, ಉದ್ಯಮ ಸಂಸ್ಥೆಗಳ ಸ್ಥಿತಿಯೂ ನೆಲಕಚ್ಚಿ ಹೋಗಿದ್ದು, ಸಾಕಷ್ಟು ಕಡೆ ಸಂಪರ್ಕ ರಸ್ತೆ, ಕಾಲು ದಾರಿಯೂ ಇಲ್ಲದೆ ವ್ಯಾಪಾರಕ್ಕೂ ಬಲುದೊಡ್ಡ ಹೊಡೆತ ಬಿದ್ದಿದೆ. ಕೆಸರಿನ ಕಾರಣಕ್ಕೆ ಹೆದ್ದಾರಿಯಲ್ಲಿ ಸಾಗುವವರು ವಾಹನವನ್ನು ನಿಲ್ಲಿಸಲು ಹಿಂದೇಟು ಹಾಕಿ ವ್ಯಾಪಾರ ಬೇರೆಡೆಗೆ ಹೋಗುತ್ತಿದೆ. ಇನ್ನು ವಿಪರೀತ ಧೂಳಿನ ಪರಿಣಾಮ ಬೇಕರಿ ಮಳಿಗೆಗಳು, ಎಲೆಕ್ಟ್ರಾನಿಕ್‌ ಉತ್ಪನ್ನಗಳ ಮಳಿಗೆಗಳಿಗೆ ಸಾಕಷ್ಟು ತೊಂದರೆ ಉಂಟಾಗಿದೆ.

ಮಾಣಿ ಜಂಕ್ಷನ್‌: ನೂರಾರು ಟೆನ್ಶನ್‌
ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಮಾಣಿ ಜಂಕ್ಷನ್‌ನಲ್ಲಿ ರಾ.ಹೆ.75ರಿಂದ ಮತ್ತೂಂದು ಹೆದ್ದಾರಿ ಕವಲೊಡೆಯುತ್ತಿದ್ದು, ಹೀಗಾಗಿ ಈ ಭಾಗದಲ್ಲಿ ಹೆಚ್ಚಿನ ವಾಹನಗಳು ಡೈವರ್ಶನ್‌ ತೆಗೆದುಕೊಳ್ಳುತ್ತಿದೆ. ಹೀಗಾಗಿ ಬಿ.ಸಿ.ರೋಡು ಭಾಗದಿಂದ ಉಪ್ಪಿನಂಗಡಿಗೆ ಹೋಗುವ ವಾಹನಗಳು, ಪುತ್ತೂರು ಕಡೆಗೆ ಸಾಗುವ ವಾಹನಗಳು, ಎರಡೂ ಭಾಗದಿಂದಲೂ ಬಿ.ಸಿ.ರೋಡು ಕಡೆಗೆ ಆಗಮಿಸುವ ವಾಹನಗಳು ಹೀಗೆ ಎಲ್ಲವೂ ಗೊಂದಲಮಯವಾಗಿದೆ.

ಮಾಣಿ ಜಂಕ್ಷನ್‌ನಲ್ಲಿ ಅಂಡರ್‌ಪಾಸ್‌ ನಿರ್ಮಿಸಿ ಹೆದ್ದಾರಿಯು ನೇರವಾಗಿ ಮೇಲಿಂದಲೇ ಸಾಗಲಿದ್ದು, ಎರಡೂ ಬದಿಯಲ್ಲೂ ಸರ್ವೀಸ್‌ ರಸ್ತೆ ನಿರ್ಮಾಣಗೊಳ್ಳಲಿದೆ. ಪ್ರಸ್ತುತ ಒಂದೇ ಬದಿಯಲ್ಲಿ ವಾಹನ ಬಿಡಲಾಗಿದ್ದು, ಮತ್ತೂಂದು ಬದಿಯ ಸರ್ವೀಸ್‌ ರಸ್ತೆ ನಿರ್ಮಾಣಗೊಂಡಿಲ್ಲ. ಇದು ಬಲುದೊಡ್ಡ ಸಮಸ್ಯೆಯಾಗಿದ್ದು, ಹೆಚ್ಚಿನ ವಾಹನದೊತ್ತಡ ಉಂಟಾದಾಗ ಸರತಿಯಲ್ಲಿ ನಿಲ್ಲಬೇಕಿದೆ. ಮತ್ತೂಂದೆಡೆ ಡಾಮಾರು ಹಾಕಿದರೂ ಒಂದೇ ದಿನದಲ್ಲಿ ಎದ್ದು ಹೋಗಿ ಹೊಂಡಗಳು ಸೃಷ್ಟಿಯಾಗುತ್ತಿದೆ. ಮಳೆ ನೀರು ಹರಿದು ಹೋಗುವುದಕ್ಕೆ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲೇ ನೀರು ನಿಲ್ಲುವ ಸಮಸ್ಯೆಯೂ ಇದೆ.

ಶಬ್ದಕ್ಕೆ ಮನೆಯಲ್ಲೇ ನಿಲ್ಲಲಾಗದ ಸ್ಥಿತಿ!
ಸಾಮಾನ್ಯವಾಗಿ ಯಾವುದೇ ಹೆದ್ದಾರಿಯ ಬದಿ ಮನೆಗಳಿದ್ದರೆ ಹಗಲು-ರಾತ್ರಿ ವಾಹನ ಸದ್ದು ಸಾಮಾನ್ಯ. ಆದರೆ ಇಲ್ಲಿ ಕೇಳುವ ಶಬ್ದ ಎದೆಯನ್ನೇ ನಡುಗಿಸಿ ಬಿಡುತ್ತಿದೆ. ಹೆದ್ದಾರಿಯು ಸಂಪೂರ್ಣ ಹೊಂಡಗಳಿಂದ ತುಂಬಿರುವುದರಿಂದ ಬೃಹತ್‌ ಗಾತ್ರದ ಕಂಟೈನರ್‌ಗಳು ಸಾಗುವ ವೇಳೆ ಬಾಂಬ್‌ ಬಿದ್ದಷ್ಟೇ ದೊಡ್ಡ ಶಬ್ದ ಕೇಳುತ್ತಿದೆ. ಘನ ವಾಹನಗಳು ರಾತ್ರಿಯಲ್ಲೇ ಹೆಚ್ಚಾಗಿ ಸಾಗುವುದರಿಂದ ಮನೆಯಲ್ಲಿ ನಿದ್ದೆ ಮಾಡುವುದಕ್ಕೂ ಆಗುತ್ತಿಲ್ಲ ಎಂಬುದು ಹೆದ್ದಾರಿಯಂಚಿನ ನಿವಾಸಿಗಳ ಅಳಲಾಗಿದೆ.

ಕುಸಿಯುವ ಭೀತಿಯಲ್ಲಿ ಮನೆಗಳು
ಹೆದ್ದಾರಿಯನ್ನು ತಗ್ಗಿಸುವ ಉದ್ದೇಶದಿಂದ ಧರೆಗಳನ್ನು ನೇರವಾಗಿ ಅಗೆದು ಹಾಕಲಾಗಿದ್ದು, ಸಾಕಷ್ಟು ಮನೆಗಳು ಕುಸಿಯುವ ಭೀತಿಯಲ್ಲಿವೆ. ಒಂದಷ್ಟು ಕಡೆಗಳಲ್ಲಿ ಕಾಂಕ್ರೀಟ್‌ ತಡೆಗೋಡೆ ನಿರ್ಮಾಣಗೊಂಡಿದ್ದರೂ, ಅವುಗಳನ್ನು ಮೀರಿ ಗುಡ್ಡ ಕುಸಿತ ಉಂಟಾಗಿದೆ. ಮುಂದಿನ ದಿನಗಳಲ್ಲಿ ಮತ್ತೆ ಕುಸಿತ ಉಂಟಾದರೆ ಸಾಕಷ್ಟು ಮನೆಗಳು ಕುಸಿದು ಬೀಳುವ ಅಪಾಯವಿದೆ. ಹೆಚ್ಚುವರಿ ಭೂಸ್ವಾಧೀನ ನಡೆಸಿ ಪರಿಹಾರ ನೀಡಿ ಅಪಾಯಕಾರಿ ಮನೆ, ಗುಡ್ಡಗಳನ್ನು ತೆರವು ಮಾಡಿದರೆ ಪರಿಹಾರ ಸಿಗಬಹುದಾಗಿದ್ದು, ಹೆದ್ದಾರಿ ಪ್ರಾಧಿಕಾರವು ಆ ಕಾರ್ಯವನ್ನೂ ಮಾಡುತ್ತಿಲ್ಲ.

ಡಿಸಿ ಭೇಟಿ ನೀಡಿದರೂ ಪ್ರಯೋಜನವಿಲ್ಲ
ಪೆರ್ನೆ ಸಮೀಪದ ದೋರ್ಮೆಯಲ್ಲಿ ಚಂದ್ರಾವತಿ ಹಾಗೂ ಧರ್ಣಪ್ಪ ನಾಯ್ಕ ಅವರ ಸುಮಾರು 2 ಎಕರೆ ವಿಸ್ತೀರ್ಣದ ಅಡಿಕೆ ತೋಟದಲ್ಲಿ ಮಳೆಗಾಲ ಆರಂಭದಿಂದಲೂ ಈಗಿನವರೆಗೆ ನೀರು ನಿಲ್ಲುತ್ತಿದ್ದು, ಹೆಚ್ಚಿನ ಅಡಿಕೆ ಮರಗಳು ಈಗಾಗಲೇ ಸತ್ತು ಹೋಗಿವೆ. ಸಾಕಷ್ಟು ದೂರಿನ ಬಳಿಕ ತೋಟದ ನೀರು ಹರಿದು ಹೋಗುವುದಕ್ಕೆ ಪೈಪು ಹಾಕಿದರೂ ನೀರು ಹರಿದು ಹೋಗುತ್ತಿಲ್ಲ. ಕಳೆದ ಸುಮಾರು 2 ತಿಂಗಳ ಹಿಂದೆ ಸ್ಥಳಕ್ಕೆ ದ.ಕ.ಜಿಲ್ಲಾಧಿಕಾರಿ ಮುಲ್ಲೆ$ç ಮುಗಿಲನ್‌ ಅವರು ಭೇಟಿ ನೀಡಿ ಪರಿಶೀಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

-ಕಿರಣ್‌ ಸರಪಾಡಿ

ಟಾಪ್ ನ್ಯೂಸ್

ಕೃಷ್ಣಾ ನದಿಯಲ್ಲಿ ಈಜಲು ಹೋಗಿ ಯುವಕರಿಬ್ಬರು ಸಾವು

Yadagiri: ಕೃಷ್ಣಾ ನದಿಯಲ್ಲಿ ಈಜಲು ಹೋಗಿ ಯುವಕರಿಬ್ಬರು ಸಾವು

Bigg Boss: ಬಿಗ್‌ಬಾಸ್‌ ಮನೆಯಲ್ಲಿ ಸ್ಪರ್ಧಿಗೆ ಹೃದಯಾಘಾತ; ಮುಂದೆ ಆದದ್ದೇನು?

Bigg Boss: ಬಿಗ್‌ಬಾಸ್‌ ಮನೆಯಲ್ಲಿ ಸ್ಪರ್ಧಿಗೆ ಹೃದಯಾಘಾತ; ಮುಂದೆ ಆದದ್ದೇನು?

Udupi: ಜಿಲ್ಲಾ ಪತ್ರಕರ್ತರ ರಜತ ಕ್ರೀಡಾ ಸಂಭ್ರಮ: ನಿರ್ಭೀತ ಪತ್ರಿಕೋದ್ಯಮ ಇಂದಿನ ಅಗತ್ಯ: ಡಿಸಿ

Udupi: ಜಿಲ್ಲಾ ಪತ್ರಕರ್ತರ ರಜತ ಕ್ರೀಡಾ ಸಂಭ್ರಮ: ನಿರ್ಭೀತ ಪತ್ರಿಕೋದ್ಯಮ ಇಂದಿನ ಅಗತ್ಯ: DC

ಹೆಜ್ಬುಲ್ಲಾ ಮುಖ್ಯಸ್ಥ ಅಡಗಿದ್ದ ಬಂಕರ್‌ನೊಳಗೆ 500 ಮಿ. ಡಾಲರ್‌ ನಗದು, ಅಪಾರ ಚಿನ್ನ ಪತ್ತೆ! ಇಸ್ರೇಲ್

Hezbollah ಮುಖ್ಯಸ್ಥ ಅಡಗಿದ್ದ ಬಂಕರ್‌ನೊಳಗೆ 500 ಮಿ. ಡಾಲರ್‌ ನಗದು,ಚಿನ್ನ ಪತ್ತೆ! ಇಸ್ರೇಲ್

BBK11: “ಮಾನಸಗೆ ಪ್ರಬುದ್ಧತೆ ಇಲ್ಲ..” ನಾಮಿನೇಷನ್‌ ಕಾರಣ ಕೇಳಿ ಗರಂ ಆದ ತುಕಾಲಿ ಪತ್ನಿ

BBK11: “ಮಾನಸಗೆ ಪ್ರಬುದ್ಧತೆ ಇಲ್ಲ..” ನಾಮಿನೇಷನ್‌ ಕಾರಣ ಕೇಳಿ ಗರಂ ಆದ ತುಕಾಲಿ ಪತ್ನಿ

Video: ನಾಯಿ ಓಡಿಸಲು ಹೋಗಿ 3ನೇ ಮಹಡಿಯಿಂದ ಬಿದ್ದು ಮೃತಪಟ್ಟ ಯುವಕ…

Video: ನಾಯಿ ಓಡಿಸಲು ಹೋಗಿ 3ನೇ ಮಹಡಿಯಿಂದ ಬಿದ್ದು ಮೃತಪಟ್ಟ ಯುವಕ…

Madhya Pradesh: ಅದೃಷ್ಟ ಚೆನ್ನಾಗಿತ್ತು…ಚಿರತೆಗೆ ತಮಾಷೆ-ಮೂವರ ಮೇಲೆ ದಾಳಿ!

Madhya Pradesh: ಅದೃಷ್ಟ ಚೆನ್ನಾಗಿತ್ತು…ಚಿರತೆಗೆ ತಮಾಷೆ-ಮೂವರ ಮೇಲೆ ದಾಳಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2(2)

Vitla ಸಂಪರ್ಕದ ರಾಜ್ಯ, ಅಂತಾರಾಜ್ಯ ರಸ್ತೆಗಳಲ್ಲೆಲ್ಲ ಹೊಂಡ

6

Vitla: ದಾಖಲೆಯಿಲ್ಲದೆ ಗೋ ಸಾಗಾಟ; ಮಾರಾಟ ಮಾಡಿದ ವ್ಯಕ್ತಿಯ ಮನೆಗೆ ಜಾನುವಾರು ವಾಪಸ್‌

mng-Rain

Dakshina Kannada: ಮಂಗಳೂರು ಸೇರಿ ಇತರೆಡೆ ಮಳೆ, ಬೆಳ್ತಂಗಡಿಯಲ್ಲಿ ಗುಡುಗು ಸಹಿತ ವರ್ಷಧಾರೆ

2

Puttur: ಐನ್ನೂರು ವಿದ್ಯಾರ್ಥಿಗಳಿದ್ದ ಕಾಲೇಜಿನಲ್ಲೀಗ ನಲ್ವತ್ತೇ ವಿದ್ಯಾರ್ಥಿಗಳು

1(1)

Bantwal: ಹೇಗಿದ್ದ ಕಲ್ಲಡ್ಕ ಈಗ ಹೇಗಾಗಿ ಹೋಗಿದೆ!

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

ಹುಬ್ಬಳ್ಳಿ: ಗೋಡೆ ಕುಸಿದು ಮಹಿಳೆ ಸಾ*ವು, 3500 ಕೋಳಿ ಬಲಿ!

ಹುಬ್ಬಳ್ಳಿ: ಗೋಡೆ ಕುಸಿದು ಮಹಿಳೆ ಸಾ*ವು, 3500 ಕೋಳಿ ಬಲಿ!

7(1)

Gangolli ಬಂದರಿಗೆ ಮರೀಚಿಕೆಯಾದ ಅಭಿವೃದ್ಧಿ

4

UV Fusion: ಕಣ್ಮರೆಯಾಗುತ್ತಿರುವ ಪರಂಪರಾನುಗತ ವೃತ್ತಿಗಳು

ಕೃಷ್ಣಾ ನದಿಯಲ್ಲಿ ಈಜಲು ಹೋಗಿ ಯುವಕರಿಬ್ಬರು ಸಾವು

Yadagiri: ಕೃಷ್ಣಾ ನದಿಯಲ್ಲಿ ಈಜಲು ಹೋಗಿ ಯುವಕರಿಬ್ಬರು ಸಾವು

Bigg Boss: ಬಿಗ್‌ಬಾಸ್‌ ಮನೆಯಲ್ಲಿ ಸ್ಪರ್ಧಿಗೆ ಹೃದಯಾಘಾತ; ಮುಂದೆ ಆದದ್ದೇನು?

Bigg Boss: ಬಿಗ್‌ಬಾಸ್‌ ಮನೆಯಲ್ಲಿ ಸ್ಪರ್ಧಿಗೆ ಹೃದಯಾಘಾತ; ಮುಂದೆ ಆದದ್ದೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.